Close Menu
News Desk KannadaNews Desk Kannada
  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಇತ್ತೀಚಿನ ಸುದ್ದಿಗಳು
  • ಉದ್ಯೋಗ ಭಾಗ್ಯ
  • ಮಹಾದೇಗುಲ
  • ರುಚಿ ನೋಡಿ
  • ಪೊಲೀಸ್ ನ್ಯೂಸ್
  • ರೋಗ ಮುಕ್ತ
  • ಪ್ರವಾಸಿತಾಣ
  • ಸಣ್ಣ ಕಥೆ
  • ವಿಡಿಯೋ ಗ್ಯಾಲರಿ
Facebook X (Twitter) Instagram
Breaking News
  • *ರಸಗೊಬ್ಬರ ಖರೀದಿಸಲು ಇನ್ನು ಎಫ್‍ಐಡಿ ಕಡ್ಡಾಯ*
  • *ಕಾನೂರು : ಬ್ರಹ್ಮಗಿರಿಪುರದಲ್ಲಿ ಶ್ರದ್ಧಾಭಕ್ತಿಯಿಂದ ಜರುಗಿದ ಮುತ್ತಪ್ಪ ದೇವರ ಉತ್ಸವ*
  • *ಏ.19 ರಂದು ಕಣ್ಣಂಗಾಲ ಒಕ್ಕಲಿಗರ ಸಂಘದಿಂದ ವಿವಿಧ ಕ್ರೀಡಾಕೂಟ*
  • *ಏ.8 ರಂದು ಮಿನಿ ಉದ್ಯೋಗ ಮೇಳ*
  • *ನಾರ್ಗಾಣೆ : ಏ.13, 14 ಮತ್ತು 15ರಂದು ಧರ್ಮದೈವದ ನೇಮೋತ್ಸವ*
  • *ಶ್ರದ್ಧಾಭಕ್ತಿಯಿಂದ ಜರುಗಿದ ಕೂತಿನಾಡು ಸುಗ್ಗಿ ಉತ್ಸವ*
  • *ಚೇನಂಡ ಕಪ್ ಹಾಕಿ ಉತ್ಸವ : ದಾಖಲಾಗುವ ಪ್ರತಿ ಗೋಲಿಗೊಂದು “ಗಿಡ” ಎನ್ನುವ ಗುರಿ*
  • *ಸೈನಿಕ ಶಾಲೆ ಕೊಡಗು: 2026-27ನೇ ಸಾಲಿನ ವಿದ್ಯಾರ್ಥಿಗಳ ಪದಗ್ರಹಣ ಸಮಾರಂಭ*
  • *ಮಾಜಿ ಸೈನಿಕರು ಹಾಗೂ ಅವಲಂಬಿತರ ಅಹವಾಲು ಆಲಿಸಿದ ಜಿಲ್ಲಾಧಿಕಾರಿ : ಸೌಲಭ್ಯ ಕಲ್ಪಿಸಲು ಪ್ರಾಮಾಣಿಕ ಪ್ರಯತ್ನದ ಭರವಸೆ*
  • *ರಂಗಸಮುದ್ರ ಗ್ರಾಮದಲ್ಲಿ ಜೋಡಿ ಬಸವೇಶ್ವರ ದೇವರ ವಾರ್ಷಿಕ ಪೂಜೋತ್ಸವ… ಬರಿಗಾಲಲ್ಲಿ ಕೆಂಡ ಕೊಂಡ ಹಾಯ್ದ ಭಕ್ತರು*
News Desk KannadaNews Desk Kannada




  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಪೊಲೀಸ್ ನ್ಯೂಸ್
  • ಪ್ರವಾಸಿತಾಣ
  • ಮಹಾದೇಗುಲ
  • ರುಚಿ ನೋಡಿ
  • ಉದ್ಯೋಗ ಭಾಗ್ಯ
  • ರೋಗ ಮುಕ್ತ
  • ಸಣ್ಣ ಕಥೆ
News Desk KannadaNews Desk Kannada





Home»ಇತ್ತೀಚಿನ ಸುದ್ದಿಗಳು»*ರಂಗಸಮುದ್ರ ಗ್ರಾಮದಲ್ಲಿ ಜೋಡಿ ಬಸವೇಶ್ವರ ದೇವರ ವಾರ್ಷಿಕ ಪೂಜೋತ್ಸವ… ಬರಿಗಾಲಲ್ಲಿ ಕೆಂಡ ಕೊಂಡ ಹಾಯ್ದ ಭಕ್ತರು*
ಇತ್ತೀಚಿನ ಸುದ್ದಿಗಳು ಕೊಡಗು ಜಿಲ್ಲೆ

*ರಂಗಸಮುದ್ರ ಗ್ರಾಮದಲ್ಲಿ ಜೋಡಿ ಬಸವೇಶ್ವರ ದೇವರ ವಾರ್ಷಿಕ ಪೂಜೋತ್ಸವ… ಬರಿಗಾಲಲ್ಲಿ ಕೆಂಡ ಕೊಂಡ ಹಾಯ್ದ ಭಕ್ತರು*

ಏಪ್ರಿಲ್ 7, 20262 Mins ReadBy admin
Facebook WhatsApp Twitter Telegram Copy Link Threads Email LinkedIn Pinterest
Follow us on
Google News Facebook
Facebook Twitter WhatsApp Email Telegram Copy Link

ಕುಶಾಲನಗರ, NEWS DESK ಏ.07 : ಇಲ್ಲಿಗೆ ಸಮೀಪದ ರಂಗಸಮುದ್ರ ಗ್ರಾಮದ ಜೋಡಿ ಬಸವೇಶ್ವರ ದೇವರ ವಾರ್ಷಿಕ ಪೂಜೋತ್ಸವ ಮಂಗಳವಾರ ಶ್ರದ್ದಾಭಕ್ತಿಯಿಂದ ನೆರವೇರಿತು. ತಾ.6 ರಂದು ಸೋಮವಾರ ಬೆಳಗ್ಗೆ 7-30 ರಿಂದ ಆರಂಭವಾದ ದೇವರ ಧಾರ್ಮಿಕ ವಿಧಿಗಳು ಮಂಗಳವಾರ ಮಧ್ಯಾಹ್ನ 3 ಗಂಟೆವರೆಗೂ ನಿರಂತರವಾಗಿ ನಡೆದವು. ಸೋಮವಾರ ಸಂಜೆ ಗ್ರಾಮದ ಕಲ್ಲೇಗೌಡರ ಜಾನಕಿ ಮನೆಯಿಂದ ದೇವರ ಕಳಸವನ್ನು ಮಂಗಳವಾದ್ಯದೊಂದಿಗೆ ಮೆರವಣಿಗೆಯಲ್ಲಿ ತರಲಾಯಿತು. ಬಳಿಕ ರಾತ್ರಿ 8 ಗಂಟೆಗೆ ಗ್ರಾಮದ ಜೆ.ಜಿ. ಚಂದ್ರಶೇಖರ್ ಅವರ ಮನೆಯಿಂದ ಭಂಡಾರವನ್ನು ದೇವಾಲಯಕ್ಕೆ ತಂದು ಪೂಜಿಸಲಾಯಿತು.

ಸೋಮವಾರ ರಾತ್ರಿ ಗ್ರಾಮದ ಕುಂಭನ ಬೆಳ್ಯಪ್ಪ ಕುಟುಂಬಸ್ಥರಿಂದ ಪೂಜಾ ಪ್ರಸಾದ ಅನ್ನದಾನ ನಡೆಯಿತು. ರಾತ್ರಿ 9-30 ಗಂಟೆಗೆ ದೇವರ ಗಂಗಾಸ್ನಾನಕ್ಕೆ ತೆರಳಲು ದೇವರ ಅಪ್ಪಣೆ ಪಡೆಯಲಾಯಿತು. ಮಂಗಳವಾರ ಮುಂಜಾನೆ 4 ಗಂಟೆಯಿಂದ ದೇವಾಲಯದ ಆವರಣದಲ್ಲಿ ಕೆಂಡಕೊಂಡದ ಪೂಜೆ ಆರಂಭವಾಯಿತು. ಮುಂಜಾನೆ 5 ಗಂಟೆಗೆ ದೇವರಿಗೆ ಅಭಿಷೇಕ ಪೂಜೆ. ಬೆಳಗ್ಗೆ 9 ಗಂಟೆಗೆ ವಾದ್ಯ ಮೇಳ, ಅಲಂಕೃತ ದೇವರ ಪಲ್ಲಕ್ಕಿ ಉತ್ಸವದೊಂದಿಗೆ ಗ್ರಾಮದ ಕಾಫಿ ಬೆಳೆಗಾರ ಮುರುಳಿ ಮಾದಯ್ಯ ಅವರ ತೋಟದ ವ್ಯಾಪ್ತಿಯಲ್ಲಿ ಚಿಕ್ಲಿಹೊಳೆ ಹಾಗೂ ಕಾವೇರಿ ನದಿಯ ಸಂಗಮದಲ್ಲಿ ಗಂಗಾಸ್ನಾನ ಹಾಗೂ ಗಂಗಾಪೂಜೆ ನೆರವೇರಿಸಲಾಯಿತು.
ನಂತರ ದೇವರ ಪಲ್ಲಕ್ಕಿ ಮೆರವಣಿಗೆ ಕಾವೇರಿ ನದಿಯಿಂದ ಆರಂಭಗೊಂಡು ದೇವಾಲಯದವರೆಗೂ ಸಾಗಿ ಬಂತು. ಈ ಸಂದರ್ಭ ರಂಗಸಮುದ್ರ, ವಿರೂಪಾಕ್ಷಪುರ, ಕಬ್ಬಿನಗದ್ದೆ ವ್ಯಾಪ್ತಿಯ ಆದಿವಾಸಿಗಳು ಸೇರಿದಂತೆ ಸಮಸ್ತ ಭಕ್ತಜನರು ಪಾಲ್ಗೊಂಡು ಪುನೀತರಾದರು. ಮಧ್ಯಾಹ್ನ 2 ಗಂಟೆಯಿಂದ ಕೆಂಡ ಕೊಂಡ ಪೂಜೆ ನಡೆಯಿತು. ಈ ಸಂದರ್ಭ ಗ್ರಾಮದ ನಿಂಗರಾಜು, ಮಧು ಹಾಗೂ ಲೋಕನಾಥ ಅವರ ಮೇಲೆ ಜೋಡಿ ಬಸವೇಶ್ವರ ಹಾಗೂ ಸುಗ್ಗಿ ದೇವರು ಆವಾಹನೆಗೊಂಡು ಕುಣಿದು ಕುಪ್ಪಳಿಸಿ ದೇವಾಲಯದ ಮುಂಬದಿಯಲ್ಲಿ ಅಳವಡಿಸಲಾಗಿದ್ದ ಕೆಂಡದ ಬೆಂಕಿ ಕೊಂಡವನ್ನು ಬರಿಗಾಲಲ್ಲಿ ಹಾಯ್ದು ಭಕ್ತಿ ಸಮರ್ಪಿಸಲಾಯಿತು. ನಂತರ ಮಹಾಮಂಗಳಾರತಿ ಹಾಗೂ ಭಂಡಾರ ಹಾಕಲಾಯಿತು.
ಈ ಸಂದರ್ಭದಲ್ಲಿ ದೇವಾಲಯದ ಪದಾಧಿಕಾರಿಗಳು ಆವಾಹಿತ ದೇವ ಭಕ್ತರಲ್ಲಿ ಈ ಬಾರಿ ಮಳೆ ಬೆಳೆ ಉತ್ತಮಗೊಂಡು ರೈತರ ಬೆಳೆಗಾರರ ಬದುಕು ಹಸನು ಮಾಡು ಎಂದು ಬೇಡಿದರು. ಇದೇ ಸಂದರ್ಭ ದೇವಾಲಯಕ್ಕೆ ಆಗಮಿಸಿದ ಅರಮೇರಿ ಕಳಂಚೇರಿ ಮಠದ ಶ್ರೀ ಶಾಂತಮಲ್ಲಿಕಾರ್ಜುನ ಸ್ವಾಮೀಜಿ ಅವರ ಪಾದಪೂಜೆ ದೇವಾಲಯದ ಆವರಣದಲ್ಲಿ ನೆರವೇರಿಸಲಾಯಿತು. ಬಳಿಕ ನೆರೆದ ಭಕ್ತಾಧಿಗಳಿಗೆ ಅನ್ನದಾನ ನಡೆಯಿತು.


ದೇವಾಲಯ ಆಡಳಿತ ಸಮಿತಿ ಅಧ್ಯಕ್ಷ ಎ.ಜಿ.ಚಿಣ್ಣಪ್ಪ, ಗೌರವಾಧ್ಯಕ್ಷ ಜೆ.ಜಿ.ಚಂದ್ರಶೇಖರ್, ಕಾರ್ಯದರ್ಶಿ ಕೆ.ಟಿ.ಧನಂಜಯ, ನಿರ್ದೇಶಕರಾದ ವಿ.ಹೆಚ್.ಸುಭಾಷ್, ಎನ್.ಪಿ.ನವೀನ್, ಕೆ.ಎಸ್.ಚಂದ್ರಶೇಖರ್, ಜೆ.ಕೆ.ಮುತ್ತುರಾಜ್, ಎನ್.ಪಿ.ಕುಶಾಲಪ್ಪ, ಎನ್.ಡಿ.ಪ್ರಕಾಶ್, ಪಿ.ಎಸ್.ಬಸಪ್ಪ,ಪಿ.ಬಿ.ಅಶೋಕ್, ಪಿ.ಎಸ್.ಮೋಹನ್ ಹಾಗೂ ಅರ್ಚಕ ಶಿವಕುಮಾರ್ ಇದ್ದರು.

Follow us Follow us
Share. WhatsApp Facebook Twitter Email Telegram Copy Link

Website design development company services in Mangalore

Forex Trading Teacher in India

Related Posts

*ರಸಗೊಬ್ಬರ ಖರೀದಿಸಲು ಇನ್ನು ಎಫ್‍ಐಡಿ ಕಡ್ಡಾಯ*

ಏಪ್ರಿಲ್ 7, 2026

*ಕಾನೂರು : ಬ್ರಹ್ಮಗಿರಿಪುರದಲ್ಲಿ ಶ್ರದ್ಧಾಭಕ್ತಿಯಿಂದ ಜರುಗಿದ ಮುತ್ತಪ್ಪ ದೇವರ ಉತ್ಸವ*

ಏಪ್ರಿಲ್ 7, 2026

*ಏ.19 ರಂದು ಕಣ್ಣಂಗಾಲ ಒಕ್ಕಲಿಗರ ಸಂಘದಿಂದ ವಿವಿಧ ಕ್ರೀಡಾಕೂಟ*

ಏಪ್ರಿಲ್ 7, 2026

*ಕಾನೂರು : ಬ್ರಹ್ಮಗಿರಿಪುರದಲ್ಲಿ ಶ್ರದ್ಧಾಭಕ್ತಿಯಿಂದ ಜರುಗಿದ ಮುತ್ತಪ್ಪ ದೇವರ ಉತ್ಸವ*

ಏಪ್ರಿಲ್ 7, 2026 ಇತ್ತೀಚಿನ ಸುದ್ದಿಗಳು ಕೊಡಗು ಜಿಲ್ಲೆ

ಮಡಿಕೇರಿ ಏ.7 NEWS DESK : ವಿರಾಜಪೇಟೆ ತಾಲೂಕಿನ ಕಾನೂರು ಗ್ರಾಮದ ಬ್ರಹ್ಮಗಿರಿಪುರದಲ್ಲಿ ವರ್ಷಂಪ್ರತಿ ನಡೆಸಿಕೊಂಡು ಬರುತ್ತಿರುವ ಮುತ್ತಪ್ಪ ದೇವರ…

*ಏ.19 ರಂದು ಕಣ್ಣಂಗಾಲ ಒಕ್ಕಲಿಗರ ಸಂಘದಿಂದ ವಿವಿಧ ಕ್ರೀಡಾಕೂಟ*

ಏಪ್ರಿಲ್ 7, 2026

*ಏ.8 ರಂದು ಮಿನಿ ಉದ್ಯೋಗ ಮೇಳ*

ಏಪ್ರಿಲ್ 7, 2026

*ನಾರ್ಗಾಣೆ : ಏ.13, 14 ಮತ್ತು 15ರಂದು ಧರ್ಮದೈವದ ನೇಮೋತ್ಸವ*

ಏಪ್ರಿಲ್ 7, 2026

*ಶ್ರದ್ಧಾಭಕ್ತಿಯಿಂದ ಜರುಗಿದ ಕೂತಿನಾಡು ಸುಗ್ಗಿ ಉತ್ಸವ*

ಏಪ್ರಿಲ್ 7, 2026

*ಚೇನಂಡ ಕಪ್ ಹಾಕಿ ಉತ್ಸವ : ದಾಖಲಾಗುವ ಪ್ರತಿ ಗೋಲಿಗೊಂದು “ಗಿಡ” ಎನ್ನುವ ಗುರಿ*

ಏಪ್ರಿಲ್ 7, 2026

*ಸೈನಿಕ ಶಾಲೆ ಕೊಡಗು: 2026-27ನೇ ಸಾಲಿನ ವಿದ್ಯಾರ್ಥಿಗಳ ಪದಗ್ರಹಣ ಸಮಾರಂಭ*

ಏಪ್ರಿಲ್ 7, 2026

*ಮಾಜಿ ಸೈನಿಕರು ಹಾಗೂ ಅವಲಂಬಿತರ ಅಹವಾಲು ಆಲಿಸಿದ ಜಿಲ್ಲಾಧಿಕಾರಿ : ಸೌಲಭ್ಯ ಕಲ್ಪಿಸಲು ಪ್ರಾಮಾಣಿಕ ಪ್ರಯತ್ನದ ಭರವಸೆ*

ಏಪ್ರಿಲ್ 7, 2026

*ರಂಗಸಮುದ್ರ ಗ್ರಾಮದಲ್ಲಿ ಜೋಡಿ ಬಸವೇಶ್ವರ ದೇವರ ವಾರ್ಷಿಕ ಪೂಜೋತ್ಸವ… ಬರಿಗಾಲಲ್ಲಿ ಕೆಂಡ ಕೊಂಡ ಹಾಯ್ದ ಭಕ್ತರು*

ಏಪ್ರಿಲ್ 7, 2026

*ಬೇತ್ರಿ ಮುಕ್ಕಾಟಿರ ಕಪ್ ಕ್ರಿಕೆಟ್ ನಮ್ಮೆ : ಏ.7 ರ ವಿಜೇತ ತಂಡಗಳು*

ಏಪ್ರಿಲ್ 7, 2026
  • Facebook
  • Twitter
  • Instagram
  • WhatsApp
  • YouTube
Quick Links
  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಪೊಲೀಸ್ ನ್ಯೂಸ್
  • ಪ್ರವಾಸಿತಾಣ
Quick Links
  • ಮಹಾದೇಗುಲ
  • ರುಚಿ ನೋಡಿ
  • ರೋಗ ಮುಕ್ತ
  • ಉದ್ಯೋಗ ಭಾಗ್ಯ
  • ಸಣ್ಣ ಕಥೆ
  • ವಿಡಿಯೋ ಗ್ಯಾಲರಿ
Contact

www.newsdeskkannada.com
News Desk,
Industrial Area,
Pathrika Bhavan Building,
Madikeri, Kodagu, Karnataka.
Phone: 94481 00724
              76766 24467
Email: newsdeskkodagu@gmail.com

© 2026 All Rights Reserved. Designed by Blueline Computers.
  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಪೊಲೀಸ್ ನ್ಯೂಸ್
  • ಪ್ರವಾಸಿತಾಣ

Type above and press Enter to search. Press Esc to cancel.

Ad Blocker Enabled!
Ad Blocker Enabled!
Our website is made possible by displaying online advertisements to our visitors. Please support us by disabling your Ad Blocker.