

ಮಡಿಕೇರಿ ಮೇ 15 NEWS DESK : ನಗರದ ರಾಜಾಸೀಟ್ ನಲ್ಲಿ ಕೋವಿ ಮತ್ತು ಕೊಳಲು ಹೆಸರಿನ ನೂತನ ಚಲನಚಿತ್ರಕ್ಕೆ ಮುಹೂತ೯ ನೆರವೇರಿತು. ಹಿರಿಯ ಕಲಾವಿದ ಕಾಂತಾರ ಖ್ಯಾತಿಯ ಬಾಸುಮ ಕೊಡಗು ನಿದೇ೯ಶನದಲ್ಲಿ ಮಂಗಳೂರಿನ ಇಂಪೀರಿಯಲ್ ಪ್ರೊಡಕ್ಷನ್ಸ್ ಸಂಸ್ಥೆಯ ನಿಮಾ೯ಣದಲ್ಲಿ ತಯಾರಾಗುವ ಕೋವಿ ಮತ್ತು ಕೊಳಲು ಚಿತ್ರಕ್ಕೆ ಮುಹೂತ೯ ಪೂಜೆ ನೆರವೇರಿಸಿ ಖ್ಯಾತ ಜೋತಿಷಿ ಆಯ೯ವಧ೯ನ್ ಗುರೂಜಿ ಕ್ಲಾಪ್ ಮಾಡಿದರು. ಉತ್ತಮ ಕನ್ನಡ ಚಿತ್ರಗಳು ತೆರೆಗೆ ಬರಬೇಕಾಗಿರುವುದು ಇಂದಿನ ಅಗತ್ಯವಾಗಿದ್ದು, ಈ ನಿಟ್ಟಿನಲ್ಲಿ ಬಾಸುಮ ಅವರ ಕೋವಿ ಮತ್ತು ಕೊಳಲು ಭರವಸೆ ಮೂಡಿಸಿದೆ ಎಂದು ಅವರು ಹೇಳಿದರು. ಚಿತ್ರದ ನಿಮಾ೯ಣ ಸಂಸ್ಥೆಯಾದ ಇಂಪೀರಿಯಲ್ ಸಂಸ್ಥೆಯ ಮುಖ್ಯಕಾಯ೯ನಿವ೯ಹಣಾಧಿಕಾರಿ ಹೇಮಂತ್ ಕುಲಾಲ್, ಮಾತನಾಡಿ, ಕೋವಿ ಮತ್ತು ಕೊಳಲು ಉತ್ತಮ ಕಥೆ ಹೊಂದಿರುವ ಹಿನ್ನಲೆಯಲ್ಲಿ ನಿಮಾ೯ಣಕ್ಕೆ ಮುಂದಾಗಿರುವುದಾಗಿ ಹೇಳಿದರು. ಮಡಿಕೇರಿ ತಾಲೂಕು ಜಾನಪದ ಪರಿಷತ್ ಅಧ್ಯಕ್ಷ ಅನಿಲ್ ಹೆಚ್.ಟಿ, ಮಾತನಾಡಿ, ಚಿತ್ರರಂಗದಲ್ಲಿ ವಿಭಿನ್ನ ಪಾತ್ರಗಳ ಮೂಲಕ ಹೆಸರಾಗಿರುವ ಹಿರಿಯ ರಂಗಕಮಿ೯ ಬಾಸುಮ ಅವರು ಕನ್ನಡದ ಗಟ್ಟಿ ಕಥೆಯನ್ನು ಆದರಿಸಿ ಕೋವಿ ಮತ್ತು ಕೊಳಲು ಚಿತ್ರವನ್ನು ತೆರೆಗೆ ತೆರುತ್ತಿರುವುದು ಶ್ಲಾಘನೀಯ ಪ್ರಯತ್ನ ಎಂದರು. ಅನೇಕ ರಂಗಕಮಿ೯ಗಳಿಗೆ ಈ ಚಿತ್ರ ಅವಕಾಶ ಕಲ್ಪಿಸಿರುವುದು ಮೆಚ್ಚತಕ್ಕದ್ದು ಎಂದು ನುಡಿದ ಅನಿಲ್, ತನ್ನ ಹೆಸರಿನಲ್ಲಿಯೇ ಕೊಡಗು ಎಂಬ ಹೆಸರನ್ನು ಹೊಂದಿರುವ ಬಾಸುಮ ಕೊಡಗು, ಯಶಸ್ವಿ ಚಿತ್ರದ ಮೂಲಕ ದೇಶವ್ಯಾಪಿ ಕಲಾಲೋಕದಲ್ಲಿ ಕೊಡಗಿನ ಕೀತಿ೯ಯನ್ನೂ ವಿಜೖಂಭಿಸುವಂತೆ ಮಾಡಲಿ ಎಂದು ಹಾರೈಸಿದರು. ಕೊಡವ ಸಾಹಿತ್ಯ ಅಕಾಡೆಮಿ ರಿಜಿಸ್ಟ್ರಾರ್ ಚಿನ್ನಸ್ವಾಮಿ ಮಾತನಾಡಿ, ಡಾ. ರಾಜ್ ಕುಮಾರ್, ವಿಷ್ಮುವಧ೯ನ್ ಮತ್ತಿತರ ನಟರು ಕನ್ನಡ ಪರವಾದ ಸಂಸ್ಕೃತಿಯನ್ನು ದೇಶವ್ಯಾಪಿ ಬಿಂಬಿಸಿದ್ದರು. ಕುಟುಂಬ ಸಹಿತ ವೀಕ್ಷಿಸುವಂಥ ಕನ್ನಡ ಚಿತ್ರಗಳು ಹೆಚ್ಚಾಗಿ ನಿಮಾ೯ಣವಾಗಬೇಕಾಗಿದೆ ಎಂದು ನುಡಿದರು. ಕೋವಿ ಮತ್ತು ಕೊಳಲು ಸಿನಿಮಾ ನಿದೇಶಕ ಬಾಸುಮ ಕೊಡಗು ಮಾತನಾಡಿ, ಗುರುರಾಜ ಮಾರ್ಪಳ್ಳಿಯವರ “ಗರ್ಭ” ಕಾದಂಬರಿ ಆಧಾರಿತ ಕೋವಿ ಮತ್ತು ಕೊಳಲು ಸಿನೆಮಾವು ಕಲಾತ್ಮಕ ಹಾಗೂ ವಾಣಿಜ್ಯಕ ಚಲನಚಿತ್ರವಾಗಿದೆ. ಮಡಿಕೇರಿ, ಸಂಪಾಜೆ ಮತ್ತು ಸುಳ್ಯ ವಿಭಾಗಗಳಲ್ಲಿ ಚಿತ್ರೀಕರಣ ನಡೆಯಲಿದೆ ಎಂದರು. ಕಲೆ ಮತ್ತು ಹಣದ ನಡುವಿನ ಸಂಘರ್ಷಗಳ ಕುರಿತ ಕಥೆಯನ್ನು ಇಲ್ಲಿ ಚಲನಚಿತ್ರವಾಗಿ ನಿರ್ಮಿಸಲಾಗುತ್ತಿದೆ. ಈ ವಷ೯ಧ ಸೆಪ್ಪಂಬರ್ ನಲ್ಲಿ ತೆರೆಕಾಣಲಿದೆ ಎಂದರು. ಚಿತ್ರದ ನಾಯಕಿ, ರಾಷ್ಟ್ರ ಪ್ರಶಸ್ತಿ ವಿಜೇತ ಕಲಾವಿದೆ ಅಕ್ಷತಾ ಪಾಂಡವಪುರ ಮಾತನಾಡಿ, ಇದೊಂದು ಉತ್ತಮ ಕಥಾಹಂದರ ಹೊಂದಿರುವ ಚಿತ್ರವಾಗಿದ್ದು, ರಂಗಭೂಮಿಯಲ್ಲಿ ಹೆಸರು ಮಾಡಿರುವ ಅನೇಕರು ನಟಿಸುತ್ತಿದ್ದಾರೆ. ತಾನು ರಾಜ್ಯವ್ಯಾಪಿ ರಂಗಪ್ರದಶ೯ನ ನೀಡಿದ್ದರೂ ಕೊಡಗು ಜಿಲ್ಲೆಯಲ್ಲಿ ಅವಕಾಶ ದೊರಕಿರಲಿಲ್ಲ. ಈ ಚಿತ್ರದ ಮೂಲಕ ಮಡಿಕೇರಿಗೆ ಬರುವ ಅವಕಾಶ ಲಭಿಸಿತು ಎಂದರು. ಕನಾ೯ಟಕ ಅರೆಭಾಷಾ ಸಾಹಿತ್ಯ ಸಾಂಸ್ಕೖತಿಕ ಅಕಾಡೆಮಿ ಸದಸ್ಯ ಪಿ.ಎಂ.ಸಂದೀಪ್ ಮಾತನಾಡಿ, ಕೋವಿ ಮತ್ತು ಕೊಳಲು ಎಂಬ ಹೆಸರೇ ಗಮನ ಸೆಳೆಯುತ್ತಿದೆ. ಕೊಡಗಿನ ಸಂಸ್ಕೃತಿಯ ಭಾಗವಾಗಿರುವ ಕೋವಿಯ ಹೆಸರು ಚಿತ್ರದಲ್ಲಿ ಮುಖ್ಯ ಅಂಶವಾಗಿರುವುದು ಕುತೂಹಲಕಾರಿಯಾಗಿದೆ ಎಂದರು. ಪಿಎಸ್ ಫಿಲಂಸ್ ನಿರ್ದೇಶಕರಾದ ಕುಮಾರ್ ಬಿ.ಟಿ., ಪ್ರೊಡಕ್ಷನ್ ಮ್ಯಾನೇಜರ್ ಜಯ ಕುಮಾರ್, ತೋಟಗಾರಿಕಾ ಇಲಾಖಾ ಹಿರಿಯ ನಿರ್ದೇಶಕರಾದ ಫಣೀಂದ್ರ, ಪುರಾತತ್ವ ಇಲಾಖೆಯ ಅಧಿಕಾರಿ ರೇಖಾ, ಪತ್ರಕತ೯ , ರಘು ಕೋಟಿ ಚಿತ್ರದ ಮುಹೂತ೯ ಸಂದಭ೯ ಹಾಜರಿದ್ದು ಶುಭಹಾರೈಸಿದರು. ಚಿತ್ರಕಥೆ ಮತ್ತು ಸಂಭಾಷಣೆಯನ್ನು ಶೌರ್ಯತೇಜ ಚಿತ್ರಕಥೆ, ಸಂಭಾಷಣೆ ಬರೆದಿರುವ ಚಿತ್ರಕ್ಕೆ . ಛಾಯಾಗ್ರಾಹಕರಾಗಿ ದೃಶಾ ಕೊಡಗು, ಕಲಾ ನಿರ್ದೇಶಕರಾಗಿ ಲೋಕೇಶ್ ಊರುಬೈಲು ಕಾಯ೯ನಿವ೯ಹಿಸುತ್ತಿದ್ದಾರೆ. ತಾರಾಗಣದಲ್ಲಿ ಅಕ್ಷತಾ ಪಾಂಡವಪುರ, ನವೀನ್ ಡಿ.ಪಡೀಲ್, ಮೋಹನ್ ಶೇಣಿ, ಮುರಳಿ ಶೃಂಗೇರಿ, ಆನಂದ ತುಮಕೂರು, ಶೈಲಶ್ರೀ, ಡಿಂಗ್ರಿ ನರೇಶ್, ಪಲ್ಲವಿ , ಕುಶಾಲನಗರದ ಮಾನ್ಯ ಕುಮಾರ್ ಅಭಿನಯಿಸುತ್ತಿದ್ದಾರೆ. :: ಶಾಸಕ ಡಾ.ಮಂಥರ್ ಗೌಡ ಶುಭಹಾರೈಕೆ :: ರಾಜಾಸೀಟ್ ಬಳಿ ನೂತನ ಕಾಮಗಾರಿ ಶಂಕುಸ್ಥಾಪನೆಗೆ ಬಂದಿದ್ದ ಮಡಿಕೇರಿ ಶಾಸಕ ಡಾ.ಮಂಥರ್ ಗೌಡ ಕೋವಿ ಮತ್ತು ಕೊಳಲ ಚಿತ್ರತಂಡವನ್ನು ಭೇಟಿಯಾಗಿ ಶುಭಹಾರೈಸಿದರು. ಕೊಡಗಿನ ಸಂಪಾಜೆ ವ್ಯಾಪ್ತಿಯಲ್ಲಿ ಚಿತ್ರೀಕರಣ ನಡೆಸುವ ಮೂಲಕ ಜಿಲ್ಲೆಯ ಸುಂದರ ದೖಶ್ಯಗಳನ್ನು ಪ್ರೇಕ್ಷಕರಿಗೆ ಪರಿಚಯಿಸುವ ಕಾಯ೯ ಶ್ಲಾಘನೀಯ ಎಂದೂ ಶಾಸಕ ಮಂಥರ್ ನುಡಿದರು.









