Close Menu
News Desk KannadaNews Desk Kannada
  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಇತ್ತೀಚಿನ ಸುದ್ದಿಗಳು
  • ಉದ್ಯೋಗ ಭಾಗ್ಯ
  • ಮಹಾದೇಗುಲ
  • ರುಚಿ ನೋಡಿ
  • ಪೊಲೀಸ್ ನ್ಯೂಸ್
  • ರೋಗ ಮುಕ್ತ
  • ಪ್ರವಾಸಿತಾಣ
  • ಸಣ್ಣ ಕಥೆ
  • ವಿಡಿಯೋ ಗ್ಯಾಲರಿ
Facebook X (Twitter) Instagram
Breaking News
  • *ಸರ್ಕಾರಿ ನೌಕರರೊಂದಿಗೆ ಸಂವಾದ : ಸರ್ಕಾರದ ದೂರದೃಷ್ಟಿ ತಿಳಿದು ಜವಾಬ್ದಾರಿಯಿಂದ ಕರ್ತವ್ಯ ನಿರ್ವಹಿಸಿ : ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್* 
  • *ಕೈಗಾರಿಕಾ ಅಪಘಾತಗಳ ತಡೆ ಹಾಗೂ ತುರ್ತು ನಿರ್ವಹಣೆಗೆ ಕಟ್ಟುನಿಟ್ಟಿನ ಕ್ರಮ : ಕೈಗಾರಿಕೆ ಇಲಾಖೆ ಕಟ್ಟುನಿಟ್ಟಿನ ಸೂಚನೆ*
  • *ನಿಧನ ಸುದ್ದಿ*
  • *ಪುರಸಭೆ ಕಚೇರಿಯಲ್ಲೇ ಮೀನು ಮಾರಾಟ :  ಬಿಜೆಪಿ ಪ್ರಮುಖರಿಂದ ವಿನೂತನ ಪ್ರತಿಭಟನೆ*
  • *ಕನ್ನಡ ಸಾಹಿತ್ಯ ಪರಿಷತ್ತಿನ ಪರಂಪರೆ ಪುನರುಜ್ಜೀವನಕ್ಕೆ ಚಿಂತನೆ : ಜಾಣಗೆರೆ ವೆಂಕಟರಾಮಯ್ಯ*
  • *ಕಸ್ತೂರಿ ರಂಗನ್ ವರದಿ : ಕುಂದಚೇರಿ ಮತ್ತು ಕೋಪಟ್ಟಿ ಗ್ರಾಮವನ್ನು ಕೈಬಿಡಲು ಒತ್ತಾಯ : ಗ್ರಾಮಸ್ಥರ ಪ್ರತಿಭಟನೆ*
  • *ಶೌಚಾಲಯದ ಗುಂಡಿಗೆ ಬಿದ್ದು ಇಬ್ಬರ ಸಾವು*
  • *ಆ.14 ರಂದು ಮಡಿಕೇರಿಯಲ್ಲಿ ಗಾನ ಕೋಗಿಲೆ ಎಸ್.ಜಾನಕಿ ಗಾನ ನಮನ ಕಾರ್ಯಕ್ರಮ*
  • *ಆ.14 ರಂದು ನೇರ ಸಂದರ್ಶನ*
  • *ಬಿಲ್ಲವ ಸಮಾಜದ ಆಟಿಡೊಂಜಿ ದಿನಾಚರಣೆ : ಸಮುದಾಯ ಭವನಕ್ಕೆ ಶಂಕುಸ್ಥಾಪನೆ*
News Desk KannadaNews Desk Kannada




  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಪೊಲೀಸ್ ನ್ಯೂಸ್
  • ಪ್ರವಾಸಿತಾಣ
  • ಮಹಾದೇಗುಲ
  • ರುಚಿ ನೋಡಿ
  • ಉದ್ಯೋಗ ಭಾಗ್ಯ
  • ರೋಗ ಮುಕ್ತ
  • ಸಣ್ಣ ಕಥೆ
News Desk KannadaNews Desk Kannada





Home»ಇತ್ತೀಚಿನ ಸುದ್ದಿಗಳು»*ಕನ್ನಡ ಸಾಹಿತ್ಯ ಪರಿಷತ್ತಿನ ಪರಂಪರೆ ಪುನರುಜ್ಜೀವನಕ್ಕೆ ಚಿಂತನೆ : ಜಾಣಗೆರೆ ವೆಂಕಟರಾಮಯ್ಯ*
ಇತ್ತೀಚಿನ ಸುದ್ದಿಗಳು ಕೊಡಗು ಜಿಲ್ಲೆ

*ಕನ್ನಡ ಸಾಹಿತ್ಯ ಪರಿಷತ್ತಿನ ಪರಂಪರೆ ಪುನರುಜ್ಜೀವನಕ್ಕೆ ಚಿಂತನೆ : ಜಾಣಗೆರೆ ವೆಂಕಟರಾಮಯ್ಯ*

ಆಗಷ್ಟ್ 11, 20262 Mins ReadBy admin
Facebook WhatsApp Twitter Telegram Copy Link Threads Email LinkedIn Pinterest
Follow us on
Google News Facebook
Facebook Twitter WhatsApp Email Telegram Copy Link

ಮಡಿಕೇರಿ ಆ.11 NEWS DESK : ಆಡಳಿತ ಲೋಪಗಳಿಂದ ಮುಕ್ಕಾಗಿರುವ ರಾಜ್ಯ ಕನ್ನಡ ಸಾಹಿತ್ಯ ಪರಿಷತ್ತುವಿನ ಘನತೆಯನ್ನು ಮರುಸ್ಥಾಪಿಸಿ, ಅದರ ಪರಂಪರೆ ಇತಿಹಾಸವನ್ನು ಪುನರುಜ್ಜೀವನಗೊಳಿಸುವ ಚಿಂತನೆ ತಮ್ಮದಾಗಿದೆಯೆಂದು ಹಿರಿಯ ಸಾಹಿತಿಗಳು ಹಾಗೂ ಮುಂದಿನ ಕಸಾಪ ಚುನಾವಣಾ ಅಭ್ಯರ್ಥಿಯಾಗಿಯೂ ಗುರುತಿಸಿಕೊಂಡಿರುವ ಜಾಣಗೆರೆ ವೆಂಕಟರಾಮಯ್ಯ ಅವರು ತಿಳಿಸಿದರು. ಸುದ್ದಿ ಗೋಷ್ಠಿಯಲ್ಲಿ ಮಾತನಾಡಿದ ಅವರು, ಕನ್ನಡಿಗರ ಪ್ರಾತಿನಿಧಿಕ ಸಂಸ್ಥೆಯಾಗಿರುವ ಕನ್ನಡ ಸಾಹಿತ್ಯ ಪರಿಷತ್ತನ್ನು ಮೈಸೂರಿನ ನಾಲ್ವಡಿ ಕೃಷ್ಣರಾಜ ಪಡೆಯರ್ ಅವರು ಸ್ಥಾಪಿಸಿ 112 ವರ್ಷಗಳಿ ಸಂದಿದೆ. ಇಂತಹ ಸಂಸ್ಥೆಯ ಘನತೆ ಗೌರವಗಳಿಗೆ ಕಳೆದೆರಡು ಅವಧಿಗಳಲ್ಲಿನ ದುರಾಡಳಿತ, ಭ್ರಷ್ಟತೆಗಳಿಂದ ಕುಂದುಂಟಾಗಿದೆಯೆಂದು ಅತೀವ ಬೇಸರ ವ್ಯಕ್ತಪಡಿಸಿದರು. ಪ್ರತಿ ಕುಟುಂಬಕ್ಕೊಂದು ಸದಸ್ಯತ್ವವಾಗಬೇಕು- ಕನ್ನಡ ಸಾಹಿತ್ಯ ಪರಿಷತ್ ಪ್ರಸ್ತುತ 4.50 ಲಕ್ಷ ಸದಸ್ಯತ್ವವನ್ನು ಹೊಂದಿದೆ. ರಾಜ್ಯದ ಕನ್ನಡಿಗರ ಸಂಖ್ಯೆಗೆ ಹೋಲಿಸಿದಲ್ಲಿ ಸದಸ್ಯತ್ವ ಅತ್ಯಂತ ಸಣ್ಣ ಪ್ರಮಾಣದ್ದು. ಈ ಹಿನ್ನೆಲೆಯಲ್ಲಿ ಕನ್ನಡ ನಾಡಿನ ಕನ್ನಡಿಗರ ಪ್ರತಿ ಕುಟುಂಬದಿಂದ ಸದಸ್ಯತ್ವ ಪಡೆದುಕೊಳ್ಳುವಂತಾಗಬೇಕು ಮತ್ತು ಆ ಮೂಲಕ ನಿಜ ಅರ್ಥದಲ್ಲಿ ಕಸಾಪ ಕನ್ನಡಿಗರ ಸಂಸ್ಥೆಯಾಗಿ ರೂಪು ತಳೆಯಬೇಕೆನ್ನುವ ಆಶಯ ತಮ್ಮದೆಂದು ದೃಢವಾಗಿ ನುಡಿದರು. ಪ್ರಸುತ ಕನ್ನಡ ಸಾಹಿತ್ಯ ಪರಿಷತ್ತು ಆಡಳಿತಾಧಿಕಾರಿಗಳ ಕೈಯಲ್ಲಿದೆಯಾದರೆ, ರಾಜ್ಯದ ಎಲ್ಲಾ ಜಿಲ್ಲೆಗಳ ಕಸಾಪ ಆಡಳಿತದ ಅಧಿಕಾರದ ಅವಧಿ ಪ್ರಸಕ್ತ ಸಾಲಿನ ನವೆಂಬರ್ 21 ರಂದು ಕೊನೆಗೊಳ್ಳಲಿದೆ. ಬಹುಶಃ ಡಿಸೆಂಬರ್‍ನಲ್ಲಿ ರಾಜ್ಯ ಕಸಾಪ ಚುನಾಣೆಗಳು ನಡೆಯುವ ಸಾಧ್ಯತೆ ಇದೆ. ಈ ಹಿನ್ನೆಲೆ ರಾಜ್ಯದ ಸಾಹಿತಿಗಳು, ಕಲಾವಿದರು, ಹೋರಾಟಗಾರರು ಮತ್ತು ವಿವಿಧ ಜಿಲ್ಲೆಗಳ ಕಸಾಪ ಪದಾಧಿಕಾರಿಗಳು ತನ್ನನ್ನು ರಾಜ್ಯಾಧ್ಯಕ್ಷ ಸ್ಥಾನಕ್ಕೆ ಗುರುತಿಸಿದ್ದಾರೆ. ಈ ಹಿನ್ನೆಲೆ ಕಾವೇರಿಯ ನಾಡು ಕೊಡಗಿನಿಂದ ಎಲ್ಲಾ ಜಿಲ್ಲೆಗಳನ್ನು ಸಂಪರ್ಕಿಸುವ ತನ್ನ ಕಾರ್ಯವನ್ನು ಇಂದಿನಿಂದ ಆರಂಭಿಸುತ್ತಿರುವುದಾಗಿ ತಿಳಿಸಿದರು. “ಕಸಾಪ ಉಳಿಸಿ ಹೋರಾಟ”- ಕಳೆÉದ ಒಂದು ದಶಕಗಳಿಂದ ಕನ್ನಡ ಸಾಹಿತ್ಯ ಪರಿಷತ್ತನ್ನು ಅಧಿಕಾರ ಪಡೆಯುವ “ಗಂಜಿ ಕೇಂದ್ರ”ವನ್ನಾಗಿ ಮಾಡಿಕೊಳ್ಳಲಾಗಿತ್ತೆಂದು ಅತ್ಯಂತ ಕಟುವಾಗಿ ನುಡಿದ ಜಾಣಗೆರೆ ವೆಂಕಟರಾಮಯ್ಯ, ಕಸಾಪದ ಮೂಲ ಚಿಂತನೆಗಳನ್ನು ಕೈಬಿಟ್ಟು ಅಧಿಕಾರದ ಗದ್ದುಗೆಯನ್ನಾಗಿಸಿಕೊಂಡವರ ಮನಸ್ಥಿತಿಗಳಿಂದ ಕಸಾಪದ ಅಧಃಪತನ ಆರಂಭಗೊಂಡಿತ್ತು. ಇದರಿಂದ “ಮನುಷ್ಯ ಜಾತಿ ತಾನೊಂದೆ ವಲಂ” ಎನ್ನುವ ಕಸಾಪ ಕಚೇರಿಯ ಮುಂದಿನ ಫಲಕವು ಕಣ್ಮರೆಯಾಗಿ ಪರಿಷತ್ತಿನಲ್ಲಿದ್ದ ಸಾಮಾಜಿಕ ನ್ಯಾಯವೆನ್ನುವುದು ಮರೆಯಾಗಿತ್ತು. ಇಂತಹ ವ್ಯವಸ್ಥೆಯಿಂದ ಕಸಾಪವನ್ನು ಮುಕ್ತಗೊಳಿಸುವ ನಿಟ್ಟಿನಲ್ಲಿ ನಾಡಿನ ಸಾಹಿತಿಗಳು ಸೇರಿದಂತೆ ಸಮಾನ ಮನಸ್ಕರನ್ನು ಒಳಗೊಂಡಂತೆ ನಡೆಸಿದ “ಕಸಾಪ ಉಳಿಸಿ ಹೋರಾಟ” ಫಲವನ್ನು ನೀಡಿದ್ದು, ದುರಾಡಳಿತ ನಡೆಸಿದವರು ಪರಿಷತ್ತಿನಿಂದ ದೂರ ಹೋಗಿದ್ದಾರೆಂದು ಸಂತಸ ವ್ಯಕ್ತಪಡಿಸಿ, ಇದೀಗ ಕಸಾಪವನ್ನು ಮರಳಿ ಕಟ್ಟಬೇಕಾಗಿದೆಯೆಂದು ತಿಳಿಸಿದರು. ಹಿಂದಿನ ಅವಧಿಯಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ ಆಡಳಿತ ನಡೆಸಿದವರು ಪರಿಷತ್ತಿನ ಕಚೇರಿಯಲ್ಲಿ ಸಿಸಿಟಿವಿಗಳನ್ನು ಅಳವಡಿಸುವ ಹಾಗೂ ಅನಪೇಕ್ಷಿತವಾದ ಬೈಲ ತಿದ್ದುಪಡಿಗಳಿಗೆ ಮುಂದಾಗುವ ಮೂಲಕ ಅಕ್ಷರಶಃ ಭಯದ ವಾತಾವರಣವನ್ನೆ ನಿರ್ಮಿಸಿದ್ದರು. ತಮ್ಮ ಚಿಂತನೆಯಂತೆ ಪರಿಷತ್ತಿನ ಬೈಲಾ ತಿದ್ದುಪಡಿ ನಡೆಸುವ ಸಲುವಾಗಿ ರಾಜ್ಯದ ಅತ್ಯಂತ ದೂರದ, ಸದಸ್ಯರು ಬರಲಾಗದಂತಹ ಸ್ಥಳಗಳಲ್ಲಿ ಸರ್ವ ಸದಸ್ಯರ ಸಭೆ ನಡೆಸುವ ಪ್ರಯತ್ನಗಳನ್ನು ನಡೆಸಿದ್ದರು. ಇಂತಹ ನಾಲ್ಕು ಸಭೆಯನ್ನು ಹೋರಾಟದ ಮೂಲಕ ತಪ್ಪಿಸಿ, ಪರಿಷತ್ತನ್ನು ಉಳಿಸಲು ಶ್ರಮಿಸಿದ್ದಾಗಿ ತಿಳಿಸಿದರು. ವಸೂಲಿ ಮತ್ತು ಶಿಕ್ಷೆಯಾಗಲಿ :: ಕನ್ನಡ ಸಾಹಿತ್ಯ ಪರಿಷತ್ತನಲ್ಲಿ ನಡೆದಿರುವ ಹಣದ ದುರ್ಬಳಕೆ ನಡೆದಿದ್ದು, ಇದನ್ನು ಸಂಬಂಧಪಟ್ಟವರಿಂದ ಸರ್ಕಾರ ವಸೂಲಿ ಮಾಡಬೇಕು ಮತ್ತು ಅಗತ್ಯ ಶಿಕ್ಷೆಯೂ ಅವರಿಗೆ ಆಗಬೇಕೆಂದು ಜಾಣಗೆರೆ ವೆಂಕಟರಾಮಯ್ಯ ಆಗ್ರಹಿಸಿದರು. ಹಿರಿಯ ಪತ್ರಕರ್ತರಾದ ಆರ್‍ಜಿ ಹಳ್ಳಿ ನಾಗರಾಜು ಅವರು ಮಾತನಾಡಿ, ಕನ್ನಡ ಸಾಹಿತ್ಯ ಪರಿಷತ್ತನ್ನು ದುಷ್ಟ ಶಕ್ತಿಗಳಿಂದ ಮುಕ್ತವಾಗಿಸಿ ಸ್ವಚ್ಛಾಡಳಿತವನ್ನು ನಿಡಬೇಕೆನ್ನುವ ಕಾರಣಗಳ ಹಿನ್ನೆಲೆ, ಜಾಣಗೆರೆ ವೆಂಕಟರಾಮಯ್ಯ ಅವರನ್ನು ಕಸಾಪ ಅಧ್ಯಕ್ಷ ಸ್ಥಾನದ ಅಭ್ಯರ್ಥಿಯನ್ನಾಗಿ ಮಾಡಲಾಗಿದೆಯೆಂದು ತಿಳಿಸಿದರು. ಚಲನಚಿತ್ರ ನಿರ್ದೇಶಕ ಎನ್.ಆರ್.ನಂಜುಂಡೇಗೌಡ ಅವರು ಮಾತನಾಡಿ, ಕಸಾಪದ ಆಡಳಿತವನ್ನು ಆಡಳಿತಶಾಹಿ ವ್ಯವಸ್ಥೆ ದಿಕ್ಕು ತಪ್ಪಿಸಿದೆ. ಯಾವುದೇ ಕಾರಣಕ್ಕು ಅಧಿಕಾರದ ಆಸೆಯಿಂದ ಕಸಾಪ ಅಧ್ಯಕ್ಷ ಸ್ಥಾನಕ್ಕೆ ಯಾರು ಬರಕೂಡದೆಂದು ತಿಳಿಸಿದರು. ಗೋಷ್ಠಿಯಲ್ಲಿ ಕೊಡಗು ಜಿಲ್ಲಾ ಕಸಾಪ ಮಾಜಿ ಅಧ್ಯಕ್ಷರಾದ ಟಿ.ಪಿ.ರಮೇಶ್, ಮಡಿಕೇರಿ ತಾಲ್ಲೂಕು ಮಾಜಿ ಅಧ್ಯಕ್ಷರಾದ ಕೆ.ಟಿ.ಬೇಬಿ ಮ್ಯಾಥ್ಯು, ಕಾ.ನ.ಚಂದ್ರಶೇಖರ್ ಉಪಸ್ಥಿತರಿದ್ದರು.

 

Follow us Follow us
Share. WhatsApp Facebook Twitter Email Telegram Copy Link

Website design development company services in Mangalore

Forex Trading Teacher in India

Related Posts

*ಸರ್ಕಾರಿ ನೌಕರರೊಂದಿಗೆ ಸಂವಾದ : ಸರ್ಕಾರದ ದೂರದೃಷ್ಟಿ ತಿಳಿದು ಜವಾಬ್ದಾರಿಯಿಂದ ಕರ್ತವ್ಯ ನಿರ್ವಹಿಸಿ : ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್* 

ಆಗಷ್ಟ್ 11, 2026

*ಕೈಗಾರಿಕಾ ಅಪಘಾತಗಳ ತಡೆ ಹಾಗೂ ತುರ್ತು ನಿರ್ವಹಣೆಗೆ ಕಟ್ಟುನಿಟ್ಟಿನ ಕ್ರಮ : ಕೈಗಾರಿಕೆ ಇಲಾಖೆ ಕಟ್ಟುನಿಟ್ಟಿನ ಸೂಚನೆ*

ಆಗಷ್ಟ್ 11, 2026

*ನಿಧನ ಸುದ್ದಿ*

ಆಗಷ್ಟ್ 11, 2026

*ಕೈಗಾರಿಕಾ ಅಪಘಾತಗಳ ತಡೆ ಹಾಗೂ ತುರ್ತು ನಿರ್ವಹಣೆಗೆ ಕಟ್ಟುನಿಟ್ಟಿನ ಕ್ರಮ : ಕೈಗಾರಿಕೆ ಇಲಾಖೆ ಕಟ್ಟುನಿಟ್ಟಿನ ಸೂಚನೆ*

ಆಗಷ್ಟ್ 11, 2026 ಇತ್ತೀಚಿನ ಸುದ್ದಿಗಳು ಕರ್ನಾಟಕ ಕೊಡಗು ಜಿಲ್ಲೆ

ಬೆಂಗಳೂರು, ಆ.11 NEWS DESK : ರಾಜ್ಯದ ಕೈಗಾರಿಕಾ ಪ್ರದೇಶಗಳಲ್ಲಿ ಹಾಗೂ ವಿವಿಧ ಜಿಲ್ಲೆಗಳಲ್ಲಿ ಕಾರ್ಯಾಚರಿಸುತ್ತಿರುವ ಕೈಗಾರಿಕೆಗಳಲ್ಲಿ ಸಂಭವಿಸುವ ಆಕಸ್ಮಿಕ…

*ನಿಧನ ಸುದ್ದಿ*

ಆಗಷ್ಟ್ 11, 2026

*ಪುರಸಭೆ ಕಚೇರಿಯಲ್ಲೇ ಮೀನು ಮಾರಾಟ :  ಬಿಜೆಪಿ ಪ್ರಮುಖರಿಂದ ವಿನೂತನ ಪ್ರತಿಭಟನೆ*

ಆಗಷ್ಟ್ 11, 2026

*ಕನ್ನಡ ಸಾಹಿತ್ಯ ಪರಿಷತ್ತಿನ ಪರಂಪರೆ ಪುನರುಜ್ಜೀವನಕ್ಕೆ ಚಿಂತನೆ : ಜಾಣಗೆರೆ ವೆಂಕಟರಾಮಯ್ಯ*

ಆಗಷ್ಟ್ 11, 2026

*ಕಸ್ತೂರಿ ರಂಗನ್ ವರದಿ : ಕುಂದಚೇರಿ ಮತ್ತು ಕೋಪಟ್ಟಿ ಗ್ರಾಮವನ್ನು ಕೈಬಿಡಲು ಒತ್ತಾಯ : ಗ್ರಾಮಸ್ಥರ ಪ್ರತಿಭಟನೆ*

ಆಗಷ್ಟ್ 11, 2026

*ಶೌಚಾಲಯದ ಗುಂಡಿಗೆ ಬಿದ್ದು ಇಬ್ಬರ ಸಾವು*

ಆಗಷ್ಟ್ 11, 2026

*ಆ.14 ರಂದು ಮಡಿಕೇರಿಯಲ್ಲಿ ಗಾನ ಕೋಗಿಲೆ ಎಸ್.ಜಾನಕಿ ಗಾನ ನಮನ ಕಾರ್ಯಕ್ರಮ*

ಆಗಷ್ಟ್ 11, 2026

*ಆ.14 ರಂದು ನೇರ ಸಂದರ್ಶನ*

ಆಗಷ್ಟ್ 10, 2026

*ಬಿಲ್ಲವ ಸಮಾಜದ ಆಟಿಡೊಂಜಿ ದಿನಾಚರಣೆ : ಸಮುದಾಯ ಭವನಕ್ಕೆ ಶಂಕುಸ್ಥಾಪನೆ*

ಆಗಷ್ಟ್ 10, 2026

*ಮಡಿಕೇರಿಯಲ್ಲಿ ಗಮನ ಸೆಳೆದ ಕಕ್ಕಡ ನಮ್ಮೆ*

ಆಗಷ್ಟ್ 10, 2026
  • Facebook
  • Twitter
  • Instagram
  • WhatsApp
  • YouTube
Quick Links
  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಪೊಲೀಸ್ ನ್ಯೂಸ್
  • ಪ್ರವಾಸಿತಾಣ
Quick Links
  • ಮಹಾದೇಗುಲ
  • ರುಚಿ ನೋಡಿ
  • ರೋಗ ಮುಕ್ತ
  • ಉದ್ಯೋಗ ಭಾಗ್ಯ
  • ಸಣ್ಣ ಕಥೆ
  • ವಿಡಿಯೋ ಗ್ಯಾಲರಿ
Contact

www.newsdeskkannada.com
News Desk,
Industrial Area,
Pathrika Bhavan Building,
Madikeri, Kodagu, Karnataka.
Phone: 94481 00724
              76766 24467
Email: newsdeskkodagu@gmail.com

© 2026 All Rights Reserved. Designed by Blueline Computers.
  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಪೊಲೀಸ್ ನ್ಯೂಸ್
  • ಪ್ರವಾಸಿತಾಣ

Type above and press Enter to search. Press Esc to cancel.

Ad Blocker Enabled!
Ad Blocker Enabled!
Our website is made possible by displaying online advertisements to our visitors. Please support us by disabling your Ad Blocker.