ಸೋಮವಾರಪೇಟೆ ಆ.20 NEWS DESK : ತಾಲ್ಲೂಕು ಕಾನೂನು ಸೇವಾ ಪ್ರಾಧಿಕಾರ, ತಾಲ್ಲೂಕು ಆಡಳಿತ, ಕಾರ್ಮಿಕ ಇಲಾಖೆ, ಶಿಕ್ಷಣ ಇಲಾಖೆ, ತಾಲ್ಲೂಕು ಪಂಚಾಯಿತಿ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ, ಸಮಾಜ ಕಲ್ಯಾಣ ಇಲಾಖೆ, ತಾಲ್ಲೂಕು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಆರೋಗ್ಯ ಇಲಾಖೆ ಮತ್ತು ಪೋಲೀಸ್ ಇಲಾಖೆ ಸಹಯೋಗದೊಂದಿಗೆ ಬಾಲಕಾರ್ಮಿಕ ನಿರ್ಮೂಲನಾ ಅಭಿಯಾನ ಜಾಥಾ ಕಾರ್ಯಕ್ರಮ ಪಟ್ಟಣದಲ್ಲಿ ನಡೆಯಿತು. ತಾಲ್ಲೂಕು ಆಡಳಿತ ಸೌಧದ ಮುಂಭಾಗದಲ್ಲಿ ಜಾಥಕ್ಕೆ ತಾಲ್ಲೂಕು ಕಾನೂನು ಸೇವಾ ಸಮಿತಿ ಕಾರ್ಯದರ್ಶಿಗಳು ಹಾಗೂ ಪ್ರಧಾನ ಸಿವಿಲ್ ನ್ಯಾಯಾಧೀಶ ಗೋಪಾಲಕೃಷ್ಣ ಚಾಲನೆ ನೀಡಿದರು. ರಾಷ್ಟ್ರೀಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ನಿರ್ದೇಶನದಂತೆ ಅಂಗಡಿ ಮತ್ತು ವಾಣಿಜ್ಯ ಸಂಸ್ಥೆಗಳಲ್ಲಿ ಬಾಲಕಾರ್ಮಿಕರ ತಪಾಸಣೆಯನ್ನು ನಡೆಸಲಾಯಿತು. ತಹಶೀಲ್ದಾರ್ ಶ್ರೀಧರ್ ಕಂಕನವಾಡಿ, ವಕೀಲರ ಸಂಘದ ಅಧ್ಯಕ್ಷ ಕೆ.ಎಚ್ ವಿಠಲ್, ಹಿರಿಯ ಕಾರ್ಮಿಕ ಅಧಿಕಾರಿ ಶಶಿಧರ್, ತಾಲ್ಲೂಕು ಹಿಂದುಳಿದ ವರ್ಗಗಳ ಕಲ್ಯಾಣಾಧಿಕಾರಿ ಸ್ವಾಮಿ, ಕ್ಷೇತ್ರ ಸಮನ್ವಯಧಿಕಾರಿಗಳಾದ ಮಂಜೇಶ್ ಇದ್ದರು.
ಲೇಖಕ: admin
ಮಡಿಕೇರಿ ಆ.20 NEWS DESK : ಅಮ್ಮತ್ತಿ ಬ್ಲೂಸ್ಟರ್ ವತಿಯಿಂದ 78ನೇ ಸ್ವಾತಂತ್ರ್ಯ ದಿನಾಚರಣೆಯ ಅಂಗವಾಗಿ ನಡೆದ ಮೂರನೇ ವರ್ಷದ 6+1 ಮುಕ್ತ ಫುಟ್ಬಾಲ್ ಪಂದ್ಯಾವಳಿಯಲ್ಲಿ ಅಮ್ಮತ್ತಿ ಕೆ-12 ತಂಡ ಚಾಂಪಿಯನ್ ಆಗಿ ಹೊರಹೊಮ್ಮಿದ್ದು, ದ್ವಿತೀಯ ಸ್ಥಾನಕ್ಕೆ ಬ್ಲೂ ಸ್ಟಾರ್ ತೃಪ್ತಿಪಟ್ಟುಕೊಂಡಿತು. ಅಮ್ಮತ್ತಿಯ ಜಿ.ಎಂ.ಪಿ.ಶಾಲಾ ಮೈದಾನದಲ್ಲಿ ನಡೆದ ರೋಚಕ ಪಂದ್ಯಾವಳಿಯಲ್ಲಿ ಒಟ್ಟು 12 ತಂಡಗಳು ಟ್ರೋಫಿಗಾಗಿ ಸೆಣಸಾಡಿದವು. ಬೆಸ್ಟ್ ಸ್ಟ್ರೈಕರ್ ರಾಕೇಶ್, ಬೆಸ್ಟ್ ಪ್ಲೇಯರ್ಆಗಿ ವಿಜು, ಬೆಸ್ಟ್ ಡಿಫೆಂಡರ್ ಸಾಲುಮ್, ಬೆಸ್ಟ್ ಗೋಲ್ ಕೀಪರ್ ಪ್ರೇಮ್, ಬೆಸ್ಟ್ ಸೀನಿಯರ್ ಪ್ಲೇಯರ್ ವಿನು, ಪ್ರಶಸ್ತಿಯನ್ನು ಪಡೆದುಕೊಂಡರು. ತೀರ್ಪುಗಾರರಾಗಿ ಹಿರಿಯ ಕ್ರೀಡಾಪಟು ಗಣೇಶ್ ಕಾರ್ಯನಿರ್ವಹಿಸಿದರು. ಪಂದ್ಯಾವಳಿಯನ್ನು ಅಮ್ಮತ್ತಿ ಚೌಡೇಶ್ವರಿ ನಗರದ ಗಣೇಶೋತ್ಸವ ಸಮಿತಿ ಅಧ್ಯಕ್ಷ ಸತೀಶ್ ಹಾಗೂ ಚೌಡೇಶ್ವರಿ ದೇವಾಲಯದ ಮಾಜಿ ಕಾರ್ಯದರ್ಶಿ ಹರೀಶ್ ಪಂದ್ಯಾವಳಿಯನ್ನು ಉದ್ಘಾಟಿಸಿ ಕ್ರೀಡಾಪಟುಗಳಿಗೆ ಶುಭಹಾರೈಸಿದರು. ಪ್ರಥಮ ವಿಜೇತರಿಗೆ ದಾನಿಗಳಾದ ಸಾಗರ್ ತಮ್ಮ ತಂದೆ ಆನಂದ್ (ಬಿ.ಎಸ್.ಎನ್.ಎಲ್) ಅವರ ಜ್ಞಾಪಕರ್ತವಾಗಿ ನೀಡಿದ ಟ್ರೋಫಿಯನ್ನು ಬಹುಮಾನವಾಗಿ ವಿತರಿಸಲಾಯಿತು. ದ್ವಿತೀಯ ವಿಜೇತರಿಗೆ ವಿರಾಜಪೇಟೆಯ…
ಮಡಿಕೇರಿ NEWS DESK ಆ.20 : ಕೊಡಗು ಪ್ರೆಸ್ ಕ್ಲಬ್ ಸೌಹಾರ್ದ ಸಹಕಾರಿ ಸಂಘ ನಿಯಮಿತದ ಅಧ್ಯಕ್ಷರಾಗಿ ಅಜ್ಜಮಾಡ ರಮೇಶ್ ಕುಟ್ಟಪ್ಪ ಹಾಗೂ ಉಪಾಧ್ಯಕ್ಷರಾಗಿ ಕೆ.ಕೆ. ರೆಜಿತ್ ಕುಮಾರ್ ಗುಹ್ಯ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಆಡಳಿತ ಮಂಡಳಿ ನಿರ್ದೇಶಕರಾಗಿ ಬಿ.ಆರ್. ಸವಿತಾ ರೈ, ಅಜ್ಜಿನಿಕಂಡ ಪ್ರಮೀಳಾ ನಾಚಯ್ಯ, ಎಂ.ಎನ್. ಚಂದ್ರಮೋಹನ್, ಆರ್. ಸುಬ್ರಮಣಿ, ಪುತ್ತಂ ಪ್ರದೀಪ್ ಬಾಲನ್, ಚೀಯಂಡಿ ತೇಜಸ್ ಪಾಪಯ್ಯ, ವಿ.ವಿ. ಅರುಣ್ ಕುಮಾರ್, ಈ.ಆರ್. ವಿಶ್ವ ಕುಮಾರ್, ಕೆ.ಕೆ. ನಾಗರಾಜ ಶೆಟ್ಟಿ, ಸಂತೋಷ್ ರೈ, ಕೆ.ಬಿ. ಶಂಶುದ್ದೀನ್, ಎಚ್.ಸಿ. ಜಯಪ್ರಕಾಶ್, ಕೆ.ಬಿ. ದಿವಾಕರ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಮುಂದಿನ ಐದು ವರ್ಷಾವಧಿಗೆ ಈ ಆಡಳಿತ ಮಂಡಳಿ ಜವಾಬ್ದಾರಿ ನಿರ್ವಹಿಸಲಿದೆ. ಚುನಾವಣಾಧಿಕಾರಿಯಾಗಿ ಸಂಜಯ ಪಿ. ಕುರಳುಪ್ಪ ಕಾರ್ಯನಿರ್ವಹಿಸಿದರು.
ಮಡಿಕೇರಿ NEWS DESK ಆ.20 : ಮರಗೋಡು ವಿವೇಕಾನಂದ ಯುವಕ ಸಂಘದ ನೂತನ ಅಧ್ಯಕ್ಷರಾಗಿ ಕೆ.ಎನ್.ಪ್ರಸಾದ್ ಹಾಗೂ ಕಾರ್ಯದರ್ಶಿಯಾಗಿ ಬಿ.ಆರ್.ದುಶ್ಯಂತ್ ಆಯ್ಕೆಯಾಗಿದ್ದಾರೆ. ಖಜಾಂಚಿಯಾಗಿ ಪಿ.ಪಿ.ಚೇತನ್, ಉಪಾಧ್ಯಕ್ಷರಾಗಿ ಬಿ.ಕೆ.ಚಂದ್ರಶೇಖರ್, ಸಹಕಾರ್ಯದರ್ಶಿ ಕೆ.ಡಿ.ಪವನ್ ಕುಮಾರ್, ಕ್ರೀಡಾ ಕಾರ್ಯದರ್ಶಿ ಕೆ.ಸಿ.ಅನಂತ್, ಸಮಿತಿ ಸದಸ್ಯರುಗಳಾಗಿ ಕೆ.ಎಸ್.ಪ್ರಶಾಂತ್, ಪಿ.ಟಿ.ಜಗದೀಶ್, ಕೆ.ಎ.ರಾಕೇಶ್, ಕೆ.ಎಸ್.ಜೀವನ್, ಡಬ್ಲ್ಯು.ಎಸ್.ಅಕ್ಷಿತ್, ಕೆ.ಎ.ಪುನಿತ್ ಹಾಗೂ ಐ.ಯು.ನವನೀತ್ ನೇಮಕಗೊಂಡರು. ಸಂಘದ ಸಭಾಂಗಣದಲ್ಲಿ ನಡೆದ 2023-24ನೇ ಸಾಲಿನ ವಾರ್ಷಿಕ ಮಹಾಸಭೆಯಲ್ಲಿ ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು. ಸಂಘದ ಅಧ್ಯಕ್ಷ ಬಿ.ಆರ್.ಲಕ್ಷ್ಮೀಪತಿ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ 2023-24ನೇ ಸಾಲಿನ ಜಮಾ ಖರ್ಚನ್ನು ಖಜಾಂಚಿ ಎಂ.ಕೆ.ಬೆಳ್ಯಪ್ಪ ಮಂಡಿಸಿದರು. ಸಂಘದ ಆಡಳಿತ ಮಂಡಳಿಯ ವರದಿಯನ್ನು ಕಾರ್ಯದರ್ಶಿ ಕೆ.ಎ.ಹನೀಶ್ ವಾಚಿಸಿದರು. ಅಧ್ಯಕ್ಷತೆ ವಹಿಸಿ ಮಾತನಾಡಿದ ಅಧ್ಯಕ್ಷ ಬಿ.ಆರ್.ಲಕ್ಷ್ಮೀಪತಿ ಸಂಘದ ಏಳಿಗೆಗಾಗಿ ಕೈ ಜೋಡಿಸಿ, ಸಮಾಜ ಸೇವೆಯಲ್ಲಿ ತೊಡಗಿಸಿಕೊಂಡ ಸದಸ್ಯರಿಗೆ ಧನ್ಯವಾದ ಸಲ್ಲಿಸಿದರು. ನಮ್ಮ ಅವಧಿಯಲ್ಲಿ ಸಹಕಾರ ನೀಡಿದಂತೆ ಮುಂದೆಯೂ ಹೊಸ ಆಡಳಿತ ಮಂಡಳಿಗೆ ಸರ್ವ ಸದಸ್ಯರು ಸಹಕಾರ ನೀಡಬೇಕೆಂದು ಮನವಿ ಮಾಡಿದರು. ಕಾರ್ಯದರ್ಶಿ ಕೆ.ಎ.ಹನೀಶ್ ಮಾತನಾಡಿ, ಸಂಘವು…
ಮಡಿಕೇರಿ NEWS DESK ಆ.20 : ಕೊಡಗು ಪ್ರೆಸ್ ಕ್ಲಬ್ ಅಧ್ಯಕ್ಷರಾಗಿ ಬೊಳ್ಳಜಿರ ಬಿ. ಅಯ್ಯಪ್ಪ ಹಾಗೂ ಪ್ರಧಾನ ಕಾರ್ಯದರ್ಶಿಯಾಗಿ ಎಂ.ಕೆ. ಆದರ್ಶ್ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಹಿರಿಯ ಉಪಾಧ್ಯಕ್ಷರಾಗಿ ನವೀನ್ ಡಿಸೋಜ, ಉಪಾಧ್ಯಕ್ಷರಾಗಿ ವನಿತಾ ಚಂದ್ರಮೋಹನ್, ಖಜಾಂಚಿಯಾಗಿ ಚೀಯಂಡಿ ತೇಜಸ್ ಪಾಪಯ್ಯ, ಸಂಘಟನಾ ಕಾರ್ಯದರ್ಶಿಯಾಗಿ ಕೆ.ಜೆ. ಶಿವರಾಜ್, ಸಹ ಕಾರ್ಯದರ್ಶಿಯಾಗಿ ವಿ.ವಿ. ಅರುಣ್ ಕುಮಾರ್ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ನಿರ್ದೇಶಕರಾಗಿ ಕೆ.ಎಂ. ವಿನೋದ್, ಎಂ.ಆರ್. ಲೋಹಿತ್, ಕೆ.ಎಸ್. ಲೋಕೇಶ್, ಕೆ.ಎಂ. ಇಸ್ಮಾಯಿಲ್ ಅವಿರೋಧವಾಗಿ ನೇಮಕಗೊಂಡಿದ್ದಾರೆ. ನಾಮನಿರ್ದೇಶನ ಸದಸ್ಯರನ್ನಾಗಿ ಬಿ.ಜೆ. ಪ್ರದೀಪ್ (ಸತ್ಯ ಮಂಜು), ಅಜ್ಜಮಾಡ ರಮೇಶ್ ಕುಟ್ಟಪ್ಪ, ಬಿ.ಆರ್. ಸವಿತಾ ರೈ, ಮಚ್ಚಮಾಡ ಅನೀಶ್ ಮಾದಪ್ಪ ಅವರನ್ನು ಆಯ್ಕೆ ಮಾಡಲಾಗಿದೆ. ಕರ್ನಾಟಕ ಕೊಡವ ಸಾಹಿತ್ಯ ಮತ್ತು ಸಾಂಸ್ಕೃತಿಕ ಅಕಾಡೆಮಿ ರಿಜಿಸ್ಟ್ರಾರ್ ಅಜ್ಜಿಕುಟ್ಟಿರ ಸಿ. ಗಿರೀಶ್ ಚುನಾವಣಾಧಿಕಾರಿಯಾಗಿ ಕಾರ್ಯನಿರ್ವಹಿಸಿದರು.
ಮಡಿಕೇರಿ ಆ.20 NEWS DESK : ಕೂಡಿಗೆ ಗ್ರಾ.ಪಂ ವ್ಯಾಪ್ತಿಯ ಸೀಗೆಹೊಸೂರು ಗ್ರಾಮದಲ್ಲಿರುವ ಕಕ್ಕೆಹೊಳೆ ನಾಲೆಯ ಕಾಲುವೆಗಳು ಕಳೆದ ಒಂದು ತಿಂಗಳುಗಳಿಂದ ಸುರಿದ ಮಳೆಯಿಂದಾಗಿ ಬೆಟ್ಟದ ನೀರು ಕಾಲುವೆಗಳ ಮೂಲಕ ಹರಿದ ಹಿನ್ನೆಲೆಯಲ್ಲಿ ಬೆಟ್ಟದ ಮಣ್ಣು ಸೇರಿ ಕಾಲುವೆಗಳು ಸಂಪೂರ್ಣವಾಗಿ ಹೂಳುವಿನಿಂದ ಮುಚ್ಚಲ್ಪಟ್ಟಿವೆ ಅದರ ತೆರವಿಗೆ ಗ್ರಾಮಸ್ಥರು ಮತ್ತು ವ್ಯಾಪ್ತಿಯ ರೈತರು ಒತ್ತಾಯಿಸಿದ್ದಾರೆ. ಮಡಿಕೇರಿ ಸಣ್ಣ ನೀರಾವರಿ ಇಲಾಖೆಯ ಕೇಂದ್ರ ಕಚೇರಿಯಲ್ಲಿ ಇಂಜಿನಿಯರ್ ಕುಮಾರ್ ಸ್ವಾಮಿ ಅವರಿಗೆ ಮನವಿ ಸಲ್ಲಿಸಿದ ಸೀಗೆಹೊಸೂರು, ಮಲ್ಲೇನಹಳ್ಳಿ ಗಂಗೆಕಲ್ಯಾಣ ವ್ಯಾಪ್ತಿಯ ಗ್ರಾಮಸ್ಥರು ಹಾಗೂ ರೈತರು, ಸೀಗೆಹೊಸೂರು ಗ್ರಾಮದ ಗಣಪತಿ ದೇವಾಲಯ ಸಮೀಪದಿಂದ ಎರಡನೇ ಬ್ರಾಂಚ್ ನ ಉಪ ಕಾಲುವೆಯವರೆಗೆ ಸಂಪೂರ್ಣವಾಗಿ ಹೂಳು ತುಂಬಿಕೊಂಡಿರುವ ಹಿನ್ನೆಲೆಯಲ್ಲಿ ಕಕ್ಕೆಹೊಳೆ ಮುಖ್ಯ ನಾಲೆಯ ನೀರು ಸರಾಗವಾಗಿ ಹರಿಯಲು ಸಾದ್ಯವಾಗದೇ ರಸ್ತೆ ಯಲ್ಲಿಯೂ ಹರಿಯುತ್ತದೆ, ಅಲ್ಲದೇ ಈ ವ್ಯಾಪ್ತಿಯ ಅಚ್ಚುಕಟ್ಟು ಪ್ರದೇಶದ ರೈತರ ಬೇಸಾಯಕ್ಕೆ ನೀರಿನ ಸಮಸ್ಯೆಯಿಂದಾಗಿ ಬೇಸಾಯಕ್ಕೆ ತೊಂದರೆಗಳು ಅಗುತ್ತಿವೆ ಎಂದು ಗಮನ ಸೆಳೆದರು. ಈ ಸಂದರ್ಭ ಕೂಡಿಗೆ ಗ್ರಾ.ಪಂ ಸದಸ್ಯರಾದ…
ವಿರಾಜಪೇಟೆ ಆ.20 NEWS DESK : ಬೇಟೋಳಿ ಗ್ರಾಮದ ರಾಮನಗರದಲ್ಲಿ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ವತಿಯಿಂದ ರಕ್ಷಾ ಬಂಧನ ಕಾರ್ಯಕ್ರಮವನ್ನು ಆಚರಿಸಲಾಯಿತು. ಭಗವಾದ್ವಜಕ್ಕೆ ನಮಿಸಿ ವಿಶೇಷ ಪ್ರಾರ್ಥನೆ ಸಲ್ಲಿಸಲಾಯಿತು. ನಂತರ ದಿನದ ಮಹತ್ವವನ್ನು ವಿವರಿಸಿದರು. ನಂತರ ಧ್ವಜ ಪ್ರಣಾಮವನ್ನು ಸಲ್ಲಿಸಿ, ನೆರೆದಿದ್ದ ಸ್ವಯಂ ಸೇವಕರು ಮತ್ತು ಸಾರ್ವಜನಿಕರು ಪರಸ್ಪರ ರಕ್ಷೆಯನ್ನು ಕಟ್ಟಿದರು.ಇದೇ ಸಂದರ್ಭ ಸಿಹಿ ಹಂಚಲಾಯಿತು. ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಹಿರಿಯ ಕಾರ್ಯಕರ್ತ ಗೌರಿ ಶಂಕರ್, ಸೋಮಶೇಖರ್, ಅನಿಲ್, ಶರವಣ, ಜಿಷ್ಣು ಇತರರು ಹಾಜರಿದ್ದರು.
ಮಡಿಕೇರಿ (NEWS DESK) ಆ.20 : ಸಮಾಜದ ಎಲ್ಲಾ ವರ್ಗಗಳಲ್ಲಿ ಶಾಂತಿ, ಕೋಮು ಸೌಹಾರ್ದತೆ ಮತ್ತು ರಾಷ್ಟ್ರೀಯ ಏಕೀಕರಣವನ್ನು ಉತ್ತೇಜಿಸುವ ಸಲುವಾಗಿ ಪ್ರತಿ ವರ್ಷ ಆ.20 ರಂದು ಆಚರಿಸಲಾಗುವ ಸದ್ಭಾವನಾ ದಿನವನ್ನು ಇಂದು ಕೊಡಗು ಜಿಲ್ಲಾ ಪೊಲೀಸ್ ಕಚೇರಿ, ಜಿಲ್ಲೆಯ ಎಲ್ಲಾ ಠಾಣೆ ಹಾಗೂ ಕಚೇರಿಗಳಲ್ಲಿ ಅರ್ಥಪೂರ್ಣವಾಗಿ ಆಚರಿಸಲಾಯಿತು. ಸದ್ಭಾವನಾ ದಿನಾಚರಣೆಯ ಅಂಗವಾಗಿ ಎಲ್ಲರಿಗೂ ಸದ್ಭಾವನಾ ದಿನದ ಪ್ರತಿಜ್ಞೆಯನ್ನು ಬೋಧಿಸಲಾಯಿತು. ಜಿಲ್ಲಾ ಪೊಲೀಸ್ ಕಚೇರಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಪೊಲೀಸ್ ಅಧಿಕಾರಿಗಾಗಳು ಹಾಗೂ ಕಚೇರಿ ಸಿಬ್ಬಂದಿಗಳು ಪಾಲ್ಗೊಂಡಿದ್ದರು.
ಮಡಿಕೇರಿ ಆ.20 NEWS DESK : ಕೊಡಗು ಜಿಲ್ಲಾ ಕೇಂದ್ರ ಗ್ರಂಥಾಲಯ ಮತ್ತು ಅರಿವು ಕೇಂದ್ರಗಳ ಮೇಲ್ವಿಚಾರಕರ ಸಂಘ ಹಾಗೂ ಕೊಡಗು ಜಿಲ್ಲೆಯ ಎಲ್ಲಾ ಗ್ರಾಮ ಪಂಚಾಯಿತಿ ಗ್ರಂಥಾಲಯ ಮತ್ತು ಅರಿವು ಕೇಂದ್ರಗಳ ಮೇಲ್ವಿಚಾರಕರು ಜಿಲ್ಲಾ ಕೇಂದ್ರ ಗ್ರಂಥಾಲಯದ ನಿವೃತ್ತ ಮುಖ್ಯಾಧಿಕಾರಿ ಲೀಲಾವತಿ ಅವರನ್ನು ಬೀಳ್ಕೊಡಲಾಯಿತು. ನಗರದ ಜಿಲ್ಲಾ ಕೇಂದ್ರ ಗ್ರಂಥಾಲಯದಲ್ಲಿ ನಡೆದ ಕಾರ್ಯಕ್ರಮದಲ್ಲಿ ಹಿರಿಯ ಮೇಲ್ವಿಚಾರಕರಾದ ಆರ್.ಕೆ.ಶಾಂತಾ, ಎನ್. ಜಿ.ಮೊಣ್ಣಪ್ಪ , ಬೆಟ್ಟಗೇರಿಯ ಕಮಲಾಕ್ಷಿ, ಎಸ್.ಬಿ.ಜಲಜಾಕ್ಷಿ ಮತ್ತು ಕೆ.ಆರ್.ರಾಜು ಹಾಗೂ ಮಡಿಕೇರಿ ತಾಲೂಕಿನ ಕಾರ್ಯನಿರ್ವಾಹಣಾಧಿಕಾರಿಗಳ ಸಮ್ಮುಖದಲ್ಲಿ ಸನ್ಮಾನಿಸಿ, ಗೌರವಿಸಲಾಯಿತು. ಈ ಸಂದರ್ಭ ಮಾತನಾಡಿದ ಮಡಿಕೇರಿ ತಾಲೂಕಿನ ಕಾರ್ಯನಿರ್ವಹಣಾಧಿಕಾರಿ ಶೇಖರ್, 2008 ರಲ್ಲಿ ಮಡಿಕೇರಿ ಜಿಲ್ಲಾ ಕೇಂದ್ರ ಗ್ರಂಥಾಲಯದಲ್ಲಿ ಮುಖ್ಯ ಗ್ರಂಥಾಲಯಾಧಿಕಾರಿಯವರ ತೆರವಾದ ಸ್ಥಾನಕ್ಕೆ ಪ್ರಭಾರವಾಗಿ ಅಧಿಕಾರವನ್ನು ಸ್ವೀಕರಿಸಿದ್ದು, ಅಂದಿನಿಂದ ಇಂದಿನವರೆಗೂ ಸುಮಾರು 16 ವರ್ಷಗಳ ಕಾಲ ಅತ್ಯುತ್ತಮವಾಗಿ ಕಾರ್ಯನಿರ್ವಹಿಸಿದ್ದಾರೆ ಎಂದು ಶ್ಲಾಘೀಸಿದರು. ಕಾರ್ಯವೈಖರಿಯಲ್ಲಿನ ಬದ್ಧತೆ, ಶ್ರದ್ಧೆ, ಸಮಯ ಪ್ರಜ್ಞೆ, ಪ್ರಾಮಾಣಿಕತೆ, ನಿಷ್ಠೆಯು ಅವರನ್ನು ಪ್ರಬುದ್ಧ ಸ್ಥಾನಕ್ಕೇರಿಸಿದ್ದು, ಇದೇ ರೀತಿಯ ಕಲಿಕೆಯ ಹಂಬಲವನ್ನು…
ಸುಂಟಿಕೊಪ್ಪ ಆ.20 NEWS DESK : ವಿಶ್ವ ಹಿಂದೂ ಪರಿಷದ್ನ 60ನೇ ವರ್ಷದ ಶ್ರೀ ಗೌರಿ ಗಣೇಶೋತ್ಸವ ಸಮಿತಿಯ ಅಧ್ಯಕ್ಷರಾಗಿ ಎಸ್.ವಿಘ್ನೇಶ್ ಪುನರಾಯ್ಕೆಗೊಂಡಿದ್ದಾರೆ. ಉಪಾಧ್ಯಕ್ಷರುಗಳಾಗಿ ಬಿ.ಕೆ.ಪ್ರಶಾಂತ್, ಎಂ.ಗಣೇಶ್, ಸಿ.ಸಿ.ಸುನಿಲ್ಕುಮಾರ್, ಪ್ರಧಾನ ಕಾರ್ಯದರ್ಶಿಯಾಗಿ ಎಂ.ಹೆಚ್.ನಿಖಿಲ್, ಖಜಾಂಚಿಯಾಗಿ ಬಿ.ಡಿ.ಪದ್ಮನಾಭ, ಕಾರ್ಯದರ್ಶಿಗಳಾಗಿ ಎಂ.ಪಾಂಡ್ಯನ್, ಜಿ.ಹೃತಿಕ್, ಹೆಚ್.ನವೀನ್, ಸಹಕಾರ್ಯದರ್ಶಿಯಾಗಿ ಆರ್.ಮಣಿ, ಪಿ.ಕೆ.ಸೂರ್ಯ, ಆರ್.ಪ್ರಶಾಂತ್, ಸಂಘಟನಾ ಕಾರ್ಯದರ್ಶಿಗಳಾ ಎಸ್.ರಾಜೇಶ್, ಬಿ.ಡಿ.ಅಶ್ವಥ್, ಹೆಚ್.ಸಿ.ಯೋಗೇಶ್, ಕೆ.ಮಧು, ಚೇತನ್, ಶಿವು, ಆರ್.ಪುನೀತ್, ಗುಣಶೇಖರ್, ತ್ರೀಜಲ್ ಹಾಗೂ ಮಹೇಶ್ ಅವರುಗಳನ್ನು ಆಯ್ಕೆ ಗೊಳಿಸಲಾಯಿತು.






