ವಿರಾಜಪೇಟೆ ಆ.12 NEWS DESK : ಗ್ರಂಥಾಲಯ ಮತ್ತು ಮಾಹಿತಿ ವಿಜ್ಞಾನದ ಪಿತಾಮಹ ಪದ್ಮಶ್ರೀ ಡಾ. ಎಸ್.ಆರ್.ರಂಗನಾಥನ್ ಅವರ 132 ನೇ ಜನ್ಮದಿನದ ಅಂಗವಾಗಿ ರಾಷ್ಟ್ರೀಯ ಗ್ರಂಥಪಾಲಕರ ದಿನಾಚರಣೆ ಪ್ರಯುಕ್ತ ವಿರಾಜಪೇಟೆ ಕಾವೇರಿ ಪದವಿ ಕಾಲೇಜಿನ ಗ್ರಂಥಾಲಯ ವಿಭಾಗದಿಂದ ಪುಸ್ತಕ ಪ್ರದರ್ಶನ ನಡೆಯಿತು. ಕಾಲೇಜಿನ ಆವರಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಕಾಲೇಜಿನ ಪ್ರಾಂಶುಪಾಲರಾದ ಬೆನಡಿಕ್ಟ್ ಸಲ್ದಾನ ರಂಗನಾಥನ್ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸುವುದರ ಮೂಲಕ ಉದ್ಘಾಟಿಸಿದರು. ವಿದ್ಯಾರ್ಥಿಗಳಿಗೆ ಪುಸ್ತಕವನ್ನು ಪರಿಚಯಿಸುವ ನಿಟ್ಟಿನಲ್ಲಿ ಹಾಗೂ ಮಕ್ಕಳಲ್ಲಿ ಓದುವ ಅವ್ಯಾಸ ವೃದ್ಧಿಸುವ ಸಲುವಾಗಿ ಕಾಲೇಜಿನ ಗ್ರಂಥಪಾಲಕಿ ಡಾ. ಮುತ್ತಮ್ಮ ನೇತೃತ್ವದಲ್ಲಿ ಈ ಕಾರ್ಯಕ್ರಮ ಆಯೋಜಿಸಲಾಗಿದ್ದು. ಜೀವನ ಚರಿತ್ರೆ ಶೈಕ್ಷಣಿಕ ಪಠ್ಯ, ಸ್ಪರ್ಧಾತ್ಮಕ ಪರೀಕ್ಷೆಗಳ ಪುಸ್ತಕಗಳು, ಸಾರ್ವಕಾಲಿಕ ಶ್ರೇಷ್ಠತೆಗಳು, ಬೆಸ್ಟ್ ಸೆಲ್ಲರ್ಗಳು , ಕಾದಂಬರಿಗಳು, ಕಥೆ,ಕವನ ಸಂಕಲನ , ನಾಟಕ , ನಿಘಂಟುಗಳು, ಮಹಾನ್ ಪುರುಷರ ಜೀವನ ಸಾಧನೆ ತಿಳಿಸುವಂತಹ ವಿವಿಧ ಪ್ರಕಾರದ ಪುಸ್ತಕಗಳನ್ನು ಪ್ರದರ್ಶಿಸಿಲಾಯಿತು. ಈ ಸಂದರ್ಭದಲ್ಲಿ ಕಾಲೇಜಿನ ಉಪನ್ಯಾಸಕರು, ವಿದ್ಯಾರ್ಥಿಗಳು ಹಾಗೂ ಸಿಬ್ಬಂದಿ ವರ್ಗದವರು ಹಾಜರಿದ್ದರು.
ಲೇಖಕ: admin
ಮಡಿಕೇರಿ ಆ.12 NEWS DESK : ವಿರಾಜಪೇಟೆ ಸಾರ್ವಜನಿಕ ಗ್ರಂಥಾಲಯದಲ್ಲಿ ಭಾರತದ ಗ್ರಂಥಾಲಯ ಮತ್ತು ಮಾಹಿತಿ ವಿಜ್ಞಾನ ಕೇಂದ್ರದ ಪಿತಾಮಹ ಪದ್ಮಶ್ರೀ ಎಸ್.ಆರ್.ರಂಗನಾಥನ್ ಅವರ ಜನ್ಮದಿನದ ಅಂಗವಾಗಿ ಗ್ರಂಥ ಪಾಲಕರ ದಿನಾಚರಣೆ ಆಚರಿಸಲಾಯಿತು. ಇದರ ಅಂಗವಾಗಿ ಶಾಲಾ ವಿದ್ಯಾರ್ಥಿಗಳಿಗೆ ಪ್ರಬಂಧ ಸ್ಪರ್ಧೆ ನಡೆಸಿ ವಿಜೇತ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು. ವಿರಾಜಪೇಟೆ ಆರಕ್ಷಕ ಠಾಣೆ ಸಿಬ್ಬಂದಿ ಪ್ರವೀಣ್ ಅತಿಥಿಗಳಾಗಿ ಆಗಮಿಸಿ ವಿಜೇತ ಮಕ್ಕಳಿಗೆ ಬಹುಮಾನ ವಿತರಿಸಿದರು. ಈ ಸಂದರ್ಭ ರೋಟರಿ ಶಾಲೆಯ ದೈಹಿಕ ಶಿಕ್ಷಕ ಮಿಥುನ್, ಗ್ರಂಥಾಲಯ ಸಿಬ್ಬಂದಿಗಳಾದ ಸುಮಿತ್ರ, ನಿಮಿತ್ತ ಮತ್ತು ಶಾಲಾ ವಿದ್ಯಾರ್ಥಿಗಳು ಹಾಜರಿದ್ದರು.
ಮಡಿಕೇರಿ ಆ.12 NEWS DESK : ಕಾಲಮಾನಕ್ಕೆ ತಕ್ಕಂತೆ ಬದಲಾವಣೆಯನ್ನು ಅನುಸರಿಸಿ ಮುನ್ನುಗ್ಗುತ್ತಿರುವ ರೋಟರಿ ಇದೇ ಕಾರಣದಿಂದಾಗಿಯೇ ವಿಶ್ವದ ಪ್ರಮುಖ ಸೇವಾ ಸಂಸ್ಥೆಯಾಗಿ 119 ವಷ೯ಗಳಿಂದಲೂ ಮುನ್ನಡೆದಿದೆ ಎಂದು ಮುಂಬೈನ ರೋಟರಿ ಪ್ರಮುಖ, ಡಾ, ದೀಪಕ್ ಪುರೋಹಿತ್ ಹೇಳಿದ್ದಾರೆ. 7ನೇ ಹೊಸಕೋಟೆಯ ಸಂತ ಸಬಾಸ್ಟಿನ್ ಚಚ್೯ ಸಭಾಂಗಣದಲ್ಲಿ ಕುಶಾಲನಗರ ರೋಟರಿ ಸಂಸ್ಥೆಯಿಂದ ಆಯೋಜಿತ ರೋಟರಿ ಸದಸ್ಯತ್ನ ಮತ್ತು ಪಬ್ಲಿಕ್ ಇಮೇಜ್ ಸಮಾವೇಶವಾದ ವಿಸ್ತಾರ ಉದ್ಘಾಟಿಸಿ ಮಾತನಾಡಿದ ಡಾ, ದೀಪಕ್ ಪುರೋಹಿತ್, ರೋಟರಿಯಲ್ಲಿ ಪ್ರಸ್ತುತ 11,34 ಲಕ್ಷ ಸದಸ್ಯರು ವಿಶ್ವವ್ಯಾಪಿ ಇದ್ದಾರೆ, ಕಳೆದ ವಷ೯ದ ದುಲೈ ನಿಂದ ಈವರೆಗೂ 19,400 ಹೊಸ ಸದಸ್ಯರನ್ನು ರೋಟರಿ ಹೊಂದಿದೆ, 36,860 ರೋಟರಿ ಕ್ಲಬ್ ಗಳು ಜಗತ್ತಿನಲ್ಲಿವೆ, ರೋಟರಿ ಸದಸ್ಯರ ಪೈಕಿ ಶೇ.26 ರಷ್ಟು ಮಹಿಳಾ ಸದಸ್ಯರಿರುವುದು ಹೆಗ್ಗಳಿಕೆಯಾಗಿದೆ ಎಂದರು ಮಾಹಿತಿ ನೀಡಿದರು. ಇತರ ದೇಶಗಳಿಗೆ ಹೋಲಿಸಿದರೆ ಭಾರತದಲ್ಲಿಯೇ ಅತ್ಯಧಿಕ ಸಂಖ್ಯೆಯಲ್ಲಿ ಹೊಸಬ್ಬರು ರೋಟರಿ ಸದಸ್ಯರಾಗಿ ಸೇಪ೯ಡೆಯಾಗುತ್ತಿರುವುದು ಸೇವಾ ಕಾಯ೯ಗಳಿಗೆ ಭಾರತೀಯರು ನೀಡಿದ ಮನ್ನಣೆಗೆ ಸಾಕ್ಷಿಯಾಗಿದೆ ಎಂದರು.…
ಮಡಿಕೇರಿ ಆ.12 NEWS DESK : ವಿಶ್ವ ಆನೆಗಳ ದಿನದ ಅಂಗವಾಗಿ ಕುಶಾಲನಗರ ಸಮೀಪದ ದುಬಾರೆ ಸಾಕಾನೆ ಶಿಬಿರದಲ್ಲಿ ಆನೆಗಳಿಗೆ ವಿಶೇಷವಾಗಿ ಸಿಂಗರಿಸಿ ಪೂಜೆ ಸಲ್ಲಿಸಲಾಯಿತು. ದುಬಾರೆ ಶಿಬಿರದಲ್ಲಿ ಸುಮಾರು 30 ಆನೆಗಳು ಇದ್ದು, ಅವುಗಳನ್ನು ಒಂದೆಡೆ ಸೇರಿಸಿ ಮಾವುತ ಸಿಬ್ಬಂದಿಗಳು ಆಹಾರ ನೀಡಿದ ನಂತರ ಪೂಜೆ ನೆರವೇರಿಸಲಾಯಿತು. ಕಾರಣಾಂತರಗಳಿಂದ ಆನೆಗಳ ಮೂಲಕ ಶಿಬಿರದಲ್ಲಿ ನಡೆಸಬೇಕಾಗಿದ್ದ ಕಾರ್ಯಕ್ರಮಗಳನ್ನು ಮುಂದೂಡಲಾಗಿದೆ ಎಂದು ಶಿಬಿರದ ಉಪವಲಯ ಅರಣ್ಯ ಅಧಿಕಾರಿ ಉಮಾಶಂಕರ್ ತಿಳಿಸಿದ್ದಾರೆ. ಈ ಸಂದರ್ಭ ಉಪವಲಯ ಅರಣ್ಯ ಅಧಿಕಾರಿಗಳಾದ ವೆಂಕಟೇಶ್, ದೇವಯ್ಯ, ಸುಬ್ರಾಯ ಸಿಬ್ಬಂದಿಗಳಾದ ಸಾಯಬನ ತಳವಾರ್ ಹಾಗೂ ಮಾವುತರು ಸಿಬ್ಬಂದಿಗಳು ಇದ್ದರು.
ಮಡಿಕೇರಿ ಆ.12 NEWS DESK : ವಿವಿಧ ಧರ್ಮ, ಭಾಷೆ, ಸಂಸ್ಕೃತಿಗಳ ನಡುವೆಯೂ ವಿವಿಧತೆಯಲ್ಲಿ ಏಕತೆಯನ್ನು ಸಾಧಿಸುವ ಮೂಲಕ ಭಾರತ ಇಡೀ ವಿಶ್ವದಲ್ಲೆ ಶ್ರೇಷ್ಠ ರಾಷ್ಟ್ರವಾಗಿ ಗುರುತಿಸಲ್ಪಟ್ಟಿದೆ. ಪರಸ್ಪರ ಸೌಹಾರ್ದತೆ ಸಹಬಾಳ್ವೆಯ ಚಿಂತನೆಗಳು ಮುಂದುವರೆಯಬೇಕೆನ್ನುವ ಮೂಲ ಚಿಂತನೆಗಳಡಿ ಸ್ವಾತಂತ್ರ್ಯೋತ್ಸವದ ಆ.15 ರಂದು ಸುಂಟಿಕೊಪ್ಪದಲ್ಲಿ ಸುನ್ನಿ ಯುವಜನ ಸಂಘ(ಎಸ್ವೈಎಸ್)ದಿಂದ “ರಾಷ್ಟ್ರ ರಕ್ಷಾ ಸಂಗಮ” ಕಾರ್ಯಕ್ರಮ ನಡೆಯಲಿದೆ. ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಎಸ್ವೈಎಸ್ ಸಂಘಟನಾ ಕಾರ್ಯದರ್ಶಿ ಹಮೀದ್ ಮುಸ್ಲಿಯಾರ್ “ಜಾತ್ಯತೀತತೆ ಭಾರತದ ಧರ್ಮ” ಎನ್ನುವ ಘೋಷವಾಕ್ಯದೊಮದಿಗೆ ಸ್ವಾತಂತ್ರ್ಯೋತ್ಸವದಂದು ಸಂಜೆ 4 ರಿಂದ 6.30 ಗಂಟೆಯವರೆಗೆ ಸುಂಟಿಕೊಪ್ಪದ ಎಸ್ಎಸ್ ಇಂಟರ್ನ್ಯಾಷನಲ್ ಸಭಾಂಗಣದಲ್ಲಿ ರಾಷ್ಟ್ರ ರಕ್ಷಾ ಸಂಗಮ ಕಾರ್ಯಕ್ರಮವನ್ನು ಆಯೋಜಿಸಲಾಗಿದೆಯೆಂದು ವಿವರಗಳನ್ನಿತ್ತರು. ಭಾರತದ ಸಂವಿಧಾನವು ದೇಶದ ಪ್ರತಿಯೊಬ್ಬ ಪ್ರಜೆಗೂ ಸಮಾನತೆಯನ್ನು, ಧಾರ್ಮಿಕ ಸ್ವಾತಂತ್ರ್ಯವನ್ನು, ಸಾಮಾಜಿಕ ನ್ಯಾಯವನ್ನು ಒದಗಿಸಿದೆ. ಈ ಹಿನ್ನೆಲೆ ಭಾರತೀಯರೆಲ್ಲರು ದೇಶವನ್ನು ಮತ್ತು ಸಂವಿಧಾನವನ್ನು ಸಂರಕ್ಷಿಸಿಕೊಂಡು ಮುನ್ನಡೆಯಬೇಕಾಗಿದೆ. ಎಲ್ಲರಲ್ಲೂ ಸೌಹಾರ್ದತೆ, ಸಹಬಾಳ್ವೆಯ ಚಿಂತನೆಗಳನ್ನು ಮೂಡಿಸುವ ಪ್ರಯತ್ನವಾಗಿ ರಾಷ್ಟ್ರ ರಕ್ಷಾ ಸಂಗಮ ಕಾರ್ಯಕ್ರಮದಲ್ಲಿ ಎಲ್ಲಾ ಧರ್ಮದ ಗುರುಗಳನ್ನು…
ಮಡಿಕೇರಿ ಆ.12 NEWS DESK : ಮಡಿಕೇರಿ ತಾಲೂಕಿನ ಅಪ್ಪಂಗಳದ ಭಾರತೀಯ ಸಂಬಾರ ಬೆಳೆಗಳ ಸಂಶೋಧನೆ ಸಂಸ್ಥೆಯ ಪ್ರಾದೇಶಿಕ ಕೇಂದ್ರವು ಬರ ಸಹಿಷ್ಣುತೆಯ ವಿಶಿಷ್ಟ ಲಕ್ಷಣಗಳನ್ನು ಹೊಂದಿರುವ ‘ಐ.ಐ.ಎಸ್.ಆರ್. ಮನುಶ್ರೀ’ ಮತ್ತು ‘ಐ.ಐ.ಎಸ್.ಆರ್. ಕಾವೇರಿ’ ಎಂಬ ಎರಡು ಏಲಕ್ಕಿ ತಳಿಗಳನ್ನು ಅಭಿವೃದ್ಧಿಪಡಿಸಿದೆ. ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು 109 ಕೃಷಿ ಮತ್ತು ತೋಟಗಾರಿಕೆ ಬೆಳೆಗಳ ತಳಿಗಳನ್ನು ರೈತ ಸಮುದಾಯಕ್ಕೆ ಸಮರ್ಪಿಸುತ್ತಿದ್ದಾರೆ. ಇದರಲ್ಲಿ ಐ. ಸಿ. ಎ. ಆರ್. -ಐ. ಐ. ಎಸ್. ಆರ್., ಪ್ರಾದೇಶಿಕ ಕೇಂದ್ರ, ಅಪ್ಪಂಗಳ ಅಭಿವೃದ್ಧಿಪಡಿಸಿರುವ ಎರಡು ಏಲಕ್ಕಿ ತಳಿಗಳು ಇರುವುದಾಗಿ ಸಂಶೋಧನಾ ಕೇಂದ್ರದ ಪ್ರಕಟಣೆ ತಿಳಿಸಿದೆ. ನೂತನವಾಗಿ ಅಭಿವೃದ್ಧಿ ಪಡಿಸಿರುವ ಈ ಎರಡು ತಳಿಗಳು ಇತ್ತೀಚೆಗೆ ಬೆಳೆ ಗುಣಮಟ್ಟ, ಅಧಿಸೂಚನೆ ಮತ್ತು ತೋಟಗಾರಿಕಾ ಬೆಳೆಗಳಿಗೆ ತಳಿಗಳ ಬಿಡುಗಡೆಯ ಕೇಂದ್ರ ಉಪ ಸಮಿತಿಯಿಂದ ಅಗತ್ಯವಾದ ನಿಯಂತ್ರಣ ಅನುಮೋದನೆಯನ್ನು ಪಡೆದು ಕೊಂಡಿದೆ. ಹೊಸ ತಳಿಯ ಇಳುವರಿ ಸಾಮರ್ಥ್ಯ : ಐಐಎಸ್ಆರ್-ಮನುಶ್ರೀ ಮತ್ತು ಐಐಎಸ್ಆರ್ ಕಾವೇರಿ ತಳಿಗಳನ್ನು ಅಪ್ಪಂಗಳದ ಐಸಿಎಆರ್-ಐಐಎಸ್ಆರ್ ಪ್ರಾದೇಶಿಕ…
ಮಡಿಕೇರಿ ಆ.12 NEWS DESK : ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ಮತ್ತು ಅಭಿನಂದನಾ ಸಮಾರಂಭ ಹಾಗೂ ಸರ್ವ ಸದಸ್ಯರ ವಾರ್ಷಿಕ ಮಹಾಸಭೆಯು ನಗರದ ಕೊಡಗು ಗೌಡ ಸಮಾಜದಲ್ಲಿ ನಡೆಯಿತು. ಸಂಘದ ಅಧ್ಯಕ್ಷರಾದ ಪೊನ್ನಚ್ಚನ ಶ್ರೀನಿವಾಸ್ ಪ್ರಾಸ್ತಾವಿಕ ಮಾತನಾಡಿ, 5 ವರ್ಷದ ಕಾಲಾವಧಿಯಲ್ಲಿ ಸರ್ವ ಸದಸ್ಯರ ಪ್ರಯತ್ನದ ಫಲವಾಗಿ ಸಂಘದ ಹೆಸರಿಗೆ ನಿವೇಶನವನ್ನು ಕಾಯ್ದಿರಿಸಿದ ಬಗ್ಗೆ ಹೆಮ್ಮೆಯಿಂದ ಹೇಳಿಕೊಂಡರು. ರಾಜ್ಯ ಸಂಘದ ಹೋರಾಟದ ಫಲವಾಗಿ 7ನೇ ವೇತನ ಆಯೋಗ ಜಾರಿಯಾದ ಬಗ್ಗೆ, ಕ್ರೀಡಾ ಕೂಟ ಆಯೋಜನೆ, ಮುಖ್ಯಮಂತ್ರಿ ಹಾಗೂ ಉಪ ಮುಖ್ಯ ಮಂತ್ರಿ ಗಳ ಅಭಿನಂದನಾ ಸಮಾರಂಭ ಆ.17 ರಂದು ಬೆಂಗಳೂರಿನಲ್ಲಿ ಹಮ್ಮಿಕೊಂಡ ವಿಷಯಗಳನ್ನು ತಿಳಿಸಿದರು. ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಖಜಾಂಚಿ ಡಾ. ಎಸ್. ಸಿದ್ದರಾಮಣ್ಣ ಮಾತನಾಡಿ, ರಾಜ್ಯ ಸಂಘ ಬೆಳೆದು ಬಂದ ಹಾದಿ, 7ನೇ ವೇತನ ಆಯೋಗದ ರೂಪುರೇಷೆಗಳ ಬಗ್ಗೆ ವಿವರಿಸಿದರು. ಕಾರ್ಯಕ್ರಮದಲ್ಲಿ ಎಸ್.ಎಸ್.ಎಲ್.ಸಿ ಮತ್ತು ದ್ವಿತೀಯ ಪಿ.ಯು.ಸಿ ಯಲ್ಲಿ ಶೇ.90 ಕ್ಕಿಂತ…
ಮಡಿಕೇರಿ ಆ.12 NEWS DESK : ಹಾರಂಗಿ ಹಾಗೂ ಚಿಕ್ಲಿಹೊಳೆ ಜಲಾಶಯಕ್ಕೆ ನೀರಾವರಿ ಇಲಾಖೆಯ ಕಾರ್ಯದರ್ಶಿ ಕೃಷ್ಣಮೂರ್ತಿ ಕುಲಕರ್ಣಿ ಭೇಟಿ ನೀಡಿ ವೀಕ್ಷಿಸಿದರು. ಈ ಸಂದರ್ಭ ಹಾರಂಗಿ ವಿಭಾಗದ ಅಧೀಕ್ಷಕ ಎಂಜಿನಿಯರ್ ರಘುಪತಿ, ಕಾರ್ಯಪಾಲಕ ಎಂಜಿನಿಯರ್ ಪುಟ್ಟಸ್ವಾಮಿ, ಸಹಾಯಕ ಎಂಜಿನಿಯರ್ ಸಿದ್ದರಾಜು, ಸೌಮ್ಯ, ಸತ್ಯ ಇತರರು ಇದ್ದರು.
ಮಡಿಕೇರಿ ಆ.12 NEWS DESK : 78ನೇ ಸ್ವಾತಂತ್ರ್ಯ ದಿನಾಚರಣೆಯ ಅಂಗವಾಗಿ ನಶಾಮುಕ್ತ ಭಾರತ ಅಭಿಯಾನದಡಿ ವಿರಾಜಪೇಟೆಯ ಕಾವೇರಿ ಪದವಿ ಪೂರ್ವ ಕಾಲೇಜು ವಿದ್ಯಾರ್ಥಿಗಳಿಗೆ ಕಾಲೇಜಿನ ಮಾದಕ ವಸ್ತು ಸೇವನೆ ಮಾಡದಿರಲು ಪ್ರತಿಜ್ಞೆ ವಿಧಿ ಬೋಧಿಸಲಾಯಿತು.
ಮಡಿಕೇರಿ ಆ.12 NEWS DESK : ದೇಶದ ರಕ್ಷಣೆಗಾಗಿ ಯುದ್ಧದಲ್ಲಿ ವೈರಿಗಳ ವಿರುದ್ಧ ಸೆಣೆಸಾಡಿ ಭಾರತ ಭೂಮಿಯನ್ನು ಉಳಿಸಿದ ನಿವೃತ್ತ ಯೋಧರನ್ನು ಗೌರವಿಸುವ ಅರ್ಥಪೂರ್ಣ ಕಾರ್ಯಕ್ರಮ ನಗರದಲ್ಲಿ ನಡೆಯಿತು. ನಗರದ ಕಾವೇರಿ ಹಾಲ್ ಸಭಾಂಗದಣಲ್ಲಿ ನಡೆದ ಕೊಡಗು ಜಿಲ್ಲಾ ಮಾಜಿ ಸೈನಿಕರ ಸಂಘದ ವಾರ್ಷಿಕ ಮಹಾಸಭೆಯಲ್ಲಿ ವಾರ್ಷಿಕ ವರದಿ, ಲೆಕ್ಕಪತ್ರ ಮಂಡನೆ, ಸಾಧಕ-ಬಾಧಕ ಚರ್ಚೆಯ ಜೊತೆಗೆ ಕದನ ಕಲಿಗಳಿಗೆ ಗೌರವ, ವಿವಿಧ ಕ್ಷೇತ್ರದಲ್ಲಿ ಸಾಧನೆಗೈದ ಮಾಜಿ ಸೈನಿಕರು, ಅವರ ಕುಟುಂಬ ಹಾಗೂ ಎಸ್ಎಸ್ಎಲ್ಸಿ ಹಾಗೂ ಪಿಯುಸಿಯಲ್ಲಿ ಅತೀ ಹೆಚ್ಚು ಅಂಕಗಳಿಸಿದ ಮಾಜಿ ಸೈನಿಕರ ಮಕ್ಕಳನ್ನು ಸನ್ಮಾನಿಸಲಾಯಿತು. 1965, 1971 ಭಾರತ, ಪಾಕಿಸ್ತಾನ ಯುದ್ಧ, 1963ರ ಭಾರತ ಚೀನಾ ಯದ್ಧದಲ್ಲಿ ಭಾಗಿಯಾದ ನಿವೃತ್ತ ಕರ್ನಲ್ ಕೆ.ಸಿ.ಸುಬ್ಬಯ್ಯ, ನಿ.ಲೆ.ಕ.ಪಿ.ಸಿ.ಕರುಂಬಯ್ಯ, ಮುಂಡಚಾರಿಕ ಬೋಪಯ್ಯ, ಟಿ.ಬಿ.ತಿಮ್ಮಯ್ಯ, ಎಂ.ಯು.ಕುಶಾಲಪ್ಪ, ಸಿ.ಎಂ.ಕಾರ್ಯಪ್ಪ, ರಾಮಯ್ಯ, ಬಿ.ಎಸ್.ಗಣಪತಿ, ಎಂ.ಸಿ.ಅಪ್ಪಯ್ಯ, ಬಿ.ಸಿ.ಮುತ್ತಣ್ಣ, ಪಿ.ಕೆ.ಪಾಪಯ್ಯ, ಸೋಮಣ್ಣ, ಎಂ.ಎಸ್.ಕುಂಞಪ್ಪ, ಪಿ.ಎಂ.ಕುಶಾಲಪ್ಪ, ಕೆ.ಯು.ಗಣಪತಿ, ಡಬ್ಲ್ಯೂ.ಪಿ.ಸುಬ್ಬಯ್ಯ, ಕೆ.ಎಂ.ದೇವಯ್ಯ, ಬಿ.ಯು.ಕಾಳಪ್ಪ, ಎಂ.ಬಿ.ಅಪ್ಪಣ್ಣ, ಎಂ.ಎಸ್.ಪೂವಯ್ಯ, ಎಂ.ಸಿ.ಕರುಂಬಯ್ಯ, ಎಂ.ಎ.ಸೋಮಯ್ಯ, ಬಿ.ಎ.ಬೆಳ್ಯಪ್ಪ, ಬಿ.ವೈ.ಉತ್ತಪ್ಪ, ಬಿ.ಎಸ್.ಉತ್ತಪ್ಪ, ಬಿ.ಎಸ್.ಜಪ್ಪು…






