ಮಡಿಕೇರಿ ಮೇ 12 : ಕರ್ನಾಟಕ ವಿಧಾನಸಭಾ ಸಾರ್ವತ್ರಿಕ ಚುನಾವಣೆ ಸಂಬಂಧ ಚುನಾವಣಾ ಕರ್ತವ್ಯಕ್ಕೆ ಹಾಜರಾಗಿ ಚುನಾವಣಾ ಪೂರ್ವಭಾವಿ ಸಿದ್ಧತೆ ಹಾಗೂ ಮಸ್ಟರಿಂಗ್ ಮತ್ತು ಡೀ ಮಸ್ಟರಿಂಗ್ ಕಾರ್ಯಗಳಿಗಾಗಿ ಅಧಿಗ್ರಹಣಗೊಳಿಸಲಾದ ಎಲ್ಲಾ ವರ್ಗದ ವಾಹನಗಳನ್ನು ಸಕಾಲದಲ್ಲಿ ಒದಗಿಸಿ ಸೇವೆ ನೀಡಿ ಸಹಕರಿಸಿದ ಜಿಲ್ಲೆಯ ಎಲ್ಲಾ ಸರಕು-ಸಾಗಾಣೆ, ಮ್ಯಾಕ್ಸಿಕ್ಯಾಬ್, ಬಸ್ಸು, ಟ್ಯಾಕ್ಸಿ, ಶಾಲಾ-ಕಾಲೇಜು ವಾಹನಗಳ ಚಾಲಕರು, ಮಾಲೀಕರು ಹಾಗೂ ಸಂಘದ ಪದಾಧಿಕಾರಿಗಳಿಗೆ ಪ್ರಾದೇಶಿಕ ಸಾರಿಗೆ ಅಧಿಕಾರಿ ಮಧುರ ಎಸ್.ಎನ್. ಅವರು ಕೃತಜ್ಞತೆ ತಿಳಿಸಿದ್ದಾರೆ.









