ಮಡಿಕೇರಿ ಮೇ 23 : ಕುಂಜಿಲ ಕಕ್ಕಬ್ಬೆ ಸಮೀಪದ ವಯಕೋಲ್ಲಿ ನಲ್ಲಿ ಪುಳಿಙೋಂ ವಲಿಯುಲ್ಲಾ ಸ್ಮರಣಾರ್ಥ ವರ್ಷಂಪ್ರತಿ ನಡೆಸಿಕೊಂಡು ಬರುವ ಉರೂಸ್ ಕಾರ್ಯಕ್ರವು ಮೇ 27 ಮತ್ತು 28 ರಂದು ನಡೆಯಲಿದೆ ಎಂದು ಮಸ್ಜಿದ್ ರಹಮಾನ್ ವಯಕೋಲ್ ಕಾರ್ಯದರ್ಶಿ ವಿ.ಇ.ನಿಸಾರ್ ತಿಳಿಸಿದರು.
ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಎರಡು ದಿನಗಳ ಕಾಲ ನಡೆಯಲಿರುವ ವಿವಿಧ ಧಾರ್ಮಿಕ ಕಾರ್ಯಕ್ರಮಗಳ ಕುರಿತು ಮಾಹಿತಿ ನೀಡಿದರು.
ಮೇ 27 ರಂದು ಮಗ್ರಿಬ್ ನಮಾಜಿನ ಬಳಿಕ ಮಸ್ಜಿದ್ ರಹಮಾನ್ ವಯಕೋಲ್ ಅಧ್ಯಕ್ಷ ವಿ.ಎ.ಹಂಸ ಧ್ವಜಾರೋಹಣದ ಮೂಲಕ ಉರೂಸ್ ಸಮಾರಂಭಕ್ಕೆ ಚಾಲನೆ ನೀಡಲಿದ್ದು, ಕಾರ್ಯಕ್ರಮವನ್ನು ಕುಂಜಿಲ ಸದರ್ ಮುಅಲ್ಲಿಂ ಅಬ್ದುಲ್ಲ ಸಖಾಫಿ ಉದ್ಘಾಟಿಸಲಿದ್ದಾರೆ ಎಂದು ಮಾಹಿತಿ ನೀಡಿದರು.
ಪಯ್ನರಿ ಜುಮಾ ಮಸೀದಿ ಖದೀಬ ಉಸ್ತಾದ್ ನಿಝಾರ್ ಅಹ್ಸನಿ ಕಕ್ಕಡಿಪುರಣ ಮುಖ್ಯ ಪ್ರಭಾಷಣ ಮತ್ತು ದುಆ ನೇತೃತ್ವ ವಹಿಸಲಿದ್ದಾರೆ ಎಂದರು.
ಮೇ 28 ರಂದು ಮಧ್ಯಾಹ್ನ 1 ಗಂಟೆಗೆ ಸಮಾರೋಪ ಸಮಾರಂಭ ನಡೆಯಲಿದ್ದು, ವಯಕೋಲ್ ಮಸ್ಜಿದ್ ರಹಮಾನ್ ಇಮಾಂ ರಫೀಕ್ ಸಖಾಫಿ ಅಲ್ ಅಝ್ಹರಿ ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದಾರೆ.
ಅಧ್ಯಕ್ಷತೆಯನ್ನು ಪಯ್ನರಿ ಸುನ್ನಿ ಮುಸ್ಲಿಂ ಜಮಾಅತ್ ಅಧ್ಯಕ್ಷ ಶೌಕತ್ ಅಲಿ ವಹಿಸಲಿದ್ದು, ಪೊಯತ್ ಬೈಲ್ ಕೇಂದ್ರ ಜುಮಾ ಮಸೀದಿ ಖತೀಬ ಅಬ್ದುಲ್ ಜಬ್ಬಾರ್ ಸಖಾಫಿ ಪಾತೂರು ಮುಖ್ಯ ಪ್ರಭಾಷಣ ಮಾಡಲಿದ್ದಾರೆ ಎಂದು ತಿಳಿಸಿದರು.
ಮೌಲದ್ ಪಾರಾಯಣ ಬಳಿಕ ‘ತಬರ್ರುಬ್’ ವಿತರಣೆ ಮಾಡಲಿದ್ದು, ಎರಡು ದಿನಗಳ ಕಾರ್ಯಕ್ರಮಕ್ಕೆ ಸಾಮಾಜಿಕ ನೇತರರು, ಧಾರ್ಮಿಕ ಪಂಡಿತರು ಹಾಗೂ ವಿವಿಧ ಕ್ಷೇತ್ರದ ಗಣ್ಯರು ಪಾಲ್ಗೊಳ್ಳಲಿದ್ದಾರೆ ಎಂದರು.
ಸುದ್ದಿಗೋಷ್ಠಿಯಲ್ಲಿ ವಯಕೋಲ್ ಮಸ್ಜಿದ್ ರಹಮಾನ್ ಅಧ್ಯಕ್ಷ ವಿ.ಎ.ಹಂಸ, ಕೋಶಾಧಿಕಾರಿ ವಿ.ಎ.ಅಬು, ಸಮಿತಿ ಸದಸ್ಯರಾದ ವಿ.ಎ.ಹಸೈನಾರ್, ವಿ.ಇ.ಜಾಬಿರ್ ಉಪಸ್ಥಿತರಿದ್ದರು.









