ಮಡಿಕೇರಿ ಆ.16 : ಬಾಳೆಲೆ ವಿಜಯಲಕ್ಷ್ಮಿ ಸಂಯುಕ್ತ ಪದವಿ ಪೂರ್ವ ಕಾಲೇಜಿನಲ್ಲಿ 77ನೇ ಸ್ವಾತಂತ್ರ್ಯ ದಿನಾಚರಣೆಯನ್ನು ಸಂಭ್ರಮದಿಂದ ಆಚರಿಸಲಾಯಿತು.
ಬಾಳೆಲೆ ವಿಜಯಲಕ್ಷ್ಮಿ ಸಂಯುಕ್ತ ಪದವಿ ಕಾಲೇಜಿನಲ್ಲಿ ಸಂಸ್ಥೆಯ ಅಧ್ಯಕ್ಷ ಅಳಮೇಂಗಡ ಬೋಸ್ ಮಂದಣ್ಣ ಧ್ವಜಾರೋಹಣ ನೆರವೇರಿಸಿದರು.
ನಂತರ ಬಾಳೆಲೆ ಮುಖ್ಯರಸ್ತೆಯಲ್ಲಿ ಮೆರವಣಿಗೆ ಮೂಲಕ ತ್ರಿವರ್ಣ ಭಾವುಟವನ್ನು ಹಿಡಿದು, ಘೋಷಣೆಗಳನ್ನು ಕೂಗಿ ಸ್ವಾತಂತ್ರ್ಯ ದಿನಾಚರಣೆಯನ್ನು ಸಂಭ್ರಮಿಸಿದರು.
ಇದೇ ಸಂದರ್ಭ ವಕೀಲ ಚಿಮ್ಮುಣಮಾಡ ಪ್ರಶಾಂತ್ ಚಿಣ್ಣಪ್ಪ ವಿದ್ಯಾರ್ಥಿ ಸಂಘವನ್ನು ಉದ್ಘಾಟಿಸಿದರು. ನಂತರ ಮಾತನಾಡಿದ ಅವರು, ವಿದ್ಯಾರ್ಥಿಗಳು ತಮ್ಮ ಅನಿಸಿಕೆಗಳನ್ನು ಮುಕ್ತವಾಗಿ ವ್ಯಕ್ತಪಡಿಸುವ ಧೈರ್ಯವನ್ನು ಬೆಳೆಸಿಕೊಳ್ಳಬೇಕೆಂದು ಕರೆ ನೀಡಿದರು.
ಕಾರ್ಯಕ್ರಮದಲ್ಲಿ ಬಾಳೆಲೆ ಗ್ರಾ.ಪಂ ನಿಕಟಪೂರ್ವ ಅಧ್ಯಕ್ಷ ಪೊಡಮಾಡ ಸುಕೇಶ್ ಭೀಮಯ್ಯ, ನಿಟ್ಟೂರು ಗ್ರಾ.ಪಂ ನಿಕಟಪೂರ್ವ ಅಧ್ಯಕ್ಷ ಕಾಟಿಮಾಡ ಶರೀನ್ ಮುತ್ತಣ್ಣ, ವಿದ್ಯಾಸಂಸ್ಥೆಯ ಗೌರವ ಕಾರ್ಯದರ್ಶಿಗಳಾಗಿ ಚಿಮ್ಮುಣಮಾಡ ಕೃಷ್ಣ ಗಣಪತಿ, ಉಪಾಧ್ಯಕ್ಷರುಗಳಾದ ಕಾಯಮಾಡ ರಾಜ, ಕಿರುದಂಡ ದೇವಯ್ಯ, ಜಂಟಿ ಕಾರ್ಯದರ್ಶಿ ಪೋಡಮಾಡ ಮೋಹನ್, ಖಜಾಂಚಿ ಅಡ್ಡೇಂಗಡ ದೇವಯ್ಯ, ನಿರ್ದೇಶಕರುಗಳಾದ ಅಡ್ಡೇಂಗಡ ಅರುಣ್, ಮಾಚಂಗಡ ಭೀಮಯ್ಯ, ಮೇಚಂಡ ಪೆಮ್ಮಯ್ಯ, ಕೇಶವಮೂರ್ತಿ ಹಾಜರಿದ್ದರು
ಪ್ರೌಢಶಾಲಾ ವಿಭಾಗದ ನಾಯಕಿಯಾಗಿ ಸುಶ್ಮಿತಾ, ಉಪನಾಯಕಿ ಸುಬ್ರಮಣಿ, ಕಾರ್ಯದರ್ಶಿ ಪವಿತಾ, ಸ್ವಚ್ಚತಾ ಮಂತ್ರಿಯಾಗಿ ಚರಣ್, ವಿದ್ಯಾ ಮಂತ್ರಿ ಲೇಖಾ, ಆಹಾರ ಮಂತ್ರಿ ನವಿತಾ, ಸೌಮ್ಯ ಕ್ರೀಡಾಮಂತ್ರಿಗಳಾಗಿ ಮೋನಿಕಾ ಮತ್ತು ಗಣೇಶ್, ಸಾಂಸ್ಕೃತಿಕ ಮಂತ್ರಿಯಾಗಿ ಧನ್ಯ ಆಯ್ಕೆಯಾದರು.
ಪದವಿಪೂರ್ವ ಕಾಲೇಜು ವಿಭಾಗಕ್ಕದ ನಾಯಕಿಯಾಗಿ ನೇತ್ರಾವತಿ, ಉಪನಾಯಕರಾಗಿ ಭುವನ್, ಕಾರ್ಯದರ್ಶಿ ದಿವ್ಯದರ್ಶಿನಿ, ಸಹಕಾರ್ಯದರ್ಶಿ ಸುಬ್ರಮಣಿ, ಕ್ರೀಡಾ ಮಂತ್ರಿಯಾಗಿ ಮದನ್ ಮತ್ತು ಮಹೇಶ್ವರಿ , ಸ್ವಚ್ಚತಾ ಮಂತ್ರಿಯಾಗಿ ಧನ್ಯ ಮತ್ತು ದರ್ಶನ್ ಆಯ್ಕೆಯಾದರು.







