ಮಡಿಕೇರಿ ಆ.17 : ಪೊನ್ನಂಪೇಟೆಯ ಅಪ್ಪಚ್ಚುಕವಿ ವಿದ್ಯಾಲಯದಲ್ಲಿ ಸ್ವಾತಂತ್ರ್ಯ ಹೋರಾಟಗಾರ ದಿವಂಗತ ಕಾಕಮಾಡ ಎನ್.ನಾಣಯ್ಯ ಅವರ ಸ್ಮರಣಾರ್ಥವಾಗಿ ನಡೆಸಲಾದ ತಾಲೂಕು ಮಟ್ಟದ ಚರ್ಚಾಸ್ಪರ್ಧೆ ಹಾಗೂ ಭಾಷಣ ಸ್ಪರ್ಧೆಯಲ್ಲಿ ವಿರಾಜಪೇಟೆಯ ಕಾವೇರಿ ಶಾಲೆಯ 9ನೇ ತರಗತಿ ವಿದ್ಯಾರ್ಥಿ ಕ್ಷಮಾ ಕಾವೇರಮ್ಮ ಚರ್ಚಾ ಸ್ಪರ್ಧೆಯಲ್ಲಿ ತೃತೀಯ ಸ್ಥಾನ ಪಡೆದುಕೊಂಡಿದ್ದಾಳೆ.
ಇವರ ಸಾಧನೆಗೆ ಶಾಲಾ ಆಡಳಿತ ಮಂಡಳಿಯ ಅಧ್ಯಕ್ಷ ಬಿ. ಎಸ್.ಸುದೇಶ್ , ಕಾರ್ಯದರ್ಶಿ ಪಿ. ಎನ್. ವಿನೋದ್ , ಶಾಲಾ ಸಂಯೋಜಕರಾದ ಚೈತ್ರ, ಭಾಗ್ಯ, ಅಮೃತ ಮತ್ತು ಶಿಕ್ಷಕ ವೃಂದದವರು, ಪೋಷಕರು ಮೆಚ್ಚುಗೆ ವ್ಯಕ್ತ ಪಡಿಸಿರುತ್ತಾರೆ.









