ಮಡಿಕೇರಿ ಡಿ.30 : ರಾಷ್ಟ್ರೀಯ ನಗರ ಜೀವನೋಪಾಯ ಅಭಿಯಾನ ಯೋಜನೆಯ ನಗರ ವಸತಿ ರಹಿತರಿಗೆ ಆಶ್ರಯ ಉಪ ಘಟಕದಡಿ ಆಶ್ರಯ ಕಲ್ಪಿಸಲು 3ನೇ ವ್ಯಕ್ತಿಯ (ಎನ್ಜಿಒ) ಮುಖಾಂತರ ಮಡಿಕೇರಿ ನಗರಸಭಾ ವ್ಯಾಪ್ತಿಯಲ್ಲಿ ಬರುವ ವಸತಿ ರಹಿತರ (ನಗರದಲ್ಲಿ ರಾತ್ರಿ ವೇಳೆ ನಿರ್ಗತಿಕರು, ರಸ್ತೆ ಬದಿ ಅಂಗಡಿಗಳ ಜಗುಲಿ/ ರೈಲ್ವೆ ನಿಲ್ದಾಣ/ ಬಸ್ ನಿಲ್ದಾಣ/ ಸಾರ್ವಜನಿಕ ಸ್ಥಳಗಳಲ್ಲಿ ಮಲಗುವ ಮಾನಸಿಕ ಅಸ್ವಸ್ಥರು, ವೃದ್ದರು, ಮಕ್ಕಳು, ಅಂಗವಿಕಲರು ಮತ್ತು ಇನ್ನಿತರ ವಸತಿ ರಹಿತರು, ಅನಾಥರುಗಳು) ಸಮೀಕ್ಷೆಯನ್ನು ಜ.3 ರವರೆಗೆ ಒಂದು ವಾರಗಳ ಕಾಲ ನಗರಸಭೆ ಹಾಗೂ ಸ್ನೇಹಾಶ್ರಯ ಯೂತ್ ಟ್ರಸ್ಟ್ ಇವರ ಸಹಯೋಗದೊಂದಿಗೆ ಹಮ್ಮಿಕೊಳ್ಳಲಾಗಿದ್ದು, ಸಾರ್ವಜನಿಕರು ಅಗತ್ಯ ಮಾಹಿತಿ ಇದ್ದಲ್ಲಿ ಕಚೇರಿಯನ್ನು ಸಂಪರ್ಕಿಸುವಂತೆ ನಗರಸಭೆ ಪೌರಾಯುಕ್ತ ವಿಜಯ್ ತಿಳಿಸಿದ್ದಾರೆ.









