ಮಡಿಕೇರಿ ಜ.1 : ಮಡಿಕೇರಿ ತಾಲ್ಲೂಕು ಹೆರವನಾಡು ಗ್ರಾಮದ ಅಪ್ಪಂಗಳ ನಿವಾಸಿ ಮೊಟ್ಟನ ಡಾಲು ಜ್ಯೋತಿ ಶಂಕರ್ ( ಹಿರಿಯ ವಕೀಲರು) (59) ಇಂದು ಸಂಜೆ ನಿಧನರಾದರು. ಕೊಡಗು ಗೌಡ ವಿದ್ಯಾಸಂಘದ ನಿರ್ದೇಶಕರು, ಭಾಗಮಂಡಲ ಕಾವೇರಿ ಪದವಿಪೂರ್ವ ಕಾಲೇಜಿನ ಆಡಳಿತ ಮಂಡಳಿ ನಿರ್ದೇಶಕರು, ಕಾವೇರಿ ಜನ್ಮಭೂಮಿ ಟ್ರಸ್ಟ್ ನ ನಿರ್ದೇಶಕರು ಆಗಿರುವ ಮೊಟ್ಟನ ಡಾಲು ಜ್ಯೋತಿಶಂಕರ್ ಅವರ ಅಂತ್ಯಕ್ರಿಯೆ ಜ.2 ರಂದು ಮಧ್ಯಾಹ್ನ 2 ಗಂಟೆಗೆ ಸ್ವಗೃಹದಲ್ಲಿ ನಡೆಯಲಿದೆ ಎಂದು ಕುಟುಂಬಸ್ಥರು ತಿಳಿಸಿದ್ದಾರೆ.










