ಮಡಿಕೇರಿ ಫೆ.10 NEWS DESK : ಕಾವೇರಿ ಶಾಲೆಯ ನರ್ಸರಿ, ಎಲ್ ಕೆ ಜಿ ಹಾಗೂ ಯು ಕೆ ಜಿ ವಿದ್ಯಾರ್ಥಿಗಳು ವಿರಾಜಪೇಟೆಯ ಕೂರ್ಗ್ ಅವಿನ್ಯೂ ಮಳಿಗೆಗೆ ಕ್ಷೇತ್ರ ಪ್ರವಾಸವನ್ನು ಕೈಗೊಂಡಿದರು..
ಅಲ್ಲಿ ಪೂರ್ವ ಪ್ರಾಥಮಿಕ ವಿಭಾಗದ ಸಂಯೋಜಿಕಿ ಅಮೃತ ಅರ್ಜುನ್ ಹಾಗೂ ಸಹ ಶಿಕ್ಷಕಿ ನಿವ್ಯಪೊನ್ನಣ್ಣ ವಿವಿಧ ರೀತಿಯ ತರಕಾರಿಗಳು ಹಾಗೂ ಹಣ್ಣುಗಳ ಹೆಸರುಗಳನ್ನು ಪರಿಚಯ ಮಾಡಿಕೊಟ್ಟರು.
ನಂತರ ದಿನಸಿ ಪದಾರ್ಥಗಳನ್ನು ಕೊಳ್ಳುವ ಮತ್ತು ಮಾರುವ ಕ್ರಮವನ್ನು ಮಕ್ಕಳಿಗೆ ಅಚ್ಚು ಕಟ್ಟಾಗಿ ಹೇಳಿಕೊಟ್ಟರು.
ಈ ಸಂದರ್ಭ ಕಾವೇರಿ ಶಾಲೆಯ ಆಡಳಿತ ಮಂಡಳಿಯ ಅಧ್ಯಕ್ಷ ಬಿ.ಎಸ್, ಸುದೇಶ್, ಸಂಯೋಜಿಕಿಯರಾದ ಅಮೃತ ಅರ್ಜುನ್, ನಿವ್ಯಪೊನ್ನಣ್ಣ, ವೀಣಾ, ಪವಿತ, ಸುರಯ್ಯ, ತುಳಸಿ ಹಾಗೂ ದೈಹಿಕ ಶಿಕ್ಷಕಿ ಲಾವಣ್ಯ ಹಾಜರಿದ್ದರು.









