ಮಡಿಕೇರಿ ಮಾ.27 NEWS DESK : ಮೂಲತಃ ಪೊನ್ನಂಪೇಟೆ ತಾಲ್ಲೂಕು ಹಳ್ಳಿಗಟ್ಟು ನಿವಾಸಿ, ಮಾಜಿ ಸೈನಿಕ ಹಾಗೂ ಗೋಣಿಕೊಪ್ಪ ವಿಜಯ ಬ್ಯಾಂಕ್ ನಿವೃತ್ತ ಉದ್ಯೋಗಿ ಚಮ್ಮಟೀರ ಸುಗುಣ ಮುತ್ತಣ್ಣ (67) ಮಾರ್ಚ್ 26 ಮಂಗಳವಾರ ರಾತ್ರಿ ಮೈಸೂರಿನ ಜೆಎಸ್ಎಸ್ ಆಸ್ಪತ್ರೆಯಲ್ಲಿ ಹೃದಯಾಘಾತದಿಂದ ನಿಧನರಾದರು. ಮೃತರು ಪತ್ನಿ ಹಾಗೂ ಓರ್ವ ಪುತ್ರಿಯನ್ನು ಅಗಲಿದ್ದಾರೆ. ಅಂತ್ಯಕ್ರಿಯೆ ಬುಧವಾರ ಹಳ್ಳಿಗಟ್ಟುವಿನಲ್ಲಿರುವ ಮೃತರ ಸ್ವಗೃಹದಲ್ಲಿ ನಡೆಯಲಿದೆ.












