Close Menu
News-Desk-KannadaNews-Desk-Kannada
  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಇತ್ತೀಚಿನ ಸುದ್ದಿಗಳು
  • ಉದ್ಯೋಗ ಭಾಗ್ಯ
  • ಮಹಾದೇಗುಲ
  • ರುಚಿ ನೋಡಿ
  • ಪೊಲೀಸ್ ನ್ಯೂಸ್
  • ರೋಗ ಮುಕ್ತ
  • ಪ್ರವಾಸಿತಾಣ
  • ಸಣ್ಣ ಕಥೆ
  • ವಿಡಿಯೋ ಗ್ಯಾಲರಿ
Facebook X (Twitter) Instagram
Breaking News
  • ಬಂಗಾರ ಕೊಳ್ಳುವವರಿಗೆ ಹಬ್ಬದ ಸಂಭ್ರಮ: ದಿಢೀರ್ ಇಳಿಕೆಯಾದ ಚಿನ್ನದ ದರ, ಎಷ್ಟಿದೆ ಗೊತ್ತಾ?
  • *ಜಾನುವಾರುಗಳ ಮೇಲೆ ದಾಳಿ ಮಾಡುತ್ತಿದ್ದ ಹುಲಿ ಸೆರೆ*
  • ನಾಳೆ ದೇಶಾದ್ಯಂತ ಕಾರ್ಮಿಕ ಸಂಘಟನೆಗಳ ಮುಷ್ಕರ: ಬಸ್, ಬ್ಯಾಂಕ್, ಶಾಲಾ-ಕಾಲೇಜುಗಳ ಸ್ಥಿತಿ ಏನು? ಹೊರಗಡೆ ಹೋಗುವ ಮುನ್ನ ಈ ಸುದ್ದಿ ಓದಿ!
  • *ಪಿ.ಕೃಷ್ಣೇಗೌಡ ನೇತೃತ್ವದ ಕರವೇ ಸ್ವಾಭಿಮಾನಿ ಬಣದ ಜಿಲ್ಲಾಧ್ಯಕ್ಷರಾಗಿ ಪಿ.ಕೆ.ಉದಯಕುಮಾರ್ ಆಯ್ಕೆ*
  • *ಆಹಾರ ಭದ್ರತಾ ಕಾಯ್ದೆ ಪರಿಣಾಮಕಾರಿಯಾಗಿ ಜಾರಿಗೊಳಿಸಿ: ಡಾ.ಎಚ್.ಕೃಷ್ಣ*
  • *ಅರಣ್ಯ ಹಕ್ಕು ಕಾಯ್ದೆ ಆದಿವಾಸಿಗಳಿಗೆ ತಲುಪಿಸಿ: ಗಿರಿಧರ*
  • *ಕಾರ್ಮಿಕ ವರ್ಗದ ತುರ್ತು ರೋಗಿಗಳಿಗೆ ಸರತಿ ಸಾಲು ಬೇಡ : ಜಿಲ್ಲಾ ಸರ್ಜನ್ ಗೆ ಮನವಿ ಸಲ್ಲಿಸಿದ ಎಸ್‌ಡಿಟಿಯು*
  • *ಮೈಸೂರಿನಲ್ಲಿ ಪೂರ್ಣ ಪ್ರಮಾಣದ ಪಾಸ್‌ಪೋರ್ಟ್‌ ಸೇವಾ ಕೇಂದ್ರ ಆರಂಭಕ್ಕೆ ಯದುವೀರ್‌ ಒತ್ತಡ ಕೇಂದ್ರ ವಿದೇಶಾಂಗ ಸಚಿವರಿಗೆ ಮನವಿ ಸಲ್ಲಿಸಿರುವ ಮೈಸೂರು-ಕೊಡಗು ಸಂಸದರು*
  • *ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ದಲಿತ ಸಂಘರ್ಷ ಸಮಿತಿಯಿಂದ ಮಡಿಕೇರಿಯಲ್ಲಿ ಪ್ರತಿಭಟನೆ*
  • *ಸಾಂತ್ವನ ಮಹಿಳಾ ಸಹಾಯವಾಣಿ : ಕೊಡಗಿನಲ್ಲಿ 5657 ಪ್ರಕರಣಗಳು ಇತ್ಯರ್ಥ*
News-Desk-KannadaNews-Desk-Kannada




  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಪೊಲೀಸ್ ನ್ಯೂಸ್
  • ಪ್ರವಾಸಿತಾಣ
  • ಮಹಾದೇಗುಲ
  • ರುಚಿ ನೋಡಿ
  • ಉದ್ಯೋಗ ಭಾಗ್ಯ
  • ರೋಗ ಮುಕ್ತ
  • ಸಣ್ಣ ಕಥೆ
News-Desk-KannadaNews-Desk-Kannada





Home » *ಮಾ.28 ರಂದು ಸಂಕಷ್ಟಹರ ಚತುರ್ಥಿ : ಆಚರಣೆ ಹೇಗೆ, ವೃತಾಚರಣೆಯಿಂದ ಯಾವ ದೋಷಗಳೆಲ್ಲ ಪರಿಹಾರವಾಗುತ್ತದೆ …*
ಇತ್ತೀಚಿನ ಸುದ್ದಿಗಳು

*ಮಾ.28 ರಂದು ಸಂಕಷ್ಟಹರ ಚತುರ್ಥಿ : ಆಚರಣೆ ಹೇಗೆ, ವೃತಾಚರಣೆಯಿಂದ ಯಾವ ದೋಷಗಳೆಲ್ಲ ಪರಿಹಾರವಾಗುತ್ತದೆ …*

March 27, 20242 Mins Read
Facebook WhatsApp Twitter Telegram Copy Link Threads Email LinkedIn Pinterest
Facebook Twitter WhatsApp Email Telegram Copy Link

NEWS DESK : ದಿನಾಂಕ 28.3.2024 ಗುರುವಾರದಂದು ಶೋಭ ಕೃತ್ಸಂವತ್ಸರಃ ಕೊನೆಯ ಸಂಕಷ್ಟಹರ ಚತುರ್ಥಿಯಾಗಿರುತ್ತದೆ. ಈ ಪಾಲ್ಗುಣ ಮಾಸದ ಸಂಕಷ್ಟಹರ ಚತುರ್ಥಿಯನ್ನು ಶ್ರದ್ಧಾಭಕ್ತಿಯಿಂದ ಯಾರು ಆಚರಣೆಯನ್ನು ಮಾಡುತ್ತಾರೋ, ಅವರಿಗೆ ಈ ಹಿಂದೆ ಈ ಸಂವತ್ಸರಃದಲ್ಲಿ ಬಂದ ಸಂಕಷ್ಟಹರ ವೃತಗಳನ್ನು ಮಾಡಿದ ಎಲ್ಲಾ ಫಲ ದೊರಕುತ್ತದೆ ಎಂದು ಧಾರ್ಮಿಕ ಶಾಸ್ತ್ರಕಾರರ ಸಿದ್ಧಾಂತವಾಗಿದೆ.
ಸಂಕಷ್ಟಹರ ಚತುರ್ಥಿಯನ್ನು ಗುರುಬಲ ಇಲ್ಲದವರು ಆಚರಿಸಿದರೆ ಗುರುವಿನ ಕೃಪೆಗೆ ಪಾತ್ರರಾಗುತ್ತಾರೆ. ಚೌತಿಯ ಚಂದ್ರನ ನೋಡಿದವರಿಗೆ ನೋಡಿದ ದೋಷವು ಪರಿಹಾರವಾಗುತ್ತದೆ. ಯಾರಿಗೆ ಸಾಡೆಸಾಥ್ ಶನಿ ಹಾಗೂ ಶನಿದೆಸೆ ಇರುತ್ತದೆಯೋ ಅವರು ಆಚರಿಸಿದಲ್ಲಿ ಶನಿದೋಷ ಪರಿಹಾರವಾಗುತ್ತದೆ.
ಕುಜ ದೋಷದಿಂದ ವಿವಾಹ ಪ್ರತಿಬಂಧಕ ದೋಷವಿದ್ದರೆ ಸಂಕಷ್ಟಹರ ವೃತಾಚರಣೆಯಿಂದ ಶೀಘ್ರ ವಿವಾಹಯೋಗ ಕೂಡಿ ಬರುತ್ತದೆ. ಸಂತಾನ ಇಲ್ಲದವರಿಗೆ ಈ ವೃತವನ್ನು ಆಚರಿಸಿದರೆ ಶೀಘ್ರವಾಗಿ ಸಂತಾನ ಪ್ರಾಪ್ತಿಯಾಗುತ್ತದೆ. ಮಕ್ಕಳಿಗೆ ವಿದ್ಯಾ ಪ್ರಗತಿ ಇಲ್ಲದೆ ಇದ್ದಲ್ಲಿ ವೃತಾಚರಣೆಯಿಂದ ವಿದ್ಯೆ ಪ್ರಗತಿಯಾಗುತ್ತದೆ. ಉದ್ಯೋಗ ಇಲ್ಲದವರಿಗೆ ವಿಘ್ನನಾಶಕ ಶೀಘ್ರವಾಗಿ ಸಮಸ್ಯೆ ಪರಿಹಾರ ಮಾಡಿ ಉದ್ಯೋಗ ನೀಡುತ್ತಾರೆ.
ಈ ಎಲ್ಲಾ ಫಲವನ್ನು ಕೊಡುವ ಏಕೈಕ ವೃತವು ಹುಣ್ಣಿಮೆ ಕಳೆದ ನಾಲ್ಕು ದಿವಸಕ್ಕೆ ಅಂದರೆ ಕೃಷ್ಣ ಪಕ್ಷದ ಚತುರ್ಥಿಯಲ್ಲಿ ಪ್ರತಿ ತಿಂಗಳು ಬರುತ್ತದೆ. ಈ ವೃತವನ್ನು ಮಾಡುವವರು ವೃತದ ಮೊದಲನೆಯ ದಿನವೇ ಮನೆಯನ್ನು ಶುದ್ಧದಿಂದ ಇಡಬೇಕು, ಸಸ್ಯಹಾರ ಮಾತ್ರ ಸೇವಿಸಬೇಕು. ವೃತದ ದಿನ ಬೆಳಿಗ್ಗೆ ಬೇಗ ಎದ್ದು ತಲೆಯಿಂದ ಸ್ನಾನವನ್ನು ಮಾಡಿ ಉಪವಾಸ (ಅವರವರ ದೈಹಿಕ ಪ್ರಕೃತಿಗೆ ತಕ್ಕಂತೆ) ಇರಬೇಕು. (ಹಣ್ಣು-ಹಂಪಲು, ಎಳನೀರು ಸ್ವೀಕರಿಸಬಹುದು).
ಮೊದಲು ಕುಯ್ದಿಟ್ಟ 21 ಅಥವಾ 54 ಅಥವಾ 108 ಗರಿಕೆ ಹಾಗೂ ಕೆಂಪು ಹೂವನ್ನು ಸಂಜೆ ಸೂರ್ಯಸ್ತಕ್ಕೆ ತಲೆಯಿಂದ ಸ್ನಾನ ಮಾಡಿ ಗಣೇಶನ ದೇವಾಲಯಕ್ಕೆ ನೀಡಬೇಕು. ಗಣೇಶನಿಗೆ ಪ್ರಿಯವಾದ ನೆನೆಹಾಕಿದ ಕಡ್ಲೆ, ಎಳ್ಳು, ಪಂಚಕಜ್ಜಾಯ, ಎಳ್ಳುಂಡೆ, ಕಡುಬು ಇಂತಹ ಖಾದ್ಯವನ್ನು ಗಣೇಶನಿಗೆ ನೈವೇದ್ಯಕ್ಕೆ ಅರ್ಪಿಸಬೇಕು. ಈ ತರಹದಲ್ಲಿ ಭಕ್ತಿ ಪೂರ್ವಕವಾಗಿ ವೃತವನ್ನು ಮಾಡಿದಲ್ಲಿ ಎಲ್ಲಾ ಕಷ್ಟಗಳನ್ನು ನಿವಾರಣೆ ಮಾಡುತ್ತೇನೆಂದು ಸ್ವತಃ ಗಣಪತಿಯೇ ತನ್ನ ತಾಯಿಯಾದ ಪಾರ್ವತಿ ದೇವಿಗೆ ಮಾತನ್ನು ಕೊಟ್ಟಿದ್ದಾನೆ ಎಂದು ಪುರಾಣ ಕತೆಯು ಹೇಳುತ್ತದೆ. ಕಥೆಯನ್ನು ಕೇಳಬೇಕು ನಂತರ ಚಂದ್ರನ ದರ್ಶನ ಮಾಡಿ ಸಾಥ್ವಿಕ ಆಹಾರ ಮೊಸರನ್ನವನ್ನು ಸ್ವೀಕರಿಸಬೇಕು. ಅದಕ್ಕಾಗಿ ಈ ಸರಳ ವೃತವನ್ನು ಆಚರಿಸಿ ನಮ್ಮೆಲ್ಲರ ಕಷ್ಟವನ್ನು ಪರಿಹಾರ ಮಾಡಿಕೊಳ್ಳೋಣ. ಮಾ.28ರ ಚಂದ್ರೋದಯ ರಾತ್ರಿ 9.11ಕ್ಕೆ
ಸರ್ವೆ ಜನ ಸುಖಿನೋಭವತಃ
(ಡಾ.ಮಹಾಬಲೇಶ್ವರ ಭಟ್, ಮೂರ್ನಾಡು 8105634429)

Share. Facebook Twitter Pinterest LinkedIn Tumblr Email WhatsApp
Previous Article*ಬಾನಂಡ ವಿದ್ಯಾಶ್ರೀ ಗೆ “ಅಕಾಡೆಮಿಕ್ ಎಕ್ಸೆಲೆನ್ಸ್ ಅವಾರ್ಡ್” ಪ್ರಶಸ್ತಿ*
Next Article *ಕೆದಮುಳ್ಳೂರು ಶ್ರೀ ಭಗವತಿ ದೇವರ ವಾರ್ಷಿಕ ಉತ್ಸವ ಸಂಪನ್ನ*

Related Posts

ಬಂಗಾರ ಕೊಳ್ಳುವವರಿಗೆ ಹಬ್ಬದ ಸಂಭ್ರಮ: ದಿಢೀರ್ ಇಳಿಕೆಯಾದ ಚಿನ್ನದ ದರ, ಎಷ್ಟಿದೆ ಗೊತ್ತಾ?

February 11, 2026

*ಜಾನುವಾರುಗಳ ಮೇಲೆ ದಾಳಿ ಮಾಡುತ್ತಿದ್ದ ಹುಲಿ ಸೆರೆ*

February 11, 2026

ನಾಳೆ ದೇಶಾದ್ಯಂತ ಕಾರ್ಮಿಕ ಸಂಘಟನೆಗಳ ಮುಷ್ಕರ: ಬಸ್, ಬ್ಯಾಂಕ್, ಶಾಲಾ-ಕಾಲೇಜುಗಳ ಸ್ಥಿತಿ ಏನು? ಹೊರಗಡೆ ಹೋಗುವ ಮುನ್ನ ಈ ಸುದ್ದಿ ಓದಿ!

February 11, 2026

*ಜಾನುವಾರುಗಳ ಮೇಲೆ ದಾಳಿ ಮಾಡುತ್ತಿದ್ದ ಹುಲಿ ಸೆರೆ*

February 11, 2026

ಮಡಿಕೇರಿ, NEWS DESK ಫೆ.11 : ದಕ್ಷಿಣ ಕೊಡಗಿನ ಪೊನ್ನಂಪೇಟೆ ತಾಲ್ಲೂಕಿನ ವಿವಿಧ ಗ್ರಾಮಗಳಲ್ಲಿ ನಿರಂತರವಾಗಿ ಜಾನುವಾರುಗಳ ಮೇಲೆ ದಾಳಿ…

ನಾಳೆ ದೇಶಾದ್ಯಂತ ಕಾರ್ಮಿಕ ಸಂಘಟನೆಗಳ ಮುಷ್ಕರ: ಬಸ್, ಬ್ಯಾಂಕ್, ಶಾಲಾ-ಕಾಲೇಜುಗಳ ಸ್ಥಿತಿ ಏನು? ಹೊರಗಡೆ ಹೋಗುವ ಮುನ್ನ ಈ ಸುದ್ದಿ ಓದಿ!

February 11, 2026

*ಪಿ.ಕೃಷ್ಣೇಗೌಡ ನೇತೃತ್ವದ ಕರವೇ ಸ್ವಾಭಿಮಾನಿ ಬಣದ ಜಿಲ್ಲಾಧ್ಯಕ್ಷರಾಗಿ ಪಿ.ಕೆ.ಉದಯಕುಮಾರ್ ಆಯ್ಕೆ*

February 11, 2026

*ಆಹಾರ ಭದ್ರತಾ ಕಾಯ್ದೆ ಪರಿಣಾಮಕಾರಿಯಾಗಿ ಜಾರಿಗೊಳಿಸಿ: ಡಾ.ಎಚ್.ಕೃಷ್ಣ*

February 11, 2026

*ಅರಣ್ಯ ಹಕ್ಕು ಕಾಯ್ದೆ ಆದಿವಾಸಿಗಳಿಗೆ ತಲುಪಿಸಿ: ಗಿರಿಧರ*

February 11, 2026

*ಕಾರ್ಮಿಕ ವರ್ಗದ ತುರ್ತು ರೋಗಿಗಳಿಗೆ ಸರತಿ ಸಾಲು ಬೇಡ : ಜಿಲ್ಲಾ ಸರ್ಜನ್ ಗೆ ಮನವಿ ಸಲ್ಲಿಸಿದ ಎಸ್‌ಡಿಟಿಯು*

February 11, 2026

*ಮೈಸೂರಿನಲ್ಲಿ ಪೂರ್ಣ ಪ್ರಮಾಣದ ಪಾಸ್‌ಪೋರ್ಟ್‌ ಸೇವಾ ಕೇಂದ್ರ ಆರಂಭಕ್ಕೆ ಯದುವೀರ್‌ ಒತ್ತಡ ಕೇಂದ್ರ ವಿದೇಶಾಂಗ ಸಚಿವರಿಗೆ ಮನವಿ ಸಲ್ಲಿಸಿರುವ ಮೈಸೂರು-ಕೊಡಗು ಸಂಸದರು*

February 11, 2026

*ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ದಲಿತ ಸಂಘರ್ಷ ಸಮಿತಿಯಿಂದ ಮಡಿಕೇರಿಯಲ್ಲಿ ಪ್ರತಿಭಟನೆ*

February 11, 2026

*ಸಾಂತ್ವನ ಮಹಿಳಾ ಸಹಾಯವಾಣಿ : ಕೊಡಗಿನಲ್ಲಿ 5657 ಪ್ರಕರಣಗಳು ಇತ್ಯರ್ಥ*

February 11, 2026

*ಕಾಯಕ ಶರಣರ ಜಯಂತಿ ಸಮ ಸಮಾಜ ನಿರ್ಮಾಣದಲ್ಲಿ ಕಾಯಕ ಶರಣರ ಕೊಡುಗೆ ಅಪಾರ: ಹೇಮಲತಾ*

February 10, 2026
  • Facebook
  • Twitter
  • Instagram
  • WhatsApp
  • YouTube
Quick Links
  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಪೊಲೀಸ್ ನ್ಯೂಸ್
  • ಪ್ರವಾಸಿತಾಣ
Quick Links
  • ಮಹಾದೇಗುಲ
  • ರುಚಿ ನೋಡಿ
  • ರೋಗ ಮುಕ್ತ
  • ಉದ್ಯೋಗ ಭಾಗ್ಯ
  • ಸಣ್ಣ ಕಥೆ
  • ವಿಡಿಯೋ ಗ್ಯಾಲರಿ
Contact

www.newsdeskkannada.com
News Desk,
Industrial Area,
Pathrika Bhavan Building,
Madikeri, Kodagu, Karnataka.
Phone: 94481 00724
              76766 24467
Email: newsdeskkodagu@gmail.com

© 2026 All Rights Reserved. Designed by Blueline Computers.
  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಪೊಲೀಸ್ ನ್ಯೂಸ್
  • ಪ್ರವಾಸಿತಾಣ

Type above and press Enter to search. Press Esc to cancel.