ಮಡಿಕೇರಿ NEWS DESK ಮಾ.2 : ಯಾವುದೇ ಕ್ಷೇತ್ರದಲ್ಲಿ ಸಾಧನೆ ಮಾಡಬೇಕಿದ್ದರೂ ಕುಟುಂಬ ಸದಸ್ಯರೊಂದಿಗೆ ಇತರರ ಪ್ರೋತ್ಸಾಹ ಕೂಡ ಅತ್ಯಗತ್ಯ. ಕ್ರೀಡಾಕ್ಷೇತ್ರದಲ್ಲಿಯೂ ವಿನೂತನ ಪ್ರಯತ್ನಗಳು ಆದಾಗ ಮತ್ತಷ್ಟು ಕ್ರೀಡಾಪಟುಗಳು ಬೆಳಕಿಗೆ ಬರಲು ಸಾಧ್ಯ ಎಂದು ಕೊಡಗಿನ ಹೆಸರಾಂತ ಬಾಸ್ಕೆಟ್ ಬಾಲ್ ಆಟಗಾತಿ೯ ಮಂಡೆಪಂಡ ಡಾ. ಪುಪ್ಪಾ ಕುಟ್ಟಣ್ಣ ಹೇಳಿದ್ದಾರೆ. ನಗರದ ಕೊಡಗು ವಿದ್ಯಾಲಯದಲ್ಲಿ 55 ಲಕ್ಷ ರು. ವೆಚ್ಚದಲ್ಲಿ ಸ್ಫಾಪನೆಯಾದ ತನ್ನದೇ ಹೆಸರಿನ ಡಾ. ಪುಪ್ಪಾ ಕುಟ್ಟಣ್ಣ ಬಾಸ್ಕೆಟ್ ಬಾಲ್ ಕೋಟ್೯ ಉದ್ಘಾಟಿಸಿ ಮಾತನಾಡಿದ ಅಂತರರಾಷ್ಟ್ರೀಯ ಬಾಸ್ಕೆಟ್ ಬಾಲ್ ಮಾಜಿ ಆಟಗಾತಿ೯ಯೂ ಆಗಿರುವ ಪುಪ್ಪಾಕುಟ್ಟಣ್ಮ , ಅನೇಕ ಸ್ಥಳಗಳಲ್ಲಿ ನಿಮಾ೯ಣವಾಗಿರುವ ಬಾಸ್ಕೆಟ್ ಬಾಲ್ ಕೋಟ್೯ಗಿಂತ ಕೊಡಗು ವಿದ್ಯಾಲಯದಲ್ಲಿ ನಿಮಾ೯ಣವಾದ ಕ್ರೀಡಾಂಗಣ ವಿನೂತನವಾಗಿದೆ. ಕೊಡಗಿನಲ್ಲಿ ಇಂಥ ಹೊಸತನದ ಪ್ರಯತ್ನಕ್ಕೆ ಕೊಡಗು ವಿದ್ಯಾಲಯ ಮುಂದಾಗಿರುವುದು ಶ್ಲಾಘನೀಯ ಎಂದರು. ತನ್ನ ಹೆಸರಿನಲ್ಲಿಯೇ ಬಾಸ್ಕೆಟ್ ಬಾಲ್ ಕೋಟ್೯ ನಿಮಾ೯ಣವಾಗಿರುವುದು ತನ್ನ ಕ್ರೀಡಾಜೀವನದಲ್ಲಿಯೇ ಸ್ಮರಣೀಯವಾಗಿದೆ ಎಂದೂ ಅವರು ಧನ್ಯತಾ ಭಾವದಿಂದ ಹೇಳಿದರು. ಪ್ರತೀ ಕ್ರೀಡಾಸಾಧಕರಿಗೆ ಮುಖ್ಯವಾಗಿ ಛಲ, ಗುರಿ ಬೇಕು. ಕ್ರೀಡಾಕ್ಷೇತ್ರದಲ್ಲಿಯೂ ಸಾಕಷ್ಟು ವಿಚಾರಗಳನ್ನು ಹೊಸದ್ದಾಗಿ ಕಲಿಯುವ ಅವಕಾಶಗಳಿರುತ್ತವೆ. ಕ್ರೀಡಾಕ್ಷೇತ್ರದ ಮೂಲಕ ಸಮಾಜದಲ್ಲಿ ಗುರುತಿಸಿಕೊಳ್ಳುವುದರೊಂದಿಗೆ, ತಮ್ಮ ಪ್ರತಿಭೆಯನ್ನೂ ಬೆಳಕಿಗೆ ತರಲು ಸಾಧ್ಯ ಎಂದೂ ಪುಪ್ಪಾ ಕುಟ್ಟಣ್ಣ ಹೇಳಿದರು. ಪೋಷಕರು ತಮ್ಮ ಮಕ್ಕಳಲ್ಲಿ ಶಿಕ್ಷಣದ ಜತೆಜತೆಗೇ ಕ್ರೀಡಾಪ್ರತಿಭೆಗೂ ಪ್ರೋತ್ಸಾಹ ನೀಡಬೇಕು. ಕ್ರೀಡಾಪಟುಗಳು ಕ್ರೀಡಾಂಗಣದಲ್ಲಿ ತಾವೊಬ್ಬರೇ ತಂಡವನ್ನು ಮುನ್ನಡೆಸುವುದಕ್ಕಿಂತ ತಂಡದ ಎಲ್ಲರ ಪ್ರಯತ್ನದೊಂದಿಗೆ ತಂಡಸ್ಪೂತಿ೯ಗೆ ಆದ್ಯತೆ ನೀಡಿದರೆ ಗೆಲವು ಸುಲಭಸಾಧ್ಯ ಎಂದೂ ಕಿವಿಮಾತು ಹೇಳಿದರು. ಮುಖ್ಯ ಅತಿಥಿಯಾಗಿ ಪಾಲ್ಗೊಂಡಿದ್ದ ರಾಷ್ಟ್ರೀಯ ಬಾಸ್ಕೆಟ್ ಬಾಲ್ ಆಟಗಾರ, ಕೊಡಗು ವಿದ್ಯಾಲಯದ ಸಲಹೆಗಾರ ಪ್ರೊ. ಜುಗನ್ ಸುಖನ್ವೇಷರ್ ದ್ಯಾನೇಶ್ವರನ್ ಮಾತನಾಡಿ .ಕೊಡಗಿನ ಮಕ್ಕಳಿಗೆ ಸೂಕ್ತ ರೀತಿಯಲ್ಲಿ ಬಾಸ್ಕೆಟ್ ಬಾಲ್ ತರಬೇತಿ ನೀಡುವ ನಿಟ್ಟಿನಲ್ಲಿ ಸಹಕಾರ ನೀಡುವುದಾಗಿ ಭರವಸೆ ನೀಡಿದರು. ಭಾರತೀಯ ಬಾಸ್ಕೆಟ್ ಬಾಲ್ ಫೆಡರೇಷನ್ ಮತ್ತು ಮಣಿಪಾಲ್ ವಿಶ್ವವಿದ್ಯಾನಿಲಯದ ಸಹಯೋಗದೊಂದಿಗೆ ಕೊಡಗು ವಿದ್ಯಾಲಯದ ಸುಸಜ್ಜಿತ ಬಾಸ್ಕೆಟ್ ಬಾಲ್ ಕ್ರೀಡಾಂಗಣದಲ್ಲಿ ಪಂದ್ಯಾಟ ಆಯೋಜಿಸಲೂ ಚಿಂತನೆ ಇದೆ ಎಂದೂ ಅವರು ಹೇಳಿದರು. ಪ್ರತೀಯೋವ೯ ವಿದ್ಯಾಥಿ೯ಯೂ ತನ್ನ ಪ್ರತಿಭೆಯ ಮೇಲೆ ನಂಬಿಕೆ ಇರಿಸಿಕೊಂಡು ಕ್ರೀಡಾಸಾಧನೆಗೆ ಮುಂದಾಗುವಂತೆಯೂ ಜುಗನ್ ಕರೆ ನೀಡಿದರು. ಸಮಾರಂಭದಲ್ಲಿ ಪ್ರಾಸ್ತಾವಿಕವಾಗಿ ಬಾಸ್ಕೆಟ್ ಬಾಲ್ ಕೋಟ್೯ ಯೋಜನೆ ಬಗ್ಗೆ ಮಾಹಿತಿ ನೀಡಿದ ಕೊಡಗು ವಿದ್ಯಾಲಯ ಆಡಳಿತ ಮಂಡಳಿ ನಿದೇ೯ಶಕ ಸಿ.ಎಸ್. ಗುರುದತ್ , ಸಾಕಮೂರಿ ಕುಟುಂಬದ ಎಸ್. ವಿ. ನರಸಯ್ಯ ಸ್ಮರಣೆಯಲ್ಲಿ ಅವರ ಮಕ್ಕಳಾದ ನಾಗಾಜು೯ನ್ ಮತ್ತು ಪ್ರಶಾಂತ್ ಸಾಕಮೂರಿ ಸಹಕಾರದಲ್ಲಿ ಈ ಬಾಸ್ಕೆಟ್ ಬಾಲ್ ಕೋಟ್೯ 55 ಲಕ್ಷ ರು. ವೆಚ್ಚದಲ್ಲಿ ಸುಸಜ್ಜಿತವಾಗಿ ನಿಮಾ೯ಣವಾಗಲು ಸಾಧ್ಯವಾಯಿತು ಎಂದು ಸ್ಮರಿಸಿಕೊಂಡರು. ಸಿವಿಎಸ್ ಬ್ರದಸ್೯ ಅವರ ಸೋಷಿಯಲ್ ಬುಸಿನೆಸ್ ಪೌಂಡೇಷನ್ ನ ಐಜಿಜಿ ಪಾಟ್೯ನರ್ ಸಹಕಾರದೊಂದಿಗೆ ಮೀನಾಕ್ಷಿ ಭಟ್ ಸ್ಮರಣೆಯಲ್ಲಿ ಪ್ರಭಾವತಿ ಫನಾ೯ಂಡೀಸ್ ಅವರು ನೀಡಿದ ಕೊಡುಗೆಯನ್ನೂ ಬಾಸ್ಕೆಟ್ ಬಾಲ್ ಕೋಟ್೯ ಬಳಕೆಗೆ ವಿನಿಯೋಗ ಮಾಡಲಾಗಿದೆ. ಇವರೆಲ್ಲರ ಸಹಕಾರದಿಂದಾಗಿ ಕೊಡಗಿನಲ್ಲಿ ಇಂಥಹದ್ದೊಂದು ಅತ್ಯಾಧುನಿಕ ಗುಣಮಟ್ಟದ ಸುಸಜ್ಜಿತ ಬಾಸ್ಕೆಟ್ ಬಾಲ್ ಕೋಟ್೯ ನಿಮಾ೯ಣ ಸಾಧ್ಯವಾಯಿತು ಎಂದರಲ್ಲದೇ,ಬಾಸ್ಕೆಟ್ ಬಾಲ್ ರಂಗದ ಅನೇಕ ನುರಿತ ಪರಿಣಿತರ ಸಲಹೆಯನ್ನೂ ಈ ಬಾಸ್ಕೆಟ್ ಬಾಲ್ ಕೋಟ್೯ ನಿಮಾ೯ಣಕ್ಕೆ ಪಡೆಯಲಾಗಿದೆ ಎಂದೂ ಗುರುದತ್ ಮಾಹಿತಿ ನೀಡಿದರು. ಕೊಡಗಿನ ಹಿರಿಯ ಕ್ರೀಡಾಪ್ರತಿಭೆಯಾಗಿರುವ ಮಂಡೇಪಂಡ ಪುಪ್ಪಾಕುಟ್ಟಣ್ಣ ಅವರು ಬಾಸ್ಕೆಟ್ ಬಾಲ್ ಕ್ರೀಡೆಯಲ್ಲಿ ಮಾಡಿರುವ ಅಂತರರಾಷ್ಟ್ರೀಯ ಮಟ್ಟದ ಸಾಧನೆ ಪರಿಗಣಿಸಿ ಅವರ ಹೆಸರನ್ನೇ ಈ ಬಾಸ್ಕೆಟ್ ಬಾಲ್ ಕೋಟ್೯ಗೆ ಇಟ್ಟಿದ್ದು, ಇದು ನಿಜಕ್ಕೂ ಹೆಮ್ಮೆ ತಂದಿದೆ ಎಂದೂ ಗುರುದತ್ ಹೇಳಿದರು. ಕಾಯ೯ಕ್ರಮದಲ್ಲಿ ನಿವೖತ್ತ ಏರ್ ಮಾಷ೯ಲ್ ಕೆ.ಸಿ.ಕಾಯ೯ಪ್ಪ, ಕೊಡಗು ವಿದ್ಯಾಲಯದ ಉಪಾಧ್ಯಕ್ಷೆ ಊವ೯ಶಿ ಮುದ್ದಯ್ಯ, ಕ್ರೀಡಾಸಮಿತಿ ಅಧ್ಯಕ್ಷ ರಘುಮಾದಪ್ಪ, ಸಲಹೆಗಾರರಾದ ಪಿ.ಇ. ಕಾಳಯ್ಯ, ಕೆ.ಯು.ಸುಬ್ಬಯ್ಯ, ಪ್ರಾಂಶುಪಾಲರಾದ ಕೆ.ಎಸ್. ಸುಮಿತ್ರಾ, ಆಡಳಿತಾಧಿಕಾರಿ ಪಿ.ರವಿ, ಸೇರಿದಂತೆ ಅನೇಕ ಗಣ್ಯರು ಹಾಜರಿದ್ದರು. ಶಿಕ್ಷಕಿಯರಾದ ನೇತ್ರಬೋಪಣ್ಣ ಸ್ವಾಗತಿಸಿ, ಕೆ.ಕೆ. ಭಾರತಿ ವಂದನಾಪ೯ಣೆ ಮಾಡಿದ ಕಾಯ೯ಕ್ರಮದಲ್ಲಿ ಅಲೆಮಾಡ ಚಿತ್ರಾನಂಜಪ್ಪ, ಮಿಲನ್ ಬೋಪಣ್ಣ ನಿವ೯ಹಿಸಿ, ಎಂ.ಎಂ.ವೀಣಾ ನಿರೂಪಿಸಿದರು. ಇದೇ ಸಂದಭ೯ ನೂತನ ಬಾಸ್ಕೆಟ್ ಬಾಲ್ ಕೋಟ್೯ನಲ್ಲಿ ಕನಾ೯ಟಕ ಮಾಸ್ಟರ್ಸ್ ಬಾಸ್ಕೆಟ್ ಬಾಲ್ ತಂಡಕ್ಕೆ ಸೇರಿದ ಸ್ಪೂತಿ೯ ಮಹಿಳಾ ತಂಡ ಮತ್ತು ಪ್ರೇರಣ ಮಹಿಳಾ ತಂಡಗಳ ನಡುವೇ ಆಕಷ೯ಕ ಬಾಸ್ಕೆಟ್ ಬಾಲ್ ಪಂದ್ಯಾಟ ಜರುಗಿತು.











