
ಸೋಮವಾರಪೇಟೆ ಮಾ.8 NEWS DESK : ಸೋಮವಾರಪೇಟೆಯ ಗಾಂಧಿನಗರದಲ್ಲಿರುವ ಶ್ರೀ ದೊಡ್ಡ ಮಾರಿಯಮ್ಮ ದೇವಾಲಯ ಸಮಿತಿಯ ನೂತನ ಅಧ್ಯಕ್ಷರಾಗಿ ಹೆಚ್.ಜಿ. ಚಿಂತು, ಕಾರ್ಯದರ್ಶಿಯಾಗಿ ದಿಲೀಪ್ ಆಯ್ಕೆಯಾದರು. 50ನೇ ವರ್ಷದ ಜಾತ್ರಾ ಮಹೋತ್ಸವದ ಅಂಗವಾಗಿ ದೇವಾಲಯ ಆವರಣದಲ್ಲಿ ನೂತನ ಸಮಿತಿಯನ್ನು ರಚಿಸಲಾಗಿಯಿತು. ಸಮಿತಿಯ ಗೌರವಾಧ್ಯಕ್ಷರಾಗಿ ಸುಬ್ರಮಣಿ, ಗಂಗಾಧರ, ಅಂಜನಿ ಹಾಗೂ ಗೌರವ ಸಲಹೆಗಾರರಾಗಿ ಮಂಜುನಾಥ್, ಕೇಶವ ಹಾಗೂ ದುರ್ಗೆಶ್ ನೇಮಕಗೊಂಡಿದ್ದಾರೆ. ಉಪಾಧ್ಯಕ್ಷರಾಗಿ ಐ.ಬಿ.ಕೃಷ್ಣ, ಗೋಪಿ, ಮೂರ್ತಿ, ಸಹ ಕಾರ್ಯದರ್ಶಿಯಾಗಿ ಭರತ್, ಖಜಾಂಚಿಯಾಗಿ ಅಯ್ಯಪ್ಪ, ಸಹ ಖಜಾಂಚಿಯಾಗಿ ಹೇಮಂತ್ ಹಾಗೂ ದೀಪಕ್, ಸಂಚಾಲಕರಾಗಿ ಅನಂತ್ ಹಾಗೂ ಮನು ಆಯ್ಕೆಯಾದರು.









