



ಮಡಿಕೇರಿ ಮಾ.25 NEWS DESK : ಎ.ಕೆ.ಎಸ್ ಲೀಗಲ್ ಸರ್ವಿಸ್ ಪ್ರೈವೆಟ್ ಲಿಮಿಟೆಡ್ ವತಿಯಿಂದ ಸಿಎಸ್ ಆರ್ ನಿಧಿ ಅಡಿ ‘ಗ್ರಾಮೀಣಾಭಿವೃದ್ಧಿ ಉದ್ದೇಶಕ್ಕೆ’ ಎ.ಎಸ್.ಪೊನ್ನಣ್ಣ ಅವರು ಜಿಲ್ಲಾ ಉಸ್ತುವಾರಿ ಸಚಿವ ಎನ್.ಎಸ್.ಭೋಸರಾಜು ಅವರ ಮೂಲಕ ಜಿಲ್ಲಾಧಿಕಾರಿ ವೆಂಕಟ್ ರಾಜಾ ಅವರಿಗೆ 23 ಲಕ್ಷ ರೂ.ಚೆಕ್ ಅನ್ನು ಹಸ್ತಾಂತರಿಸಿದರು.