




ವಿರಾಜಪೇಟೆ ಏ.4 NEWS DESK : ಸಶಸ್ತ್ರ ಪೊಲೀಸ್ ಹೆಡ್ ಕಾನ್ಸ್ಟೇಬಲ್ ವಿ.ಎಸ್.ರಾಚಪ್ಪ ಅವರಿಗೆ 2022-23ನೇ ಸಾಲಿನ ಅತ್ಯುತ್ತಮ ಸೇವೆಗಾಗಿ ಮುಖ್ಯಮಂತ್ರಿ ಪದಕವನ್ನು ಬೆಂಗಳೂರಿನ ಕೋರಮಂಗಲದ ಪೋಲೀಸ್ ಕವಾಯತು ಮೈದಾನದಲ್ಲಿ ನಡೆದ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರದಾನ ಮಾಡಿದರು. ರಾಚಪ್ಪ ಅವರು ಪೊನ್ನಂಪೇಟೆ ತಾಲೂಕು, ಮಾಯಮುಡಿ ಗ್ರಾಮದ ಸುಲೋಚನಾ ವಿ.ಎಸ್, ದಿವಂಗತ ಶ್ರೀನಿವಾಸ್ ವಿ.ಎ. ಇವರ ಮಗ. ಪ್ರಸ್ತುತ ಇವರು ಭಯೋತ್ಪಾದನ ನಿಗ್ರಹ ಕೇಂದ್ರ (ಗರುಡ ಪಡೆ) ಬೆಂಗಳೂರಿನಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ.