ಸೋಮವಾರಪೇಟೆ ಮಾ.18 NEWS DESK : ಯೋಗ ಮಾಡುವುದರಿಂದ ಉತ್ತಮ ಆರೋಗ್ಯವನ್ನು ಕಾಪಾಡಿಕೊಳ್ಳಬಹುದು ಎಂದು ಯೋಗ ಮತ್ತು ಪ್ರಕೃತಿ ಚಿಕಿತ್ಸೆ ವೈದ್ಯಾಧಿಕಾರಿ ಅರುಣ್ ಕುಮಾರ್ ಹೇಳಿದರು. 11ನೇ ಅಂತಾರಾಷ್ಟ್ರೀಯ ಯೋಗ ದಿನಾಚರಣೆ ಅಂಗವಾಗಿ ಪಟ್ಟಣ ಆಯುಷ್ ಇಲಾಖೆಯಲ್ಲಿ ನಡೆದ ಯೋಗದಿನಾಚರಣೆ ಹಾಗೂ ಪತ್ರಕರ್ತರಿಗೆ ಯೋಗ ತರಬೇತಿ, ಆಯುಷ್ ಪರಿಚಯ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಆಯುರ್ವೇದ ಬಗ್ಗೆ ಜನರಿಂದ ಜನರಿಗಾಗಿ ಸಂದೇಶ, ಜನರ ಸಹಭಾಗಿತ್ವ, ಜನ ಆಂದೋಲನ ಎಂಬು ಮೂರು ಉದ್ದೇಶವನ್ನು ಇಟ್ಟುಕೊಂಡು ಆಯುರ್ವೇದ ದಿನ ಆಚರಿಸಲಾಗುತ್ತಿದೆ. ಪಟ್ಟಣದ ಆಯುಷ್ ಇಲಾಖೆಯಲ್ಲಿ ಆಯುರ್ವೇದ, ಹೋಮಿಯೋಪತಿ, ಉಚಿತ ಚಿಕಿತ್ಸಾ ಸೌಲಭ್ಯವಿದ್ದು ರೋಗಿಗಳು ಸೌಲಭ್ಯಗಳನ್ನು ಸದುಪಯೋಗಪಡಿಸಿಕೊಳ್ಳಬೇಕು ಎಂದು ಹೇಳಿದರು. ಆಯುರ್ವೇದ ವೈದ್ಯೆ ಕೆ.ಎಸ್.ಶ್ವೇತ ಮಾತನಾಡಿ, ಉತ್ತಮ ಆರೋಗ್ಯಕ್ಕೆ ಆಯುರ್ವೇದ ಔಷಧಿ ಸಹಕಾರಿಯಾಗಿದ್ದು, ಭಾರತ ದೇಶಕ್ಕೆ ಆಯುರ್ವೇದದ ಮೂಲಕ ಘನತೆ ಹೆಚ್ಚಾಗಿದೆ. ಪ್ರಪಂಚದಲ್ಲಿ ಎಲ್ಲರೂ ನಮ್ಮ ದೇಶಕ್ಕೆ ಬಂದು ಆಯುರ್ವೇದ ಕುರಿತು ಅಧ್ಯಯನ ಮಾಡುತ್ತಾರೆ. ಹೋಮಿಯೋಪತಿ ವಿಭಾಗದ ವೈದ್ಯೆ ಸೌಪರ್ಣೀಕಾ ಮಾತನಾಡಿ, ಹೋಮಿಯೋಪತಿ ಒಂದು ಸಮಗ್ರ ವೈದ್ಯಕೀಯ ಪದ್ದತಿಯಾಗಿದು,್ದ ಇದನ್ನು 18ನೇ ಶತಮಾನದಲ್ಲಿ ಜರ್ಮನ್ ವೈದ್ಯ ಸ್ಯಾಮ್ಯುಯೆಲ್ ಹಾನಿಮನ್ ಅಭಿವೃದ್ಧಿಪಡಿಸಿದರು. ಹೋಮಿಯೋಪತಿ ಮೂಲಭೂತ ತತ್ವವೆಂದರೆ ದೇಹವು ತನ್ನನ್ನು ತನು ಗುಣಪಡಿಸುವ ಸಾಮಾಥ್ಯವನ್ನು ಹೊಂದಿದೆ. ಹೋಮಿಯೋಪತಿ ಪರಿಹಾರಗಳನ್ನು ಸಸ್ಯಗಳು, ಖನಿಜಗಳು ಮತ್ತು ಪ್ರಾಣಿ ಉತ್ಪನ್ನಗಳಂತಹ ನೈಸರ್ಗಿಕ ವಸ್ತುಗಳಿಂದ ತಯಾರಿಸಲಾಗುತ್ತದೆ. ಹೋಮಿಯೋಪತಿ ವೈದ್ಯರು ದೈಹಿಕ ರೋಗಲಕ್ಷಣಗಳನ್ನು ಮಾತ್ರವಲ್ಲದೆ ವ್ಯಕ್ತಿಯ ಮಾನಸಿಕ, ಭಾವನಾತ್ನಕ ಮತ್ತು ಆಧ್ಯಾತ್ಮಿಕ ಅಂಶಗಳನ್ನು ಸಹ ಗಣನೆಗೆ ತೆಗೆದುಕೊಂಡು ಚಿಕಿತ್ಸೆ ನೀಡಲಾಗುತ್ತದೆ ಎಂದು ಹೇಳಿದರು. ಕಾರ್ಯಕ್ರಮದಲ್ಲಿ ನಗರ ಪತ್ರಕರ್ತರ ಸಂಘದ ಅಧ್ಯಕ್ಷ ಎಸ್.ಮಹೇಶ್, ಕೊಡಗು ಜಿಲ್ಲಾ ಪತ್ರಕರ್ತರ ಸಂಘದ ಉಪಾಧ್ಯಕ್ಷ ತೇಲಪಂಡ ಕವನ್ ಕಾರ್ಯಪ್ಪ ಇದ್ದರು. ಪತ್ರಕರ್ತರಿಗೆ ಯೋಗ ತರಬೇತಿ ನೀಡಲಾಯಿತು. ನಂತರ ಆರೋಗ್ಯ ತಪಾಸಣೆ ನಡೆಸಲಾಯಿತು.











