
ಮಡಿಕೇರಿ NEWS DESK ಜು.4 : ಸೋಮವಾರಪೇಟೆ ಪಟ್ಟಣದ ನಿವಾಸಿ ಬೆಂಗಳೂರಿನಲ್ಲಿ ಉದ್ಯೋಗದಲ್ಲಿರುವ ಅಹಲ್ಯ ಅಪ್ಪಚ್ಚು ಅವರು ಮಡಿಕೇರಿ ಕ್ಷೇತ್ರದ ಶಾಸಕ ಡಾ.ಮಂತರ್ ಗೌಡ ಅವರ ಕಲಾಕೃತಿಯನ್ನು ರೇಖಾಚಿತ್ರದ ಮೂಲಕ ಆಕರ್ಷಕವಾಗಿ ರಚಿಸಿದ್ದಾರೆ. ಅಹಲ್ಯ ಅಪ್ಪಚ್ಚು ಅವರ ಪ್ರತಿಭೆಯ ಕುರಿತು ಶಾಸಕರು ಹೀಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ >>> *ಸೋಮವಾರಪೇಟೆ ಪಟ್ಟಣದ ನಿವಾಸಿ ಬೆಂಗಳೂರಿನಲ್ಲಿ ಉದ್ಯೋಗದಲ್ಲಿರುವ ಅಹಲ್ಯ ಅಪ್ಪಚ್ಚು ರವರು ನನ್ನ ಕಲಾಕೃತಿಯನ್ನು ಬಹಳ ಅತ್ಯುತ್ತಮವಾಗಿ ರಚನೆ ಮಾಡಿದ್ದಾರೆ.ಈ ಕಲಾಕೃತಿಯು ನನ್ನನ್ನು ಆಕರ್ಷಿಸಿದ್ದು ಪ್ರತಿಭಾವಂತೆ ಅಹಲ್ಯ ಅಪ್ಪಚ್ಚು ರವರಿಗೆ ಧನ್ಯವಾದಗಳನ್ನು ಅರ್ಪಿಸುತ್ತಾ ಈ ಸಂದರ್ಭದಲ್ಲಿ ಶುಭ ಹಾರೈಸುತ್ತೇನೆ. (ಶಾಸಕ ಡಾ.ಮಂತರ್ ಗೌಡ )*











