
ಸುಂಟಿಕೊಪ್ಪ ಆ.30 NEWS DESK : ಐಗೂರಿನ ಏಕದಂತ ಗೆಳೆಯರ ಬಳಗದ ವತಿಯಿಂದ ಗೌರಿ-ಗಣೇಶೋತ್ಸವವನ್ನು ಸಂಭ್ರಮದಿಂದ ಆಚರಿಸಲಾಯಿತು. ಶ್ರೀ ಗೌರಿ ಗಣೇಶ ಮೂರ್ತಿಗೆ ಮೂರು ದಿನಗಳ ಕಾಲ ಪೂಜೆ ಸಲ್ಲಿಸಲಾಯಿತು. ನಂತರ ಉತ್ಸವ ಸಮಿತಿ ವತಿಯಿಂದ ಭವ್ಯ ಮಂಟಪದಲ್ಲಿ ಗಣಪತಿ ಮೂರ್ತಿಯನ್ನು ಕುಳ್ಳಿರಿಸಿ ವಾದ್ಯಗೋಷ್ಠಿಯೊಂದಿಗೆ ಮೆರವಣಿಗೆಯಲ್ಲಿ ಸಾಗಿ ಚೋರನ ಹೊಳೆಯಲ್ಲಿ ಗಣಪತಿ ಮೂರ್ತಿಗಳನ್ನು ವಿಸರ್ಜಿಸಲಾಯಿತು. ಈ ಸಂದರ್ಭ ಏಕದಂತ ಗೆಳೆಯರ ಬಳಗದ ಸ್ಥಾಪಕ ಅಧ್ಯಕ್ಷ ಯತೀಶ್ ಶೆಟ್ಟಿ, ಉತ್ಸವ ಸಮಿತಿ ಅಧ್ಯಕ್ಷರಾದ ಅನುಕುಮಾರ್, ಕಾರ್ಯದರ್ಶಿ ಯಶೀತ್, ಖಜಾಂಚಿ ನರಸಿಂಹ, ಪದಾಧಿಕಾರಿಗಳಾದ ಬಿ.ಅಭಿಜಿತ್, ಬಿ.ದರ್ಶಿತ್, ಮಣಿಕಂಠ, ಸಲಹೆಗಾರರಾದ ಮದನ್, ಆನಂದ,ವಿಶ್ವ ಪೂಜಾರಿ ಹಾಗೂ ನೂರಾರು ಭಕ್ತಾಧಿಗಳು ಉಪಸ್ಥಿತರಿದ್ದರು.









