
ಮಡಿಕೇರಿ ಸೆ.3 NEWS DESK : ಅಮ್ಮತಿಯಲ್ಲಿ ನಡೆದ ವಲಯ ಮಟ್ಟದ ಪ್ರಾಥಮಿಕ ವಿಭಾಗದ ಬಾಲಕರ ಖೋ ಖೋ ಪಂದ್ಯಾವಳಿಯಲ್ಲಿ ವಿರಾಜಪೇಟೆಯ ಕಾವೇರಿ ಶಾಲೆಯ ತಂಡ ರನ್ನರ್ಸ್ ಟ್ರೋಫಿ ತಮ್ಮದಾಗಿಸಿಕೊಂಡಿದೆ. ತಂಡದಲ್ಲಿ ಶಾಲೆಯ ವಿದ್ಯಾರ್ಥಿಗಳಾದ ಪಿ.ಜಿ.ಹಿತಾರ್ಥ್, ಟಿ.ಎಫ್.ಮಹಮ್ಮದ್ ಡಿಯಾನ್, ಕೆ.ಎನ್.ನಜ್ವಾನ್ ಇಸ್ಮಾಯಿಲ್, ಬಿ.ಎಲ್.ಯಶ್ವಿನ್ ಸುಬ್ಬಯ್ಯ, ಅಮ್ಮಂಡ ತನಿಷ್ ನಾಣಯ್ಯ, ಬಿ.ಜಿ.ರೋಷನ್, ಯು. ಐಚಂಡ ತಲೀ ಶ್ ತಿಮ್ಮಣ್ಣ, ದಿಲನ್ ಗೌಡ, ಎ.ಹೆಚ್.ಅಚ್ಚಪಂಡ ಜಗತ್, ಪಿ.ಪುಗ್ಗೇರ ಗದಿನ್ ಬೋಪ್ಪಣ್ಣ, ಕೆ.ಎನ್.ಮೊಹಮ್ಮದ್ ಜಿಧಾನ್, ಪಿ.ಜೆ.ಹೃದಯ್ ಭಾಗವಹಿಸಿದ್ದರು. ತಂಡಕ್ಕೆ ದೈಹಿಕ ಶಿಕ್ಷಕರುಗಳಾದ ಮೋನಿಕ ಹಾಗೂ ಲಾವಣ್ಯ ಮಾರ್ಗದರ್ಶನ ನೀಡಿದ್ದಾರೆ. ಇವರ ಸಾಧನೆಗೆ ಶಾಲಾ ಆಡಳಿತ ಮಂಡಳಿಯವರು, ಮುಖ್ಯ ಶಿಕ್ಷಕಿ, ಸಂಯೋಜಕಿ ಬೋಧಕ ಬೋಧಕೇತರ ಸಿಬ್ಬಂದಿ ವರ್ಗದವರು ಹಾಗೂ ಪೋಷಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.








