
ಮಡಿಕೇರಿ NEWS DESK ನ.18 : ಮುಂದಿನ 5 ವರ್ಷಗಳ ಅವಧಿಗೆ ಕೊಡಗು ಏಲಕ್ಕಿ ಮಾರಾಟ ಸಹಕಾರ ಸಂಘದ ಆಡಳಿತ ಮಂಡಳಿಗೆ ನಡೆದ ಚುನಾವಣೆಯ ಫಲಿತಾಂಶ ಪ್ರಕಟಗೊಂಡಿದೆ. ಸಾಮಾನ್ಯ ಕ್ಷೇತ್ರದಿಂದ ಮಡಿಕೇರಿ ತಾಲ್ಲೂಕಿನಿಂದ ಸೂದನ ಎಸ್.ಈರಪ್ಪ, ಕೆ.ಆರ್.ಅನಂತಕುಮಾರ್ ತಳೂರು ಕೆ.ದಿನೇಶ್ ಕುಮಾರ್, ಕುಂಬಗೌಡನ ವಿನೋದ್ ಕುಮಾರ್, ಮಂದ್ರೀರ ಮೋಹನ್ ದಾಸ್, ವಿರಾಜಪೇಟೆ ತಾಲ್ಲೂಕಿನಿಂದ ಮಾಚೇಟಿರ ಕೆ.ಕುಟ್ಟಪ್ಪ, ಪೆಮ್ಮಂಡ ಟಿ.ಬೋಪಣ್ಣ, ಎಸ್.ಎಸ್.ಸುರೇಶ್, ಸೋಮವಾರಪೇಟೆ ತಾಲ್ಲೂಕಿನಿಂದ ಡಿ.ಸಿ.ರಾಜು ಸಿ.ಪಿ.ವಿಜಯಕುಮಾರ್, ಎ.ಜೆ.ಕೃಷ್ಣಪ್ಪ, ಮಹಿಳಾ ಮೀಸಲು ಕ್ಷೇತ್ರದಿಂದ ಕೆ.ಈ.ಸೌಮ್ಯ, ಬಿ.ಬಿ.ಪುಷ್ಪಾವತಿ, ಪರಿಶಿಷ್ಟ ಪಂಗಡ ಮೀಸಲು ಕ್ಷೇತ್ರದಿಂದ ಕುಡಿಯರ ಕೆ.ಮುತ್ತಣ್ಣ, ಪರಿಶಿಷ್ಟ ಜಾತಿ ಮೀಸಲು ಕ್ಷೇತ್ರದಿಂದ ಎಸ್.ಸಿ.ಸತೀಶ್, ಹಿಂದುಳಿದ ಪ್ರವರ್ಗ ‘ಎ’ ಯಿಂದ ವಿ.ಹರೀಶ್ ಹಾಗೂ ಹಿಂದುಳಿದ ಪ್ರವರ್ಗ ‘ಬಿ’ ಯಿಂದ ಪೇರಿಯನ ಉದಯ ಕುಮಾರ್ ಆಯ್ಕೆಯಾಗಿದ್ದಾರೆ.











