ಮಡಿಕೇರಿ ನ.27 NEWS DESK : ಯುವಪೀಳಿಗೆಯಲ್ಲಿ ಹೆಚ್ಚಾಗುತ್ತಿರುವ ಮಾದಕ ವ್ಯಸನಗಳ ವಿರುದ್ದ ಪೋಷಕರು ಮತ್ತು ಸಮಾಜವನ್ನು ಜಾಗ್ರತಿಗೊಳಿಸುವ ನಿಟ್ಟಿನಲ್ಲಿ ರೋಟರಿ ಸದಸ್ಯರು ಕಾಯ೯ಕ್ರಮಗಳನ್ನು ಆಯೋಜಿಸಬೇಕೆಂದು ರೋಟರಿ ಜಿಲ್ಲೆ 3181 ನ ಗವನ೯ರ್ ಪಿ.ಕೆ.ರಾಮಕೃಷ್ಣ ಕರೆ ನೀಡಿದ್ದಾರೆ. ನಗರದ ರೋಟರಿ ಸಭಾಂಗಣದಲ್ಲಿ ಆಯೋಜಿತ ರೋಟರಿ ವುಡ್ಸ್ ಗೆ ಅಧಿಕೃತ ಭೇಟಿ ಸಮಾರಂಭದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು. ಸಾಂಸ್ಕೃತಿಕ ನಗರಿ ಎಂದೇ ಪ್ರಸಿದ್ದವಾಗಿರುವ ಮೈಸೂರಿನಲ್ಲಿಯೇ 400 ಕೋಟಿ ಮೌಲ್ಯದ ಮಾದಕ ಪದಾಥ೯ಗಳು ದೊರಕಿರುವುದು ಕಳವಳಕಾರಿ ಸಂಗತಿಯಾಗಿದೆ. ಶಾಲಾ, ಕಾಲೇಜುಗಳಲ್ಲಿ ಚಾಕೋಲೇಟ್ ಸೇರಿದಂತೆ ವಿವಿಧ ರೂಪಗಳಲ್ಲಿ ಮಾದಕ ದ್ರವ್ಯ ವಿತರಿಸುವ ಜಾಲ ಬೖಹದಾಕಾರದಲ್ಲಿ ಬೆಳೆಯುತ್ತಿದೆ. ಈ ನಿಟ್ಟಿನಲ್ಲಿ ಮಾದಕ ವ್ಯಸನದ ಅಪಾಯವನ್ನು ವಿದ್ಯಾಥಿ೯ಗಳು, ಪೋಷಕರಿಗೆ ತಿಳಿಸಿ, ಜಾಗೃತಿ ಉಂಟು ಮಾಡುವ ಕಾಯ೯ಕ್ರಮಗಳು ಹೆಚ್ಚಾಗಿ ಆಯೋಜಿತವಾಗಬೇಕೆಂದು ಅವರು ಕರೆ ನೀಡಿದರು. ಮನೆ ಮತ್ತು ಶಾಲೆಯಲ್ಲಿ ಮಕ್ಕಳ ವಿಚಿತ್ರ ಅಥವಾ ಅತಿರೇಕದ ವತ೯ನೆ ಕಂಡುಬಂದಾಗ ಸೂಕ್ಷ್ಯವಾಗಿ ಇಂಥ ವತ೯ನೆಗಳನ್ನು ಶಿಕ್ಷಕರು, ಪೋಷಕರು ಗಮನಿಸಿ ಎಚ್ಚತ್ತುಕೊಂಡು ಸೂಕ್ತ ಚಿಕಿತ್ಸೆ ನೀಡುವತ್ತ ಗಮನ ನೀಡಬೇಕೆಂದೂ ಅವರು ಸಲಹೆ ನೀಡಿದರು. ಮಕ್ಕಳಿಗೆ ಗೆಲುವಿನ ಪಾಠಕ್ಕಿಂತ ಮೊದಲು ಜೀವನದಲ್ಲಿ ಸೋತಾಗ ಹೇಗೆ ಅದರಿಂದ ಹೊರಬರಬೇಕೆಂಬ ಆತ್ಮಸ್ಥೆಯ೯ದ ಪಾಠವನ್ನು ಮಕ್ಕಳಲ್ಲಿ ತಿಳಿಸಬೇಕಾದ ಅನಿವಾಯ೯ತೆ ಇದೆ ಎಂದು ಹೇಳಿದ ರಾಮಕೃಷ್ಣ, ಈ ನಿಟ್ಟಿನಲ್ಲಿ ರೋಟರಿಯಂಥ ಸಮಾಜಸೇವಾ ಸಂಘಟನೆಗಳು ಕಾಯ೯ಕ್ರಮಗಳನ್ನು ರೂಪಸುವಂತೆ ಕರೆ ನೀಡಿದರು. ಸಾಮಾನ್ಯ ಜೀವನವನ್ನು ಬದುಕಲಾಗದ ಸ್ಥಿತಿಯಲ್ಲಿರುವ ವ್ಯಕ್ತಿಗಳನ್ನು ಗುರುತಿಸಿ, ಅಂಥವರಿಗೆ ದಾನಿಗಳ ಮೂಲಕ ನೆರವು ನೀಡಿ ಅಂಥವರ ಬದುಕನ್ನು ಬದಲಾಯಿಸುವ ನಿಟ್ಟಿನಲ್ಲಿ ರೋಟರಿ ಸದಸ್ಯರು ಹೊಸಚಿಂತನೆಯೊಂದಿಗೆ ಕಾಯೋ೯ನ್ಮುಖರಾಗುವಂತೆಯೂ ರಾಮಕೃಷ್ಣ ಸಲಹೆ ನೀಡಿದರು. ರೋಟರಿ ವಲಯ 6 ರ ಸಹಾಯಕ ಗವನ೯ರ್ ಧಿಲನ್ ಚಂಗಪ್ಪ ಮಾತನಾಡಿ, ರೋಟರಿ ಮಡಿಕೇರಿ ವುಡ್ಸ್ ಕೇವಲ 4 ವಷ೯ಗಳ ಸಂಸ್ಥೆಯಾಗಿದ್ದರೂ ಅತ್ಯಂತ ಸಕ್ರಿಯವಾಗಿ ಕಾಯ೯ನಿವ೯ಹಿಸುತ್ತಿದೆ. ಈ ವಷ೯ದಲ್ಲಿ 7 ಹೊಸ ಸದಸ್ಯರ ಸೇಪ೯ಡೆಯೊಂದಿಗೆ ಆರೋಗ್ಯ ಜಾಗೃತಿ ಸಂಬಂಧಿತ ಅನೇಕ ಕಾಯ೯ಕ್ರಮಗಳನ್ನು ಆಯೋಜಿಸಿರುವುದು ಶ್ಲಾಘನೀಯ ಎಂದರು. ರೋಟರಿ ವುಡ್ಸ್ ಅಧ್ಯಕ್ಷ ಕಿರಣ್ ಕುಂದರ್ ಮಾತನಾಡಿ, ಕಳೆದ ಐದು ತಿಂಗಳಲ್ಲಿ 30 ಕ್ಕೂ ಅಧಿಕ ಕಾಯ೯ಯೋಜನೆಗಳನ್ನು ಯಶಸ್ವಿಯಾಗಿ ಜಾರಿಗೊಳಿಸಲಾಗಿದೆ ಎಂದರು. ರೋಟರಿ ವಲಯ ಸೇನಾನಿ ಕೆ.ಸಿ. ಕಾಯ೯ಪ್ಪ, ರೋಟರಿ ವುಡ್ಸ್ ಕಾಯ೯ದಶಿ೯ ಪ್ರಮೀಳಾ ಶೆಟ್ಟಿ ವೇದಿಕೆಯಲ್ಲಿದ್ದರು. ಇದೇ ಸಂದಭ೯ ಚೇಂದ್ರಿಮಾಡ ವಿನು ಸಂಪಾದಕತ್ವದಲ್ಲಿ ಪ್ರಕಟಿತ ರೋಟರಿ ವುಡ್ಸ್ ನ ವಾತಾ೯ಸಂಚಿಕೆಯನ್ನು ಲೋಕಾಪ೯ಣೆ ಮಾಡಲಾಯಿತು. ರೋಟರಿ ಜಿಲ್ಲಾ ಸಮಿತಿಯ ಪ್ರಮುಖರಾದ ಬಿ.ಜಿ. ಅನಂತಶಯನ, ಅನಿಲ್ ಹೆಚ್.ಟಿ. ಡಾ.ಸಿ.ಆರ್.ಪ್ರಶಾಂತ್, ಎ.ಕೆ.ಜೀವನ್ , ರಂಗಸ್ವಾಮಿ, ಅನಿತಾ ಪೂವಯ್ಯ, ರೋಟರಿ ವುಡ್ಸ್ ಮಾಜಿ ಅಧ್ಯಕ್ಷರಾದ ಎಸ್.ಎಸ್. ಸಂಪತ್ ಕುಮಾರ್, ವಸಂತ್ ಕುಮಾರ್, ಹರೀಶ್ ಕಿಗ್ಗಾಲು ಸೇರಿದಂತೆ ಅನೇಕ ಸದಸ್ಯರು ಪಾಲ್ಗೊಂಡಿದ್ದರು.











