ವಿರಾಜಪೇಟೆ ಡಿ.16 NEWS DESK : ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ,ಸಿ ಟ್ರಸ್ಟ್, ವಿರಾಜಪೇಟೆ ತಾಲ್ಲೂಕು, ಸ್ವಸಹಾಯ ಸಂಘಗಳ ಒಕ್ಕೂಟಗಳ ಆಶ್ರಯದಲ್ಲಿ ಕೃಷಿ ಕಾರ್ಯಕ್ರಮದಡಿಯಲ್ಲಿ ಮಣ್ಣು ಪರೀಕ್ಷೆ ಮಾಹಿತಿ ಕಾರ್ಯಕ್ರಮ ಕಾನೂರು ವಲಯದ ನಿಟ್ಟೂರು ಕಾರ್ಯಕ್ಷೇತ್ರದ ಕಾವೇರಿ ಅವರ ಕೃಷಿ ತಾಕುವಿನಲ್ಲಿ ನಡೆಯಿತು. ಮಣ್ಣು ವಿಜ್ಞಾನದ ವಿಷಯ ತಜ್ಞರಾದ ಡಾ.ಮೋಹನ್ ಕುಮಾರ್ ಕೆ.ಟಿ ಅವರು ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿ, ಮಾತನಾಡಿ ಮಣ್ಣು ಪರೀಕ್ಷೆ ಮತ್ತು ಮಣ್ಣು ಆರೋಗ್ಯ ಕಾರ್ಡ್, ಸಸ್ಯ ಪೋಷಕಾಂಶಗಳು, ಪೋಷಕಾಂಶ ಅಸಮತೋಲನದ ಪರಿಣಾಮಗಳು, ಮಣ್ಣು ಪರೀಕ್ಷೆಯ ಮಹತ್ವ ಮಣ್ಣು ಮಾದರಿ ಸಂಗ್ರಹಿಸಲು ಗಮನಿಸಬೇಕಾದ ಅಂಶಗಳು, ಮಣ್ಣು ಮಾದರಿ ಸಂಗ್ರಹಣೆ ಪ್ರಕ್ರಿಯೆ ಹೇಗೆ ಮಾಡಬೇಕು ಮತ್ತು ಆಮ್ಲ ಮಣ್ಣು ಮತ್ತು ಅದರ ನಿರ್ವಹಣೆ ಬಗ್ಗೆ ಮಾಹಿತಿ ನೀಡಿದರು. ವಲಯದ ಮೇಲ್ವಿಚಾರಕರಾದ ಸುಜೀರ್, ಕೃಷಿ ಮೇಲ್ವಿಚಾರಕರಾದ ವಸಂತ್, ನಿಟ್ಟೂರು ಸೇವಾ ಪ್ರತಿನಿಧಿ ಸರೋಜ, ಬ್ರಹ್ಮಗಿರಿ ಸೇವಾ ಪ್ರತಿನಿಧಿ ಉದಯ್, ಪ್ರಗತಿಪರ ಕೃಷಿಕರು ನಿಟ್ಟೂರು ಒಕ್ಕೂಟದ ಪದಾಧಿಕಾರಿ ಕಾವೇರಿ ಸಂಘದ ಸದಸ್ಯರು ಇದ್ದರು.











