ಸುಂಟಿಕೊಪ್ಪ ಜ.1 NEWS DESK : ಪ್ರಸ್ತುತ ಸಮಾಜದಲ್ಲಿ ಧರ್ಮ ಶಿಕ್ಷಣದ ಕೊರತೆಯಿಂದ ಹಿಂದೂ ವಿರೋಧಿ ನೀತಿ ಮತ್ತು ಸಾಮಾಜಿಕ ದೌರ್ಜನ್ಯಗಳು ಹೆಚ್ಚುತ್ತಿದ್ದು, ಇದು ಹಿಂದೂ ಸಮಾಜಕ್ಕೆ ಅಪಾಯವನ್ನು ತಂದೊಡ್ಡಲಿದೆ ಎಂದು ಹಿಂದೂ ಜನಜಾಗೃತಿ ಸಮಿತಿಯ ಸಂಚಾಲಕ ಡಾ.ಪ್ರಣವ್ ಮಲ್ಯ ಹೇಳಿದ್ದಾರೆ. ಸುಂಟಿಕೊಪ್ಪದ ಗುಂಡುಗುಟ್ಟಿ ಶ್ರೀ ಮಂಜನಾಥಯ್ಯ ಮೀನಾಕ್ಷಮ್ಮ ಕಲ್ಯಾಣ ಮಂಟಪದಲ್ಲಿ ಹಿಂದೂ ಜನಜಾಗೃತಿ ಸಮಿತಿಯ ವತಿಯಿಂದ ಹಿಂದೂ ರಾಷ್ಟ್ರ ಜಾಗೃತಿ ಸಭೆಯಲ್ಲಿ ಹಿಂದೂ ರಾಷ್ಟ್ರದ ಅವಶ್ಯಕತೆ ಕುರಿತು ಮಾತನಾಡಿದ ಅವರು, ಜಾತ್ಯತೀತ ರಾಷ್ಟ್ರದ ಹೆಸರಿನಲ್ಲಿ ಅಲ್ಪಸಂಖ್ಯಾತರ ರಕ್ಷಣೆ ಎಂದು ಕೊಂಡು ಕಾನೂನು ಮತ್ತು ಸಂವಿಧಾನ ದುರುಪಯೋಗ ನಡೆಯುತ್ತಿದೆ ಎಂದು ಅವರು ಆರೋಪಿಸಿದರು. ಆಂಗ್ಲ ಶಿಕ್ಷಣ ಮತ್ತು ಅವರು ನೀಡಿದ ಭಾರತ ಸುಳ್ಳು ಇತಿಹಾಸದ ಹಿನ್ನಲೆಯಲ್ಲಿ ಸ್ವಾತಂತ್ರ್ಯ ಹೋರಾಟಗಾರರಾಗಲಿ ದೇಶಕ್ಕಾಗಿ ಪ್ರಾಣತ್ಯಾಗ ಮಾಡಿದವರಾಗಲಿ ನಮ್ಮ ಯುವಜನತೆಗೆ ಆದರ್ಶರಾಗಿ ಉಳಿದಿಲ್ಲ ಬದಲಿಗೆ ಸಿನಿಮಾ ನಟ ನಟಿಯರು ಸಾಮಾಜಿಕ ಜಾಲತಾಣಗಳಲ್ಲಿ ತೊಡಗಿಸಿಕೊಂಡಿರುವ ಮಂದಿಯನ್ನು ಅನುಕರಿಸುತ್ತಿದ್ದಾರೆ ಎಂದರು. ಸಂಚಾಲಕರಾದ ದೀಪಾತಿಲಕ್ ಮಾತನಾಡಿ, ನಾವು ಜನ್ಮದಿಂದ ಹಿಂದೂ ಆದರೆ ಸಾಲದು ನಮ್ಮ ಕೆಲಸಗಳಿಂದಲ್ಲೂ ಹಿಂದೂವಾಗಬೇಕು. ಭಾರತೀಯರು ಹಿಂದೂ ಎಂದರೆ ಸರ್ವರಿಗೂ ಒಳಿತನ್ನು ಬಯಸುವ ರ್ದುಗುಣಗಳನ್ನು ದೂರ ಮಾಡಿ ಸ್ವಾತ್ವಿಕತೆಯನ್ನು ಹೊಂದಿರುವವನ್ನು ಹಿಂದೂ ಎಂದು ವಿಶ್ಲೇಷಿಸಿದ ಅವರು ಯುವಜನಾಂಗ ಸನಾತನ ಧರ್ಮ, ಮೂಡನಂಬಿಕೆಗಳು, ಹಳೆಯ ವಿಚಾರಗಳು ಎಂದು ಆಸಕ್ತಿ ತೋರುತ್ತಿಲ್ಲ. ಆದರೆ ಹಿಂದೂ ಸಂಸ್ಕøತಿ ಆಚಾರ ವಿಚಾರಗಳು ಹುಟ್ಟಿನಿಂದ ಹಿಡಿದು ಸಾವಿನವರೆಗೆ ನಮ್ಮ ಆಚರಣೆಗಳು ವೈಜ್ಞಾನಿಕ ಹಿನ್ನಲೆಯನ್ನು ಹೊಂದಿವೆ ಎಂದು ವಿಜ್ಞಾನ ಸಾಬಿತುಪಡಿಸಿವೆ. ನಮ್ಮಲ್ಲಿ ಆಧುನಿಕ ಜೀವನ ಎಲ್ಲಾವನ್ನು ನೀಡಿದ್ದು ಆದರೆ ನಮ್ಮ ಹಿರಿಯರು ಬದುಕಿದ್ದ ಸಾರ್ಥಜೀವನವನ್ನು ನಡೆಸಲು ಸಾಧ್ಯವಾಗುತ್ತಿಲ್ಲ ಎಂದು ಅವರು ವಿಷಾಧಿಸಿದರು. ಮನೆಯಲ್ಲಿ ಮಕ್ಕಳಿಗೆ ಧರ್ಮ ಶಿಕ್ಷಣ, ಸಂಸ್ಕಾರ ನೀಡಿ ಬೆಳೆಸಬೇಕೆ ಹೊರತು ಮೊಬೈಲ್ಕೊಟ್ಟು ಊಟ ಮಾಡಿಸುವುದಲ್ಲ ಎಂದು ಮಾರ್ಮಿಕವಾಗಿ ನುಡಿದರು. ಮತ್ತೋರ್ವ ಸಂಚಾಲಕರಾದ ಕೊಲ್ಲಿರ ಧರ್ಮಜ ಮಾತನಾಡಿ, ನಮ್ಮಲ್ಲಿ ಸನಾತನ ಧರ್ಮ ನಮ್ಮ ಶಿಕ್ಷಣ ಸಾಮಾಜಿಕ ವ್ಯವಸ್ಥೆಯನ್ನು ತಿರುಚಲಾಗಿದೆ ನಾವಿನ್ನೂ ಪರಕೀಯರ ವಶದಲ್ಲಿದ್ದೇವೆಯೇ ಎಂಬುದನ್ನು ಆತ್ಮಾವಲೋಕಾನ ಮಾಡಿಕೊಳ್ಳಬೇಕಾಗಿದೆ ಎಂದು ಹೇಳಿದರು. ಕಾರ್ಯಕ್ರಮದ ಆರಂಭದಲ್ಲಿ ಹಿರಿಯ ಆರ್ಚಕ ಹಾ.ಮ.ಗಣೇಶ್ ಶರ್ಮ ಜ್ಯೋತಿ ಬೆಳಗಿಸಿ, ಶಂಖನಾದ ಮತ್ತು ರಾಮ ಮಂದಿರದ ವೇದಘೋಷ ನಡೆಸಿದರು. ಮಾಂಡವ್ಯ ವಿವೇಕ್ ಸ್ವಾಗತಿಸಿ, ನಿರೂಪಿಸಿದರು. ಹಿಂದೂ ಜನಜಾಗೃತಿ ರಮೇಶ್ ಕುಮಾರ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಹಿಂದೂ ಜನಜಾಗೃತಿ ಸಮಿತಿಯ ವಿಜಯಕುಮಾರ್ ಅವರು ಪ್ರತಿಜ್ಞಾ ವಿಧಿಯನ್ನು ಭೋದಿಸಿ ವಂದಿಸಿದರು.











