ದುಬೈ ಜ.2 NEWS DESK : ಹೆಮ್ಮೆಯ ದುಬೈ ಕನ್ನಡ ಸಂಘದ ವತಿಯಿಂದ ನಾಡ ಹಬ್ಬ ಮೈಸೂರು ದಸರಾ ಪ್ರಯುಕ್ತ ನಾಡ ಹಬ್ಬ ಅರಬ್ ನಾಡಿನಲ್ಲಿ ಎಂಬ ದ್ಯೇಯ ವಾಕ್ಯದೊಂದಿಗೆ ಕಳೆದ ಆರು ವರ್ಷಗಳಿಂದ ನಡೆಸಿಕೊಂಡು ಬರುತ್ತಿರುವ ದುಬೈ ದಸರಾ ಕ್ರೀಡೋತ್ಸವ “ಕರ್ನಾಟಕ ರಾಜ್ಯ ಮಟ್ಟದ ಕಾಲ್ಚೆಂಡು ಪಂದ್ಯಾವಳಿಯಲ್ಲಿ ಸಂಯುಕ್ತ ಅರಬ್ ಸಂಸ್ಥಾನದಲ್ಲಿ ನೆಲಸಿರುವ ಅನಿವಾಸಿ ಕೊಡಗಿನ ಯುವಕರು ಜಯ ಸಾಧಿಸಿ ಏಳನೇ ವರ್ಷದ ಚಾಂಪಿಯನ್ ಟ್ರೋಫಿಯನ್ನು ತಮ್ಮದಾಗಿಸಿಕೊಂಡಿದ್ದಾರೆ. ದುಬೈಯಲ್ಲಿರುವ ಎಥಿಸಲಾತ್ ಸ್ಪೋರ್ಟ್ಸ್ ಅಕಾಡೆಮಿಯಲ್ಲಿ ನಡೆದ ಫೈನಲ್ ಪಂದ್ಯದಲ್ಲಿ ಬಲಿಷ್ಠ ಉಳ್ಳಾಲ ಗಯ್ಸ್ ತಂಡವನ್ನು ಪೆನಾಲ್ಟಿ ಶೂಟಿನಲ್ಲಿ ಕೂರ್ಗ್ ಯುನೈಟೆಡ್ ಎಫ್ಸಿ ದುಬೈ ತಂಡವು ಮಣಿಸಿತ್ತು. ಕೊಡಗಿನ ತಂಡದಲ್ಲಿ ನಾಯಕನಾಗಿ ರಫೀಕಲಿ ಕುಂಜಿಲ ಅವರು ಮುನ್ನೆಡೆಸಿದರೆ, ಆಟಗಾರರಾಗಿ ಅಸಿಫ್ ಕುಂಜಿಲ, ಅಫ್ರೀದ್ ಹೊಸಕೋಟೆ, ಜಾಫರ್ ಕಡಂಗ, ಆರಿಫ್ ಕುಂಜಿಲ, ಅಫ್ರಿದ್ ಸುಂಟಿಕೊಪ್ಪ, ತಬಶೀರ್ ಕುಂಜಿಲ, ರಾಝಿಕ್ ಸುಂಟಿಕೊಪ್ಪ, ಶುಹೈಬ್ ಕೊಟ್ಟಮುಡಿ ಸ್ಪರ್ಧಿಸಿದ್ದರು. ಶಂಸಿ ಚಾಮಿಯಾಲ ಅವರು ಗೋಲ್ ಕೀಪರ್ ಆಗಿ ಕಾರ್ಯನಿರ್ವಹಿಸಿ ತಂಡವನ್ನು ಪ್ರಶಸ್ತಿ ಗೆಲ್ಲುವತ್ತ ತಮ್ಮ ಕೊಡುಗೆ ನೀಡಿದರು. ವಿಜೇತರಿಗೆ ಪ್ರತಿಷ್ಠಿತ ದುಬೈ ದಸರಾ ಚಾಂಪಿಯನ್ಸ್ ಟ್ರೋಫಿ, ಮೆಡಲ್ ಮತ್ತು ಪ್ರಮಾಣಪತ್ರ ವಿತರಿಸಲಾಯಿತು.











