Close Menu
News-Desk-KannadaNews-Desk-Kannada
  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಇತ್ತೀಚಿನ ಸುದ್ದಿಗಳು
  • ಉದ್ಯೋಗ ಭಾಗ್ಯ
  • ಮಹಾದೇಗುಲ
  • ರುಚಿ ನೋಡಿ
  • ಪೊಲೀಸ್ ನ್ಯೂಸ್
  • ರೋಗ ಮುಕ್ತ
  • ಪ್ರವಾಸಿತಾಣ
  • ಸಣ್ಣ ಕಥೆ
  • ವಿಡಿಯೋ ಗ್ಯಾಲರಿ
Facebook X (Twitter) Instagram
Breaking News
  • ಬಂಗಾರ ಕೊಳ್ಳುವವರಿಗೆ ಹಬ್ಬದ ಸಂಭ್ರಮ: ದಿಢೀರ್ ಇಳಿಕೆಯಾದ ಚಿನ್ನದ ದರ, ಎಷ್ಟಿದೆ ಗೊತ್ತಾ?
  • *ಜಾನುವಾರುಗಳ ಮೇಲೆ ದಾಳಿ ಮಾಡುತ್ತಿದ್ದ ಹುಲಿ ಸೆರೆ*
  • ನಾಳೆ ದೇಶಾದ್ಯಂತ ಕಾರ್ಮಿಕ ಸಂಘಟನೆಗಳ ಮುಷ್ಕರ: ಬಸ್, ಬ್ಯಾಂಕ್, ಶಾಲಾ-ಕಾಲೇಜುಗಳ ಸ್ಥಿತಿ ಏನು? ಹೊರಗಡೆ ಹೋಗುವ ಮುನ್ನ ಈ ಸುದ್ದಿ ಓದಿ!
  • *ಪಿ.ಕೃಷ್ಣೇಗೌಡ ನೇತೃತ್ವದ ಕರವೇ ಸ್ವಾಭಿಮಾನಿ ಬಣದ ಜಿಲ್ಲಾಧ್ಯಕ್ಷರಾಗಿ ಪಿ.ಕೆ.ಉದಯಕುಮಾರ್ ಆಯ್ಕೆ*
  • *ಆಹಾರ ಭದ್ರತಾ ಕಾಯ್ದೆ ಪರಿಣಾಮಕಾರಿಯಾಗಿ ಜಾರಿಗೊಳಿಸಿ: ಡಾ.ಎಚ್.ಕೃಷ್ಣ*
  • *ಅರಣ್ಯ ಹಕ್ಕು ಕಾಯ್ದೆ ಆದಿವಾಸಿಗಳಿಗೆ ತಲುಪಿಸಿ: ಗಿರಿಧರ*
  • *ಕಾರ್ಮಿಕ ವರ್ಗದ ತುರ್ತು ರೋಗಿಗಳಿಗೆ ಸರತಿ ಸಾಲು ಬೇಡ : ಜಿಲ್ಲಾ ಸರ್ಜನ್ ಗೆ ಮನವಿ ಸಲ್ಲಿಸಿದ ಎಸ್‌ಡಿಟಿಯು*
  • *ಮೈಸೂರಿನಲ್ಲಿ ಪೂರ್ಣ ಪ್ರಮಾಣದ ಪಾಸ್‌ಪೋರ್ಟ್‌ ಸೇವಾ ಕೇಂದ್ರ ಆರಂಭಕ್ಕೆ ಯದುವೀರ್‌ ಒತ್ತಡ ಕೇಂದ್ರ ವಿದೇಶಾಂಗ ಸಚಿವರಿಗೆ ಮನವಿ ಸಲ್ಲಿಸಿರುವ ಮೈಸೂರು-ಕೊಡಗು ಸಂಸದರು*
  • *ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ದಲಿತ ಸಂಘರ್ಷ ಸಮಿತಿಯಿಂದ ಮಡಿಕೇರಿಯಲ್ಲಿ ಪ್ರತಿಭಟನೆ*
  • *ಸಾಂತ್ವನ ಮಹಿಳಾ ಸಹಾಯವಾಣಿ : ಕೊಡಗಿನಲ್ಲಿ 5657 ಪ್ರಕರಣಗಳು ಇತ್ಯರ್ಥ*
News-Desk-KannadaNews-Desk-Kannada




  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಪೊಲೀಸ್ ನ್ಯೂಸ್
  • ಪ್ರವಾಸಿತಾಣ
  • ಮಹಾದೇಗುಲ
  • ರುಚಿ ನೋಡಿ
  • ಉದ್ಯೋಗ ಭಾಗ್ಯ
  • ರೋಗ ಮುಕ್ತ
  • ಸಣ್ಣ ಕಥೆ
News-Desk-KannadaNews-Desk-Kannada





Home » *ಪಯ್ಯವೂರು ಊಟು ಉತ್ಸವ : ಕೋಮರಥಚ್ಚನ್ ಕೊಡಗಿಗೆ ಭೇಟಿ*
ಇತ್ತೀಚಿನ ಸುದ್ದಿಗಳು

*ಪಯ್ಯವೂರು ಊಟು ಉತ್ಸವ : ಕೋಮರಥಚ್ಚನ್ ಕೊಡಗಿಗೆ ಭೇಟಿ*

January 31, 20262 Mins Read
Facebook WhatsApp Twitter Telegram Copy Link Threads Email LinkedIn Pinterest
Facebook Twitter WhatsApp Email Telegram Copy Link

ವಿರಾಜಪೇಟೆ ಜ.31 NEWS DESK : ಪಯ್ಯವೂರು ಕಿರಾಥಮೂರ್ತಿಯ ಪ್ರತಿನಿಧಿ ಎಂದು ಪರಿಗಣಿಸಲಾದ ಕೊಮರಥಚ್ಚನ್, ಕೊಡಗು ಮತ್ತು ಕೇರಳೀಯರು ಜಂಟಿಯಾಗಿ ಆಯೋಜಿಸುವ ಪಯ್ಯಾವೂರು ಶಿವ ಕ್ಷೇತ್ರದ ಊಟು ಉತ್ಸವಕ್ಕಾಗಿ ಕೊಡಗಿನ ಪ್ರಮುಖ ಪೂರ್ವಜರ ಮನೆಗಳಿಗೆ ಕೇರಳದ ಪಯ್ಯಾವೂರು ದೇವಾಲಯದಿಂದ ಕಾಲ್ನಡಿಗೆಯಲ್ಲಿ ಹೊರಟು ಕೊಡಗಿಗೆ ತಲುಪಿದ್ದಾರೆ. ಪಯ್ಯವೂರಪ್ಪನ ಊಟು ಉತ್ಸವದ ಉದ್ಘಾಟನಾ ಸಮಾರಂಭ “ಊಟುರೈಚ್ ಪೋಕಲ್” ಮಕರ ಮಾಸದ 15 ರಂದು ಪ್ರಾರಂಭವಾಯಿತು.  ಕೋಮರಥಚ್ಚನ್ ಮಕರಂ 15 ರಂದು ಅವರು “ಕಚಿಲ” ಎಂಬ ವಿಶೇಷ ಆಚರಣೆಗಳನ್ನು ಮಾಡಿದ ನಂತರ, “ಕಡುತಿಲ” ಎಂಬ ವಿಶೇಷ ಪವಿತ್ರ ಆಯುಧವನ್ನು ಸ್ವೀಕರಿಸಿ, ದೇವಾಲಯದಲ್ಲಿ ಬೆಳಗ್ಗಿನ ಜಾವ ಪೂಜೆ ಹಾಗೂ ಧಾರ್ಮಿಕ ವಿಧಿ ವಿಧಾನಗಳನ್ನು ನಡೆಸಿದ ಬಳಿಕ ವಿಶೇಷ ಛತ್ರಿಯನ್ನು ತೆಗೆದುಕೊಂಡು ಪೂರ್ವಕ್ಕೆ ಇರುವ ಕೊಡಗಿನ ಅರಣ್ಯದ ಕಡೆಗೆ ಹೆಜ್ಜೆ ಹಾಕಿದರು.
ಕೋಮರಥಚ್ಚನ್ ಕೇರಳದ ಗಡಿಯಲ್ಲಿರುವ ಕಾಂಜಿರಕೊಲ್ಲಿಯಲ್ಲಿರುವ ಉಡುಂಬಾ ನದಿಯನ್ನು ದಾಟಿ, ಕಾಡಿನ ಮೂಲಕ ಕಾಲ್ನಡಿಗೆಯಲ್ಲಿ ಕಡಿದಾದ ಪರ್ವತವನ್ನು ಹತ್ತಿ ಕೊಡಗಿಗೆ ಆಗಮಿಸಿದರು. ಮೊದಲ ದಿನ, ಅವರು ಸಂಜೆ ಚೆಯ್ಯಂಡಾಣೆಯ ಮುಂಡ್ಯೋಳಂಡ ಕುಟುಂಬದ ಮನೆಗೆ ತಲುಪಿ ಅಲ್ಲಿ ವಿಶ್ರಾಂತಿ ಪಡೆಯುತ್ತಾರೆ. ಬಳಿಕ ಸುತ್ತಮುತ್ತಲ ಗ್ರಾಮಗಳಲ್ಲಿರುವ ಪ್ರಮುಖ ಮನೆಗಳಿಗೆ ಭೇಟಿ ನೀಡುತ್ತಾರೆ. ಹಿಂದೆ, ಮಡಿಕೇರಿ ಖಜಾನೆಗೆ ಭೇಟಿ ನೀಡಲಾಗುತ್ತಿತ್ತು ಮತ್ತು “ಕಂಡಿಪ್ಪಣಂ” ಅನ್ನು ಸಹ ಪ್ರಸ್ತುತಪಡಿಸಲಾಗುತ್ತಿತ್ತು. ಕೊಡಗಿನ ರಾಜನ ಕಾಲದಲ್ಲಿ ಇದು ಒಂದು ಪದ್ಧತಿಯಾಗಿತ್ತು.
ಕೊಡಗಿನಲ್ಲಿ ಸ್ವಾಗತಿಸಿದ ತಕ್ಕ ಮುಖ್ಯಸ್ಥರು ಕೇರಳ ರಾಜ್ಯದ ಪಯ್ಯಾವೂರ್‍ನಿಂದ ಕೋಮರತಚ್ಚನ್ ಕೊಡಗಿಗೆ ಆಗಮಿಸಿದ ವೇಳೆ ಮುಂಡ್ಯೋಳಂಡ ತಕ್ಕ ಮುಖ್ಯಸ್ಥರು ಕೋಮರತಚ್ಚನ್‍ರನ್ನು ಆತ್ಮೀಯವಾಗಿ ಬರಮಾಡಿ ಕೊಂಡರು. ಮುಂಡ್ಯೋಳಂಡ ಕುಟುಂಬದ ಐನ್ ಮನೆಗೆ ಭೇಟಿ ನೀಡಿದ ಬಳಿಕ ಬೊವ್ವೇರಿಯಂಡ ಐನ್‍ಮನೆಗೆ ತೆರಳಿ ಅಲ್ಲಿಂದ ಕೊಕೇರಿ ಗ್ರಾಮದ ಚೇರುವಾಳಂಡ, ಬಿದ್ದಂಡ, ಮೂಡೇರ, ಮಚ್ಚಂಡ, ಪೆಮ್ಮಂಡ ಐನ್‍ಮನೆ ಹಾಗೂ ಕೊಕೇರಿ ಭಗವತಿ ದೇವಸ್ಥಾನಕ್ಕೆ ತೆರಳಿ ಅಲ್ಲಿಂದ ಕಿರುಂದಾಡು ಮಚ್ಚಂಡ ಐನ್‍ಮನೆ, ಕೈಕಾಡು ನಾಯಕಂಡ, ಪಾಡೇಯಂಡ, ಅಪ್ಪನೆರವಂಡ ಐನ್‍ಮನೆ, ಹೊದ್ದೂರು ತೋರೆರ ಐನ್‍ಮನೆ ಚೇರಂಬಾಣೆಯ ಬೈಮನ, ಬಲಮುರಿ ಭಗವತಿ ದೇವಸ್ಥಾನ, ಚೆಯ್ಯಂಡ, ಬೋಳ್ತಂಡ, ಬೆಲ್ಲತಂಡ, ಅರಪ್ಪಟ್ಟು ಗ್ರಾಮದ ಪಾಂಡಂಡ, ಕರಡ ಗ್ರಾಮದ ನಡಿಕೇರಿಯಂಡ, ಐತಿಚಂಡ, ಪಾಲಂಗಾಲ ಗ್ರಾಮದ ಕರೀನೇರವಂಡ, ನರಿಯಂದಡ ಗ್ರಾಮದ ಪೊಕ್ಕುಳಂಡ್ರ ಐನ್‍ಮನೆಗೆ ತೆರಳಿ ಹೊಂತಿರುಗಿ ಬೊವ್ವೇರಿಯಂಡ ಐನ್‍ಮನೆಯಲ್ಲಿ ಕೌದಿ ಪಣ ನೀಡಿ ನಂತರ ನಾಡ್‍ಮಂದ್ ಪೆಬ್ಬಟ್ಟಾಣೆಯಲ್ಲಿ ದೇವರು ಬಂದು ನಿಂತ ಸ್ಥಳದಲ್ಲಿ ಮುಂಡ್ಯೋಳಂಡ ಕುಟುಂಬಸ್ಥರಿಗೆ “ಕಂಡಿಪ್ಪಣಂ” ನೀಡಿ ನಾಡಿನ ಎಲ್ಲರು ಸೇರಿ, ನಂತರ ಚೇಲಾವರದ ಪಟ್ಟಚೆರುವಂಡ ಐನ್ ಮನೆಗೆ ತೆರಳಿ ಅಲ್ಲಿಂದ ಚೇಲಾವರ ಪೋನ್ನೊಲ ದೇವಸ್ಥಾನದಲ್ಲಿ ಉಳಿದು ಫೆಬ್ರವರಿ 9 ರಂದು ಬೆಳಿಗೆ ಕಾಲ್ನಡಿಗೆಯ ಮುಖಾಂತರ ಚೇಲಾವರದಿಂದ ಕಾಡುದಾರಿಯಲ್ಲಿ ಕೇರಳದ ಪಯ್ಯಾವೂರ್‍ಗೆ ತೆರಳಲಿದ್ದಾರೆ. ಉತ್ಸವದ ಸಮಥಿದಲ್ಲಿ ನಡೆಸಿರುವ ಮತ್ತೊಂದು ಆಚರಣೆಯೆಂದರೆ ಕಾಳವರವು, ಇದು ನೈವೇದ್ಯವಾಗಿ ಎತ್ತುಗಳ ಬೆನ್ನಿನ ಮೇಲೆ ಅಕ್ಕಿಯನ್ನು ಸಾಗಿಸುವ ಆಚರಣೆ (ಎತ್ತು ಪೋರಾಟ್). ಪಯ್ಯಾವೂರ್ ಊಟು ಉತ್ಸವಂ ಕಾಲವರವು (ಶಿವನಿಗೆ ಊಟು ಅಕ್ಕಿ (ಕಜ್ಜಾ)ಯನ್ನು ಕೊಡಗಿನಿಂದ ತೆಗೆದುಕೊಂಡು ಹೋಗಲಾಗುತ್ತದೆ. ಹಬ್ಬದ ವಿವಿಧ ದಿನಗಳಲ್ಲಿ ಭಕ್ತಾದಿಗಳಿಂದ ಊಟು ಕಜ್ಜಾ ಹೊಲದ ಕಾಣಿಕೆಯನ್ನು ಮಾಡಲಾಗುತ್ತದೆ.
ಊಟು ಹಬ್ಬದ ಭಾಗವಾಗಿ ನಡೆಯುವ ಮತ್ತೊಂದು ಆಚರಣೆಯೆಂದರೆ ಓಮನಕಳ್ಚ ಅರ್ಪಣೆ. ಇದರಲ್ಲಿ ಭಕ್ತರು ಬಾಳೆಹಣ್ಣುಗಳನ್ನು ದೇವಸ್ಥಾನಕ್ಕೆ ಕೊಂಡೊಯ್ಯತ್ತಾರೆ. ಈ ಆಚರಣೆಯನ್ನು ದೇವಾಲಯದ ಸಮೀಪದಲ್ಲಿರುವ ಗ್ರಾಮಸ್ಥರು ವಿವಿಧ ದಿನಗಳಲ್ಲಿ ಮಾಡುತ್ತಾರೆ. ಮುಖ್ಯ ಹಬ್ಬವನ್ನು 12 ನೇ ದಿನದಂದು ಆಚರಿಸಲಾಗುತ್ತದೆ. ಈ ದಿನದಂದು ದೇವಾಲಯದ ಸುತ್ತಮುತ್ತಲಿನ ವಿವಿಧ ಪ್ರದೇಶಗಳಿಂದ ನೆಯ್ಯಮೃತಂಗಾಗಿ ತುಪ್ಪವನ್ನು ತರಲಾಗುತ್ತದೆ. ಈ ತುಪ್ಪವನ್ನು ಮೂರ್ತಿಗೆ ಹಚ್ಚಲಾಗುತ್ತದೆ. ಈ ಅವಧಿಯಲ್ಲಿ ಅಪರೂಪದ ದೇವಾಲಯದಲ್ಲಿ ಸಾಂಪ್ರಾದಾಯಿಕ ಕಲೆಗಳಾದ ದುಡಿಕೊಟ್ಟ್ ಪಾಟ್ಟು, ತೆಯ್ಯಂ, ಪಾಡಿಪಾಟ್ಟು ಮತ್ತು ಕುಜಿಯಡುಪ್ಪಿಲ್ ನೃತ್ಯಂಗಳನ್ನು ಪ್ರದರ್ಶಿಸಲಾಗುತ್ತದೆ.

Share. Facebook Twitter Pinterest LinkedIn Tumblr Email WhatsApp
Previous Article*ಶ್ರದ್ಧಾಭಕ್ತಿಯಿಂದ ಜರುಗಿದ ಹೆಗ್ಗಳ ಎಡಮಕ್ಕಿ ಶ್ರೀ ಅಯ್ಯಪ್ಪ ಸ್ವಾಮಿ ದೇವಾಲಯದ ಬ್ರಹ್ಮ ಕಲಶಾಭಿಷೇಕ ಹಾಗೂ ವಾರ್ಷಿಕ ಮಹೋತ್ಸವ*
Next Article *ಕೊಡಗು ಜಿಲ್ಲಾ ಮರ ಕೆಲಸ ಹಾಗೂ ತಲೆ ಹೊರೆ ಸಂಘದ ಅಧ್ಯಕ್ಷರಾಗಿ ಆರ್.ಕೆ.ಹರೀಶ್, ಪ್ರಧಾನ ಕಾರ್ಯದರ್ಶಿಯಾಗಿ ಎಂ.ಡಿ.ಕುಟ್ಟಪ್ಪ ಪುನರ್ ಆಯ್ಕೆ*

Related Posts

ಬಂಗಾರ ಕೊಳ್ಳುವವರಿಗೆ ಹಬ್ಬದ ಸಂಭ್ರಮ: ದಿಢೀರ್ ಇಳಿಕೆಯಾದ ಚಿನ್ನದ ದರ, ಎಷ್ಟಿದೆ ಗೊತ್ತಾ?

February 11, 2026

*ಜಾನುವಾರುಗಳ ಮೇಲೆ ದಾಳಿ ಮಾಡುತ್ತಿದ್ದ ಹುಲಿ ಸೆರೆ*

February 11, 2026

ನಾಳೆ ದೇಶಾದ್ಯಂತ ಕಾರ್ಮಿಕ ಸಂಘಟನೆಗಳ ಮುಷ್ಕರ: ಬಸ್, ಬ್ಯಾಂಕ್, ಶಾಲಾ-ಕಾಲೇಜುಗಳ ಸ್ಥಿತಿ ಏನು? ಹೊರಗಡೆ ಹೋಗುವ ಮುನ್ನ ಈ ಸುದ್ದಿ ಓದಿ!

February 11, 2026

*ಜಾನುವಾರುಗಳ ಮೇಲೆ ದಾಳಿ ಮಾಡುತ್ತಿದ್ದ ಹುಲಿ ಸೆರೆ*

February 11, 2026

ಮಡಿಕೇರಿ, NEWS DESK ಫೆ.11 : ದಕ್ಷಿಣ ಕೊಡಗಿನ ಪೊನ್ನಂಪೇಟೆ ತಾಲ್ಲೂಕಿನ ವಿವಿಧ ಗ್ರಾಮಗಳಲ್ಲಿ ನಿರಂತರವಾಗಿ ಜಾನುವಾರುಗಳ ಮೇಲೆ ದಾಳಿ…

ನಾಳೆ ದೇಶಾದ್ಯಂತ ಕಾರ್ಮಿಕ ಸಂಘಟನೆಗಳ ಮುಷ್ಕರ: ಬಸ್, ಬ್ಯಾಂಕ್, ಶಾಲಾ-ಕಾಲೇಜುಗಳ ಸ್ಥಿತಿ ಏನು? ಹೊರಗಡೆ ಹೋಗುವ ಮುನ್ನ ಈ ಸುದ್ದಿ ಓದಿ!

February 11, 2026

*ಪಿ.ಕೃಷ್ಣೇಗೌಡ ನೇತೃತ್ವದ ಕರವೇ ಸ್ವಾಭಿಮಾನಿ ಬಣದ ಜಿಲ್ಲಾಧ್ಯಕ್ಷರಾಗಿ ಪಿ.ಕೆ.ಉದಯಕುಮಾರ್ ಆಯ್ಕೆ*

February 11, 2026

*ಆಹಾರ ಭದ್ರತಾ ಕಾಯ್ದೆ ಪರಿಣಾಮಕಾರಿಯಾಗಿ ಜಾರಿಗೊಳಿಸಿ: ಡಾ.ಎಚ್.ಕೃಷ್ಣ*

February 11, 2026

*ಅರಣ್ಯ ಹಕ್ಕು ಕಾಯ್ದೆ ಆದಿವಾಸಿಗಳಿಗೆ ತಲುಪಿಸಿ: ಗಿರಿಧರ*

February 11, 2026

*ಕಾರ್ಮಿಕ ವರ್ಗದ ತುರ್ತು ರೋಗಿಗಳಿಗೆ ಸರತಿ ಸಾಲು ಬೇಡ : ಜಿಲ್ಲಾ ಸರ್ಜನ್ ಗೆ ಮನವಿ ಸಲ್ಲಿಸಿದ ಎಸ್‌ಡಿಟಿಯು*

February 11, 2026

*ಮೈಸೂರಿನಲ್ಲಿ ಪೂರ್ಣ ಪ್ರಮಾಣದ ಪಾಸ್‌ಪೋರ್ಟ್‌ ಸೇವಾ ಕೇಂದ್ರ ಆರಂಭಕ್ಕೆ ಯದುವೀರ್‌ ಒತ್ತಡ ಕೇಂದ್ರ ವಿದೇಶಾಂಗ ಸಚಿವರಿಗೆ ಮನವಿ ಸಲ್ಲಿಸಿರುವ ಮೈಸೂರು-ಕೊಡಗು ಸಂಸದರು*

February 11, 2026

*ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ದಲಿತ ಸಂಘರ್ಷ ಸಮಿತಿಯಿಂದ ಮಡಿಕೇರಿಯಲ್ಲಿ ಪ್ರತಿಭಟನೆ*

February 11, 2026

*ಸಾಂತ್ವನ ಮಹಿಳಾ ಸಹಾಯವಾಣಿ : ಕೊಡಗಿನಲ್ಲಿ 5657 ಪ್ರಕರಣಗಳು ಇತ್ಯರ್ಥ*

February 11, 2026

*ಕಾಯಕ ಶರಣರ ಜಯಂತಿ ಸಮ ಸಮಾಜ ನಿರ್ಮಾಣದಲ್ಲಿ ಕಾಯಕ ಶರಣರ ಕೊಡುಗೆ ಅಪಾರ: ಹೇಮಲತಾ*

February 10, 2026
  • Facebook
  • Twitter
  • Instagram
  • WhatsApp
  • YouTube
Quick Links
  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಪೊಲೀಸ್ ನ್ಯೂಸ್
  • ಪ್ರವಾಸಿತಾಣ
Quick Links
  • ಮಹಾದೇಗುಲ
  • ರುಚಿ ನೋಡಿ
  • ರೋಗ ಮುಕ್ತ
  • ಉದ್ಯೋಗ ಭಾಗ್ಯ
  • ಸಣ್ಣ ಕಥೆ
  • ವಿಡಿಯೋ ಗ್ಯಾಲರಿ
Contact

www.newsdeskkannada.com
News Desk,
Industrial Area,
Pathrika Bhavan Building,
Madikeri, Kodagu, Karnataka.
Phone: 94481 00724
              76766 24467
Email: newsdeskkodagu@gmail.com

© 2026 All Rights Reserved. Designed by Blueline Computers.
  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಪೊಲೀಸ್ ನ್ಯೂಸ್
  • ಪ್ರವಾಸಿತಾಣ

Type above and press Enter to search. Press Esc to cancel.