
ಮಡಿಕೇರಿ ಮೇ 16 NEWS DESK : ಕೊಡಗು ಜಿಲ್ಲಾ ಪೊಲೀಸ್ ಇಲಾಖೆ, ಅಗ್ನಿ ಶಾಮಕ ದಳ, ಗೃಹ ರಕ್ಷಕ ದಳ, ಸ್ಥಳೀಯಾಡಳಿತಗಳು ಜಂಟಿಯಾಗಿ ಮಳೆಗಾಲ ಮುನ್ನೆಚ್ಚರಿಕೆ ಕುರಿತು ಪ್ರಾತ್ಯಕ್ಷಿಕೆ ನಡೆಸಿದವು. ಹಾರಂಗಿ ಹಿನ್ನೀರಿನಲ್ಲಿ ಬೋಟ್ ಹಾಗೂ ಲೈಫ್ ಜಾಕೆಟ್ ಬಳಸಿ ಪ್ರವಾಹ ಸಂದರ್ಭ ಜನ,ಜಾನುವಾರು, ಅಮೂಲ್ಯ ಆಸ್ತಿ ರಕ್ಷಣೆ ಕುರಿತಂತೆ ಪೊಲೀಸ್, ಅಗ್ನಿ ಶಾಮಕ ದಳ ಸಿಬ್ಬಂದಿಗಳು ಪೂರ್ವ ತರಬೇತಿ ಪಡೆದರು. 3 ಡಿವೈಎಸ್ ಪಿ, 3 ಸಿಪಿಐ, 15 ಪಿಎಸ್ ಐ, 15 ಅಗ್ನಿ ಶಾಮಕ ದಳ, 7 ಗೃಹ ರಕ್ಷಕ ದಳ ಹಾಗೂ 41 ಪೊಲೀಸ್ ಸಿಬ್ಬಂದಿಗಳು ಪಾಲ್ಗೊಂಡಿದ್ದರು ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಬಿಂದುಮಣಿ ಮಾಹಿತಿ ನೀಡಿದ್ದಾರೆ.









