ಮಡಿಕೇರಿ, NEWS DESK ಆ.21 – ನಮ್ಮೆಲ್ಲರ ಜೀವನ ಪರಿಪೂಣ೯ ಎನಿಸಿಬೇಕಾದರೆ ಹಿರಿಯರ ಮಾಗ೯ದಶ೯ನ ಅತ್ಯಗತ್ಯ ಎಂದು ಮಡಿಕೇರಿ ಕೊಡವ ಸಮಾಜದ ಅಧ್ಯಕ್ಷರಾದ ಮಂಡುವಂಡ ಮುತ್ತಪ್ಪ ಹೇಳಿದ್ದಾರೆ.
ನಗರದ ಜನರಲ್ ತಿಮ್ಮಯ್ಯ ಪಬ್ಲಿಕ್ ಶಾಲೆಯಲ್ಲಿ ರೋಟರಿ ಮಿಸ್ಟಿ ಹಿಲ್ಸ್ ನಿಂದ ಆಯೋಜಿತ ಹಿರಿಯ ಜೀವಿಗಳಿಗೆ ನಮನ ಕಾಯ೯ಕ್ರಮದಲ್ಲಿಗೌರವ ಸನ್ಮಾನ ಸ್ವೀಕರಿಸಿ ಅವರು ಮಾತನಾಡಿದರು.
ಜೀವನದಲ್ಲಿ ನಾವು ಏನನ್ನು ಸಾಧಿಸುತೇವೋ ಅದು ಬಹಳ ಮುಖ್ಯವಾಗುತ್ತದೆ. ನಮ್ಮ ಜೀವನ ಪರಿಪೂರ್ಣವಾಗಬೇಕಾದರೆ ಹಿರಿಯರ ಮಾರ್ಗದರ್ಶನ ಅಗತ್ಯ , ಮಕ್ಕಳು ತಮ್ಮ ಸಾಧನೆಯನ್ನು ತೋರಬೇಕಾದರೆ ಮುಂದಿನ ಜೀವನಕ್ಕೆ ಉಪಯೋಗವಾಗುವ ವಿಷಯಗಳನ್ನು ಅರಿತುಕೊಂಡು ಶಿಕ್ಷಕರಿಗೆ, ಹಿರಿಯರಿಗೆ ಯಾವತ್ತೂ ಗೌರವವನ್ನು ಕೊಡಿ ಎಂದು ಎಂ.ಪಿ. ಮುತ್ತಪ್ಪ ಕರೆ ನೀಡಿದರು.
ಸನ್ಮಾನಿತರಾದ ಡಾ. ಕೆ.ಬಿ. ಸೂರ್ಯ ಕುಮಾರ್ ಮಾತನಾಡಿ, ಹಿಂದಿನ ಕಾಲ ಮತ್ತು ಈಗಿನ ಕಾಲದ ವ್ಯತ್ಯಾಸವು ಪ್ರಕೃತಿ ನಿಯಮದಂತೆ ಬದಲಾಗಿದೆ, ಮನೆಯಲ್ಲಿ ಇರುವ ಹಿರಿಯರು ಬದುಕಿರುವ ಜ್ಞಾನಬಂಡಾರದಂತೆ. ಅಮೂಲ್ಯ ಕಥೆ ಪುಸ್ತಕಗಳು ಎಂದರು. ಇಂತಹ ಹಿರಿಯ ಜೀವಿಗಳಿಗೆ ನಿಮ್ಮ ಪ್ರೀತಿ ಮಮತೆ ಅವಶ್ಯಕವಾಗಿ ನೀಡಿ ಅವರೊಂದಿಗೆ ಕೈಹಿಡಿದು ಹೆಜ್ಜೆ ಹಾಕಿ, ಆಗ ಅವರು ಪಡುವ ಆನಂದಕ್ಕೆ ಅಂತ್ಯವೇ ಇಲ್ಲ ಎಂದೂ ಅವರು ಹೇಳಿದರು.

.
ಸನ್ಮಾನಿತರಾದ ಗೌರಮ್ಮ ಮಾದಮ್ಮಯ್ಯ ಮಾತನಾಡಿ, ಹಿರಿಯ ನಾಗರಿಕರ ದಿನದ ಮಹತ್ವವನ್ನು ತಿಳಿಸಿ, ಹಿರಿಯರ ಏಕಾಂಗಿತನವನ್ನು ಹೋಗಲಾಡಿಸುವುದು ಈ ಕಾರ್ಯಕ್ರಮದ ಮುಖ್ಯ ಉದ್ದೇಶ. ಹಿರಿಯರಿಗೆ ಪ್ರೀತಿ ಸುರಕ್ಷತೆ ಮತ್ತು ಸ್ಪಂದನೆ ಅತಿ ಮುಖ್ಯ, ಅವುಗಳನ್ನು ನೀಡಿ ಸಂತೋಷದಿಂದ ಇರುವಂತೆ ನೋಡಿಕೊಳ್ಳುವುದು ನಮ್ಮ ಕರ್ತವ್ಯ ಎಂದರು.
ರೋಟರಿ ಮಿಸ್ಟಿ ಹಿಲ್ಸ್ ಕಾಯ೯ದಶಿ೯ ಡಾ.ಚೇತನ್ ಜಿ.ಡಿ. ಮಾತನಾಡಿ, ಹಿರಿಯರ ವಿಚಾರ ಹಾಗೂ ಸರಳತೆ ಮತ್ತು ಜ್ಞಾನ ಬದುಕಿನ ಪಾಠಗಳು, ಹಿರಿಯರಿಂದ ನಮಗೆ ತಿಳಿದುಕೊಳ್ಳಬೇಕಾದ ವಿಷಯವನ್ನು ಅರಿತು ಅವುಗಳನ್ನು ಸಮಪ೯ಕವಾಗಿ ಬಳಸಿಕೊಳ್ಳಬೇಕು. ಅವರಿಗೆ ಎಲ್ಲಾ ರೀತಿಯ ಸೌಲಭ್ಯಗಳು ಸಮಾಜದಲ್ಲಿ ಸಿಗುವಂತಾಗಬೇಕು ಎಂದರು.
ವಿದ್ಯಾಥಿ೯ನಿ ಭೂಮಿಕ ಎಸ್ ಆರ್ ಮಾತನಾಡಿ, ಹಿರಿಯರ ನೆರಳಿನಲ್ಲಿ ಬೆಳೆದು ಬಂದ ಜೀವನಕ್ಕೆ ಹಿರಿಯರು ನೀಡುವ ಅನುಭವದ ಬೆಳಕು ಎಂದಿಗೂ ಕಡಿಮೆಯಾಗುವುದಿಲ್ಲ ಹಿರಿಯರು ಕುಟುಂಬದ ಬೇರುಗಳು ಸಂಸ್ಕೃತಿಯ ಕೊಂಡಿಗಳು ಎಂದರು.
ವಿದ್ಯಾಥಿ೯ನಿ ಪಲ್ಲವಿ ಕಾವೇರಮ್ಮ ಮಾತನಾಡಿ ನಮ್ಮ ಹಿರಿಯರು ಸಮಯದ ಹರಿವನ್ನು ಮೀರಿ ದಶಕಗಳ ಕಾಲದ ಸ್ಥಿರತೆಯಿಂದ ಪಡೆದುಕೊಂಡ ಅಪಾರಜ್ಞಾನದ ಬಂಡಾರವನ್ನು ಹೊಂದಿದ್ದಾರೆ ನಮಗೆ ಸದಾ ಕಾಲಕ್ಕೂ ಅನ್ವಯಿಸುವ ಮಾರ್ಗದರ್ಶನ ಮಾಡುತ್ತಾರೆ ಎಂದರು.
ಪ್ರಾಂಶುಪಾಲರಾದ ಸವಿತಾ ಎಂ.ಜಿ. ಮಾತನಾಡಿ, ಕುಟುಂಬ ಮತ್ತು ಸಮಾಜದೊಂದಿಗೆ ಹಿರಿಯರಿಗಿರುವ ಕಾಳಜಿಯನ್ನು ನಾವು ನೆನಪಿಸಿಕೊಳ್ಳಬೇಕು ಹಿರಿಯರೊಂದಿಗೆ ನಾವು ಇದ್ದು ಅವರು ಹೇಳುವ ಕಥೆಗಳು ಅವರು ನೀಡುವ ಹಿತನುಡಿಗಳನ್ನು ಆಲಿಸಬೇಕು ಎಂದರು.
ಪೊದುವಾಡ ಕೃತಿಕ ಸುಜಯ್. ಸ್ವಾಗತಿಸಿ, ಸಪ್ನ ಜೆ . ಎಂ.ನಿರೂಪಿಸಿ, ಕೃತಿಕ ಬಿ.ಟಿ. ವಂದಿಸಿದರು. , ರೋಟರಿ ಮಿಸ್ಟಿ ಹಿಲ್ಸ್ ಸದಸ್ಯರಾದ ಡಾ. ತಾರಾ ನಂದನ್ ಯಶೋಧ ಪ್ರಕಾಶ್, ಕ್ಯಾರಿಕಾಯ೯ಪ್ಪ, ಶ್ರೀಹರಿ, ನಿಶಾಂತ್ ಬೆಳ್ಯಪ್ಪ, ದಿವ್ಯ ಚೇತನ್, ಸುಮನಾ ಶ್ರೀಹರಿ ಪಾಲ್ಗೊಂಡಿದ್ದರು. ಶಾಲಾ ಮುಖ್ಯಶಿಕ್ಷಕಿ ಸವಿತಾ ಎಂ.ಜಿ ಹಾಜರಿದ್ದರು.







