ಮಡಿಕೇರಿ, NEWS DESK ಆ.23 – ಚೆಟ್ಟಳ್ಳಿ ಪ್ರೌಢಶಾಲೆಯ ಮಂಗಳಾ ಸಭಾಂಗಣದಲ್ಲಿ ರೋಟರಿ ಮಿಸ್ಟಿ ಹಿಲ್ಸ್ ವತಿಯಿಂದ ಹಿರಿಯ ನಾಗರಿಕರಿಗೆ ಗೌರವ ನಮನ ಆಯೋಜಿತವಾಗಿತ್ತು.ಈ ಕಾರ್ಯಕ್ರಮದಲ್ಲಿ ಹಿರಿಯ ನಾಗರಿಕರಾದ ಪೆರಿಯನ ಪಿ. ದಯಾನಂದ, ಹೆಚ್. ಎಸ್. ತಿಮ್ಮಪ್ಪಯ್ಯ, ಕ್ಯಾಪ್ಟನ್ ಎಂ. ಪಿ. ತಿಮ್ಮಯ್ಯ ಹಾಗೂ ಹೊಸಮನೆ ಪೂವಯ್ಯ ಅವರನ್ನು ಮಿಸ್ಟಿ ಹಿಲ್ಸ್ ಅಧ್ಯಕ್ಷ ಪಿ.ಆರ್.ರಾಜೇಶ್, ನಿದೇ೯ಶಕರಾದ ಕಟ್ಟೆಮನೆ ಸೋನಜಿತ್, ಲವಿನ್, ಕಾಂಗೀರ ಸತೀಶ್ ಸನ್ಮಾನಿಸಿದರು.
ಸನ್ಮಾನಿತರಾದ ಕಾಫಿ ಬೆಳೆಗಾರರಾದ .ಎಚ್.ಎಸ್. ತಿಮ್ಮಪ್ಪಯ್ಯ ಮಾತನಾಡಿ, ರೋಟರಿ ಮಿಸ್ಟಿ ನ ಹಿಲ್ಸ್ ನ ಸಮಾಜ ಸೇವಾ ಕಾಯ೯ಗಳ ಬಗ್ಗೆ ಶ್ಲಾಘಿಸಿದರು ಚಟ್ಟಳ್ಳಿ ಪ್ರೌಢಶಾಲೆಯ ಸ್ಥಾಪನೆಗೆ ಕಾರಣರಾದ ಹಿರಿಯರನ್ನು ನೆೆನಪಿಸಿಕೊಂಡು ಆ ಹಿರಿಯರ ತ್ಯಾಗ ಮನೋಭಾವ ಸದಾ ಸ್ಮರಣೀಯ ಎಂದರು
ಗೌರವ ಸ್ವೀಕರಿಸಿ ಮಾತನಾಡಿದ ಹೊಸಮನೆ ಪೂವಯ್ಯ ಮಾತನಾಡಿ, ತನ್ನ ಸಾಮಾಜಿಕ ಸೇವೆಯನ್ನು ಗುರುತಿಸಿ ಗೌರವಿಸಿದ ರೋಟರಿ ಸಂಸ್ಥೆಗೆ ಧನ್ಯವಾದ ಸಲ್ಲಿಸಿದರು.
ಸನ್ಮಾನಿತರಾದ ಕ್ಯಾಪ್ಟನ್ ಎಂ ಪಿ ತಿಮ್ಮಯ್ಯ ಮಾತನಾಡಿ ಭಾರತೀಯ ಸೇನೆಗೆ ತಾವು ಸೇರ್ಪಡೆಗೊಂಡ ಬಗ್ಗೆ ಹಾಗೂ ಸೇನಾ ಸೇವೆಯ ತಮ್ಮ ಅನುಭವಗಳನ್ನು ಹಂಚಿಕೊಂಡರು. ವಿದ್ಯಾರ್ಥಿಗಳು ಉತ್ತಮ ಶಿಕ್ಷಣ ಪಡೆದು ಜೀವನದ ಸವಾಲುಗಳನ್ನು ಸ್ವೀಕರಿಸಿ ಮುನ್ನಗ್ಗಬೇಕು ದೇಶದ ಉತ್ತಮ ಸೇವೆಯನ್ನು ಸಲ್ಲಿಸಿ ಬದುಕನ್ನು ಸಾರ್ಥಕ ಪಡಿಸಿಕೊಳ್ಳಬೇಕೆಂದೂ ಅವರು ಕರೆ ನೀಡಿದರು.

ಶಾಲಾ ಆಡಳಿತ ಮಂಡಳಿಯ ಸಂಚಾಲಕರಾದ ಮುಳ್ಳಂಡ ರತ್ತು ಚೆಂಗಪ್ಪ ಹಿರಿಯರು ಈ ದೇಶವನ್ನು ಕಟ್ಟಿ ಬೆಳೆಸಿದರು, ಅವರ ಕಾರ್ಯವನ್ನು ನಾವು ಮುನ್ನಡೆಸಬೇಕು ನಮ್ಮ ಹಿರಿಯರನ್ನು ಗೌರವಿಸಬೇಕು,ಅವರ ಮಾರ್ಗದರ್ಶನವನ್ನು ಪಡೆದು ಸಮಾಜಮುಖಿ ಕಾರ್ಯಗಳಲ್ಲಿ ತೊಡಗಿಸಬೇಕು ಎಂದರು.
ರೋಟರಿ ಮಿಸ್ಟಿ ಹಿಲ್ಸ್ ಅಧ್ಯಕ್ಷ ಪಿ.ಆರ್ ರಾಜೇಶ್ ಮಾತನಾಡಿ,
ಶಿಕ್ಷಣ, ಆರೋಗ್ಯ, ರಕ್ತದಾನ, ಹಿರಿಯ ನಾಗರಿಕರಿಗೆ ಗೌರವ ಮುಂತಾದ ಕಾರ್ಯಗಳಲ್ಲಿ ರೋಟರಿ ಮಿಸ್ಟಿ ಹಿಲ್ಸ್ ಸೇವೆ ಸಲ್ಲಿಸುತ್ತಿದೆ.
ಹಿರಿಯರು ನಮ್ಮ ಕುಟುಂಬದ ಬೇರುಗಳು. ಅವರ ಆಶೀರ್ವಾದ ಅನುಭವ ಜ್ಞಾನ ಸಂಸ್ಕೃತಿ ಯನ್ನು ಅರಿತು ಅದನ್ನು ನಾವು ಜೀವನದಲ್ಲಿ ಅಳವಡಿಸಿಕೊಳ್ಳಬೇಕು.ಮನೆಯ ಹಿರಿಯರನ್ನು ಮಕ್ಕಳು ಗೌರವಿಸಬೇಕು ಎಂದರು.
ಶಾಲಾ ಆಡಳಿತ ಮಂಡಳಿಯ ಅಧ್ಯಕ್ಷರೂ, ಸನ್ಮಾನಿತ ರಲ್ಲಿ ಒಬ್ಬರಾದ ಪೇರಿಯನ ಪಿ. ಜಯಾನಂದ ಮಾತನಾಡಿ, ಹಿರಿಯರು ಹಾಕಿಕೊಟ್ಟ ಮಾರ್ಗದರ್ಶನದಲ್ಲಿ ನಮ್ಮ ಉತ್ತಮ ಸಂಸ್ಕೃತಿಯನ್ನು ರೂಡಿಸಿಕೊಳ್ಳಬೇಕು ಎಂದು ಅವರು ನುಡಿದರು.ಕೊಡಗಿನಲ್ಲಿ ಕಿರಿಯರು, ಹಿರಿಯರ ಪಾದಗಳಿಗೆ ನಮಸ್ಕರಿಸುವ ಸಂಪ್ರದಾಯದ ಬಗ್ಗೆ ಮೆಚ್ಚುಗೆ ಅವರು ಶ್ಲಾಘಿಸಿದರು.
ಮಿಸ್ಟಿ ಹಿಲ್ಸ್ ನಿರ್ದೇಶಕ ಸೋನಜಿತ್, ಮಕ್ಕಳ ದಸರಾದಲ್ಲಿ ಮಕ್ಕಳ ಸಂತೆ ಹಾಗೂ ಸೇನೆಗೆ ಸೇರುವ ಆಸಕ್ತಿ ಇರುವ ಮಕ್ಕಳಿಗೆ ಸೂಕ್ತ ತರಬೇತಿ ನೀಡುತ್ತಿರುವ ಬಗ್ಗೆ ಮಾಹಿತಿ ನೀಡಿದರು.ಸನ್ಮಾನಕ್ಕೆ ಭಾಜನರಾದ ಹಿರಿಯರನ್ನು ಶಾಲಾ ಶಿಕ್ಷಕಿ ಬಿ.ಎಂ. ಮೀರಾ, ಯು. ಸುನಂದ, ಕೆ.ತಿಲಕ ಹಾಗೂ ಎಂ.ಈ. ಮನೋಜ್ ಪರಿಚಯಿಸಿದರು.
ಶಾಲಾ. ಮುಖ್ಯೋಪಾಧ್ಯಾಯಿನಿ ಕೆ ತಿಲಕ ಸ್ವಾಗತಿಸಿ, ವಿದ್ಯಾರ್ಥಿನಿಯರಾದ ಚುಶ್ಮಿತಾ,ಹರ್ಪಿತ,ಅಮೂಲ್ಯ ಪ್ರಾಥಿ೯ಸಿದರು. ಸಮಾಜದಲ್ಲಿ ಹಿರಿಯರ ಮಹತ್ವದ ಬಗ್ಗೆ ವಿದ್ಯಾರ್ಥಿನಿಯಾರಾದ ಚುಶ್ಮಿತಾ, ಹರ್ಪಿತ, ಶರಣ್ಯ ಮಾತನಾಡಿದರು.







