
ಮಡಿಕೇರಿ ಆ.31 NEWS DESK : ಕುಶಾಲನಗರ ಪಟ್ಟಣಕ್ಕೆ ಒಳಚರಂಡಿ ಕಲ್ಪಿಸುವ ಪರಿಷ್ಕೃತ ಅಂದಾಜು ಯೋಜನೆಗೆ ಆಡಳಿತಾತ್ಮಕ ಅನುಮೋದನೆ ದೊರೆತಿದೆ. ವಿವಿಧ ಬಡಾವಣೆಯಲ್ಲಿ ಒಳಚರಂಡಿ ಸಂಪರ್ಕಕ್ಕೆ ಅವಕಾಶ ಕಲ್ಪಿಸಲಾಗಿದೆ. ಈ ಯೋಜನೆಯಡಿ ಹಿಂದಿನ ಕುಶಾಲನಗರ ಪಟ್ಟಣ ಪಂಚಾಯಿತಿ ವ್ಯಾಪ್ತಿ, ಮುಳ್ಳುಸೋಗೆ ಗ್ರಾಮ ಮತ್ತು ಭಾಗಶಃ ಗುಮ್ಮನಕೊಲ್ಲಿ ಗ್ರಾಮಗಳಲ್ಲಿ ಒಟ್ಟು 76.0 ಕಿ.ಮೀ ಉದ್ದ ಒಳಚರಂಡಿ ಜಾಗವನ್ನು ಅಳವಡಿಸಲಾಗಿದ್ದು, 2 ಸಂಖ್ಯೆ ವೆಟ್ವೆಲ್ಗಳನ್ನು (ಕೆ.ಎಸ್.ಆರ್.ಟಿ.ಸಿ ಬಸ್ ನಿಲ್ದಾಣ ಹಿಂಭಾಗ ಮತ್ತು ಹಳೆ ಮಾರ್ಕೆಟ್ ಹತ್ತಿರ) ನಿರ್ಮಾಣ ಮಾಡಿ ಪಂಪಿಂಗ್ ಮೆಷಿನರಿಗಳು, 4.5 ದಶ ಲಕ್ಷ ಲೀಟರ್ ಸಾಮಾಥ್ರ್ಯದ ಮಲಿನ ನೀರು ಶುದ್ದೀಕರಣ ಘಟಕ, ಮಲಿನ ನೀರು ಶುದ್ದೀಕರಣ ಘಟಕಕ್ಕೆ ವೆಟ್ವೆಲ್ಗಳಿಂದ ಏರು ಕೊಳವೆ ಸಾಲು ಅಳವಡಿಸುವ ಕಾಮಗಾರಿ ಪೂರ್ಣಗೊಂಡಿರುತ್ತದೆ. ಕುಶಾಲನಗರ ಪಟ್ಟಣದ ಈ ಕೆಳಕಂಡ ಪ್ರದೇಶಗಳಲ್ಲಿ ಬರುವ ಮನೆ/ ವಾಣಿಜ್ಯ ಮಳಿಗೆಗಳಿಂದ ಒಳಚರಂಡಿ ವ್ಯವಸ್ಥೆಗೆ ಸಂಪರ್ಕ ಮಾಡಬಹುದಾಗಿದೆ. 1) ಕಾರು ಮಾಲೀಕರ ಸಂಘ ಬಡಾವಣೆ, 2) ಗುಂಡುರಾವ್ ಬಡಾವಣೆ, 3) ನೆಹರು ಬಡಾವಣೆ, 4) ಹೆಚ್.ಆರ್.ಪಿ ಕಾಲೋನಿ 5) ಕರಿಯಪ್ಪ ಬಡಾವಣೆ, 6) ಯೋಗಾನಂದ ಬಡಾವಣೆ, 7)ನಿಜಾಮುದ್ದೀನ್ ಬಡಾವಣೆ, 8) ದಂಡಿನಪೇಟೆ, 9) ಇಂದಿರಾ ಬಡಾವಣೆ, 10) ಸಿಂಗಾರಮ್ಮ ಬಡಾವಣೆ, 11) ರಸೂಲ್ ಬಡಾವಣೆ, 12) ಕಾಳಮ್ಮ ಕಾಲೋನಿ, 13) ವಿವೀಕಾನಂದ ಬಡಾವಣೆ, 14) ಆದಿಶಂಕರಚಾರ್ಯ ಬಡಾವಣೆ, 15) ಹಳೆ ಮಾರುಕಟ್ಟೆ ಪ್ರದೇಶ, 16) ಬಸಪ್ಪ ಬಡಾವಣೆ, 17) ಸಾಯಿ ಬಡಾವಣೆ, 18) ಜನತಾ ಕಾಲೋನಿ, 19) ಶಕ್ತಿ ಬಡಾವಣೆ, 20) ಮಾರುತಿ ಬಡಾವಣೆ, 21) ರಾಧಾಕೃಷ್ಣ ಬಡಾವಣೆ, 22) ಬೈಪಾಸ್ ರಸ್ತೆ, 23) ಬಾಪೂಜಿ ಬಡಾವಣೆ, 29) ನಾಗೇಗೌಡ ಬಡಾವಣೆ, 30) ಶಾಂತಿ ಮಾರ್ಗ ರಸ್ತೆ (ದಂಡಿನಪೇಟೆ), 31) ಹೌಸಿಂಗ್ ಬೋರ್ಡ್ ಮತ್ತು 32) ಓಂಕಾರ್ ಬಡಾವಣೆ, 33) ಚಿಕ್ಕಣ್ಣ ಬಡಾವಣೆ, 34) ಆದಿಶಂಕರಾಚಾರ್ಯ ಬಡಾವಣೆ, 35) ಕುವೆಂಪು ಬಡಾವಣೆ 36) ಹಾಸನ ರಸ್ತೆ (ಹೆದ್ದಾರಿಯಿಂದ ಆಂಜನೇಯ ದೇವಸ್ಥಾನದವರೆಗೆ ಮತ್ತು ಸೋಮೇಶ್ವರ ದೇವಸ್ಥಾನದಿಂದ ಹಾರಂಗಿ ರಸ್ತೆ ಜಂಕ್ಷನ್ವರೆಗೆ) 37) ರಥಬೀದಿ ಮತ್ತು ಗಣಪತಿ ದೇವಸ್ಥಾನದಿಂದ ಕೊಪ್ಪ ಗೇಟ್ ವರೆಗೆ ಮಾಣಿ – ಮೈಸೂರು – ಬೆಂಗಳೂರು ರಸ್ತೆಯ ಹೆದ್ದಾರಿಯಿಂದ ಎಡ ಭಾಗ, ಕೃಷಿ ಮಾರುಕಟ್ಟೆಯಿಂದ ಕೊಪ್ಪ ಗೇಟ್ವರೆಗೆ ಮಾಣಿ–ಮೈಸೂರು – ಬೆಂಗಳೂರು ರಸ್ತೆಯ ಬಲ ಭಾಗ, ಕುಶಾಲನಗರ ಪುರಸಭೆ ವ್ಯಾಪ್ತಿಯ ಸಾರ್ವಜನಿಕರು ತಮ್ಮ ಮನೆಯಲ್ಲಿನ ಶೌಚಾಲಯ, ಸ್ನಾನಗೃಹ ಹಾಗೂ ಅಡುಗೆ ಮನೆಯ ತ್ಯಾಜ್ಯ ನೀರನ್ನು ಮಾತ್ರ ಪಟ್ಟಣದ ಒಳಚರಂಡಿ ವ್ಯವಸ್ಥೆಗೆ ಬಿಡಬೇಕು. ಇದಕ್ಕಾಗಿ ಶೌಚಾಲಯ, ಸ್ನಾನಗೃಹ ಹಾಗೂ ಅಡುಗೆ ಮನೆಗಳಿಂದ ಕೊಳವೆ ಸಾಲು ಅಳವಡಿಸಿ, ಜಂಕ್ಷನ್ ಚೇಂಬರ್ ನಿರ್ಮಿಸಿ, ಕಾಮನ್ ಚೇಂಬರ್ ಮೂಲಕ ಮಂಡಳಿ ವತಿಯಿಂದ ತಮ್ಮ ನಿವೇಶನದ ಆವರಣದಲ್ಲಿ (ಸೆಟ್ಬ್ಯಾಂಕ್) ಅಳವಡಿಸಿರುವ ಮುಖ್ಯ ಚೇಂಬರ್ಗೆ ಜೋಡಣೆ ಮಾಡತಕ್ಕದ್ದು. ಸಂಬಂಧಿಸಿದ ಮಾಲೀಕರು ಮುಖ್ಯಾಧಿಕಾರಿಗಳು, ಪುರಸಭೆ, ಕುಶಾಲನಗರ ಇವರಿಂದ ನಿರಾಕ್ಷೇಪಣಾ ಪತ್ರ ಪಡೆದು ಮಂಡಳಿಗೆ ಸಲ್ಲಿಸಿದಲ್ಲಿ ಒಳಚರಂಡಿ ಸಂಪರ್ಕ ನೀಡಲು ಮಂಡಳಿಯ ಅನುಮೋದಿತ ಫ್ಲಂಬರ್ಗಳಿಗೆ ಸೂಚಿಸಲಾಗುವುದು. ಒಳಚರಂಡಿ ಸಂಪರ್ಕವನ್ನು ಮಂಡಳಿಯ ನಿಯಮಾವಳಿಯಂತೆ ಮಂಡಳಿಯ ಮೇಲ್ವಿಚಾರಣೆಯಲ್ಲಿ ಕಟ್ಟಡದ ಮಾಲಿಕರೇ ಸ್ವಂತ ವೆಚ್ಚದಲ್ಲಿ ಮಾಡಿಕೊಳ್ಳತಕ್ಕದ್ದು. ಪರವಾನಿಗೆ ರಹಿತ/ ಇತರೆ ಫ್ಲಂಬರ್ ಮುಖಾಂತರ ಒಳಚರಂಡಿ ಜೋಡಣೆ ಮಾಡಿಕೊಳ್ಳತಕ್ಕದ್ದಲ್ಲ. ಹೆಚ್ಚಿನ ಮಾಹಿತಿಗಾಗಿ ಕುಶಾಲನಗರ ನೀರು ಸರಬರಾಜು ನಿರ್ವಹಣಾ ಕಚೇರಿ, ನಿರೀಕ್ಷಣಾ ಮಂದಿರದ ಹತ್ತಿರ/ ದೂರವಾಣಿ:08276-200662 ಇಲ್ಲಿ ಸಂಪರ್ಕಿಸಬಹುದು ಎಂದು ಕುಶಾಲನಗರ ಪುರಸಭೆ ಮುಖ್ಯಾಧಿಕಾರಿ ಗಿರೀಶ್ ಅವರು ತಿಳಿಸಿದ್ದಾರೆ.









