Advertisement
12:45 AM Saturday 2-December 2023

ಕೊಡಗು ಹೆಗ್ಗಡೆ ಸಮಾಜದ ನೂತನ ಆಡಳಿತ ಮಂಡಳಿ ಕಛೇರಿ ಉದ್ಘಾಟನೆ   

18/02/2023

ಮಡಿಕೇರಿ ಫೆ.18 : ಕೊಡಗು ಹೆಗ್ಗಡೆ ಸಮಾಜದ ಆಡಳಿತ ಮಂಡಳಿಯ ನೂತನ ಕಛೇರಿಯನ್ನು ಹಿರಿಯರಾದ ಡಾ.ತಂಬಂಡ ವಿಜು ಪೂಣಚ್ಚ ಉದ್ಘಾಟಿಸಿದರು. ಹೆಗ್ಗಡೆ ಸಮಾಜದ ಜಿಲ್ಲಾಧ್ಯಕ್ಷ ಪಡಿಞರಂಡ ಅಯ್ಯಪ್ಪ ಮಾತನಾಡಿ ಸಮಾಜದ ಅಭ್ಯುದಯಕ್ಕೆ  ಎಲ್ಲರು ಕೈಜೋಡಿಸುವಂತೆ ಕರೆ ನೀಡಿದರು. ಕುಲಬಾಂಧವರು ಜನಾಂಗದ ಮೇಲಿನ ಅಭಿಮಾನ ಬೆಳೆಸಿಕೊಳ್ಳವುದರೊಂದಿಗೆ ದೇಶದ ಐಕ್ಯತೆಗೆ ಪಣ ತೊಡಬೇಕು ಎಂದರು. ಸಮಾಜದ ಉಪಾಧ್ಯಕ್ಷ ಕೊರಕುಟ್ಟಿರ ಸರ ಚಂಗಪ್ಪ, ಕಾರ್ಯದರ್ಶಿ ಚಂಗಚಂಡ ಕಟ್ಟಿಕಾವೇರಪ್ಪ. ಖಜಾಂಚಿ ಪಾನಿಕುಟ್ಟಿರ ಕುಟ್ಟಪ್ಪ, ನಿರ್ದೇಶಕರಾದ ಪಡಿಞರಂಡ ಪ್ರಭುಕುಮಾರ್, ಚರ್ಮಂಡ ಅಪ್ಪುಣು ಪೂವಯ್ಯ, ಮುರೀರ ಕುಶಾಲಪ್ಪ, ಕೊಪ್ಪಡ ಪಳಂಗಪ್ಪ ಕೊಂಗೆಪಂಡ ರವಿ, ಪದಿಕಂಡ ಸುನಾ, ಕೊಕ್ಕೇರ ಜಗನ್ನಾಥ, ಪುದಿಯತಂಡ ಜಾಲಿ, ಮುರೀರ ಶಾಂತಿ, ಪ್ರಮುಖರಾದ ಮಲ್ಲಾಡ ಕಟ್ಟಿ ಪೂಣಚ್ಚ,  ಕೊರಕುಟ್ಟಿರ ಮೀನ,  ಕವಿತಾ ಮತ್ತಿತರರು ಉಪಸ್ಥಿತರಿದ್ದರು.