Close Menu
News-Desk-KannadaNews-Desk-Kannada
  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಇತ್ತೀಚಿನ ಸುದ್ದಿಗಳು
  • ಉದ್ಯೋಗ ಭಾಗ್ಯ
  • ಮಹಾದೇಗುಲ
  • ರುಚಿ ನೋಡಿ
  • ಪೊಲೀಸ್ ನ್ಯೂಸ್
  • ರೋಗ ಮುಕ್ತ
  • ಪ್ರವಾಸಿತಾಣ
  • ಸಣ್ಣ ಕಥೆ
  • ವಿಡಿಯೋ ಗ್ಯಾಲರಿ
Facebook X (Twitter) Instagram
Breaking News
  • *ಡೊನಾಲ್ಡ್ ಟ್ರಂಪ್ ಮೆಚ್ಚಿದ ಆ ‘ಒಂದು’ ನಿರ್ಧಾರ ಯಾವುದು? ಭಾರತಕ್ಕೆ ಸಿಗಲಿದೆ ಅತಿದೊಡ್ಡ ಆರ್ಥಿಕ ಲಾಭ!*
  • *ಜಾಹ್ನವಿ ಕಂದುಲಾ ಜೀವಕ್ಕೆ ‘ಬೆಲೆ’ ಕಟ್ಟಿದ ಅಮೆರಿಕಾ! ಸಿಯಾಟಲ್ ನಗರದಿಂದ ಬರಲಿದೆಯೇ ₹262 ಕೋಟಿ ಪರಿಹಾರ?*
  • *ಬಿಸಾಡಿದ ಬಾಟಲಿಗಳಿಂದ ಮತ್ತೆ ಗ್ಲಾಸಿಗೆ? ದೆಹಲಿ ಸ್ಟೇಡಿಯಂ ಸಿಬ್ಬಂದಿಯ ಈ ಕರ್ಮಕಾಂಡ ನೋಡಿ ನೀವೂ ವಾಕರಿಕೆ ಮಾಡ್ಕೊತೀರಾ!*
  • *ಚಿನ್ನಸ್ವಾಮಿಯಲ್ಲಿ ಮತ್ತೆ ಮೊಳಗಲಿದೆ RCB.. RCB.. ಸದ್ದು! ಸರ್ಕಾರದ ಗ್ರೀನ್ ಸಿಗ್ನಲ್ ಸಿಕ್ಕಿದ್ದು ಹೇಗೆ? ಅಭಿಮಾನಿಗಳೇ ಈಗಲೇ ರೆಡಿಯಾಗಿ!*
  • *ಕರೆಂಟ್ ಬಿಲ್ ನೋಡಿ ಬೆಚ್ಚಿಬೀಳಬೇಡಿ! ರಾಜ್ಯದಲ್ಲಿ ವಿದ್ಯುತ್ ದರ ಏರಿಕೆಗೆ ಕ್ಷಣಗಣನೆ; ಯಾರಿಗೆ ಎಷ್ಟು ಹೊರೆ?*
  • *ಶಾಲೆ ಪ್ರವಾಸಕ್ಕೆ ಟ್ರಕ್ ಬಳಕೆ: ಪೋಷಕರು ಫುಲ್ ಗರಂ! ಹೆಡ್‌ಮಾಸ್ಟರ್ ಅಮಾನತು ಹಿಂದಿನ ಅಸಲಿ ಕಥೆ ಇಲ್ಲಿದೆ*
  • *ಕೊಡಗಿಗೆ ಭೇಟಿ ನೀಡಿದ ಪೊಲೀಸ್ ಮಹಾ ನಿರೀಕ್ಷಕರು*
  • *ಕುಶಾಲನಗರದಲ್ಲಿ ಒಣ ಕಸ ಸಂಗ್ರಹ ಘಟಕ ಉದ್ಘಾಟನೆ*
  • *ಭ್ರಷ್ಟಾಚಾರದ ಪ್ರಮಾಣ ಹೆಚ್ಚಾಗಿದೆ : ಗುತ್ತಿಗೆದಾರರ ಸಂಘ ಗಂಭೀರ ಆರೋಪ*
  • *ಕೇಂದ್ರ ಸರಕಾರದ ವಿರುದ್ಧ ಮಡಿಕೇರಿಯಲ್ಲಿ ಕಾರ್ಮಿಕ ಸಂಘಟನೆಗಳಿಂದ ಬೃಹತ್ ಪ್ರತಿಭಟನೆ*
News-Desk-KannadaNews-Desk-Kannada




  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಪೊಲೀಸ್ ನ್ಯೂಸ್
  • ಪ್ರವಾಸಿತಾಣ
  • ಮಹಾದೇಗುಲ
  • ರುಚಿ ನೋಡಿ
  • ಉದ್ಯೋಗ ಭಾಗ್ಯ
  • ರೋಗ ಮುಕ್ತ
  • ಸಣ್ಣ ಕಥೆ
News-Desk-KannadaNews-Desk-Kannada





Home » ಪ್ರಾಕೃತಿಕ ಸೌಂದರ್ಯದ ಪರಮ ಸೀಮೆಯಂತಿರುವ ಕಾರ್ಕಳ ತಾಲೂಕಿನ ವರಂಗ
ಪ್ರವಾಸಿತಾಣ

ಪ್ರಾಕೃತಿಕ ಸೌಂದರ್ಯದ ಪರಮ ಸೀಮೆಯಂತಿರುವ ಕಾರ್ಕಳ ತಾಲೂಕಿನ ವರಂಗ

April 13, 20234 Mins Read
Facebook WhatsApp Twitter Telegram Copy Link Threads Email LinkedIn Pinterest
Facebook Twitter WhatsApp Email Telegram Copy Link

ವರಂಗ ಕಾರ್ಕಳ ತಾಲೂಕಿನಲ್ಲಿರುವ ಒಂದು ಜೈನ ಯಾತ್ರಾ ಸ್ಥಳ.

ಎಲ್ಲಿದೆ ವರಂಗ…?
ವರಂಗ ಇರುವುದು ಉಡುಪಿ ಜಿಲ್ಲೆಯ ಹೆಬ್ರಿಯಿಂದ ಕಾರ್ಕಳದ ಕಡೆಗೆ 5 ಕಿ.ಮೀ. ದೂರದಲ್ಲಿ. ಕಾರ್ಕಳದಿಂದ ಸುಮಾರು 25 ಕಿ.ಮೀ., ಉಡುಪಿಯಿಂದ 37 ಕಿ.ಮೀ. ಮಂಗಳೂರಿನಿಂದ 85 ಕಿ.ಮೀ. ದೂರ.
ಸಮಯವಿದ್ದರೆ, ಕೆರೆಯ ಪಕ್ಕವೇ ಇರುವ ಬೇಡ ರಾಜನ ಅರಮನೆಯ ಕುರುಹುಗಳಿರುವ ಬೆಟ್ಟವನ್ನು ಹತ್ತಿಳಿಯಬಹುದು.

ವರಂಗ ಕೆರೆ ಬಸದಿ : 

ಒಂದು ಕಡೆ ಎತ್ತರಕ್ಕೆ ಉದ್ದಾನುದ್ದ ಹರಡಿ ನಿಂತ ಪಶ್ಚಿಮ ಘಟ್ಟದ ಪಸಿರುಡೆಯ ಸೊಬಗು. ಮತ್ತೊಂದು ಕಡೆಯಲ್ಲಿ ಹಚ್ಚ ಹಸಿರಿನ ಗದ್ದೆ, ತೋಟದ ಬೆಡಗು. ನಡುವೆ ವಿಶಾಲ ಕೆರೆಯ ಮಧ್ಯೆ ಫಳಫಳಿಸುವ ಪದ್ಮಾವತಿ ದೇವಿಯ ಬಸದಿ. ನೀರಿನಲ್ಲಿ ಅಲ್ಲಾಡುವ ಮಂದಿರದ ಚಿತ್ರಕ್ಕೆ ಕಮಲದ ಹೂವುಗಳ ಸಿಂಗಾರದೈಸಿರಿ.

ಇಂತಹುದೊಂದು ಅಪರೂಪದ, ಇಡೀ ದಕ್ಷಿಣ ಭಾರತದಲ್ಲಿ ಮತ್ತೆಲ್ಲೂ ಸಿಗದಂಥ ಸೌಂದರ್ಯ ಮತ್ತು ದೈವಿಕ ಶಕ್ತಿಯ ಪರಮ ಕ್ಷೇತ್ರವನ್ನು ನೋಡಬೇಕಾದರೆ ನೀವು ಉಡುಪಿ ಜಿಲ್ಲೆಯ ಕಾರ್ಕಳ ತಾಲೂಕಿನ ವರಂಗ ಎಂಬ ಪುಟ್ಟ ಹಳ್ಳಿಗೆ ಬರಬೇಕು.

14 ಎಕರೆ ವಿಸ್ತಾರದ ತುಂಬಿ ತುಳುಕುವ ಕೆರೆಯ ನಡುವೆ ನೆಲೆ ನಿಂತಿರುವ ನಕ್ಷತ್ರಾಕಾರದ ಚತುರ್ಮುಖ ಬಸದಿ ಚೆಲುವನ್ನು ನೋಡಿಯೇ ಆನಂದಿಸಬೇಕು. ಪದ್ಮಾವತಿ ದೇವಿಯ ಸನ್ನಿಧಿಯನ್ನು ತಲುಪಲು ದೋಣಿಯೊಂದೇ ದಾರಿ. ಸುಮಾರು 100 ಮೀಟರ್‌ಗಿಂತಲೂ ಹೆಚ್ಚು ದೂರವನ್ನು ಯಾವ ಮಳೆ, ಬಿಸಿಲು ಕಾಲದಲ್ಲೂ ದೋಣಿಯ ಮೂಲಕವೇ ಕ್ರಮಿಸಬೇಕು. ಆ ದೋಣಿ ಪಯಣವೇ ಒಂದು ರೋಚಕ ಅನುಭವ.

ದೋಣಿಯಲ್ಲಿ ಸಾಗಿ ಕೆರೆಬಸದಿಯ ಮೆಟ್ಟಿಲನ್ನು ಹತ್ತಿ ನಿಂತು ನೋಡಿದರೆ ಸುತ್ತಲೂ ಜಲರಾಶಿ ಚೆಲುವು. ಅದರಾಚೆಗೆ ಹಸಿರು ರಾಜಿ. ಹೆಚ್ಚೆಂದರೆ ಐದು ಸೆಂಟ್ಸ್ ಜಾಗದಲ್ಲಿ ನಿರ್ಮಿಸಿದ ಮಂಟಪ ರೂಪಿ ಬಸದಿ ಹಲವು ವೈಶಿಷ್ಟ್ಯಗಳನ್ನು ಒಡಲಲ್ಲಿ ಹೊತ್ತುಕೊಂಡಿದೆ. ಜೈನ ತೀರ್ಥಂಕರರಾದ ಪಾರ್ಶ್ವನಾಥ, ಅನಂತನಾಥ, ನೇಮಿನಾಥ, ಶಾಂತಿನಾಥ ವಿಗ್ರಹಗಳು ಖಡ್ಗಾಸನ ಭಂಗಿಯ ಕರಿ ಶಿಲೆಯಲ್ಲಿ ಕೆತ್ತಲ್ಪಟ್ಟವೆ. ಹೊಯ್ಸಳ ಮತ್ತು ಚಾಲುಕ್ಯ ಶೈಲಿಗಳ ಸಮ್ಮಿಶ್ರಣವಿದು. ಈ ವಿಗ್ರಹಗಳ ಎರಡೂ ಬದಿಗಳಲ್ಲಿ ಆಯಾ ತೀರ್ಥಂಕರರ ಯಕ್ಷ, ಯಕ್ಷಿಯರ ಬಿಂಬಗಳಿವೆ. ಪೂರ್ವದಲ್ಲಿರುವ ಪಾರ್ಶ್ವನಾಥ ವಿಗ್ರಹದ ಪಕ್ಕ ಪದ್ಮಾವತಿ ದೇವಿಯ ಬಿಂಬವಿದೆ. ಅವಳೇ ಇಲ್ಲಿನ ಪ್ರಧಾನ ಶಕ್ತಿ.

ಚತುರ್ಮುಖ ಗರ್ಭಗುಡಿ, ಪ್ರತ್ಯೇಕ ನಾಲ್ಕು ದ್ವಾರಗಳು, ಪ್ರತಿಯೊಂದು ದಿಕ್ಕಿಗೂ ಒಂದೇ ಅಳತೆಯ ಮುಖ ಮಂಟಪಗಳು, ಹೊರಭಾಗದಲ್ಲಿ ಪ್ರದಕ್ಷಿಣೆ ಪಥ ಮತ್ತು ನಕ್ಷತ್ರಾಕಾರದ ಜಗುಲಿ. ಇಡೀ ಬಸದಿಯನ್ನು ಕಟ್ಟದ್ದು ಕಲ್ಲಿನಿಂದ. ಚಾವಣಿಯೂ ಕಲ್ಲಿನದೆ.

ಗುಡಿಯಲ್ಲಿರುವ ಮೂರ್ತಿಗಳು 12ನೇ ಶತಮಾನದವು ಎಂದು ನಂಬಲಾಗಿದೆ. ಆಗಲೇ ಈ ಬಸದಿಯನ್ನು ನಿರ್ಮಿಸಲಾಗಿದ್ದು, ಕೆರೆಯನ್ನು 12ನೇ ಶತಮಾನದಲ್ಲಿ ಆಳುಪ ರಾಣಿ ಜಾಕಲಿ ದೇವಿ ನಿರ್ಮಿಸಿದ್ದಾಳೆ ಎಂಬ ಐತಿಹ್ಯವಿದೆ.

ಪ್ರಾಕೃತಿಕ ಸೌಂದರ್ಯದ ಪರಮ ಸೀಮೆಯಂತಿರುವ ಈ ಚೆಲುವಿನ ಆಲಯಕ್ಕೆ ಹೋಗಲು ಇರುವ ನೀರ ದಾರಿಗೆ ದೋಣಿಯೊಂದೇ ಸಾಥಿ.

ಇಷ್ಟಾರ್ಥ ಸಿದ್ಧಿ ಕ್ಷೇತ್ರ : ಮೂಲತ: ಇದೊಂದು ಜೈನ ಕ್ಷೇತ್ರ. ಆದರೆ, ಇಲ್ಲಿಗೆ ಬಂದು ಪೂಜೆ ಸಲ್ಲಿಸುವವರಲ್ಲಿ ಹೆಚ್ಚಿನವರು ಅನ್ಯ ಧರ್ಮೀಯರು. ನೀರ ಮಧ್ಯೆ ಕುಳಿತ ಪದ್ಮಾವತಿ ದೇವಿ ಇಷ್ಟಾರ್ಥ ಸಿದ್ಧಿಯಾಗುವಂತೆ ಮಾಡುತ್ತಾಳೆ ಎನ್ನುವುದು ನಂಬಿಕೆ. ಮದುವೆಗಾಗಿ ಹರಕೆ ಹೇಳಿಕೊಳ್ಳುವುದು, ದೇವರ ಪ್ರಸಾದ ಕೇಳುವುದರ ಜತೆಗೆ ಮದುವೆಯಾದ ಹೊಸ ಜೋಡಿ ಮೊದಲ ಪೂಜೆ ಸಲ್ಲಿಸಲು ಈ ಬಸದಿಗೆ ಬರುವುದು ವಿಶೇಷ. ಇದರ ಜತೆಗೆ ಚರ್ಮ ರೋಗಗಳಿಗೆ ಹಲವರು ಹರಕೆ ಹೇಳಿಕೊಳ್ಳುತ್ತಾರೆ. ಸಮಸ್ಯೆ ಪರಿಹಾರವಾದಾಗ ಬೆಳ್ತಿಗೆ ಅಕ್ಕಿ, ಹುರುಳಿಯನ್ನು ದೇವರಿಗೆ ಅರ್ಪಿಸಲಾಗುತ್ತದೆ.

ಮತ್ಸ್ಯಧಾಮ ಹರಕೆಯಾಗಿ ಬಂದ ಅಷ್ಟೂ ಅಕ್ಕಿ, ಹುರುಳಿಗಳೆಲ್ಲ ಜಲರಾಶಿಯಲ್ಲಿ ಮನೆ ಮಾಡಿಕೊಂಡಿರುವ ಮೀನುಗಳ ಆಹಾರ. ಇದನ್ನು ನೀರಿಗೆ ಹಾಕಿದಾಗ ಎದ್ದೆದ್ದು ಬರುವ, ಆಹಾರಕ್ಕಾಗಿ ಪೈಪೋಟಿ ನಡೆಸುವ, ದೊಡ್ಡ ಗಾತ್ರದ ಮೀನುಗಳ ಸೌಂದರ್ಯವೂ ಆಹ್ಲಾದಕರ. ನಿರಂತರ ಧಾರೆ: ಅಚ್ಚರಿ ಎಂದರೆ ವರ್ಷದ ಯಾವ ಕಾಲದಲ್ಲೂ ಈ ಕೆರೆಯ ನೀರು ಬತ್ತುವುದಿಲ್ಲ. ಅಂಥ ಬರಗಾಲದಲ್ಲಿ ಕೆಲವು ದಿನ ನಡೆದು ಕೊಂಡು ಬಸದಿ ಸೇರಿದ ಉದಾಹರಣೆ ಬಿಟ್ಟರೆ ಉಳಿದೆಲ್ಲ ಕಾಲದಲ್ಲೂ ಕೆರೆ ತುಂಬಿ ತುಳುಕುತ್ತದೆ. ಬಸದಿಯ ಒಂದು ಪಾರ್ಶ್ವದಲ್ಲಿರುವ ವರಂಗ ತೀರ್ಥ ಈ ನೀರ ಸೆಲೆಯ ಮೂಲ. ಮೂರು ಹೊತ್ತೂ ಪೂಜೆ: ಭಕ್ತರು ಇರಲಿ, ಇಲ್ಲದಿರಲಿ.. ಬೆಳಗ್ಗೆ ಐದುವರೆಗೆ ಮೊದಲ ಪೂಜೆಯೊಂದಿಗೆ ಸಂಜೆವರೆಗೆ ಮೂರು ಹೊತ್ತಿನ ಪೂಜೆ ಇಲ್ಲಿನ ಅನೂಚಾನ. ಸೋಮವಾರ, ಶುಕ್ರವಾರ, ಮಂಗಳವಾರ ಮತ್ತು ಪರ್ವ ದಿನಗಳಲ್ಲಿ ಇಲ್ಲಿ ಪದ್ಮಾವತಿ ದೇವಿಗೆ ವಿಶೇಷ ಪೂಜೆ. ಸಿಂಹ ಮಾಸದಲ್ಲಂತೂ ಭಕ್ತರ ಮಹಾಪೂರ.

ಅರ್ಚಕರೇ ಅಂಬಿಗ : ಕೆರೆಯ ನಡುವೆ ಇರುವ ಬಸದಿಗೆ ಸಾಗಲು ಇರುವ ದೋಣಿಗೆ ಅರ್ಚಕರೇ ಅಂಬಿಗ ಎನ್ನುವುದು ಇಲ್ಲಿನ ವಿಶೇಷ. ಎಷ್ಟೇ ಜನ ಬಂದರೂ ಅವರೇ ದೋಣಿಯಲ್ಲಿ ಬಂದು ಕರೆದೊಯ್ಯುತ್ತಾರೆ, ಮತ್ತದೇ ದಡಕ್ಕೆ ತಂದ ಬಿಡುತ್ತಾರೆ. ನಡುವೆ ಪೂಜೆ ಮಾಡಿ ಪ್ರಸಾದ ನೀಡುತ್ತಾರೆ. ಒಬ್ಬನೇ ಒಬ್ಬ ಭಕ್ತ ಬಂದು ಆ ಕಡೆಯ ದಡದಲ್ಲಿ ನಿಂತಿದ್ದರೂ ಸ್ವಲ್ಪವೂ ಬೇಸರ ಮಾಡಿಕೊಳ್ಳದೆ ಮಳೆ ಇರಲಿ, ಬಿಸಿಲಿರಲಿ ದೋಣಿಯನ್ನು ಹುಟ್ಟುಹಾಕಿಕೊಂಡು ಬರುವ ನಗುಮುಖದಲ್ಲೇ ಒಂದು ದೈವಿಕತೆ ಇದೆ. ಯಾರೇ ಇದ್ದರೂ ಇಲ್ಲದಿದ್ದರೂ ಹೊತ್ತು ಹೊತ್ತಿಗೆ ಪೂಜೆ ನಡೆಯುವುದು ಇಲ್ಲಿನ ವೈಶಿಷ್ಟ್ಯ. ತಲೆತಲಾಂತರಗಳ ಅನೂಚಾನ ಸಂಪ್ರದಾಯ.

ಇದು ಅತಿಶಯ ಕ್ಷೇತ್ರ : ವರಂಗ ಹೆಚ್ಚು ಕಡಿಮೆ ಸಾವಿರ ವರ್ಷ ಇತಿಹಾಸ ಹೊಂದಿರುವ, ಜೈನ ಧರ್ಮೀಯರ ಅತಿಶಯ ಕ್ಷೇತ್ರ. ಭಗವಾನ್ ಚಂದ್ರಸ್ವಾಮಿ ಬಸದಿ, ನೇಮಿನಾಥ ಸ್ವಾಮಿ ಹಿರೇಬಸದಿ ಮತ್ತು ಕೆರೆ ಬಸದಿ ಇಲ್ಲಿನ ಪ್ರಮುಖ ಆರಾಧನಾ ಕೇಂದ್ರಗಳು. ಶಾಸನದಲ್ಲಿ ಇದನ್ನು ವರಂಗ ತೀರ್ಥ ಎಂದು ಉಲ್ಲೇಖಿಸಲಾಗಿದೆ.

ವರಂಗ ಎಂಬ ಜನಾನುರಾಗಿ, ಜನಪ್ರಿಯ ರಾಜ ಈ ಪ್ರದೇಶವನ್ನು ಆಳುತ್ತಿದ್ದುದರಿಂದ ಅವನದೇ ಹೆಸರು ಊರಿಗೆ ಬಂತು ಎಂದು ಹೇಳಲಾಗುತ್ತಿದೆ. ಒಂದು ಐತಿಹ್ಯದ ಪ್ರಕಾರ, ಇಲ್ಲಿನ ನೇಮಿನಾಥ ಮೂರ್ತಿ ಕೆಲವೇ ಡಿಗ್ರಿ ವಾಲಿಕೊಂಡಿದ್ದು, ವಾರೆ ಅಂಗ ಎಂಬ ನೆಲೆಯಲ್ಲಿ ವರಂಗ ಹುಟ್ಟಿಕೊಂಡಿತು.

ಬಸದಿ, ಮಾನಸ್ತಂಭ, ಸಮಾಧಿ : ಜೈನ ವಾಸ್ತುಶಿಲ್ಪದ ನಾಲ್ಕು ಪ್ರಕಾರಗಳಾದ ಬಸದಿಗಳು, ಮಾನಸ್ತಂಭ, ಏಕಶಿಲಾ ವಿಗ್ರಹಗಳು ಮತ್ತು ಸಮಾಧಿಗಳಲ್ಲಿ ವಾರಂಗದಲ್ಲಿ ಮೂರು ಪ್ರಕಾರಗಳಾದ ಮಾನಸ್ತಂಭ, ಬಸದಿ ಮತ್ತು ಸಮಾಧಿಗಳ ಸಮಾಗಮವಿರುವುದು ವಿಶೇಷ. ನೇಮಿನಾಥ ಸ್ವಾಮಿ ಬಸದಿ ದೀರ್ಘ ಆಯತಾಕಾರವಾಗಿದ್ದು, ಚೌಕ ಗರ್ಭಗಹ, ಸುಖಾಸೀನ, ನವರಂಗ ಮತ್ತು ಮುಖ ಮಂಟಪಗಳನ್ನು ಒಳಗೊಂಡಿದೆ. ಒಳಗೆ ನಾಲ್ಕು ಅಡಿ ಎತ್ತರದ ಧ್ಯಾನಾಸಕ್ತ ನೇಮಿನಾಥ. ಅದೇ ಬಸದಿಯಲ್ಲಿ ಚಂದ್ರನಾಥ ಸ್ವಾಮಿಯ ಪ್ರತ್ಯೇಕ ಗರ್ಭಗುಡಿ ಇದೆ.

ಇಡೀ ಬಸದಿ ಕಲ್ಲಿನಿಂದಲೇ ನಿರ್ಮಾಣವಾಗಿದೆ. ಕಲ್ಲು ಕಲ್ಲಿನ ಚಿತ್ತಾರ, ಚೆಲುವು, ಬೆಳಕಿನ ವ್ಯವಸ್ಥೆಗಳೆಲ್ಲ ನಮ್ಮನ್ನು ಮೂಕ ವಿಸ್ಮಿತಗೊಳಿಸುತ್ತವೆ.

ಪ್ರವೇಶ ದ್ವಾರದಲ್ಲಿರುವ 45 ಅಡಿ ಎತ್ತರದ ಮಾನಸ್ತಂಭ ಕರಾವಳಿಯ ಅತಿ ಪ್ರಾಚೀನ ಮತ್ತು ಹಿರಿಯಂಗಡಿ ಹಾಗೂ ಅಳದಂಗಡಿ ಬಳಿಕ 3ನೇ ಅತಿ ದೊಡ್ಡ ಮಾನಸ್ತಂಭ ಇದು. ಇಲ್ಲಿ ನೇಮಿನಾಥ ಸ್ವಾಮಿ ಬಸದಿಗೆ ಹೊಂದಿಕೊಂಡಂತೆ ಸಮಾಧಿ ಮತ್ತು ನಿಷಿಧಿಗಳಿವೆ.

ಉ. ಭಾರತದಿಂದ ಪ್ರವಾಸಿಗರ ಸುಗ್ಗಿ : ಸ್ಥಳೀಯವಾಗಿ ಸರ್ವ ಧರ್ಮಗಳ ಭಕ್ತರು ಮತ್ತು ಪ್ರವಾಸಿಗರನ್ನು ದೊಡ್ಡ ಮಟ್ಟದಲ್ಲಿ ಆಕರ್ಷಿಸುತ್ತಿರುವ ವರಂಗ ಜೈನ ಯಾತ್ರಾರ್ಥಿಗಳ ಪಾಲಿಗಂತೂ ಸ್ವರ್ಗ. ನೀವು ನಂಬಲಾರಿರಿ.. ಈ ಕ್ಷೇತ್ರಕ್ಕೆ ಪ್ರತಿ ದಿನ 50ಕ್ಕಿಂತಲೂ ಅಧಿಕ ಉತ್ತರ ಭಾರತದ ಭಕ್ತರು ಆಗಮಿಸಿ ಪೂಜೆ ಸಲ್ಲಿಸುತ್ತಾರೆ. ಕೆರೆ ಬಸದಿಯನ್ನು ಕಂಡು ಪುಳಕಿತರಾಗುತ್ತಾರೆ.

ಧರ್ಮಸ್ಥಳ, ಮೂಡುಬಿದರೆ, ಕಾರ್ಕಳಕ್ಕೆ ಬರುವ ಭಕ್ತರು ವರಂಗ, ಹೊಂಬುಜ ಮಾರ್ಗವಾಗಿ ಶ್ರವಣಬೆಳಗೊಳಕ್ಕೆ ಹೋಗುವುದು ಕ್ರಮ.

Kere Basadi – Lake temple of Varanga, Karkala, Karnataka

Share. Facebook Twitter Pinterest LinkedIn Tumblr Email WhatsApp
Previous Article*ಮಡಿಕೇರಿ : ಬ್ರೈನೋಬ್ರೈನ್ ಅಬಾಕಸ್ ವಿದ್ಯಾರ್ಥಿಗಳಿಗೆ ಪದವಿ ಪ್ರದಾನ*
Next Article *ಮಡಿಕೇರಿ ನಗರ ಬಿಜೆಪಿ ಯುವ ಮೋರ್ಚಾ ಖಂಡನೆ*

Recommended: Website design development company services in Mangalore Forex Trading Teacher in India

Related Posts

ಎಸ್‌ಬಿಎಸ್ ಫಾರ್ಮ್‌ಹೌಸ್ ಮಂಗಳೂರು – ನಿಮ್ಮ ಕುಟುಂಬ ಮತ್ತು ಸ್ನೇಹಿತರಿಗಾಗಿ ಒಂದು ನೆಮ್ಮದಿಯ ತಾಣ

April 18, 2025

*ಕರಿಬಂಡೆಗಳ ಮೇಲೆ ಧುಮ್ಮಿಕ್ಕಿ ಹರಿಯುತ್ತಿರುವ ಉಂಚಳ್ಳಿ ಜಲಪಾತದ*

January 3, 2025

*ಉತ್ತರ ಕರ್ನಾಟಕ ಸಂಸ್ಕೃತಿಯನ್ನು ಬಿಂಬಿಸುವ ಉತ್ಸವ್ ರಾಕ್ ಗಾರ್ಡನ್*

November 28, 2024

*ಜಾಹ್ನವಿ ಕಂದುಲಾ ಜೀವಕ್ಕೆ ‘ಬೆಲೆ’ ಕಟ್ಟಿದ ಅಮೆರಿಕಾ! ಸಿಯಾಟಲ್ ನಗರದಿಂದ ಬರಲಿದೆಯೇ ₹262 ಕೋಟಿ ಪರಿಹಾರ?*

February 12, 2026

ಸಿಯಾಟಲ್ (ಅಮೆರಿಕಾ): ಕಳೆದ ಎರಡು ವರ್ಷಗಳಿಂದ ಇಡೀ ಜಗತ್ತಿನ ಗಮನ ಸೆಳೆದಿದ್ದ ಭಾರತೀಯ ವಿದ್ಯಾರ್ಥಿನಿ ಜಾಹ್ನವಿ ಕಂದುಲಾ ಅವರ ಸಾವಿನ…

*ಬಿಸಾಡಿದ ಬಾಟಲಿಗಳಿಂದ ಮತ್ತೆ ಗ್ಲಾಸಿಗೆ? ದೆಹಲಿ ಸ್ಟೇಡಿಯಂ ಸಿಬ್ಬಂದಿಯ ಈ ಕರ್ಮಕಾಂಡ ನೋಡಿ ನೀವೂ ವಾಕರಿಕೆ ಮಾಡ್ಕೊತೀರಾ!*

February 12, 2026

*ಚಿನ್ನಸ್ವಾಮಿಯಲ್ಲಿ ಮತ್ತೆ ಮೊಳಗಲಿದೆ RCB.. RCB.. ಸದ್ದು! ಸರ್ಕಾರದ ಗ್ರೀನ್ ಸಿಗ್ನಲ್ ಸಿಕ್ಕಿದ್ದು ಹೇಗೆ? ಅಭಿಮಾನಿಗಳೇ ಈಗಲೇ ರೆಡಿಯಾಗಿ!*

February 12, 2026

*ಕರೆಂಟ್ ಬಿಲ್ ನೋಡಿ ಬೆಚ್ಚಿಬೀಳಬೇಡಿ! ರಾಜ್ಯದಲ್ಲಿ ವಿದ್ಯುತ್ ದರ ಏರಿಕೆಗೆ ಕ್ಷಣಗಣನೆ; ಯಾರಿಗೆ ಎಷ್ಟು ಹೊರೆ?*

February 12, 2026

*ಶಾಲೆ ಪ್ರವಾಸಕ್ಕೆ ಟ್ರಕ್ ಬಳಕೆ: ಪೋಷಕರು ಫುಲ್ ಗರಂ! ಹೆಡ್‌ಮಾಸ್ಟರ್ ಅಮಾನತು ಹಿಂದಿನ ಅಸಲಿ ಕಥೆ ಇಲ್ಲಿದೆ*

February 12, 2026

*ಕೊಡಗಿಗೆ ಭೇಟಿ ನೀಡಿದ ಪೊಲೀಸ್ ಮಹಾ ನಿರೀಕ್ಷಕರು*

February 12, 2026

*ಕುಶಾಲನಗರದಲ್ಲಿ ಒಣ ಕಸ ಸಂಗ್ರಹ ಘಟಕ ಉದ್ಘಾಟನೆ*

February 12, 2026

*ಭ್ರಷ್ಟಾಚಾರದ ಪ್ರಮಾಣ ಹೆಚ್ಚಾಗಿದೆ : ಗುತ್ತಿಗೆದಾರರ ಸಂಘ ಗಂಭೀರ ಆರೋಪ*

February 12, 2026

*ಕೇಂದ್ರ ಸರಕಾರದ ವಿರುದ್ಧ ಮಡಿಕೇರಿಯಲ್ಲಿ ಕಾರ್ಮಿಕ ಸಂಘಟನೆಗಳಿಂದ ಬೃಹತ್ ಪ್ರತಿಭಟನೆ*

February 12, 2026

*ಮಾಂದಲ್ ಪಟ್ಟಿ; ಸಾರ್ವಜನಿಕರು ಮತ್ತು ಪ್ರವಾಸಿಗರ ಗಮನಕ್ಕೆ*

February 12, 2026
  • Facebook
  • Twitter
  • Instagram
  • WhatsApp
  • YouTube
Quick Links
  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಪೊಲೀಸ್ ನ್ಯೂಸ್
  • ಪ್ರವಾಸಿತಾಣ
Quick Links
  • ಮಹಾದೇಗುಲ
  • ರುಚಿ ನೋಡಿ
  • ರೋಗ ಮುಕ್ತ
  • ಉದ್ಯೋಗ ಭಾಗ್ಯ
  • ಸಣ್ಣ ಕಥೆ
  • ವಿಡಿಯೋ ಗ್ಯಾಲರಿ
Contact

www.newsdeskkannada.com
News Desk,
Industrial Area,
Pathrika Bhavan Building,
Madikeri, Kodagu, Karnataka.
Phone: 94481 00724
              76766 24467
Email: newsdeskkodagu@gmail.com

© 2026 All Rights Reserved. Designed by Blueline Computers.
  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಪೊಲೀಸ್ ನ್ಯೂಸ್
  • ಪ್ರವಾಸಿತಾಣ

Type above and press Enter to search. Press Esc to cancel.