Close Menu
News Desk KannadaNews Desk Kannada
  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಇತ್ತೀಚಿನ ಸುದ್ದಿಗಳು
  • ಉದ್ಯೋಗ ಭಾಗ್ಯ
  • ಮಹಾದೇಗುಲ
  • ರುಚಿ ನೋಡಿ
  • ಪೊಲೀಸ್ ನ್ಯೂಸ್
  • ರೋಗ ಮುಕ್ತ
  • ಪ್ರವಾಸಿತಾಣ
  • ಸಣ್ಣ ಕಥೆ
  • ವಿಡಿಯೋ ಗ್ಯಾಲರಿ
Facebook X (Twitter) Instagram
Breaking News
  • *ಸರ್ಕಾರದ ಪಂಚ ಗ್ಯಾರಂಟಿ ಯೋಜನೆ ಸಮರ್ಪಕವಾಗಿ ತಲುಪಿಸಿ : ಎಂ.ಜಿ.ಮೋಹನ್ ದಾಸ್ ಸಲಹೆ* 
  • *ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ ಉಚಿತ ಸಾಮೂಹಿಕ ವಿವಾಹ*
  • *ತಂಬಾಕು ಹರಾಜು ಕಾರ್ಯ ವಿಧಾನ ಸುಧಾರಣೆಗೆ ಸಂಸದರ ಆಗ್ರಹ : ಕೇಂದ್ರ ಸಚಿವ ಪಿಯೂಷ್‌ ಭೇಟಿ ಮಾಡಿ ಮನವಿ ಸಲ್ಲಿಸಿದ ಯುದವೀರ್‌ ಒಡೆಯರ್‌*
  • *ಫೀಲ್ಡ್ ಮಾರ್ಷಲ್ ಕೆ.ಎಂ.ಕಾರ್ಯಪ್ಪ ಕಾಲೇಜಿನಲ್ಲಿ ಮಾದಕ ವಸ್ತು ದುರುಪಯೋಗ ಮತ್ತು ಮಾದಕ ವಸ್ತು ಮುಕ್ತ ಜಿಲ್ಲೆ” ಕುರಿತು ಜಾಗೃತಿ*
  • *ಸಾಧನೆಯ ಹಾದಿಯಲ್ಲಿ ಸರ್ಕಾರಿ ಪ್ರೌಢಶಾಲೆ ಮೂರ್ನಾಡು*
  • *15 ಕೆ.ಜಿ ಗಾಂಜಾ ಸಹಿತ ಒರಿಸ್ಸಾದ ಆರೋಪಿಗಳ ಬಂಧನ*
  • *ಬೇತ್ರಿ ಮುಕ್ಕಾಟಿರ ಕಪ್ ಕ್ರಿಕೆಟ್ ನಮ್ಮೆ : ಏ.29 ರಂದು ಗೆಲುವು ಸಾಧಿಸಿದ ತಂಡಗಳು*
  • *ಮೇ 5 ರಂದು ಫೀ.ಮಾ.ಕಾರ್ಯಪ್ಪ ಕಾಲೇಜ್ ನಲ್ಲಿ ಹಳೇ ವಿದ್ಯಾರ್ಥಿ ಸಂಘ ಸ್ಥಾಪಿತ ಫೈರಿಂಗ್ ರೇಂಜ್ ಉದ್ಘಾಟನೆ*
  • *ಬೇತ್ರಿ ಮುಕ್ಕಾಟಿರ ಕಪ್ ಕ್ರಿಕೆಟ್ ನಮ್ಮೆ : ಮೇ 1 ರಂದು ಸಮಾರೋಪ*
  • *ಬೇತ್ರಿ ಮುಕ್ಕಾಟಿರ ಕಪ್ ಕ್ರಿಕೆಟ್ ನಮ್ಮೆ : ಮೇ 1 ರಂದು ಪುರುಷರ ಹಾಗೂ ಮಹಿಳೆಯರ ಫೈನಲ್ ಪಂದ್ಯ : ಮಣವಟ್ಟಿರ ಮತ್ತು ಮುಕ್ಕಾಟಿರ ಹಾಗೂ ಚೆಕ್ಕೇರ ಮತ್ತು ಮಾಳೇಟಿರ*
News Desk KannadaNews Desk Kannada




  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಪೊಲೀಸ್ ನ್ಯೂಸ್
  • ಪ್ರವಾಸಿತಾಣ
  • ಮಹಾದೇಗುಲ
  • ರುಚಿ ನೋಡಿ
  • ಉದ್ಯೋಗ ಭಾಗ್ಯ
  • ರೋಗ ಮುಕ್ತ
  • ಸಣ್ಣ ಕಥೆ
News Desk KannadaNews Desk Kannada





Home»ಇತ್ತೀಚಿನ ಸುದ್ದಿಗಳು»*ಅಂತರಾಷ್ಟ್ರೀಯ ಹಾಕಿಪಟು ಜಮುನ*
ಇತ್ತೀಚಿನ ಸುದ್ದಿಗಳು ಕೊಡಗು ಜಿಲ್ಲೆ

*ಅಂತರಾಷ್ಟ್ರೀಯ ಹಾಕಿಪಟು ಜಮುನ*

ಮೇ 27, 20243 Mins ReadBy admin
Facebook WhatsApp Twitter Telegram Copy Link Threads Email LinkedIn Pinterest
Follow us on
Google News Facebook
Facebook Twitter WhatsApp Email Telegram Copy Link

ಮಡಿಕೇರಿ ಮೇ 27 NEWS DESK : ಕೊಡಗಿನ ಕಾವೇರಿ ಮಾತೆಯ ಸ್ಪೂರ್ತಿಯೊಂದಿಗೆ, ಕೈಯಲ್ಲಿ ಹಾಕಿ ಸ್ಟಿಕ್ ಹಿಡಿದು, ಸದೃಢತೆಯೊಂದಿಗೆ ಕೊಡಗಿನ ಹೆಮ್ಮೆಯ ಸಂಕೇತವಾಗಲು, ಸವಾಲುಗಳನ್ನು ಮೀರಿ, ಮಹಿಳಾ ಶಕ್ತಿಯಾಗಿ ಬೆಳದಿದ್ದಾಳೆ. ಅವಳು ಕೇವಲ ಆಟಗಾರ್ತಿಯಲ್ಲ, ಹಲವು ಯುವ ಹಾಕಿ ಆಟಗಾರ್ತಿಯರಿಗೆ ದಾರಿ ದೀಪ, ಅಂತಹ ಒಬ್ಬಳು ಅಂತರಾಷ್ಟ್ರೀಯ ಹಾಕಿ ಆಟಗಾರ್ತಿಯೇ ಪಟ್ಟಮಾಡ ಜಮುನ ಅನೂಪ್.
ಕೆಚ್ಚೆಟ್ಟೀರ ಬೆಳ್ಳಿಯಪ್ಪ ಹಾಗು ಬೇಬಿ(ತಾಮನೆ ನಂದಿನೆರುವಂಡ) ದಂಪತಿಯರ ಪುತ್ರಿಯಾಗಿ ಜಮುನ ಅವರು ಮಡಿಕೇರಿಯ ಕಡಗದಾಳು ಗ್ರಾಮದಲ್ಲಿ ಜನಿಸಿದರು.
ತಮ್ಮ ಪ್ರಾಥಮಿಕ ಶಿಕ್ಷಣವನ್ನು ಕಡಗದಾಳಿನಲ್ಲಿ ಮುಗಿಸಿ, ಪ್ರೌಢ ಶಿಕ್ಷಣವನ್ನು ಗೋಣಿಕೊಪ್ಪಲಿನಲ್ಲಿ, ಪಿಯುಸಿಯನ್ನು ಕಾವೇರಿ ಕಾಲೇಜು ಗೋಣಿಕೊಪ್ಪಲು ಹಾಗೂ ಪದವಿಯನ್ನು ತೆರೆಸಿಯನ್ ಕಾಲೇಜು ಮೈಸೂರಿನಲ್ಲಿ ಪೂರ್ಣಗೊಳಿಸಿದರು.
ಬಾಲ್ಯದಲ್ಲಿ ಹಾಕಿಯ ಬಗ್ಗೆ ಆಸಕ್ತಿ ಹಾಗೂ ಕೌತುಕವನ್ನು ಹೊಂದಿದ್ದ ಜಮುನಾ ಅವರು ಹಾಕಿಯನ್ನು ಆಡಲು ಪ್ರಾರಂಭಿಸಿದ್ದರು. ಅವರ ಈ ಆಸಕ್ತಿಯೇ ಅವರನ್ನು ಅಂತರಾಷ್ಟ್ರೀಯ ಹಾಕಿ ಆಟಗಾರ್ತಿಯಾಗಲು ಪ್ರೇರೇಪಿಸಿತು.
:: ಸಬ್ ಜೂನಿಯರ್ ನ್ಯಾಷನಲ್ :: 
ಜಮುನ ಅವರು 1979ರ ಬಿಹಾರ ಹಾಗೂ 1980ರ ಆಂಧ್ರಪ್ರದೇಶದಲ್ಲಿ ನಡೆದ ಸಬ್ ಜೂನಿಯರ್ ನ್ಯಾಷನಲ್ಸ್ ನಲ್ಲಿ ಕರ್ನಾಟಕದ ಪರ ಆಡಿದರು. ಹೀಗೆ ಆಡುತ್ತ ಪ್ರಭಾಕರ್ ಅವರ ತರಬೇತಿಯಲ್ಲಿ ಮೈಸೂರು ಕ್ರೀಡಾ ವಸತಿ ನಿಲಯಕ್ಕೆ ಪ್ರವೇಶ ಪಡೆದರು.
:: ರಾಷ್ಟ್ರ ಮಟ್ಟದಲ್ಲಿ ಸಾಧನೆ :: 
ಹೈದರಾಬಾದ್, ದೆಹಲಿ, ಗುಜರಾತ್, ಕೊಯಂಬತ್ತೂರ್, ಚಂಡೀಗಢ ದಲ್ಲಿ ನಡೆದ ರಾಷ್ಟ್ರೀಯ ಮಹಿಳಾ ಕ್ರೀಡಾಕೂಟದಲ್ಲಿ, ಮೈಸೂರು ದಸರಾ ಕ್ರೀಡಾಕೂಟ ಹಾಗೂ ಬೆಂಗಳೂರು ಕ್ಲಬ್ ಮ್ಯಾಚ್ ನಲ್ಲಿ ಭಾಗವಹಿಸಿ ವಿಜೇತರಾಗಿದ್ದರು.
ಕರ್ನಾಟಕ ತಂಡದ ಪರ ದೆಹಲಿ, ಜಮ್ಮು ಕಾಶ್ಮೀರ, ಚಂಡೀಗಢ ಹಾಗೂ ಮೂರು ವರ್ಷಗಳ ಕಾಲ ಮೈಸೂರು ಯುನಿವರ್ಸಿಟಿ ಹಾಗು ಮಹಾರಾಷ್ಟ್ರದ ತಂಡಗಳ ಪರವಾಗಿಯೂ ನ್ಯಾಷನಲ್ ಗೇಮ್ಸ್ ನಲ್ಲಿ ಆಡಿದರು.
ಆಲ್ ಇಂಡಿಯಾ ಕೋಚಿಂಗ್ ಕ್ಯಾಂಪ್ ನಲ್ಲಿ 1984-86 ರಲ್ಲಿ ಭಾಗವಹಿಸಿದ್ದರು. 1986-87ರಲ್ಲಿ ಏರ್ ಇಂಡಿಯ ಮುಂಬೈ ಗೆ ಸೇರ್ಪಡೆಗೊಂಡರು. ಇಂಡಿಯನ್ ಯುನಿವರ್ಸಿಟಿ,1983 ಶಿಮ್ಲಾ ಹಾಗೂ 1986-87 ತ್ರಿವಂದ್ರಮ್ ನಲ್ಲಿ ಕ್ಯಾಪ್ಟನ್ ಆಗಿ ಕರ್ನಾಟಕ ತಂಡದ ಪರ ಸೀನಿಯರ್ ನ್ಯಾಷನಲ್ಸ್ ನಲ್ಲಿ ಆಡಿ ವಿಜೇತರಾಗಿ ಹೊರಹೊಮ್ಮಿದರು.
1991-96 ವರೆಗೆ ಏರ್ ಇಂಡಿಯಾ ಫೆಡರೇಶನ್ ಕಪ್, 1990-93 ರವರೆಗೆ ಲೇಡಿ ಕಾಶಿನಾಥ್ ಆಲ್ ಇಂಡಿಯಾ ಟೂರ್ನಮೆಂಟ್, 1989-92 ರವರೆಗೆ ಗಂಗೋತ್ರಿ ದೇವಿ ಟೂರ್ನಮೆಂಟ್ 1988ರಿಂದ 1995 ರವರೆಗೆ ಭಾಗವಹಿಸಿ ಮಹಿಳಾ ಹಾಕಿ ಆಟಗಾರರಲ್ಲಿ ಸ್ಪೂರ್ತಿ ತುಂಬಿದರು.
:: ಅಂತರಾಷ್ಟ್ರೀಯ ಪಂದ್ಯಾಟಗಳು :: 
ಕೆನಡಾಡಲ್ಲಿ ನಡೆದ ಗೋವಾ ಗೋಲ್ಡ್ ಕಪ್ ಹಾಕಿ ಟೂರ್ನಮೆಂಟ್ ನಲ್ಲಿ 1988, 89, 92, 93 ರಲ್ಲಿ ಭಾಗವಹಿಸಿ ವಿಜೇತರಾದರು. 1993ರಲ್ಲಿ ಕೆನಡಾ ಪ್ರವಾಸ, ಬ್ಯಾಂಕಾಕ್ ನಲ್ಲಿ 1994 ಹಾಗು 1995ರಲ್ಲಿ ಥಾಯ್ ರಾಷ್ಟ್ರೀಯ ತಂಡದೊಡನೆ ಟೆಸ್ಟ್ ಸರಣಿಯ ವಿಜೇತರು ಹಾಗು ಸಿಂಗಾಪುರದಲ್ಲಿ ನಡೆದ 10ನೇ ಎಸ್.ಸಿ.ಸಿ ಅಂತರಾಷ್ಟ್ರೀಯ ಹಾಕಿ ಪಂದ್ಯಾಟದಲ್ಲಿ ದ್ವಿತೀಯ ಸ್ಥಾನ ಗಳಿಸಿದರು. 1985 ರ ನವದೆಹಲಿಯಲ್ಲಿ ನಡೆದ ಇಂದಿರಾ ಗಾಂಧಿ ಅಂತರಾಷ್ಟ್ರೀಯ ಹಾಕಿ ಪಂದ್ಯಾವಳಿಯಲ್ಲಿ ಭಾಗವಹಿಸಿದ್ದರು.
:: ಪ್ರಶಸ್ತಿಗಳು :: 
ಅತ್ಯುತ್ತಮ ಸೆಂಟರ್ ಫಾರ್ವರ್ಡ್ ಪ್ರಶಸ್ತಿ ಹಾಗೂ ಹಲವಾರು ಪಂದ್ಯಾವಳಿಗಳಲ್ಲಿ ಅತೀ ಹೆಚ್ಚು ಗೋಲು ಭಾರಿಸಿ ಪ್ರಶಸ್ತಿಗಳನ್ನು ಗೆದ್ದಿದ್ದಾರೆ.
:: ಕುಟುಂಬವೇ ಕ್ರೀಡಾಪಟುಗಳು :: 
ಇವರ ಅಣ್ಣ ರವಿ ದೇವಯ್ಯ 10 ವರ್ಷಗಳ ಕಾಲ ಕರ್ನಾಟಕ ತಂಡದ ಪರ ಬಾಸ್ಕೆಟ್ ಬಾಲ್ ಆಡಿದ ಕೊಡಗಿನ ಪ್ರತಿಭಾವಂತ ಬಾಸ್ಕೆಟ್ ಬಾಲ್ ಆಟಗಾರ ಹಾಗು H.A.L ನ ನಿವೃತ್ತ ಉದ್ಯೋಗಿ. ಇವರ ಅಕ್ಕ ಬಾಳೆಯಡ ಗೌರು ಅಪ್ಪಯ್ಯ ಕೂಡ ರಾಜ್ಯದ ಅದ್ಭುತ ಬಾಸ್ಕೆಟ್ ಬಾಲ್ ಆಟಗಾರ್ತಿ.
ಗಿನ್ನಿಸ್ ದಾಖಲೆಗೆ ಶುಭ ಹಾರೈಕೆ
ಇತ್ತೀಚೆಗೆ ನಡೆದ ಕುಡ್ಯೋಳಂಡ ಹಾಕಿ ಹಬ್ಬದ ಅಂತರಾಷ್ಟ್ರೀಯ ಹಾಗು ರಾಷ್ಟ್ರೀಯ ಆಟಗಾರರ ಸಮ್ಮಿಲನ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದಾಗ, ಗಿನ್ನಿಸ್ ದಾಖಲೆಗೆ ಸೇರ್ಪಡೆಗೊಂಡಿದ್ದಕ್ಕೆ ಹರ್ಷವನ್ನು ವ್ಯಕ್ತಪಡಿಸುತ್ತಾ, ಕುಡ್ಯೋಳಂಡ ಕುಟುಂಬಕ್ಕೆ ಶುಭ ಕೋರಿದರು.
:: ಸ್ನೇಹಿತರ ಅನಿಸಿಕೆ :: 
ಜಮುನ ಬಹಳಷ್ಟು ಚುರುಕು, ಗೋಲ್ ಹೊಡೆಯುವುದರಲ್ಲಿ ನಿಪುಣತೆಯನ್ನು ಹೊಂದಿದ್ದರು. ಮತ್ಸ್ಯ ಹೇಗೆ ಸಾಗರದಲ್ಲಿ ಮುನ್ನುಗ್ಗುತ್ತದೋ, ಹಾಗೆಯೇ ಕೊಡಗಿನ ಕುವರಿ ಮಿನುಗಿದಳು. ಕುಡ್ಯೋಳಂಡ ಹಾಕಿ ಹಬ್ಬದ ಸ್ನೇಹಮಿಲನದಲ್ಲಿ ಪಾಲ್ಗೊಂಡು, ಎಲ್ಲರೊಡನೆ ಬೆರೆತು ಬಹಳಷ್ಟು ಖುಷಿಯಿಂದ ತನ್ನ ಜೀವನ ಸಾರ್ಥಕವೆಂದು ಸ್ನೇಹಿತರೊಡನೆ ಹಂಚಿಕೊಂಡರು.
ಏರ್ ಇಂಡಿಯಾದ ಕಸ್ಟಮರ್ ಸರ್ವಿಸ್ ಆಫೀಸರ್ ಆಗಿದ್ದ ಇವರು ಅದರಿಂದ ಸ್ವಯಂ ನಿವೃತ್ತಿ ಪಡೆದರು. ಪ್ರಸ್ತುತ ಜಮುನ ಅವರು ಹಾಕಿ ಕರ್ನಾಟಕದ ಉಪಾಧ್ಯಕ್ಷರು . ಇವರ ಪತಿ ಅನೂಪ್ ಹಾಗೂ ಮಗಳು ಶಿಮೋನ್ ಬೊಳ್ಳಮ್ಮ ಅವರೊಂದಿಗೆ ಬೆಂಗಳೂರಿನಲ್ಲಿ ನೆಲೆಸಿದ್ದಾರೆ. ಇವರ ಕೊಡುಗೆ ಕೊಡಗಿನ ಹಾಕಿಯತ್ತವು ಇರಲಿ ಎಂಬುದು ನಮ್ಮೆಲ್ಲರ ಅನಿಸಿಕೆ.

ಕ್ರೀಡಾ ವಿಶ್ಲೇಷಣೆ :  ಚೆಪ್ಪುಡೀರ ಕಾರ್ಯಪ್ಪ 

Follow us Follow us
Share. WhatsApp Facebook Twitter Email Telegram Copy Link

Website design development company services in Mangalore

Forex Trading Teacher in India

Related Posts

*ಸರ್ಕಾರದ ಪಂಚ ಗ್ಯಾರಂಟಿ ಯೋಜನೆ ಸಮರ್ಪಕವಾಗಿ ತಲುಪಿಸಿ : ಎಂ.ಜಿ.ಮೋಹನ್ ದಾಸ್ ಸಲಹೆ* 

ಏಪ್ರಿಲ್ 29, 2026

*ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ ಉಚಿತ ಸಾಮೂಹಿಕ ವಿವಾಹ*

ಏಪ್ರಿಲ್ 29, 2026

*ತಂಬಾಕು ಹರಾಜು ಕಾರ್ಯ ವಿಧಾನ ಸುಧಾರಣೆಗೆ ಸಂಸದರ ಆಗ್ರಹ : ಕೇಂದ್ರ ಸಚಿವ ಪಿಯೂಷ್‌ ಭೇಟಿ ಮಾಡಿ ಮನವಿ ಸಲ್ಲಿಸಿದ ಯುದವೀರ್‌ ಒಡೆಯರ್‌*

ಏಪ್ರಿಲ್ 29, 2026

*ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ ಉಚಿತ ಸಾಮೂಹಿಕ ವಿವಾಹ*

ಏಪ್ರಿಲ್ 29, 2026 ಇತ್ತೀಚಿನ ಸುದ್ದಿಗಳು ಕರ್ನಾಟಕ

ಮಡಿಕೇರಿ ಏ.29 NEWS DESK : ಶ್ರೀ ಕ್ಷೇತ್ರ ಧರ್ಮಸ್ಥಳ ಮಂಜುನಾಥೇಶ್ವರ ಧರ್ಮೋತ್ಥಾನ ಟ್ರಸ್ಟ್ ಇದರ ವತಿಯಿಂದ 54ನೇ ವರ್ಷದ…

*ತಂಬಾಕು ಹರಾಜು ಕಾರ್ಯ ವಿಧಾನ ಸುಧಾರಣೆಗೆ ಸಂಸದರ ಆಗ್ರಹ : ಕೇಂದ್ರ ಸಚಿವ ಪಿಯೂಷ್‌ ಭೇಟಿ ಮಾಡಿ ಮನವಿ ಸಲ್ಲಿಸಿದ ಯುದವೀರ್‌ ಒಡೆಯರ್‌*

ಏಪ್ರಿಲ್ 29, 2026

*ಫೀಲ್ಡ್ ಮಾರ್ಷಲ್ ಕೆ.ಎಂ.ಕಾರ್ಯಪ್ಪ ಕಾಲೇಜಿನಲ್ಲಿ ಮಾದಕ ವಸ್ತು ದುರುಪಯೋಗ ಮತ್ತು ಮಾದಕ ವಸ್ತು ಮುಕ್ತ ಜಿಲ್ಲೆ” ಕುರಿತು ಜಾಗೃತಿ*

ಏಪ್ರಿಲ್ 29, 2026

*ಸಾಧನೆಯ ಹಾದಿಯಲ್ಲಿ ಸರ್ಕಾರಿ ಪ್ರೌಢಶಾಲೆ ಮೂರ್ನಾಡು*

ಏಪ್ರಿಲ್ 29, 2026

*15 ಕೆ.ಜಿ ಗಾಂಜಾ ಸಹಿತ ಒರಿಸ್ಸಾದ ಆರೋಪಿಗಳ ಬಂಧನ*

ಏಪ್ರಿಲ್ 29, 2026

*ಬೇತ್ರಿ ಮುಕ್ಕಾಟಿರ ಕಪ್ ಕ್ರಿಕೆಟ್ ನಮ್ಮೆ : ಏ.29 ರಂದು ಗೆಲುವು ಸಾಧಿಸಿದ ತಂಡಗಳು*

ಏಪ್ರಿಲ್ 29, 2026

*ಮೇ 5 ರಂದು ಫೀ.ಮಾ.ಕಾರ್ಯಪ್ಪ ಕಾಲೇಜ್ ನಲ್ಲಿ ಹಳೇ ವಿದ್ಯಾರ್ಥಿ ಸಂಘ ಸ್ಥಾಪಿತ ಫೈರಿಂಗ್ ರೇಂಜ್ ಉದ್ಘಾಟನೆ*

ಏಪ್ರಿಲ್ 29, 2026

*ಬೇತ್ರಿ ಮುಕ್ಕಾಟಿರ ಕಪ್ ಕ್ರಿಕೆಟ್ ನಮ್ಮೆ : ಮೇ 1 ರಂದು ಸಮಾರೋಪ*

ಏಪ್ರಿಲ್ 29, 2026

*ಬೇತ್ರಿ ಮುಕ್ಕಾಟಿರ ಕಪ್ ಕ್ರಿಕೆಟ್ ನಮ್ಮೆ : ಮೇ 1 ರಂದು ಪುರುಷರ ಹಾಗೂ ಮಹಿಳೆಯರ ಫೈನಲ್ ಪಂದ್ಯ : ಮಣವಟ್ಟಿರ ಮತ್ತು ಮುಕ್ಕಾಟಿರ ಹಾಗೂ ಚೆಕ್ಕೇರ ಮತ್ತು ಮಾಳೇಟಿರ*

ಏಪ್ರಿಲ್ 29, 2026

*ಮೇ 5ರಂದು ಕರ್ಣಂಗೇರಿ ಕ್ಷೇತ್ರದ ಶ್ರೀರಾಜರಾಜೇಶ್ವರಿ ದೇವಾಲಯದ ವಾರ್ಷಿಕೋತ್ಸವ ಹಾಗೂ ರಥೋತ್ಸವ*

ಏಪ್ರಿಲ್ 29, 2026
  • Facebook
  • Twitter
  • Instagram
  • WhatsApp
  • YouTube
Quick Links
  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಪೊಲೀಸ್ ನ್ಯೂಸ್
  • ಪ್ರವಾಸಿತಾಣ
Quick Links
  • ಮಹಾದೇಗುಲ
  • ರುಚಿ ನೋಡಿ
  • ರೋಗ ಮುಕ್ತ
  • ಉದ್ಯೋಗ ಭಾಗ್ಯ
  • ಸಣ್ಣ ಕಥೆ
  • ವಿಡಿಯೋ ಗ್ಯಾಲರಿ
Contact

www.newsdeskkannada.com
News Desk,
Industrial Area,
Pathrika Bhavan Building,
Madikeri, Kodagu, Karnataka.
Phone: 94481 00724
              76766 24467
Email: newsdeskkodagu@gmail.com

© 2026 All Rights Reserved. Designed by Blueline Computers.
  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಪೊಲೀಸ್ ನ್ಯೂಸ್
  • ಪ್ರವಾಸಿತಾಣ

Type above and press Enter to search. Press Esc to cancel.

Ad Blocker Enabled!
Ad Blocker Enabled!
Our website is made possible by displaying online advertisements to our visitors. Please support us by disabling your Ad Blocker.