
ಮಡಿಕೇರಿ NEWS DESK ಅ.24 : ಮಡಿಕೇರಿ ತಾಲ್ಲೂಕಿನ ಹಾಕತ್ತೂರು ಗ್ರಾ.ಪಂ ಅಧ್ಯಕ್ಷರ ವಿರುದ್ಧ ಕೆಲವು ಸದಸ್ಯರು ಅವಿಶ್ವಾಸ ಮಂಡಿಸಿದ ಹಿನ್ನೆಲೆ ಇಂದು ಕರೆಯಲಾಗಿದ್ದ ಅವಿಶ್ವಾಸ ನಿರ್ಣಯದ ಸಭೆಗೆ ಕೋರಂ ಕೊರತೆ ಎದುರಾಯಿತು.
ಜಿಲ್ಲಾ ಉಪವಿಭಾಗಾಧಿಕಾರಿ ವಿನಾಯಕ ನರ್ವಾಡೆ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಗೆ ನಾಲ್ವರು ಸದಸ್ಯರು ಮಾತ್ರ ಹಾಜರಾಗಿದ್ದರು. ಒಟ್ಟು ಎಂಟು ಸದಸ್ಯ ಬಲದ ಗ್ರಾ.ಪಂ ನ ನಾಲ್ವರು ಸದಸ್ಯರು ಗೈರು ಹಾಜರಾದ ಕಾರಣ ಕೋರಂ ಕೊರತೆ ಕಂಡು ಬಂತು. ಇದರಿಂದ ಉಪವಿಭಾಗಾಧಿಕಾರಿಗಳು ಸಭೆಯನ್ನು ವಿಸರ್ಜಿಸಿದರು. ಪಂಚಾಯ್ತಿ ಅಭಿವೃದ್ಧಿ ಅಧಿಕಾರಿ ಗೀತಾಂಜಲಿ ಉಪಸ್ಥಿತರಿದ್ದರು.








