
ಮಡಿಕೇರಿ ಫೆ.6 NEWS DESK : ಶಾಲಾ ಶಿಕ್ಷಣ ಇಲಾಖೆಯ ವತಿಯಿಂದ ಫೆ.7 ರಿಂದ ಚಿತ್ರದುರ್ಗದಲ್ಲಿ ನಡೆಯಲಿರುವ ಮಕ್ಕಳ ರಾಜ್ಯಮಟ್ಟದ ಪ್ರತಿಭಾ ಕಾರಂಜಿ ಸಾಂಸ್ಕೃತಿಕ ಸ್ಪರ್ಧೆಯ ಕವ್ವಾಲಿ ಸ್ಪರ್ಧೆಗೆ ಮಡಿಕೇರಿಯ ಸಂತ ಜೋಸೆಫರ ಸಂಯುಕ್ತ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿಗಳು ಆಯ್ಕೆಯಾಗಿದ್ದಾರೆ. ಕಾಲೇಜಿನ ವಿದ್ಯಾರ್ಥಿಗಳಾದ ಅಹ್ಮದ್ ಮುಝಮಿಲ್, ಶಾಂವಾಜ್, ಎಂ.ಹೆಚ್.ಮೊಹ್ಮದ್ ಮಿಶಾಲ್, ಎಂ.ಬಿ.ಮೊಹ್ಮದ್ ರಿಯಾನ್ , ಎಂ.ಯು.ರೆಹಾನ್ , ಎಂ.ಎಂ.ಮೊಹ್ಮದ್ ಮುಷೀರ್ ಆಯ್ಕೆಯಾಗಿದ್ದಾರೆ.









