


ಗೋಣಿಕೊಪ್ಪ ಜೂ.24 NEWS DESK : ಹೆಣ್ಣು ಮಕ್ಕಳನ್ನು ಕಡ್ಡಾಯವಾಗಿ ಶಾಲೆಗೆ ಕಳುಹಿಸುವ ಮೂಲಕ ಪೋಷಕರು ಹೆಣ್ಣುಮಕ್ಕಳ ಭದ್ರತೆಯ ಬಗ್ಗೆ ಗಮನ ಹರಿಸಬೇಕು ಎಂದು ಗೋಣಿಕೊಪ್ಪ ಸರ್ಕಾರಿ ಪ್ರಾಥಮಿಕ ಶಾಲೆಯ ಮುಖ್ಯೋಪಾಧ್ಯಾಯ ಹೆಚ್.ಕೆ.ಕುಮಾರ್ ಕರೆ ನೀಡಿದರು. ಶಾಲೆಯ ಆವರಣದಲ್ಲಿ ನಡೆದ ಪೋಷಕರ ಸಭೆ ಮತ್ತು ಶಾಲಾಭಿವೃದ್ಧಿ ಸಮಿತಿ ರಚನಾ ಸಭೆಯಲ್ಲಿ ಪೋಷಕರ ಉದ್ದೇಶಿಸಿ ಮಾತನಾಡಿದರು. ಹೆಣ್ಣುಮಕ್ಕಳು ಮನೆಯಲ್ಲಿರುವುದರಿಂದ ಆಘಾತಕಾರಿ ಘಟನೆಗಳು ನಡೆಯುವ ಸಂಭವಗಳು ಹೆಚ್ಚಿರುತ್ತದೆ. ಹೀಗಾಗಿ ಹೆಣ್ಣು ಮಕ್ಕಳ ಸುರಕ್ಷತೆಗೆ ಪೋಷಕರು ಜಾಗೃತೆ ವಹಿಸಬೇಕು. ಹೆಣ್ಣು ಮಕ್ಕಳನ್ನು ಶಾಲೆಗೆ ಕಳಿಸುವುದರಿಂದ ಪೋಷಕರು ತಮ್ಮ ಮಕ್ಕಳ ಭದ್ರತೆ ಆತಂಕದಿಂದ ದೂರ ಇರಬಹುದು ಎಂದು ಸಲಹೆ ನೀಡಿದರು. ಶಾಲಾ ಅಭಿವೃದ್ಧಿ ಸಮಿತಿ ರಚನೆ :: ನಂತರ ನಡೆದ ಶಾಲಾ ಅಭಿವೃದ್ಧಿ ಸಮಿತಿ ರಚನೆ ನಡೆಯಿತು. ಸಮಿತಿ ಅಧ್ಯಕ್ಷರಾಗಿ ಕೆ.ಬಿ.ಜಗದೀಶ್, ಉಪಾಧ್ಯಕ್ಷರಾಗಿ ಬಿ.ಆರ್.ದಿವ್ಯ ಮತ್ತು ಸದಸ್ಯರುಗಳಾಗಿ ಪಿಂಟು ಸಿಂಗ್, ರಾಕೇಶ್, ಅರುಣ್ ಕುಮಾರ್ ವಿ, ಸೌಮ್ಯ, ತೇಜಸ್ವಿನಿ, ದೀಪಿಕಾ, ಅನಿತಾ, ಪಿ.ಬಿ.ಮೀನಾ, ಮಂಜುಳಾ, ರೆಜಿಯ ಸುಲ್ತನ್, ಸೌಜನ್ಯ, ಶ್ವೇತ, ಚಂದ್ರಕಲಾ, ಪೂಜಾ, ಮೀನಾಕ್ಷಿ, ಗೌರಿ ಆಯ್ಕೆಯಾದರು. ಶಾಲೆಯ ಶಿಕ್ಷಕರು ಹಾಜರಿದ್ದರು.









