
ಮಡಿಕೇರಿ ಜು.8 NEWS DESK : ಕೊಡವಲ್ಯಾಂಡ್ ಭೂ ರಾಜಕೀಯ ಸ್ವಾಯತ್ತತೆ, ಸ್ವಯಂ ಆಡಳಿತ, ಆಂತರಿಕ ಸ್ವಯಂ ನಿರ್ಣಯ ಹಕ್ಕು ಮತ್ತು ಎಸ್ಟಿ ವರ್ಗೀಕರಣವು ಸೇರಿದಂತೆ 2026ರ ರಾಷ್ಟ್ರೀಯ ಜನಗಣತಿಯೊಂದಿಗೆ ಜನಾಂಗವಾರು ಮಾಹಿತಿ ಕಲೆಹಾಕುವ ಸಂದರ್ಭ ಆದಿಮ ಸಂಜಾತ ಏಕ-ಜನಾಂಗೀಯ (ಆ್ಯನಿಮಿಸ್ಟಿಕ್) ಕೊಡವರಿಗಾಗಿ ಪ್ರತ್ಯೇಕ ಕೋಡ್ ಮತ್ತು ಕಾಲಮ್ ನ್ನು ಸೇರಿಸಬೇಕು, ಸಂಸತ್ ಹಾಗೂ ವಿಧಾನಸಭೆಯಲ್ಲಿ ಕೊಡವರಿಗೆ ವಿಶೇಷ ರಾಜಕೀಯ ಪ್ರಾತಿನಿಧ್ಯ ನೀಡಬೇಕು ಎಂದು ಒತ್ತಾಯಿಸಿ ಕೊಡವ ನ್ಯಾಷನಲ್ ಕೌನ್ಸಿಲ್ ಸಂಘಟನೆ ವತಿಯಿಂದ ನಾಪೋಕ್ಲುವಿನಲ್ಲಿ ಏಳನೇ ಮಾನವ ಸರಪಳಿ ಜನಜಾಗೃತಿ ಕಾರ್ಯಕ್ರಮ ನಡೆಯಿತು. ನಾಪೋಕ್ಲು ಪಟ್ಟಣದಲ್ಲಿ ಮಾನವ ಸರಪಳಿ ನಿರ್ಮಿಸಿ ಹಕ್ಕೊತ್ತಾಯಗಳನ್ನು ಮಂಡಿಸಲಾಯಿತು. ಜನಗಣತಿಯ ಸಂದರ್ಭ ಪ್ರತ್ಯೇಕ ಕಾಲಮ್ ಮತ್ತು ಕೋಡ್ ಸೇರಿಸುವುದರಿಂದ ಕೊಡವ ಸಮುದಾಯಕ್ಕೆ ಆಗಬಹುದಾದ ಲಾಭಗಳನ್ನು ಸಿಎನ್ಸಿ ಅಧ್ಯಕ್ಷ ಎನ್.ಯು.ನಾಚಪ್ಪ ವಿವರಿಸಿದರು. 2025-26 ರ ರಾಷ್ಟ್ರೀಯ ಜನಗಣತಿ ಮತ್ತು ಜಾತಿ ಗಣತಿಯಲ್ಲಿ ಕೊಡವರಿಗೆ ಪ್ರತ್ಯೇಕ ಕೋಡ್ ಹಾಗೂ ಕಾಲಮ್ ವ್ಯವಸ್ಥೆ ಮಾಡಬೇಕು. ಕೊಡವ ಲ್ಯಾಂಡ್ ಭೌಗೋಳಿಕ-ರಾಜಕೀಯ ಸ್ವಾಯತ್ತತೆ ನೀಡಬೇಕು. ಸಂವಿಧಾನದಡಿ ಕೊಡವರನ್ನು ಎಸ್ಟಿ ಪಟ್ಟಿಯಲ್ಲಿ ಸೇರಿಸಬೇಕು. ಸಿಕ್ಕಿಂನ ಬೌದ್ಧ ಸನ್ಯಾಸಿಗಳಿಗೆ ನೀಡಿದ “ಸಂಘ” ಕ್ಷೇತ್ರದಂತೆಯೇ 2026 ರ ಮತಕ್ಷೇತ್ರ ಪುನರ್ ವಿಂಗಡಣೆ ನಿರ್ಣಯದ ಸಂದರ್ಭ ಸಂಸತ್ತು ಮತ್ತು ವಿಧಾನಸಭೆಯಲ್ಲಿ ಕೊಡವರಿಗೆ ಪ್ರತ್ಯೇಕ ವಿಶೇಷ ರಾಜಕೀಯ ಸ್ಥಾನಮಾನ ಕಲ್ಪಿಸಬೇಕು. ವಿಶ್ವರಾಷ್ಟ್ರ ಸಂಸ್ಥೆಯ ಅಂತರಾಷ್ಟ್ರೀಯ ಕಾನೂನಿನಡಿ ಆದಿಮಸಂಜಾತ (ಆ್ಯನಿಮಿಸ್ಟಿಕ್) ಕೊಡವ ಸಮುದಾಯವನ್ನು ಸಂರಕ್ಷಿಸಬೇಕು ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿದರು. ಮಾನವ ಸರಪಳಿ ಕಾರ್ಯಕ್ರಮವು ಕೊಡವ ಸಮುದಾಯದ ಹಕ್ಕೊತ್ತಾಯಗಳಿಗೆ ಮತ್ತು ಜಾಗೃತಿ ಮೂಡಿಸುವುದಕ್ಕಾಗಿ ಶಾಂತಿಯುತವಾಗಿ ಕೊಡವಲ್ಯಾಂಡ್ನಾದ್ಯಂತ ನಡೆಯುತ್ತಿದೆ. ಪಾಡಿನಾಡ್, ನೆಲಜಿನಾಡ್, ಬಲ್ಲತ್ನಾಡ್, ನೂರಂಬಡ ನಾಡ್ ಮತ್ತು ಕಡಿಯತ್ನಾಡ್ ಭಾಗದ ಕೊಡವ ಬಂಧುಗಳು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡಿದ್ದರು. ಸಿಎನ್ಸಿಯೂ ಗುರಿಯಕಡೆ ನಿಧಾನವಾಗಿ ಎಲ್ಲಿಯೂ ನಿಲ್ಲದೆ ಅವಿರತವಾಗಿ ಸಾಗುತ್ತಿದೆ. ಸಿಎನ್ಸಿಯ ಶಾಂತಿಯುತ ಹಾಗೂ ಸುದೀರ್ಘ ಸಂವಿಧಾನಿಕ ಹಕ್ಕೊತ್ತಾಯದ ನಡೆಗೆ ವಿಚಲಿತರಾಗದೆ ಬೆಂಬಲಿಸಬೇಕೆಂದು ಎನ್.ಯು.ನಾಚಪ್ಪ ಮನವಿ ಮಾಡಿದರು.
ಕಾರ್ಯಕ್ರಮದಲ್ಲಿ ಭಾಗವಹಿಸಿದವರು ಸೂರ್ಯ-ಚಂದ್ರ, ಭೂದೇವಿ, ಪ್ರಕೃತಿ ದೇವಿ, ಜಲದೇವಿ, ವನದೇವಿ, ಸಂವಿಧಾನ, ಗುರು ಕಾರೋಣ ಹೆಸರಿನಲ್ಲಿ ಸಿಎನ್ಸಿಯ ಕೊಡವಲ್ಯಾಂಡ್ ಹೋರಾಟದೊಂದಿಗೆ ತಮ್ಮನ್ನು ಸಮರ್ಪಿಸಿಕೊಳ್ಳುವ ಧೀಕ್ಷೆ ಸ್ವೀಕರಿಸಿದರು. ರಾಷ್ಟ್ರ ಗೀತೆ ಜನ-ಗಣ-ಮನದೊಂದಿಗೆ ಕಾರ್ಯಕ್ರಮ ಸಮಾರೋಪಗೊಂಡಿತು. ಬೊಪ್ಪಂಡ ಬೊಳ್ಳಮ್ಮ ನಾಣಯ್ಯ, ಅಪ್ಪಚ್ಚಿರ ರೀನಾ ರಮ್ಮಿ, ನಂದಿನೆರವಂಡ ರೇಖಾ ನಾಚಪ್ಪ, ಬಿದ್ದಾಟಂಡ ಮಮತ ಚಿಣ್ಣಪ್ಪ, ಕಲಿಯಂಡ ಪ್ರಕಾಶ್, ನಾಪೋಕ್ಲು ಕೊಡವ ಸಮಾಜದ ಅಧ್ಯಕ್ಷ ಮುಂಡಂಡ ನಾಣಯ್ಯ, ಅಪ್ಪಚ್ಚಿರ ರಮ್ಮಿ ನಾಣಯ್ಯ, ಕುಲ್ಲೇಟಿರ ಅರುಣಾ ಬೇಬ, ಮಣವಟ್ಟಿರ ಶಿವಣಿ, ಕಾಟುಮಣಿಯಂಡ ಉಮೇಶ್, ಅರೆಯಡ ಗಿರೀಶ್, ಬೊಳ್ಳಚೆಟ್ಟಿರ ಸುರೇಶ್, ಕೊಡಂದೇರ ಬಾಂಡ್ ಗಣಪತಿ, ಕೆಟೋಳಿರ ಹರೀಶ್ ಪೂವಯ್ಯ, ಕೋಡಿಮಣಿಯಂಡ ಮಣಿ, ಕಂಡ್ಯೋಳಂಡ ರಮೇಶ್, ಅರೆಯಡ ರತ್ನ, ಕರವಂಡ ಲವ, ಕುಂಟಜೆಟಿರ ಶ್ಯಾಮ್, ಮಣವಟ್ಟೀರ ಜಗ್ಗು, ಕುಲ್ಲೇಟಿರ ಅಜಿತ್ ನಾಣಯ್ಯ, ಅಪ್ಪಾರಂಡ ಪ್ರಸಾದ್, ಅಪ್ಪಾರಂಡ ಪ್ರಕಾಶ್, ಅಪ್ಪಾರಂಡ ವಿಜು, ಕಂಙಂಡ ಜಾಲಿ, ಕುಲ್ಲೇಟಿರ ದೇವಿ, ಕನ್ನಂಬಿರ ಸುಧಿ, ಅರೆಯಡ ರಘು, ಅಜ್ಜೆಟ್ಟೀರ ಬೋಪಣ್ಣ, ಕ್ಯಾಲೆಟಿರ ಮಧು, ಅಜ್ಜೆಟ್ಟೀರ ಶಂಭು, ಕುಂಡ್ಯೋಳಂಡ ವಿಶು, ಕೊಂಡಿರ ರಾಜಪ್ಪ, ಬೊಪ್ಪಂಡ ಬೆಲ್ಲು, ಬಿದ್ದಾಟಂಡ ಶಿವಾಜಿ, ಕಿಕ್ಕೇರಿಯಂಡ ಕುಮಾರ್, ಬಿದ್ದಾಟಂಡ ಡಿಕ್ಕಿ, ನಿಡುಮಂಡ ಕೃತಿ, ಪುಲ್ಲೇರ ವಿಠಲ, ಅಪ್ಪಚ್ಚಿರ ಮಹೇಶ್, ಕಲಿಯಂಡ ಹ್ಯಾರಿ, ಶಿಬಚಾಳಿಯಂಡ ಅಂಬಿ, ಕಲಿಯಂಡ ಕೌಶಿ, ಅರೆಯಡ ಅಶೋಕ್, ನಾಯಕಂಡ ದೀಪು, ಮಣವಟ್ಟೀರ ಡಿಕ್ಕ, ಕೊಂಡಿರ ಕೀರ್ತನ್, ಕ್ಯಾಲೆಟಿರ ಸಾಬು, ಚೋಕಿರ ಪ್ರಭು, ಬೊಟ್ಟೋಳಂಡ ರಮೇಶ್, ನಾಯಂಡ ಕುಞಣ್ಣ, ಶಿವಚಾಳಿಯಂಡ ಜಗ, ಕಲಿಯಂಡ ವಿಠಲ, ಬೊಪ್ಪಂಡ ಜಪ್ಪು, ಕೊಂಡಿರ ಪಳಂಗಪ್ಪ, ಶಿವಚಾಳಿಯಂಡ ಡಾಲು, ಪುಲ್ಲೇರ ಹ್ಯಾರಿ, ಚೋಕಿರ ಸಜಿತ್, ಕೋಡಿಮಣಿಯಂಡ ರಾಜಾ, ಮುಕ್ಕಾಟಿರ ಸುತನ್, ಕೊಂಡಿರ ಮೋಹನ್, ಅರೆಯಡ ಕಿರಣ್, ಅರೆಯಡ ದೇವಯ್ಯ, ಅಪ್ಪನೆರವಂಡ ಕಿರಣ್, ಅಪ್ಪನೆರವಂಡ ರನ್ನು, ಮಣವಟ್ಟೀರ ಸ್ವರೂಪ್, ಕೊಂಡಿರ ತಮುಣಿ, ಮೂವೇರ ಪಟ್ಟು, ಕ್ಯಾಲೆಟಿರ ರಮೇಶ್, ಚಿಯಕ್ಪೂವಂಡ ಸತೀಶ್, ಅಪ್ಪನೆರವಂಡ ಕಿರಣ್, ಪಟ್ರಪಂಡ ನಿರನ್, ಕಾಟುಮಣಿಯಂಡ ಕಾರ್ತಿಕ್, ಅಂಜಪರವಂಡ ರಂಜು, ಮೂವೆರ ಬಿನ್ನು, ಬಾದುಮಂಡ ನಾಣಯ್ಯ, ಅಂಜಪರವಂಡ ರಘು, ಕಂಙಂಡ ರಾಜು, ನಾಯಕಂಡ ಕುಮಾರ್, ಮುಂಡಂಡ ಶಾಂತ, ಬಾದುಮಂಡ ವಿಹಾನ್ ಉತ್ತಪ್ಪ, ಬಾದುಮಂಡ ವಿರಾನ್, ಕರವಂಡ ಬೆಲ್ಲು, ಬೊಟ್ಟೊಳಂಡ ಸುಜು, ಚಿಯಕ್ ಪೂವಂಡ ಸಚಿನ್, ಅಜ್ಜೆಟ್ಟೀರ ರಾಜಾ, ಬದ್ದಂಜೆಟ್ಟಿರ ಭೀಮಯ್ಯ, ಕಲಿಯಟಂಡ ರಮೇಶ್, ಚಂಗೇಟ್ಟಿರ ಶಂಭು ಭಾಗವಹಿಸಿದ್ದರು. *ಜು.19 ರಂದು ಮಾದಾಪುರದಲ್ಲಿ ಕಾರ್ಯಕ್ರಮ* ಮುಂದಿನ 8ನೇ ಮಾನವ ಸರಪಳಿ ಕಾರ್ಯಕ್ರಮ ಜು.19 ರಂದು ಬೆಳಿಗ್ಗೆ 10.30 ಗಂಟೆಗೆ ಮಾದಾಪುರದಲ್ಲಿ ನಡೆಯಲಿದೆ.









