
ಮಡಿಕೇರಿ ಆ.29 NEWS DESK : ಕೊಡಗು ಸೌಹಾರ್ದ ಪತ್ತಿನ ಸಹಕಾರಿ ಸಂಘವು 2024-25ನೇ ಸಾಲಿಗೆ ರೂ.28,96,676 ರಷ್ಟು ಲಾಭಗಳಿಸಿದ್ದು, ಸದಸ್ಯರಿಗೆ ಶೇ.10 ರಂತೆ ಡಿವಿಡೆಂಟ್ ಪಾವತಿಸಲಾಗುವುದೆಂದು ಸಂಘದ ಅಧ್ಯಕ್ಷ ಮಂಡುವಂಡ ಪಿ.ಮುತ್ತಪ್ಪ ತಿಳಿಸಿದ್ದಾರೆ. ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, 2005ರಲ್ಲಿ ಮಾಜಿ ಸಚಿವ ಮೇರಿಯಂಡ ಸಿ.ನಾಣಯ್ಯ ಅವರ ಸಲಹೆ, ಮಾರ್ಗದರ್ಶನದಂತೆ ಅಂದಿನ ಮಡಿಕೇರಿ ಕೊಡವ ಸಮಾಜದ ಅಧ್ಯಕ್ಷರಾಗಿದ್ದ ಮಾತಂಡ ಎಂ.ಸುರೇಶ್ ಚಂಗಪ್ಪ ಮತ್ತು ಆಡಳಿಮಂಡಳಿಯವರು ಈ ಸೌಹಾರ್ದ ಸಹಕಾರಿ ಹುಟ್ಟಿಗೆ ಕಾರಣಕರ್ತರಾದರು. 472 ಸದಸ್ಯರ ರೂ.5.96 ಲಕ್ಷ ಪಾಲು ಬಂಡವಾಳದಿಂದ ಪ್ರಾರಂಭಗೊಂಡು ಇದೀಗ 2025ರ ಮಾರ್ಚ್ ಅಂತ್ಯಕ್ಕೆ 2143 ಸದಸ್ಯರೊಂದಿಗೆ ರೂ.98.61 ಲಕ್ಷ ಪಾಲುಬಂಡವಾಳ ಇರುತ್ತದೆ. ಈ ಸಹಕಾರಿಯಿಂದ ತನ್ನ ಸದಸ್ಯರಿಗೆ ಜಾಮೀನು ಸಾಲ, ಆಭರಣ ಸಾಲ ನೀಡುತ್ತಾ ಬರುತ್ತಿದ್ದು, ಅಂದಿನಿಂದ ಇಂದಿನವರೆಗೆ ಪ್ರತಿ ವರ್ಷ ಲಾಭದೊಂದಿಗೆ ಮುಂದುವರಿದೆ ಎಂದರು. ವಯಸ್ಸಿಗನುಗುಣವಾಗಿ ಮರಣ ನಿಧಿ ಸೌಲಭ್ಯವನ್ನು ಅಳವಡಿಸಕೊಂಡಿರುತ್ತದೆ. ಇದಲ್ಲದೆ ಹೆಚ್ಚಿನ ಬಡ್ಡಿದರದಲ್ಲಿ ಮಿತವ್ಯಯ ಠೇವಣಿ, ನಿರಖು ಠೇವಣಿಯನ್ನು ಸ್ವೀಕರಿಸುತ್ತಿದ್ದೇವೆ. ಉಳಿತಾಯ ಖಾತೆ, ರೆಕರಿಂಗ್ ಠೇವಣಿ ಇವುಗಳ ಸೌಲಭ್ಯದೊಂದಿಗೆ ಸಾರ್ವಜನಿಕರಿಗೆ ಸೇವೆಯಾಗಿ ಈ ಸ್ಟಾಂಪಿಗ್, ಆರ್ಟಿಸಿ, ಜೆರಾಕ್ಸ್ ಚಾಲ್ತಿಯಲ್ಲದೆ. ಸದಸ್ಯರಿಗೆ ಯಶಸ್ವಿನಿಯೋಜನೆಯನ್ನು ಜಾರಿಗೊಳಸಲಾಗಿದೆ. ಸದಸ್ಯರ ಮಕ್ಕಳಿಗೆ ಎಸ್ಎಸ್ಎಲ್ಸಿ, ಪಿಯುಸಿಯಲ್ಲಿ ಅತ್ಯುತ್ತಮ ಅಂಗಳಿಸಿದ ಒಬ್ಬೋಬ್ಬರಿಗೆ ಪ್ರೋತ್ಸಾಹ ಬಹುಮಾನ ಅಲ್ಲದೇ, ಆರ್ಥಿಕವಾಗಿ ಹಿಂದುಳಿದ ಸದಸ್ಯರ ಮಕ್ಕಳ ವಿದ್ಯಾಭ್ಯಾಸಕ್ಕಾಗಿ ಹಾಗೂ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಸದಸ್ಯರಿಗೆ ಮತ್ತು ಅವರ ಮಕ್ಕಳಿಗೆ ಅಲ್ಲದೇ ತೀವ್ರ ಅನಾರೋಗ್ಯಕ್ಕೆ ಒಳಗಾದ ಸದಸ್ಯರಿಗೆ ಸಹಾಯಧನ ನೀಡಲಾಗುತ್ತಿದೆ ಎಂದು ತಿಳಿಸಿದರು. ಸಹಕಾರಿಯ ಒಟ್ಟು ದುಡಿಯುವ ಬಂಡವಾಳ ರೂ.856.96 ಕೋಟಿ, ಪಾಲು ಹಣ ರೂ.98.61 ಲಕ್ಷ, ಮರಣ ನಿಧಿ ರೂ.11.42 ಲಕ್ಷ, ಮಿತವ್ಯಯ ಠೇವಣಿ ರೂ.40.9 ಲಕ್ಷ, ನಿರಖು ಠೇವಣಿ ಸದಸ್ಯರು ರೂ.4.40 ಕೋಟಿಯಾಗಿದೆ ಎಂದು ತಿಳಿಸಿದರು. ಕಳೆದ 20 ವರ್ಷಗಳಿಂದ ಸಾಲ ನೀಡುತ್ತಿದ್ದು, ಈ ವರ್ಷ 509 ಸದಸ್ಯರಿಗೆ ರೂ.4.50 ಕೋಟಿ ಸಾಲವನ್ನು ನೀಡಲಾಗಿದೆ ಎಂದರು. ಕಳೆದ ಏಳು ವರ್ಷಗಳಿಂದ ಈ ಸಹಕಾರಿಗೆ ಸತತವಾಗಿ ಕೊಡಗು ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕಿನಿಂದ ಪ್ರಥಮ ಬಹುಮಾನ ಪಡೆದಿದ್ದು, ರಾಜ್ಯಮಟ್ಟದಲ್ಲಿಯೂ ಕಳೆದ ವರ್ಷ ಉತ್ತಮ ಸೌಹಾರ್ದ ಸಹಕಾರಿ ಪ್ರಶಸ್ತಿ ಲಭಿಸಿದೆ. ಆಡಳಿತ ಮಂಡಳಿ, ಸಿಬ್ಬಂದಿ ವರ್ಗ, ಸರ್ವ ಸದಸ್ಯರ ಸಹಕಾರದಿಂದಾಗಿ ಅಭಿವೃದ್ಧಿ ಹಾಗೂ ಉತ್ತಮ ನಿರ್ವಹಣೆಗೆ ಸಂದ ಫಲವಾಗಿದೆ ಎಂದು ಹರ್ಷ ವ್ಯಕ್ತಪಡಿಸಿದರು. :: ಮಹಾಸಭೆ :: ಕೊಡಗು ಸೌಹಾರ್ದ ಪತ್ತಿನ ಸಹಕಾರಿ ಸಂಘದ 21ನೇ ವಾರ್ಷಿಕ ಮಹಾಸಭೆಯು ಸೆ.5 ರಂದು ಸಹಕಾರಿ ಸಂಘದ ಅಧ್ಯಕ್ಷ ಮಂಡುವಂಡ ಪಿ.ಮುತ್ತಪ್ಪ ಅವರ ಅಧ್ಯಕ್ಷತೆಯಲ್ಲಿ ನಡೆಯಲಿದೆ. ಮಡಿಕೇರಿ ಕೊಡವ ಸಮಾಜದಲ್ಲಿ ಪೂರ್ವಾಹ್ನ 11 ಗಂಟೆಗೆ ನಡೆಯಲಿದ್ದು, ಸದಸ್ಯರು ಸಮಯಕ್ಕೆ ಸರಿಯಾಗಿ ಹಾಜರಾಗಿ ಕಲಾಪವನ್ನು ಸಾಂಗವಾಗಿ ನಡೆಸಲು ಸಹಕರಿಸುವಂತೆ ಮಂಡುವಂಡ ಪಿ.ಮುತ್ತಪ್ಪ ಮನವಿ ಮಾಡಿದರು. ಸುದ್ದಿಗೋಷ್ಠಿಯಲ್ಲಿ ಸಂಘದ ಉಪಾಧ್ಯಕ್ಷ ಕುಡುವಂಡ ಬಿ.ಉತ್ತಪ್ಪ, ನಿರ್ದೇಶಕರಾದ ಅಂಜಪರವಂಡ ಜಿ.ಉಷಾ, ನಂದೇಟಿರ ಪಿ.ರಾಜ ಮಾದಪ್ಪ, ಕೇಕಡ ಎಂ.ಸುಗುಣ, ಮುಖ್ಯಕಾರ್ಯನಿರ್ವಾಹಣಾಧಿಕಾರಿ ಪಿ.ಸಿ.ನೀಮಾ ಉಪಸ್ಥಿತರಿದ್ದರು.









