Close Menu
News Desk KannadaNews Desk Kannada
  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಇತ್ತೀಚಿನ ಸುದ್ದಿಗಳು
  • ಉದ್ಯೋಗ ಭಾಗ್ಯ
  • ಮಹಾದೇಗುಲ
  • ರುಚಿ ನೋಡಿ
  • ಪೊಲೀಸ್ ನ್ಯೂಸ್
  • ರೋಗ ಮುಕ್ತ
  • ಪ್ರವಾಸಿತಾಣ
  • ಸಣ್ಣ ಕಥೆ
  • ವಿಡಿಯೋ ಗ್ಯಾಲರಿ
Facebook X (Twitter) Instagram
Breaking News
  • *ಆ.8 ರಂದು ಸುತ್ತೂರು ಶ್ರೀ ಮಡಿಕೇರಿ ಭೇಟಿ : ಸಿದ್ಧತೆ ಪರಿಶೀಲನೆ*
  • ಅಂತರಶಾಲಾ ಚೆಸ್ ಪಂದ್ಯಾವಳಿ : ಉನ್ನತ್ ಸಾರಥ್ಯ ಪ್ರಥಮ
  • *ರೈತರ ಬಂಧನಕ್ಕೆ ಖಂಡನೆ : ಪೊಲೀಸ್ ಕ್ರಮದ ವಿರುದ್ಧ ಕೊಡಗು ಎಸ್‍ಪಿ ಕಚೇರಿ ಎದುರು ಪ್ರತಿಭಟನೆ*
  • *ಗಾಂಜಾ ಮಾರಾಟ : ಅಸ್ಸಾಂ ಮೂಲದ ಕಾರ್ಮಿಕರ ಬಂಧನ
  • *ಆ.8 ರಂದು ಕೊಡಗು ಜಿಲ್ಲಾ ಸರ್ಕಾರಿ ನೌಕರರ ಸಂಸ್ಕೃತಿ ಮತ್ತು ಸಾಹಿತ್ಯ ಪರಿಷತ್ತು ಘಟಕದ ಪದಗ್ರಹಣ : ಆದರ್ಶ ಸೇವಾ ರತ್ನ ಪ್ರಶಸ್ತಿ ಪ್ರದಾನ*
  • *ಕೆ.ನಿಡುಗಣೆ ಗ್ರಾಮದ ಸರ್ಕಾರಿ ಗೋಶಾಲೆಗೆ ಸಚಿವ ಪಿ.ಎಂ.ನರೇಂದ್ರಸ್ವಾಮಿ ಭೇಟಿ : ಅಚ್ಚುಕಟ್ಟು ನಿರ್ವಹಣೆಗೆ ಮೆಚ್ಚುಗೆ*
  • *ಚೆಂಬು ಗ್ರಾಮದಲ್ಲಿ ಉಚಿತ ಇಡಿಪಿ ತರಬೇತಿ*
  • *ಮಡಿಕೇರಿಯಲ್ಲಿ ಸ್ತನ್ಯಪಾನ ಸಪ್ತಾಹ : ತಾಯಿಯ ಹಾಲಿನ ಮಹತ್ವದ ಕುರಿತು ಜಾಗೃತಿ*
  • *ಭಗಂಡೇಶ್ವರ ಹಾಗೂ ತಲಕಾವೇರಿ ದೇವಾಲಯಕ್ಕೆ ಸಚಿವ ಪಿ.ಎಂ.ನರೇಂದ್ರಸ್ವಾಮಿ ಭೇಟಿ : ವಿಶೇಷ ಪೂಜೆ*
  • *ಕೊಡಗು ವಿದ್ಯಾಲಯದಲ್ಲಿ ಅಂತರ್-ಶಾಲಾ ಬೆಳ್ಳಿ ಹಬ್ಬದ ಚೆಸ್ ಪಂದ್ಯಾವಳಿ ಉದ್ಘಾಟನೆ* 
News Desk KannadaNews Desk Kannada




  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಪೊಲೀಸ್ ನ್ಯೂಸ್
  • ಪ್ರವಾಸಿತಾಣ
  • ಮಹಾದೇಗುಲ
  • ರುಚಿ ನೋಡಿ
  • ಉದ್ಯೋಗ ಭಾಗ್ಯ
  • ರೋಗ ಮುಕ್ತ
  • ಸಣ್ಣ ಕಥೆ
News Desk KannadaNews Desk Kannada





Home»ಇತ್ತೀಚಿನ ಸುದ್ದಿಗಳು»*ರೈತರ ಬಂಧನಕ್ಕೆ ಖಂಡನೆ : ಪೊಲೀಸ್ ಕ್ರಮದ ವಿರುದ್ಧ ಕೊಡಗು ಎಸ್‍ಪಿ ಕಚೇರಿ ಎದುರು ಪ್ರತಿಭಟನೆ*
ಇತ್ತೀಚಿನ ಸುದ್ದಿಗಳು ಕೊಡಗು ಜಿಲ್ಲೆ

*ರೈತರ ಬಂಧನಕ್ಕೆ ಖಂಡನೆ : ಪೊಲೀಸ್ ಕ್ರಮದ ವಿರುದ್ಧ ಕೊಡಗು ಎಸ್‍ಪಿ ಕಚೇರಿ ಎದುರು ಪ್ರತಿಭಟನೆ*

ಆಗಷ್ಟ್ 7, 20262 Mins ReadBy admin
Facebook WhatsApp Twitter Telegram Copy Link Threads Email LinkedIn Pinterest
Follow us on
Google News Facebook
Facebook Twitter WhatsApp Email Telegram Copy Link


ಮಡಿಕೇರಿ ಆ.7 NEWS DESK : ಬಿಡದಿ ಟೌನ್ ಶಿಪ್ ವಿರುದ್ಧ ಶಾಂತಿಯುತ ಹೋರಾಟ ನಡೆಸಲು ತೆರಳುತ್ತಿದ್ದ ಕೊಡಗಿನ ರೈತರನ್ನು ಕಾನೂನು ಬಾಹಿರವಾಗಿ ಬಂಧಿಸಲಾಗಿದೆ ಎಂದು ಆರೋಪಿಸಿ ಮತ್ತು ಪೊಲೀಸರ ಕ್ರಮವನ್ನು ಖಂಡಿಸಿ ಕೊಡಗು ಜಿಲ್ಲಾ ರೈತ ಸಂಘ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ಕಚೇರಿಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿತು. ರೈತ ಸಂಘದ ಪ್ರಮುಖರು ಹಾಗೂ ಜಿಲ್ಲೆಯ ವಿವಿಧ ಭಾಗಗಳಿಂದ ಆಗಮಿಸಿದ್ದ ರೈತರು ಪ್ರತಿಭಟನೆ ನಡೆಸಿ ಪೊಲೀಸರ ವಿರುದ್ಧ ತೀವ್ರ ಅಸಮಾಧಾನ ವ್ಯಕ್ತಪಡಿಸಿದರು. ರೈತ ಸಂಘದ ಜಿಲ್ಲಾಧ್ಯಕ್ಷ ಕಾಡ್ಯಮಾಡ ಮನು ಸೋಮಯ್ಯ ಅವರು ಮಾತನಾಡಿ ಕೊಡಗಿನಲ್ಲಿ ಮಾತ್ರ ರೈತರನ್ನು ಬಂಧಿಸಲಾಗಿದೆ, ಇದರ ಹಿಂದೆ ಕಾಣದ ಕೈಗಳು ಕೆಲಸ ಮಾಡಿವೆ. ಈ ಕುರಿತು ಪೊಲೀಸ್ ವರಿಷ್ಠಾಧಿಕಾರಿಗಳು ಸ್ಪಷ್ಟನೆ ನೀಡಬೇಕೆಂದು ಆಗ್ರಹಿಸಿದರು. ಶಾಂತಿಯುತ ಹೋರಾಟಕ್ಕೆ ಹೊರಟಿದ್ದ ರೈತರನ್ನು ಬಂಧಿಸುವ ಮೂಲಕ ಪೊಲೀಸರು ಕೃಷಿಕ ವರ್ಗಕ್ಕೆ ಅವಮಾನ ಮಾಡಿದ್ದಾರೆ. ಕೊಡಗಿನ ಗಡಿಯಲ್ಲಿ ಬಂಧಿಸಿದ ರೈತರನ್ನು ನ್ಯಾಯಾಲಯಕ್ಕೆ ಹಾಜರು ಪಡಿಸಬೇಕಿತ್ತು. ಆದರೆ ಸಂಜೆವರೆಗೆ ಮದುವೆ ಮಂಟಪ, ಪೊಲೀಸ್ ಠಾಣೆಗಳಲ್ಲಿ ಕೂಡಿ ಹಾಕಿ ಅವಮಾನ ಎಸಗಲಾಗಿದೆ. ಬಂಧನಕ್ಕೆ ಒಳಗಾದ ರೈತರ ಕುಟುಂಬ ವರ್ಗ ಮತ್ತವರ ಮಕ್ಕಳ ಮನಸ್ಸಿನ ಮೇಲೆ ಬೀರಿದ ಪರಿಣಾಮವನ್ನು ಊಹಿಸಲು ಸಾಧ್ಯವಿಲ್ಲ. ಪೊಲೀಸರ ಇಂತಹ ವರ್ತನೆಯನ್ನು ಸಹಿಸಲು ಸಾಧ್ಯವಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಸೋಮವಾರಪೇಟೆ ರೈತ ಸಂಘದ ಮುಖಂಡ ದಿನೇಶ್ ಮಾತನಾಡಿ, ಪೊಲೀಸರು ರೈತರನ್ನು ಬಂಧಿಸುವ ಮೂಲಕ ಮಾನವ ಹಕ್ಕುಗಳ ಉಲ್ಲಂಘನೆ ಮಾಡಿದ್ದಾರೆ ಎಂದು ಆರೋಪಿಸಿದರು. ರೈತ ಮುಖಂಡ ಸರಗೂರು ನಾಗರಾಜ್ ಮಾತನಾಡಿ, ಬಿಡದಿ ಟೌನ್ ಶಿಪ್ ವಿರೋಧಿಸಲು ಕೊಡಗಿನ ರೈತರು ಬಿಡದಿಗೆ ಹೊರಟಿದ್ದರು. ಆದರೆ ಪೊಲೀಸರು ಕಳ್ಳರನ್ನು ಬಂಧಿಸುವ ಮಾದರಿಯಲ್ಲಿ ರೈತರನ್ನು ಬಂಧಿಸಿ ಮದುವೆ ಮಂಟಪ ಮತ್ತು ಪೊಲೀಸ್ ಠಾಣೆಯಲ್ಲಿ ಕೂಡಿ ಹಾಕಿದ್ದಾರೆ. ಬದುಕು ಕಟ್ಟಿಕೊಳ್ಳಲು ಬಿಡದಿ ರೈತರು ಹೋರಾಟ ಮಾಡುತ್ತಿದ್ದಾರೆ. ಇದಕ್ಕೆ ಬೆಂಬಲ ಸೂಚಿಸುವುದು ಅಪರಾಧವಲ್ಲ. ಇಂತಹ ಹೋರಾಟಗಳಿಗೆ ಪೊಲೀಸರು ಕೂಡ ಸಹಕಾರ ನೀಡಬೇಕು ಎಂದು ಒತ್ತಾಯಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಪೊಲೀಸ್ ವರಿಷ್ಠಾಧಿಕಾರಿ ಆರ್.ಎನ್.ಬಿಂದುಮಣಿ ಅವರು ಮುಂಜಾಗೃತಾ ಕ್ರಮವಾಗಿ ರೈತರನ್ನು ಗಡಿ ಭಾಗದಲ್ಲಿ ತಡೆದು ವಶಕ್ಕೆ ಪಡೆಯಲಾಗಿದೆ. ಈ ಕುರಿತು ಮೇಲಾಧಿಕಾರಿಗಳು ಆದೇಶ ನೀಡಿದಂತೆಯೇ ನಡೆದುಕೊಳ್ಳಲಾಗಿದೆ. ಆದೇಶದ ಪ್ರತಿಯನ್ನು ಸಾರ್ವಜನಿಕವಾಗಿ ಪ್ರದರ್ಶಿಸಲು ಸಾಧ್ಯವಿಲ್ಲ. ಮೇಲಾಧಿಕಾರಿಗಳು ಹೊರಡಿಸಿದ ಆದೇಶದ ಪ್ರತಿ ಬೇಕಾದಲ್ಲಿ ಸೂಕ್ತ ಕಾನೂನು ರೀತಿಯಲ್ಲಿ ಪಡೆದುಕೊಳ್ಳಬಹುದು ಎಂದು ಸ್ಪಷ್ಟನೆ ನೀಡಿದರು. ಇದಕ್ಕೆ ಪ್ರತಿಕ್ರಿಯಿಸಿದ ಮನು ಸೋಮಯ್ಯ, ಆದೇಶದ ಪ್ರತಿಯನ್ನು ಕಾನೂನಾತ್ಮಕವಾಗಿ ಪಡೆಯಲಾಗುವುದು. ಈ ಹಿಂದೆಯೂ ರೈತ ಸಂಘ ಸಾಕಷ್ಟು ಹೋರಾಟಗಳನ್ನು ಮಾಡಿದೆ. ಆದರೆ ಎಲ್ಲಿಯೂ ರೈತರನ್ನು ತಡೆದು ಬಂಧಿಸುವ ಕೆಲಸವಾಗಿಲ್ಲ. ಶಾಂತಿಯುತ ಹೋರಾಟ ನಡೆಸುವ ಸಂದರ್ಭ ರೈತರನ್ನು ಬಂಧಿಸುವ ಕ್ರಮವನ್ನು ಕೈಬಿಡಬೇಕು. ಪೊಲೀಸರು ಕೂಡ ರೈತರ ಹೋರಾಟಕ್ಕೆ ಬೆಂಬಲ ನೀಡಬೇಕೆಂದು ಮನವಿ ಮಾಡಿದರು. ಪ್ರಮುಖರಾದ ಸುಜಯ್ ಬೋಪಯ್ಯ, ರಾಯ್ ಮಾದಪ್ಪ, ಸುರೇಶ್ ಚಕ್ರವರ್ತಿ, ಕೂತಿ ಹೂವಯ್ಯ, ಆಲೇಮಾಡ ಮಂಜುನಾಥ್, ಕಾರ್ಮಿಕ ಸಂಘಟನೆಯ ಮುಖಂಡ ಪಿ.ಆರ್.ಭರತ್, ಪಿರಿಯಾಪಟ್ಟಣ ಶಿವಣ್ಣ, ಮೈಸೂರಿನ ಲೋಕೇಶ್ ರಾಜೇ ಅರಸ್ ಸೇರಿದಂತೆ ವಿವಿಧ ಕಡೆಗಳಿಂದ ಆಗಮಿಸಿದ್ದ ರೈತ ಸಂಘಟನೆಗಳ ಪದಾಧಿಕಾರಿಗಳು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

 

Follow us Follow us
Share. WhatsApp Facebook Twitter Email Telegram Copy Link

Website design development company services in Mangalore

Forex Trading Teacher in India

Related Posts

*ಆ.8 ರಂದು ಸುತ್ತೂರು ಶ್ರೀ ಮಡಿಕೇರಿ ಭೇಟಿ : ಸಿದ್ಧತೆ ಪರಿಶೀಲನೆ*

ಆಗಷ್ಟ್ 7, 2026

ಅಂತರಶಾಲಾ ಚೆಸ್ ಪಂದ್ಯಾವಳಿ : ಉನ್ನತ್ ಸಾರಥ್ಯ ಪ್ರಥಮ

ಆಗಷ್ಟ್ 7, 2026

*ಗಾಂಜಾ ಮಾರಾಟ : ಅಸ್ಸಾಂ ಮೂಲದ ಕಾರ್ಮಿಕರ ಬಂಧನ

ಆಗಷ್ಟ್ 7, 2026

ಅಂತರಶಾಲಾ ಚೆಸ್ ಪಂದ್ಯಾವಳಿ : ಉನ್ನತ್ ಸಾರಥ್ಯ ಪ್ರಥಮ

ಆಗಷ್ಟ್ 7, 2026 ಇತ್ತೀಚಿನ ಸುದ್ದಿಗಳು ಕೊಡಗು ಜಿಲ್ಲೆ

ಮಡಿಕೇರಿ ಆ.7 NEWS DESK : ನಗರದ ಕೊಡಗು ವಿದ್ಯಾಲಯದಲ್ಲಿ ಎರಡು ದಿನಗಳ ಅಂತರಶಾಲಾ ಚೆಸ್ ಪಂದ್ಯಾವಳಿಯಲ್ಲಿ ಅತ್ತೂರಿನ ಜ್ಞಾನಗಂಗಾ…

*ರೈತರ ಬಂಧನಕ್ಕೆ ಖಂಡನೆ : ಪೊಲೀಸ್ ಕ್ರಮದ ವಿರುದ್ಧ ಕೊಡಗು ಎಸ್‍ಪಿ ಕಚೇರಿ ಎದುರು ಪ್ರತಿಭಟನೆ*

ಆಗಷ್ಟ್ 7, 2026

*ಗಾಂಜಾ ಮಾರಾಟ : ಅಸ್ಸಾಂ ಮೂಲದ ಕಾರ್ಮಿಕರ ಬಂಧನ

ಆಗಷ್ಟ್ 7, 2026

*ಆ.8 ರಂದು ಕೊಡಗು ಜಿಲ್ಲಾ ಸರ್ಕಾರಿ ನೌಕರರ ಸಂಸ್ಕೃತಿ ಮತ್ತು ಸಾಹಿತ್ಯ ಪರಿಷತ್ತು ಘಟಕದ ಪದಗ್ರಹಣ : ಆದರ್ಶ ಸೇವಾ ರತ್ನ ಪ್ರಶಸ್ತಿ ಪ್ರದಾನ*

ಆಗಷ್ಟ್ 6, 2026

*ಕೆ.ನಿಡುಗಣೆ ಗ್ರಾಮದ ಸರ್ಕಾರಿ ಗೋಶಾಲೆಗೆ ಸಚಿವ ಪಿ.ಎಂ.ನರೇಂದ್ರಸ್ವಾಮಿ ಭೇಟಿ : ಅಚ್ಚುಕಟ್ಟು ನಿರ್ವಹಣೆಗೆ ಮೆಚ್ಚುಗೆ*

ಆಗಷ್ಟ್ 6, 2026

*ಚೆಂಬು ಗ್ರಾಮದಲ್ಲಿ ಉಚಿತ ಇಡಿಪಿ ತರಬೇತಿ*

ಆಗಷ್ಟ್ 6, 2026

*ಮಡಿಕೇರಿಯಲ್ಲಿ ಸ್ತನ್ಯಪಾನ ಸಪ್ತಾಹ : ತಾಯಿಯ ಹಾಲಿನ ಮಹತ್ವದ ಕುರಿತು ಜಾಗೃತಿ*

ಆಗಷ್ಟ್ 6, 2026

*ಭಗಂಡೇಶ್ವರ ಹಾಗೂ ತಲಕಾವೇರಿ ದೇವಾಲಯಕ್ಕೆ ಸಚಿವ ಪಿ.ಎಂ.ನರೇಂದ್ರಸ್ವಾಮಿ ಭೇಟಿ : ವಿಶೇಷ ಪೂಜೆ*

ಆಗಷ್ಟ್ 6, 2026

*ಕೊಡಗು ವಿದ್ಯಾಲಯದಲ್ಲಿ ಅಂತರ್-ಶಾಲಾ ಬೆಳ್ಳಿ ಹಬ್ಬದ ಚೆಸ್ ಪಂದ್ಯಾವಳಿ ಉದ್ಘಾಟನೆ* 

ಆಗಷ್ಟ್ 6, 2026

*ಸಂಘಟನಾ ಸೃಜನ್ ಅಭಿಯಾನ್ ಮೂಲಕ ಕಾಂಗ್ರೆಸ್ ಸಂಘಟನೆ : ಜಿಲ್ಲಾಧ್ಯಕ್ಷರ ಆಯ್ಕೆಗೆ ಅಭಿಪ್ರಾಯ ಸಂಗ್ರಹ*

ಆಗಷ್ಟ್ 6, 2026
  • Facebook
  • Twitter
  • Instagram
  • WhatsApp
  • YouTube
Quick Links
  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಪೊಲೀಸ್ ನ್ಯೂಸ್
  • ಪ್ರವಾಸಿತಾಣ
Quick Links
  • ಮಹಾದೇಗುಲ
  • ರುಚಿ ನೋಡಿ
  • ರೋಗ ಮುಕ್ತ
  • ಉದ್ಯೋಗ ಭಾಗ್ಯ
  • ಸಣ್ಣ ಕಥೆ
  • ವಿಡಿಯೋ ಗ್ಯಾಲರಿ
Contact

www.newsdeskkannada.com
News Desk,
Industrial Area,
Pathrika Bhavan Building,
Madikeri, Kodagu, Karnataka.
Phone: 94481 00724
              76766 24467
Email: newsdeskkodagu@gmail.com

© 2026 All Rights Reserved. Designed by Blueline Computers.
  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಪೊಲೀಸ್ ನ್ಯೂಸ್
  • ಪ್ರವಾಸಿತಾಣ

Type above and press Enter to search. Press Esc to cancel.

Ad Blocker Enabled!
Ad Blocker Enabled!
Our website is made possible by displaying online advertisements to our visitors. Please support us by disabling your Ad Blocker.