
ಮಡಿಕೇರಿ ಸೆ.1 NEWS DESK : ಕೊಂಡಗೇರಿಯಲ್ಲಿ ನಡೆದ ವಲಯ ಮಟ್ಟದ ಪ್ರೌಢಶಾಲಾ ವಿಭಾಗದ ಬಾಲಕರ ಖೋ-ಖೋ ಪಂದ್ಯಾವಳಿಯಲ್ಲಿ ವಿರಾಜಪೇಟೆಯ ಕಾವೇರಿ ಶಾಲೆಯ ವಿದ್ಯಾರ್ಥಿಗಳು ರನರ್ಸ್ ಟ್ರೋಫಿ ಯನ್ನು ತಮ್ಮದಾಗಿಸಿಕೊಂಡಿದ್ದಾರೆ. ತಂಡದಲ್ಲಿ ಹುಮೈದ್ ಜುಕಾಕು, ಕೆ.ಎ.ಮೊಹಮ್ಮದ್ ಸಿನಾನ್, ಕೆ.ಕೆ.ಮೊಹಮ್ಮದ್ ಅಬಿನಾಸ್, ಎಂ.ಎಂ.ಮುಝಮಿಲ್, ಹೆಚ್.ಎನ್.ಸುಮನ್ ರಾಜ್, ವಿ.ಪಿ.ಯಶವಂತ್, ಪಿ.ಎಂ.ಮೊಹಮ್ಮದ್ ಅಪ್ಸರ್, ಕುಟ್ಟಂಡ ಚಿರಾಗ್ ಚಂಗಪ್ಪ, ಕೊಳುವಂಡ.ಬಿ.ಲವೀನ್ ಬೋಪಣ್ಣ, ಟಿ.ವಿ.ಅಕ್ಷಾನ್, ಚೇಂದಂಡ ಆರ್ ಸೋಹನ್ ಸೋಮಣ್ಣ, ಯು.ಪೊಟ್ಟಂಡ ಯಕ್ಷಿತ್ ಭಾಗವಹಿಸಿದ್ದರು. ತಂಡಕ್ಕೆ ಶಾಲೆಯ ದೈಹಿಕ ಶಿಕ್ಷಕರುಗಳಾದ ಬಿ.ಎಸ್.ಮೋನಿಕಾ ಹಾಗೂ ಲಾವಣ್ಯ ಮಾರ್ಗದರ್ಶನ ನೀಡಿದ್ದಾರೆ. ತಂಡದ ಸಾಧನೆಗೆ ಶಾಲೆಯ ಆಡಳಿತ ಮಂಡಳಿಯವರು, ಮುಖ್ಯ ಶಿಕ್ಷಕಿ, ಸಂಯೋಜಿಕಿ ಹಾಗೂ ಬೋಧಕ ಬೋಧಕೇತರ ವೃಂದದವರು, ಪೋಷಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.








