
ಮಡಿಕೇರಿ ಸೆ.5 NEWS DESK : ಅಮ್ಮತಿಯಲ್ಲಿ ನಡೆದ ಪ್ರಾಥಮಿಕ ವಿಭಾಗದ ಬಾಲಕರ ಥ್ರೋ ಬಾಲ್ ಪಂದ್ಯಾವಳಿಯಲ್ಲಿ ವಿರಾಜಪೇಟೆ ಕಾವೇರಿ ಶಾಲೆಯ ತಂಡ ರನ್ನರ್ಸ್ ಟ್ರೋಫಿ ತಮ್ಮದಾಗಿಸಿಕೊಂಡಿದೆ. ತಂಡದಲ್ಲಿ ವಿದ್ಯಾರ್ಥಿಗಳಾದ ಚೇತನ್ ಪೊನ್ನಪ್ಪ ಬಿ.ಎಸ್, ಸಾತ್ವಿಕ್ ಸಿ.ಆರ್, ಹಿತಾರ್ಥ್ ಪಿ.ಜಿ, ಚಿರಾಗ್ ಪಿ.ಆರ್, ಶಾಝಿಲ್ ಮುಸ್ತಾಫ ಪಿ.ಎಂ, ನೇಹನ್ ಎಂ.ಎ, ಸಿನಾಜ್ ಬಿ.ಎಸ್, ಅಜಾನ್ ಎಂ.ಎ, ತಾತಂಡ ದಕ್ಷ್ ಬೋಜಣ್ಣ ಟಿ, ಭೌತಿಕ್ ಶೆಟ್ಟ ಬಿ.ಎಸ್., ಪುಗ್ಗೇರ ಗದಿನ್ ಬೋಪಣ್ಣ, ಆದಿತ್ಯನ್ ಎಮ್.ಎಸ್, ಅನ್ವಿತ್ ಬಿ.ಬಿ., ಮೊಹಮ್ಮದ್ ರಾಹಿಲ್, ಕೌಶಿಕ್ ಯು. ಎಸ್. ಭಾಗವಹಿಸಿದ್ದರು. ಇವರಿಗೆ ದೈಹಿಕ ಶಿಕ್ಷಕರುಗಳಾದ ಮೋನಿಕ ಹಾಗೂ ಲಾವಣ್ಯ ಮಾರ್ಗದರ್ಶನ ನೀಡಿದ್ದಾರೆ. ತಂಡದ ಸಾಧನೆಗೆ ಶಾಲಾ ಆಡಳಿತ ಮಂಡಳಿಯವರು, ಮುಖ್ಯ ಶಿಕ್ಷಕಿ, ಸಂಯೋಜಕಿ, ಬೋಧಕ ಬೋಧಕೇತರ ಸಿಬ್ಬಂದಿ ವರ್ಗದವರು ಹಾಗೂ ಪೋಷಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.









