
ಮಡಿಕೇರಿ ಸೆ.8 NEWS DESK : ಮಡಿಕೇರಿಯ ಸಂತ ಜೋಸೆಫರ ಕಾನ್ವೆಂಟ್ ವಿದ್ಯಾ ಸಂಸ್ಥೆಯಲ್ಲಿ ಶಿಕ್ಷಕರ ದಿನಾಚರಣೆಯನ್ನು ಸಂಭ್ರಮದಿಂದ ಆಚರಿಸಲಾಯಿತು. ಸಂಸ್ಥೆಯ ಸುಪೀರಿಯರ್ ರೆ. ಸಿಸ್ಟರ್ ಮರ್ಸಿ ಜೇಕಬ್ ಮಾತನಾಡಿ, ಮಕ್ಕಳ ಮನ ನೋಯದಂತೆ ತಪ್ಪುಗಳನ್ನು ತಿದ್ದುವ ಕಲೆಗಾರಿಕೆ ಶಿಕ್ಷಕರಿಗೆ ಇರಬೇಕು. ಅಂತಹ ಶಿಕ್ಷಕರು ವಿದ್ಯಾರ್ಥಿಗಳ ಭವಿಷ್ಯದ ದಾರಿಗೆ ಬೆಳಕಾಗಬಲ್ಲರು ” ಎಂದು ಅಭಿಪ್ರಾಯಪಟ್ಟರು. ಸಂಸ್ಥೆಯ ಸಂಚಾಲಕರಾದ ಸಿಸ್ಟರ್ ಲೂರ್ದ್ ಮೇರಿ ಶಿಕ್ಷಕರ ದಿನಾಚರಣೆಯ ಶುಭಾಷಯಗಳನ್ನು ಕೋರಿದರು. ಸಂತ ಜೋಸೆಫರ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲರಾದ ಸಿಸ್ಟರ್ ರೋಜಾ ವಿದ್ಯಾಸಂಸ್ಥೆಯ ಎಲ್ಲಾ ಗುರು ವೃಂದದವರು, ಸಮಸ್ತ ವಿದ್ಯಾರ್ಥಿಗಳು ಮತ್ತು ಪೋಷಕರಿಗೆ ಶುಭ ಹಾರೈಸಿದರು. ಮಕ್ಕಳಿಂದ ನಡೆದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ ಗಮನ ಸೆಳೆಯಿತು. ಖ್ಯಾತ ಶಿಕ್ಷಕ ಡಾ.ರಾಧಾಕೃಷ್ಣನ್ ಉಡುಗೆ -ತೊಡುಗೆಯೊಂದಿಗೆ ಗಮನ ಸೆಳೆದ ವಿದ್ಯಾರ್ಥಿ ಕುಲದೀಪ್ ಡಾ. ರಾಧಾಕೃಷ್ಣನ್ ಅವರ ನಿಲುವುಗಳನ್ನು ತಮ್ಮ ಭಾಷಣದಲ್ಲಿ ವ್ಯಕ್ತಪಡಿಸಿದರು. ಸಂಸ್ಥೆಯ ವಿವಿಧ ವಿಭಾಗಗಳ ಮುಖ್ಯೋಪಾಧ್ಯಾಯಿನಿಯವರು, ವಿದ್ಯಾ ಸಂಸ್ಥೆಯ ಆಡಳಿತ ಮಂಡಳಿಯ ಎಲ್ಲಾ ಸಿಸ್ಟರ್ಸ್ ಉಪಸ್ಥಿತರಿದ್ದರು. ವಿದ್ಯಾರ್ಥಿನಿಯರಾದ ಸುಹಾ ಮತ್ತು ವರ್ಷಾ ಕಾರ್ಯಕ್ರಮವನ್ನು ನಿರೂಪಿಸಿದರು. ಕಾಲೇಜಿನ ವಿದ್ಯಾರ್ಥಿ ಸಂಘದ ನಾಯಕಿ ಮಾನಸ ಎಲ್ಲರನ್ನೂ ಸ್ವಾಗತಿಸಿದರು. ವಿದ್ಯಾರ್ಥಿ ರೇಹಾನ್ ವಂದಿಸಿದರು. ರಾಷ್ಟ್ರಗೀತೆಯೊಂದಿಗೆ ಕಾರ್ಯಕ್ರಮ ಮುಕ್ತಾಯವಾಯಿತು.









