
ಮಡಿಕೇರಿ ಜ.10 NEWS DESK : ವಿಜಯಲಕ್ಷ್ಮಿ ವಿದ್ಯಾ ಸಂಸ್ಥೆಯಲ್ಲಿ 1997 ರಿಂದ 2002ರ ವರೆಗೆ ಪ್ರೌಢ ಮತ್ತು ಪಿಯುಸಿ ವ್ಯಾಸಂಗವನ್ನು ಮುಗಿಸಿದ ಹಳೇಯ ವಿದ್ಯಾರ್ಥಿಗಳಿಂದ ಶಾಲಾಭಿವೃದ್ಧಿಗೆ ಆರ್ಥಿಕ ನೆರವು ನೀಡಲಾಯಿತು. ಹಳೇ ವಿದ್ಯಾರ್ಥಿಗಳಾದ ಉಷಾರಾಣಿ, ಸಿ.ಜೆ.ಉಷಾ, ಟಿ.ಕೆ.ಮಾಲತಿ, ಪಟ್ಟಡ ಬೋಪಯ್ಯ, ಎ.ಎ.ಸೋಮಯ್ಯ, ಯಂ.ಕೆ.ಕುಮಾರ, ಯಂ.ಸಂತೋಷ್, ಕೆ.ವಿ.ಸುಷ್ಮಿತಾ, ಪಿ.ಪಿ.ಸೌಮ್ಯ, ಎನ್.ಆರ್.ಸಜಿತಾ, ಹೆಚ್.ಆರ್.ನಂದಿನಿ, ಎಂ.ಜಿ.ಮಿನೋದ್, ಮಾಯಮುಡಿ ಸರ್ಕಾರಿ ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕಿ ಜಯಮ್ಮ ವಿಜಯಲಕ್ಷ್ಮಿ ಪ್ರೌಢ ಶಾಲಾ ವಿಭಾಗದಲ್ಲಿ ವಿದ್ಯಾರ್ಥಿಗಳಿಗೆ ಗುಣಮಟ್ಟದ ಕಂಪ್ಯೂಟರ್ ಶಿಕ್ಷಣ ನೀಡುವ ಸಲುವಾಗಿ 12000ರೂ.ಗಳ ಧನ ಸಹಾಯವನ್ನು ನೀಡಿದರು. ವಿದ್ಯಾಸಂಸ್ಥೆಯ ಪರವಾಗಿ ಉಪ ಹಿರಿಯ ಸಹಾಯಕ ಅಧ್ಯಾಪಕರುಗಳಾದ ಬೆನಡಿಕ್ಟ್ ಫರ್ನಾಂಡಿಸ್ ಶಿಕ್ಷಕರು ಮತ್ತು ವಿದ್ಯಾರ್ಥಿಗಳ ಸಮ್ಮುಖದಲ್ಲಿ ನಗದನ್ನು ಸ್ವೀಕರಿಸಿದರು.









