
ಸುಂಟಿಕೊಪ್ಪ ಜೂ.24 NEWS DESK : ಅಂತರಾಷ್ಟ್ರೀಯ ಯೋಗ ದಿನಾಚರಣೆ ಅಂಗವಾಗಿ ರಾಮ ಮಂದಿರದಲ್ಲಿ ಯೋಗ ದಿನವನ್ನು ಆಚರಿಸಲಾಯಿತು. ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಕೊಡಗು ವೈದ್ಯಕೀಯ ಶಿಕ್ಷಣ ಸಂಸ್ಥೆ ಪ್ರಕೃತಿ ಚಿಕಿತ್ಸಾಕ ಮತ್ತು ಸಲಹೆಗಾರರಾದ ಡಾ. ಪಿ.ಜಿ.ಅರುಣ್ ಕುಮಾರ್ ಅವರು ಯೋಗದ ಪರಿಪೂರ್ಣ ಅರ್ಥ, ಜೀವನಶೈಲಿ ಹಾಗೂ ದೃಷ್ಟಿಕೋನಗಳ ಮೇಲೆ ಅದರ ಪ್ರಭಾವವನ್ನು ವಿವರಿಸಿದರಲ್ಲದೆ, ಅದನ್ನು ಸರಳವಾಗಿ ವಿವರಿಸಿ ಅದರ ಪ್ರಾಯೋಜನಗಳು ಮತ್ತು ಪ್ರತಿದಿನದ ಅನುಷ್ಠಾನ ವಿಧಾನಗಳನ್ನು ವಿವರಿಸಿದರು. ಕಾರ್ಯಕ್ರಮದ ಪ್ರಮುಖ ಆಕರ್ಷಣೆಯಾಗಿ ಅವರು 45 ನಿಮಿಷಗಳ ಕಾಲ ಯೋಗದ ಮೂಲ ಶಾಂತ ಮತ್ತು ಅನುಶಾಸನಾತ್ಮಕ ತತ್ತ್ವಗಳ ಮೇಲೆ ಗಮನವನ್ನು ಕೇಂದ್ರಿಕೃತಗೊಳಿಸಿ ಜನರಿಗೆ ಯೋಗಭ್ಯಾಗಸದ ಬಗ್ಗೆ ಮಾಹಿತಿ ನೀಡಿದರು. ನಾವು ನಿತ್ಯ ಯೋಗ ಮಾಡುವುದರಿಂದ ನಮ್ಮ ಆರೋಗ್ಯವು ಕ್ರೀಯಾಶೀಲತೆಯಿಂದ ಹಾಗೂ ನಿತ್ಯವು ಲವಲವಿಕೆಯಿಂದ ಹುರುಪುಗೊಳ್ಳುತ್ತೇವೆ ಅಲ್ಲದೆ, ದೈಹಿಕ ಮತ್ತು ಮಾನಸಿಕ ದೃಢತೆಯನ್ನು ಕಾಯ್ದುಕೊಳ್ಳಬಹುದಾಗಿದೆ. ವಿವಿಧ ರೋಗಗಳಿಗೆ ರಾಮಾಬಾಣ ಯೋಗವೇ ಯೋಗ ಎಂದು ಅವರು ಹೇಳಿದರು. ಗಗನ್ ಕ್ಲಿನಿಕ್ ನ ವೈದ್ಯರಾದ ಪಾರ್ವತಿ ಅವರು ಮಾತನಾಡಿ, ಆಧುನಿಕ ವಿಜ್ಞಾನ ಮತ್ತು ನಮ್ಮ ಪ್ರಾಚೀನ ಯೋಗ ಪದ್ಧತಿಯ ಸಮ್ಮಿಲನದ ಮಾರ್ಗವನ್ನು ವಿವರಿಸಿದರಲ್ಲದೆ, ಯೋಗವನ್ನು ಚಿಕಿತ್ಸೆಗೂ ಮುನ್ನ ಯೋಗದ ಮೂಲಕ ಜಾಗ್ರತರಾಗಲು ಪ್ರತಿನಿತ್ಯ ಮಾಡಬೇಕು. ಮಾನಸಿಕವಾಗಿ ದೈಹಿಕವಾಗಿ ಆರೋಗ್ಯವಂತರಾಗಿರಲು ಯೋಗದ ವಿಧಾನಗಳನ್ನು ದೈನಂದಿನ ಜೀವನದಲ್ಲಿ ಯೋಗವನ್ನು ಅಳವಡಿಸಿಕೊಳ್ಳಬೇಕು. ಮಹಿಳೆಯರ ವೈಯಕ್ತಿಕ ಸಮಸ್ಯೆಗಳಿಗೆ ಯೋಗವು ಮಹತ್ತರವಾದ ಜೌಷಧಿ ಎಂದು ಅವರು ಮಾಹಿತಿ ನೀಡಿದರು. ಯೋಗ ಶಿಕ್ಷಕ ರಾಜು ದಿನದ ಮಹತ್ವದ ಕುರಿತು ಮಾತನಾಡಿದರು. ಇದೇ ವೇಳೆ ಕಳೆದ ಹಲವು ವರ್ಷಗಳಿಂದ ಯೋಗ ತರಬೇತಿ ನೀಡುತ್ತಿರುವ ವಿ.ಎ.ಸಂತೋಷ್, ರಾಜು, ಕನಕ ಜ್ಯೋತಿ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು. ಓಂ ಶಕ್ತಿ ಯೋಗ ಸಂಘದ ಮಹಿಳಾ ಸದಸ್ಯರು, ಮಕ್ಕಳು, ಹಿರಿಯರು ಯೋಗ ಸಮೂಹ ಪ್ರದರ್ಶನ ನೀಡಿದರು. ಈ ಸಂದರ್ಭ ಪವಿತ್ರ, ಅಂಕಿತ, ತೃಷಲ್ ಸನ್ಮಾನ್, ಗಂಗೂಬಾಯ್, ಮಹಿಮ ಸತ್ಯ, ಮಂಗಳ ಕಾಮತ್, ಮನುಅಚ್ಚಮಯ್ಯ, ರಾಕೇಶ್ ಹಾಗೂ ಇನ್ನಿತರರು ಇದ್ದರು.









