
ಸೋಮವಾರಪೇಟೆ ಜು. 24 NEWS DESK : ಸೋಮವಾರಪೇಟೆ ವಾಕರ್ಸ್ ವಿಂಗ್ ಸಂಸ್ಥೆ ಯ 2026-27 ನೇ ಸಾಲಿನ ನೂತನ ಅಧ್ಯಕ್ಷರಾಗಿ ಹರ್ಷ ಆಯ್ಕೆಯಾಗಿದ್ದಾರೆ. ಹಂಪಿಯ ಖಾಸಗಿ ಹೋಟೆಲ್ ನಲ್ಲಿ ಜರುಗಿದ 21ನೇ ವರ್ಷದ ವಾರ್ಷಿಕ ಮಹಾಸಭೆಯಲ್ಲಿ ಅಧ್ಯಕ್ಷ ದಿನೇಶ್ ಬೆಳ್ಳಿಯಪ್ಪ ಅಧಿಕಾರ ಹಸ್ತಾಂತರಿಸಿದರು. ನೂತನ ಪದಾಧಿಕಾರಿಗಳನ್ನು ಅವಿರೋಧವಾಗಿ ಆಯ್ಕೆ ಮಾಡಲಾಯಿತು. ಸಮಾಜಮುಖಿ ಯಾಗಿ ಕಾರ್ಯ ನಿರ್ವಹಿಸುತ್ತಿರುವ ವಾಕರ್ಸವಿಂಗ್ ಕಾರ್ಯದರ್ಶಿಯಾಗಿ ಎಸ್.ಡಿ.ವಿಜೇತ್, ಖಜಾಂಚಿಯಾಗಿ ಬಿ.ಕೆ.ಉದಯ್ ಕುಮಾರ್ ಆಯ್ಕೆಯಾದರು. ಈ ಸಂದರ್ಭ ಮಾಜಿ ಅಧ್ಯಕ್ಷರುಗಳಾದ ಎ.ಸಿ.ಶಿವಪ್ರಸಾದ್,ಹೆಚ್. ಸಿ. ನಾಗೇಶ್, ಪಿ.ಕೆ.ರವಿ, ಬಿ.ಎಸ್.ಸುಂದರ್, ಮೋಹನ್ ನಿಶಾಂತ್, ನವೀನ್ ಧರ್ಮಪ್ಪ, ಉದಯ ರವಿ, ಹೆಚ್. ಬಿ. ಹೃಶಿಕೇಶ್, ಬಿ.ಸಿ.ವೆಂಕಟೇಶ್, ಬಿ.ಎಮ್.ದಿನೇಶ್, ಬಿ.ಟಿ.ತಿಮ್ಮಶೆಟ್ಟಿ, ಇನ್ನಿತರರು ಇದ್ದರು.









