ಮಡಿಕೇರಿ, NEWS DESK ಆ.24 : ಈಶಾ ಔಟ್ರೀಚ್ ಸಹಕಾರ ಮತ್ತು ಬೆಂಬಲದೊಂದಿಗೆ ಕಾರ್ಯನಿರ್ವಹಿಸುತ್ತಿರುವ ನಾಪೋಕ್ಲುವಿನ ಪೊನ್ನಾಡ್ ರೈತ ಉತ್ಪಾದಕ ಸಂಸ್ಥೆ(ಎಫ್ಪಿಓ)ಯು ಮಾರುಕಟ್ಟೆ ವಿಭಾಗದಲ್ಲಿ ರಾಜ್ಯ ಮಟ್ಟದ ಶ್ರೇಷ್ಠತಾ ಪ್ರಶಸ್ತಿಗೆ ಭಾಜನವಾಗಿದೆ.
ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಪೊನ್ನಾಡ್ ರೈತ ಉತ್ಪಾದಕ ಸಂಸ್ಥೆಯ ಅಧ್ಯಕ್ಷÀ ಅಪ್ಪಚೆಟ್ಟೋಳಂಡ ಮನು ಮುತ್ತಪ್ಪ ಅವರು, ಬೆಂಗಳೂರಿನ ರೈತ ಉತ್ಪಾದಕ ಸಂಸ್ಥೆಗಳ ಉತ್ಕೃಷ್ಠ ಕೇಂದ್ರದಲ್ಲಿ ಆಯೋಜಿತ ಸಂಸ್ಥೆಯ 9ನೇ ಸಂಸ್ಥಾಪನಾ ದಿನಾಚರಣೆೆ ಸಮಾರಂಭದಲ್ಲಿ ಪೊನ್ನಾಡ್ ಎಫ್ಪಿಓಗೆ ಪ್ರಶಸ್ತಿಯನ್ನು ನೀಡಿ ಗೌರವಿಸಲಾಯಿತು ಎಂದರು.
ರಾಜ್ಯ ವ್ಯಾಪಿ ಕಾರ್ಯನಿರ್ವಹಿಸುತ್ತಿರುವ ರಾಜ್ಯ ಮಟ್ಟದ 1750 ಎಫ್ಪಿಓ ಮತ್ತು ಕೇಂದ್ರ ಸರ್ಕಾರದ ಪ್ರಾಯೋಜಕತ್ವದಡಿ ನಬಾರ್ಡ್ ಸಹಕಾರದೊಂದಿಗೆ ರಾಜ್ಯದಲ್ಲಿ ಕಾರ್ಯಾಚರಿಸುತ್ತಿರುವ 250 ಎಫ್ಪಿಓ ಸೇರಿದಂತೆ ಒಟ್ಟು 2 ಸಾವಿರ ಎಫ್ಪಿಓಗಳ ಪೈಕಿ ನಾಪೋಕ್ಲು ಪೊನ್ನಾಡ್ ರೈತ ಉತ್ಪಾದಕರ ಸಂಸ್ಥೆ ಮಾರುಕಟ್ಟೆ ವಿಭಾಗದಲ್ಲಿ ಗಣನೀಯ ಸಾಧನೆ ಮಾಡುವ ಮೂಲಕ ಪ್ರಥಮ ಸ್ಥಾನದ ಗೌರವಕ್ಕೆ ಪಾತ್ರವಾಗಿದೆ ಎಂದು ತಿಳಿಸಿದರು.
15 ಕೋಟಿ ವ್ಯವಹಾರ- ಪೊನ್ನಾಡ್ ರೈತ ಉತ್ಪಾದಕರ ಸಂಸ್ಥೆ 2023ರಲ್ಲಿ ನಾಪೋಕ್ಲು ಒಳಗೊಂಡAತೆ ಸುತ್ತಮುತ್ತಲ 24 ಗ್ರಾಮ ವ್ಯಾಪ್ತಿಯ ಬೆಳೆÉಗಾರರ ಅನುಕೂಲಕ್ಕಾಗಿ ಕೇಂದ್ರ ಪ್ರಾಯೋಜಿತ ಯೋಜನೆಯಡಿ ಪೊನ್ನಾಡ್ ರೈತ ಉತ್ಪಾದಕರ ಸಂಸ್ಥೆ ಆರಂಭಗೊAಡಿತು. ಪ್ರಸ್ತುತ ಸಂಸ್ಥೆ 750 ಸದಸ್ಯ ಬಲವನ್ನು ಹೊಂದಿದ್ದು, ಕಳೆದ ಸಾಲಿನಲ್ಲಿ ಸಂಘ ಒಟ್ಟು 15 ಕೋಟಿ ರೂ. ವಹಿವಾಟು ನಡೆಸಿದೆ. ಈ ಎಲ್ಲಾ ವ್ಯವಹಾರಗಳಲ್ಲಿ ಅತ್ಯಂತ ಕನಿಷ್ಟ 3 ಲಕ್ಷ ರೂ. ಲಾಭಾಂಶವನ್ನಷ್ಟೆ ಇರಿಸಿಕೊಂಡು ಬೆಳೆಗಾರರ ಅನುಕೂಲಕ್ಕಾಗಿ ಸಂಸ್ಥೆ ಕಾರ್ಯನಿರ್ವಹಿಸಿದೆ. ಸಂಸ್ಥೆಯ ಈ ವಹಿವಾಟು ರಾಜ್ಯಪ್ರಶಸ್ತಿಗೆ ಕಾರಣವಾಗಿದೆಯೆಂದು ಮನು ಮುತ್ತಪ್ಪ ಹೇಳಿದರು.

ಪೊನ್ನಾಡ್ ಕಾಫಿ “ಬ್ರಾಂಡ್” ಚಿಂತನೆ- ಪೊನ್ನಾಡ್ ರೈತ ಉತ್ಪಾದಕ ಸಂಸ್ಥೆ ಈಗಾಗಲೆ ಬೆಳೆಗಾರರಿಂದ ಕಾಫಿ ಖರೀದಿ ವ್ಯವಹಾರವನ್ನು ನಡೆಸುತ್ತಿದೆ. ಮುಂಬರುವ ದಿನಗಳಲ್ಲಿ ಸ್ಥಳೀಯ ಕಾಫಿಯನ್ನು ಪುಡಿ ಮಾಡಿ “ಬ್ರಾಂಡ್” ಮಾಡುವ ಮೂಲಕ ಮಾರಾಟ ಮಾಡುವ ಚಿಂತನೆಯನ್ನು ಹೊಂದಿರುವುದಾಗಿ ಮನು ಮುತ್ತಪ್ಪ ಮಾಹಿತಿಯನ್ನಿತ್ತು, ಇದರೊಮದಿಗೆ ಸಂಸ್ಥೆ ಕರಿಮೆಣಸು, ಏಲಕ್ಕಿ ಖರೀದಿ, ಸಂಗ್ರಹಣೆ ಮೂಲಕ ಮಾರುಕಟ್ಟೆ ವ್ಯವಹಾರಗಳಲ್ಲಿ ತೊಡಗಿಸಿಕೊಳ್ಳುವ ಮೂಲಕ ರೈತರಿಗೆ ಉತ್ತಮ ಮಾರುಕಟ್ಟೆ ಅವಕಾಶವನ್ನು ಸೃಷ್ಟಿಸುತ್ತಿದೆ. ಸಂಸ್ಥೆಯ ಈ ಎಲ್ಲಾ ಕಾರ್ಯಗಳಿಗೆ ಈಶಾ ಸಂಸ್ಥೆ ಅಗತ್ಯ ಸಲಹೆ, ಮಾರ್ಗದರ್ಶನಗಳನ್ನು ನೀಡುತ್ತಿರುವುದಲ್ಲದೆ, ಕೊಯಂಬತ್ತೂರಿನಲ್ಲಿ ಅಗತ್ಯ ತರಬೇತಿಯನ್ನು ನೀಡುತ್ತಿರುವುದಾಗಿ ವಿವರಗಳನ್ನಿತ್ತರು.
ಬೆಳೆಗಾರರಿಗೆ ಗುಣ ಮಟ್ಟದ ಸುಣ್ಣ- ಸಂಸ್ಥೆಯ ವತಿಯಿಂದ ಗುಣಮಟ್ಟದ ಸುಣ್ಣವನ್ನು ಕೃಷಿಕ ಸದಸ್ಯರಿಗೆ ವಿತರಿಸಲಾಗುತ್ತಿದೆ. ಮಾರುಕಟ್ಟೆಯಲ್ಲಿ ಕಳಪೆ ಗುಣಮಟ್ಟದ ಸುಣ್ಣವನ್ನು ಟನ್ ಒಂದಕ್ಕೆ 5,500 ರೂ.ಗಳಿಂದ 8 ಸಾವಿರದವರೆಗೆ ಮಾರಾಟ ಮಾಡಲಾಗುತ್ತಿದೆ. ಆದರೆ, ಪೊನ್ನಾಡ್ ಸಂಸ್ಥೆ ಗುಣಮಟ್ಟದ ಸುಣ್ಣವನ್ನು 3750 ರೂ.ಗಳಿಂದ 4 ಸಾವಿರ ರೂ.ಗಳಿಗೆ ಬೆಳೆಗಾರರಿಗೆ ವಿತರಿಸುತ್ತಿರುವುದಾಗಿ ಮಾಹಿತಿ ನೀಡಿದರು.
ಉಚಿತ ಮಣ್ಣು ಪರೀಕ್ಷೆ- ಪೊನ್ನಾಡ್ ರೈತ ಉತ್ಪಾದಕ ಸಂಸ್ಥೆ ಈ ಬಾರಿ ಉಚಿತವಾಗಿ ಮಣ್ಣು ಪರೀಕ್ಷಾ ಸೌಲಭ್ಯವನ್ನು ಒದಗಿಸಿತ್ತು. ಸಾಮಾನ್ಯವಾಗಿ ಮಣ್ಣು ಪರೀಕ್ಷೆ ಎಂದಾಗ ಮಣ್ಣಿನ ಪಿಹೆಚ್ ಮೌಲ್ಯವನ್ನಷ್ಟೆ ನೋಡಲಾಗುತ್ತದೆ. ಆದರೆ, ಸಂಸ್ಥೆಯಿAದ ಮಣ್ಣಿನ 16 ವಿವಿಧ ಗುಣ ಲಕ್ಷಣಗಳ ಪರೀಕ್ಷೆಯನ್ನು ನಡೆಸಿ, ಬೆಳೆÉಗಾರರಿಗೆ ಅವರ ತೋಟದ ಮಣ್ಣಿನ ಸತ್ವವನ್ನು ಕಾಪಾಡಲು ಬಳಸಬೇಕಾದ ಪೋಷಕಾಂಶಗಳ ಮಾಹಿತಿಯನ್ನು ಒದಗಿಸಲಾಗಿದೆ. ಸುಮಾರು 130 ಮಣ್ಣಿನ ಮಾದರಿಗಳ ಪರೀಕ್ಷೆಗಳನ್ನು ಕೊಯಂಬತ್ತೂರಿನಲ್ಲಿ ನಡೆಸಲಾಗಿದೆಯೆಂದು ವಿವರಗಳನ್ನಿತ್ತರು.
ಪೊನ್ನಾಡ್ ರೈತ ಉತ್ಪಾದಕ ಸಂಸ್ಥೆಯ ನಿರ್ದೇಶಕ ಕುಲ್ಲೇಟಿರ ಅಜಿತ್ ನಾಣಯ್ಯ ಮಾತನಾಡಿ, ಪೊನ್ನಾಡ್ ಸಂಸ್ಥೆ ಕಳೆದ ಸಾಲಿನಲ್ಲಿ ಒಟ್ಟು 20 ಸಾವಿರ ಚೀಲ ಕಾಫಿಯನ್ನು ಬೆಳೆÉಗಾರರಿಗೆ ಉತ್ತಮ ದರವನ್ನು ನೀಡಿ ಖರೀದಿಸಿದೆ. ಕಾಫಿ ಗುಣಮಟ್ಟವನ್ನು ಕಾಯ್ದುಕೊಳ್ಳುವುದಕ್ಕೆ ಪೂರಕವಾಗಿ ಸಂಸ್ಥೆ ಬೆಳೆಗಾರಿಗೆ ಅಗತ್ಯ ಸಹಕಾರವನ್ನು ಒದಗಿಸುತ್ತಾ ಬರುತ್ತಿರುವುದಾಗಿ ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ನಿರ್ದೇಶಕರಾದ ಕೇಟೋಳಿರ ರತ್ನ ಚರ್ಮಣ, ಕಾಟುಮಣಿಯಂಡ ಎಂ.ಉಮೇಶ್ ಹಾಗೂ ಈಶಾ ಔಟ್ ರೀಚ್ನ ರಾಜ್ಯ ಸಂಯೋಜಕ ವಿಶ್ವನಾಥ್ ಉಪಸ್ಥಿತರಿದ್ದರು.







