ಮಡಿಕೇರಿ, NEWS DESK ಸೆ.2 – ಮದೆನಾಡಿನ ಯುವ ಯೋಗಸಾಧಕಿ ಸಿಂಚನಾಳಿಗೆ ಯೋಗ ಕ್ಷೇತ್ರದಲ್ಲಿ ಲಭಿಸಿರುವ ಏಷ್ಯಾ ಮತ್ತು ಇಂಡಿಯಾ ಬುಕ್ ಆಫ್ ರೆಕಾಡ್ಸ್೯ನ ದಾಖಲೆಯನ್ನು ನಗರದ ರೋಟರಿ ಮಿಸ್ಟಿ ಹಿಲ್ಸ್ ವತಿಯಿಂದ ಆಯೋಜಿತ ಕಾಯ೯ಕ್ರಮದಲ್ಲಿ ಹಸ್ತಾಂತರಿಸಲಾಯಿತು
ನಗರದ ರೋಟರಿ ಸ ಆಯೋಜಿತ ಕಾಯ೯ಕ್ರಮದಲ್ಲಿ ಮದೆನಾಡಿನ ಬಿಜಿಎಸ್ ಶಾಲೆಯ 7 ನೇ ತರಗತಿ ವಿದ್ಯಾಥಿ೯ನಿ ಸಿಂಚನಾಳಿಗೆ ದೊರೆತ ಪ್ರತಿಷ್ಟಿತ ಪ್ರಶಸ್ತಿಗಳನ್ನು ಗಣ್ಯರು ಹಸ್ತಾಂತರಿಸಿದರು. ಕಳೆದ 3 ತಿಂಗಳಿನಲ್ಲಿ ತನ್ನ ಯೋಗಾಸನಕ್ಕಾಗಿ ಮದೆನಾಡಿನ ವಿದ್ಯಾಥಿ೯ನಿ ಸಿಂಚನಾಳಿಗೆ ಏಷ್ಯಾ ಬುಕ್ ಆಫ್ ರೆಕಾಡ್ಸ್ ಮತ್ತು ಇಂಡಿಯಾ ಬುಕ್ ಆಫ್ ರೆಕಾಡ್ಸ್೯ ಪ್ರಶಸ್ತಿಗಳು ಲಭಿಸಿದ್ದವು. ಈ ಪ್ರಶಸ್ತಿಗಳನ್ನ ಮಿಸ್ಟಿ ಹಿಲ್ಸ್ ವತಿಯಿಂದ ಆಯೋಜಿತ ಕಾಯ೯ಕ್ರಮದಲ್ಲಿ ಸಿಂಚನಾಳಿಗೆ ಪ್ರದಾನ ಮಾಡಲಾಯಿತು.
ಕಾಯ೯ಕ್ರಮ ಉದ್ಘಾಟಿಸಿ ಮಾತನಾಡಿದ ಯೋಗಭ್ಯಾಸಿ , ವಕೀಲ ಜಿ.ಆರ್.ರವಿಶಂಕರ್, ಯೋಗ ಎಂದರೆ ಕೇವಲ ದೇಹವನ್ನು ಬಗ್ಗಿಸುವುದ ಅಥವಾ ಕಷ್ಟಕರವಾದ ಆಸನಗಳನ್ನು ಮಾಡುವುದೋ ಅಲ್ಲ, ಯೋಗ ಎಂದರೆ ಒಗ್ಗೂಡುವಿಕೆಯಾಗಿದೆ. ನಮ್ಮ ಶರೀರ, ಮನಸ್ಸು ಮತ್ತು ಆತ್ಮವನ್ನು ಒಂದೇ ಸೂತ್ರದಲ್ಲಿ ತರುವುದೇ ಯೋಗದ ಉದ್ದೇಶವಾಗಿದೆ ಎಂದರು.
ಇಂದಿನ ಧಾವಂತದ ಕಾಲದಲ್ಲಿ ಮಾನಸಿಕ ಒತ್ತಡ, ಆತಂಕ ಮತ್ತು ದೈಹಿಕ ಅನಾರೋಗ್ಯ ಹೆಚ್ಚುತ್ತಿದ್ದು, ಯೋಗದಿಂದ ಶಾಂತಿ, ಆರೋಗ್ಯ ಲಭಿಸುತ್ತದೆ. ಇದು ಆರೋಗ್ಯ ಸಂರಕ್ಷಣೆಗೆ ಪ್ರಕೖತ್ತಿಯೇ ನೀಡಿದ ದಿವ್ಯಾಷಧವಾಗಿದೆ ಎಂದು ರವಿಶಂಕರ್ ಹೇಳಿದರು.
ಭಾರತವು ಯೋಗದ ಉಗಮವಾಗಿದ್ದು, ಭಾರತದಿಂದ ಪ್ರಾರಂಭವಾದ ಯೋಗವಿದ್ಯೆಯು ವಿಶ್ವದಾದ್ಯಂತ ವ್ಯಾಪಿಸಿದೆ. ಯೋಗದ ವಿವಿಧ ಹಂತಗಳನ್ನು ರೂಡಿಸಿಕೊಂಡಾಗ ಮಾನಸಿಕವಾಗಿ, ಆಧ್ಯಾತ್ಮಿಕವಾಗಿ ಕೂಡ ಉನ್ನತಮಟ್ಟಕ್ಕೇರಲು ಸಾಧ್ಯವಿದೆ. ದೇಹದ ಲವಲವಿಕೆ, ಮನಸ್ಸಿನ ಹತೋಟಿ, ಏಕಾಗ್ರತೆ, ರೋಗನಿರೋಧಕ ಶಕ್ತಿ ಮುಂತಾದ ಲಾಭಗಳನ್ನೂ ಯೋಗದಿಂದ ಪಡೆಯಬಹುದಾಗಿದೆ ಎಂದು ರವಿಶಂಕರ್ ನುಡಿದರು.
ಲಕ್ಷಾಂತರ ರುಪಾಯಿ ವೆಚ್ಚ ಮಾಡಿದರೂ ದೊರಕದ ಆರೋಗ್ಯ ಭಾಗ್ಯ, ಯೋಗದಿಂದ ಸುಲಭವಾಗಿ ದೊರಕುತ್ತದೆ. ಅಂತರರಾಷ್ಟ್ರೀಯ ಯೋಗದಿನದಂದು ಮಾತ್ರ ಯೋಗ ಪ್ರದಶ೯ನಕ್ಕೆ ಸೀಮಿತವಾಗದೇ ಯೋಗವನ್ನು ದೈನದಿಂನ ಅಭ್ಯಾಸವಾಗಿಸಿಕೊಳ್ಳಿ ಎಂದೂ ಅವರು ಕರೆ ನೀಡಿದರು.
ಮಡಿಕೇರಿಯ ಯೋಗಗುರು ಕೆ.ಕೆ.ಮಹೇಶ್ ಕುಮಾರ್ ಮಾತನಾಡಿ, ಸಿಂಚನಾಳ ಸಾಧನೆ ಶ್ಲಾಘನೀಯವಾಗಿದ್ದು,ಈಕೆಯ ಯೋಗಸಿದ್ದಿ ಜಿಲ್ಲೆಯಲ್ಲಿಯೇ ಗಮನಾಹ೯ವಾಗಿದೆ ಎಂದರು. ಪ್ರಾಚೀನ ಕಾಲದಲ್ಲಿ ಋಷಿ ಮುನಿಗಳ ಜೀವನ ಪದ್ದತಿಯೇ ಯೋಗವಾಗಿತ್ತು.ಹಿಂದಿನ ಕಾಲದವರು ಯೋಗಭ್ಯಾಸದಲ್ಲಿ ನಿರತರಾಗಿದ್ದ ಕಾರಣದಿಂದಾಗಿಯೇ ಆ ಕಾಲದವರಿಗೆ ಈಗಿನವರಂತೆ ರೋಗರುಜಿನಗಳು ಬರುತ್ತಿರಲಿಲ್ಲ ಎಂದೂ ಅವರು ಅಭಿಪ್ರಾಯಪಟ್ಟರು.
ಯಾವುದೇ ಸಾಧನೆಗೂ ಪರಿಶ್ರಮದ ಜತೆಯಲ್ಲಿಯೇ ಅವುಗಳನ್ನು ನಿತ್ಯಾಭ್ಯಾಸವಾಗಿ ರೂಡಿಸಿಕೊಳ್ಳುವುದು ಅಗತ್ಯ ಎಂದು ಅಭಿಪ್ರಾಯಪಟ್ಟ ಮಹೇಶ್ ಕುಮಾರ್, ಸಮಯವನ್ನು ವ್ಯಯಿಸುವುದಲ್ಲದೇ ದೖಡಸಂಕಲ್ಪ ದ ಅಗತ್ಯವೂ ಇದೆ ಎಂದು ಕರೆ ನೀಡಿದರು.
ಸಿಂಚನಾಳ ತಾಯಿ ರೇಣುಕಾ ಕೀತಿ೯ ಮಾತನಾಡಿ, ಪ್ರತೀ ನಿತ್ಯ 1 ಗಂಟೆ ಯೋಗಾಭ್ಯಾಸ ಮಾಡುತ್ತಾ ಬಂದಿರುವ ಸಿಂಚನಾ, ಈ ಮೂಲಕ ಯೋಗವನ್ನು ಕಠಿಣ ರೀತಿಯ ಪರಿಶ್ರಮದಿಂದಲೂ ಒಲಿಸಿಕೊಂಡಿದ್ದಾಳೆ ಎಂದರು.
ಯೋಗಪಟು ಸಿಂಚನಾ ಮಾತನಾಡಿ, ಸೆಪ್ಟೆಂಬರ್ 25 ರಂದು ಶುಕ್ರವಾರ ದೇವರಕೊಲ್ಲಿಯ ಶ್ರೀಚಾಮುಂಡೇಶ್ವರಿ ದೇವಾಲಯಯದಲ್ಲಿ ಮತ್ತೆ 3 ವಿಶ್ವದಾಖಲೆಯ ಯೋಗ ಪ್ರದಶ೯ನಕ್ಕೆ ಸಿದ್ದಳಾಗುತ್ತಿರುವುದಾಗಿ ಮಾಹಿತಿ ನೀಡಿದಳು.
ರೋಟರಿ ಮಿಸ್ಟಿ ಹಿಲ್ಸ್ ಅಧ್ಯಕ್ಷ ಪಿ.ಆರ್. ರಾಜೇಶ್ ಮಾತನಾಡಿ, ಸಿಂಚನಾಳ ಯೋಗಸಾಧನೆ ದಾಖಲಾಹ೯, ರೋಟರಿ ಮಿಸ್ಟಿ ಹಿಲ್ಸ್ ಈಕೆಯ ಯೋಗಸಾಧನೆಗೆ ಸದಾ ಬೆಂಬಲವಾಗಿರಲಿದೆ ಎಂದು ಭರವಸೆ ನೀಡಿದರು. ವಲಯ ಸೇನಾನಿ ಪೊನ್ನಚ್ಚನ ಮಧುಸೂದನ್ ಮಾತನಾಡಿ, ಚಿಕ್ಕವಯಸ್ಸಿನಲ್ಲಿಯೇ ಯೋಗದಂಥ ಕಠಿಣ ಅಭ್ಯಾಸದಲ್ಲಿ ಆಸಕ್ತಿವಹಿಸಿದ ಸಿಂಚನಾ ಸವ೯ ವಿದ್ಯಾಥಿ೯ಗಳಿಗೂ ಆದಶ೯ಪ್ರಾಯರಾಗಿದ್ದಾರೆ ಎಂದು ಶ್ಲಾಘಿಸಿದರು.
ರೋಟರಿ ಮಿಸ್ಟಿ ಹಿಲ್ಸ್ ಕಾಯ೯ದಶಿ೯ ಡಾ.ಚೇತನ್ ಜಿ.ಡಿ. ವಂದಿಸಿದ ಕಾಯ೯ಕ್ರಮವನ್ನು ಮಿಸ್ಟಿ ಹಿಲ್ಸ್ ನಿದೇ೯ಶಕ ಪ್ರಸಾದ್ ಗೌಡ ನಿವ೯ಹಿಸಿದರು. ಸಿಂಚನಾಳ ತಂದೆ ಕೀತ೯ಕುಮಾರ್, ರೋಟರಿ ಜಿಲ್ಲೆಯ ಮಾಜಿ ಸಹಾಯಕ ಗವನ೯ರ್ ಗಳಾದ ಅನಿಲ್ ಹೆಚ್.ಟಿ, ದೇವಣಿರ ತಿಲಕ್, ಬಿ.ಕೆ. ರವೀಂದ್ರ ರೈ, ದೇವರಕೊಲ್ಲಿ ಶ್ರೀ ಚಾಮುಂಡೇಶ್ವರಿ ದೇವಾಲಯ ಆಡಳಿತ ಮಂಡಳಿ ಅಧ್ಯಕ್ಷ ಯಶೋಧರ್, ಮದೆಕೖಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಅಗೋಳಿಕಜೆ ಪಿ.ಧನಂಜಯ್, ಸಾಹಿತಿ ಬಿ.ಆರ್. ಜೋಯಪ್ಪ, ನಿವೖತ್ತ ಶಿಕ್ಷಕ ಎಂ.ಎಸ್. ಶಿವರಾಮ್ ಹಾಜರಿದ್ದು ಪ್ರಶಸ್ತಿ ಪ್ರಧಾನ ಮಾಡಿದರು. ಸಿಂಚನಾಳಿಂದ ಆಕಷ೯ಕ ಯೋಗ ಪ್ರದಶ೯ನ ಸವ೯ರ ಮನಸೆಳೆಯಿತು.








