ಲೇಖಕ: admin

ಮಡಿಕೇರಿ ಮೇ 22 NEWS DESK : GAMMA ಹಾಗೂ IMMA  ವತಿಯಿಂದ ಕೇರಳದ ಕೋಜಿಕೋಡ್ ನಲ್ಲಿ  ನಡೆದ ರಾಷ್ಟ್ರಮಟ್ಟದ ಮಿಶ್ರ ಮಾರ್ಷಲ್ ಆರ್ಟ್ಸ್ ನಲ್ಲಿ ಕೊಡಗಿನ ಕೂರ್ಗ್ ಕೊಂಬಾಟ್ ಕ್ಲಬ್ (C3MMA) ನ ಕ್ರೀಡಾಪಟುಗಳು ಚಿನ್ನ, ಬೆಳ್ಳಿಯ ಪದಕವನ್ನು ಗೆದ್ದುಗೊಂಡಿದ್ದಾರೆ. ಕುಶಾಲನಗರ ಮುಳ್ಳುಸೋಗೆಯ ಎಂ.ಸಿ.ವರುಣ್  ಕಂಚಿನ ಪದಕವನ್ನು ತಮ್ಮದಾಗಿಸಿಕೊಂಡಿದ್ದು, ಕೊಪ್ಪದ ವೇಣು ವರ್ಧನ್  ಚಿನ್ನದ ಪದಕ ಗೆಲ್ಲುವ ಮೂಲಕ ಥೈಲ್ಯಾಂಡ್ ನಲ್ಲಿ ನಡೆಯಲಿರುವ 2024ರ ಸಾಲಿನ GAMMA ಏಷ್ಯನ್ ಮಿಶ್ರ ಮಾರ್ಷಲ್ ಆರ್ಟ್ಸ್ ಚಾಂಪಿಯನ್ ಶಿಪ್ ನಲ್ಲಿ ಭಾರತವನ್ನು ಪ್ರತಿನಿಧಿಸಲಿದ್ದಾರೆ. ಮತ್ತೋರ್ವ ಕ್ರೀಡಾಪಟು ಶಾಫಿ  ಉತ್ತಮ ಪ್ರದರ್ಶನ ನೀಡಿ ಕ್ರೀಡಾಭಿಮಾನಿಗಳ ಗಮನ ಸೆಳೆದರು. ಜಿಲ್ಲೆಯ ನಾಗರೀಕರು ಕ್ರೀಡಾಪಟುಗಳನ್ನು ಗುರುತಿಸಿ ಅವರನ್ನು ಪ್ರೋತ್ಸಾಹಿಸುವ ಮೂಲಕ ಅವರಿಗೆ ಉತ್ತಮ ಅವಕಾಶವನ್ನು ಕಲ್ಪಿಸುವಂತೆ ಅಮಿತ್ ವಿಶ್ವನಾಥ್ ಮನವಿ ಮಾಡಿದ್ದಾರೆ.

Read More

ಕುಣಿಗಲ್ ಮೇ 22 NEWS DESK  :  ಕುಣಿಗಲ್ ಪಟ್ಟಣ ಕೋಟೆ ಪ್ರದೇಶದ ಸಂತೆ ಮೈದಾನ ವ್ಯಾಪ್ತಿಯ ಮನೆಯೊಂದರಲ್ಲಿ ಗ್ಯಾಸ್ ಸಿಲಿಂಡರ್ ಸ್ಫೋಟಗೊಂಡು ತೀವ್ರವಾಗಿ ಗಾಯಗೊಂಡಿದ್ದವರಲ್ಲಿ ಇಬ್ಬರು ಚಿಕಿತ್ಸೆ ಫಲಿಸದೆ ಇಂದು ಬೆಳಿಗ್ಗೆ ಸಾವನ್ನಪ್ಪಿದ್ದಾರೆ. ಸಂತೆ ಮೈದಾನದ ನಿವಾಸಿ ಕುಶಾಲ್ (11) ಹಾಗೂ ಶಿವಣ್ಣ( 45 ) ಮೃತ ದುರ್ದೈವಿಗಳು. ಖಾರಪುರಿ ವ್ಯಾಪಾರಿ ರವಿಕುಮಾರ್ ಅವರ ಮನೆಯಲ್ಲಿ ಅಡುಗೆ ಮಾಡಲು ಉಪಯೋಗಿಸುತ್ತಿದ್ದ ಸಿಲಿಂಡರ್ ಮೇ 17 ರಂದು ಸ್ಫೋಟಗೊಂಡಿತ್ತು. ಮನೆಯಲ್ಲಿದ್ದ ರವಿಕುಮಾರ್ ಅವರ ಪತ್ನಿ ಶೃತಿ, ಪುತ್ರಿ ಹೇಮ ಹಾಗೂ ಕುಶಾಲ್ ಗೆ ತೀವ್ರ ಗಾಯಗಳಾಗಿದ್ದವು. ಸ್ಫೋಟದಿಂದ ಪಕ್ಕದ ಮನೆಗೂ ಹಾನಿಯಾಗಿದ್ದು, ಆ ಮನೆಯಲ್ಲಿದ್ದ ಶಿವಣ್ಣ ಹಾಗೂ ಮಂಜಮ್ಮ ಎಂಬುವವರಿಗೂ ಗಾಯಗಳಾಗಿತ್ತು. ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಿವರುಗಳ ಪೈಕಿ ಕುಶಾಲ್ ಹಾಗೂ ಶಿವಣ್ಣ ಮೃತಪಟ್ಟರು.

Read More

ಪಾವಗಡ ಮೇ 22 NEWS DESK : ವ್ಯಕ್ತಿಯೊಬ್ಬರನ್ನು ನಡುರಸ್ತೆಯಲ್ಲೆ ಹತ್ಯೆ ಮಾಡಿರುವ ಘಟನೆ ತುಮಕೂರು ಜಿಲ್ಲೆಯ ಪಾವಗಡ ಪಟ್ಟಣದಲ್ಲಿ ನಡೆದಿದೆ. ಬಾಬಯ್ಯನ ಬೀದಿಯ ನಿವಾಸಿ ನಾರಾಯಣಿ (35) ಎನ್ನುವವರೇ ಮೃತಪಟ್ಟಿರುವ ವ್ಯಕ್ತಿ. ಮಂಗಳವಾರ ರಾತ್ರಿ ದೊಣ್ಣೆಯಿಂದ ಹಲ್ಲೆ ಮಾಡಿ ಹತ್ಯೆ ಮಾಡಿರುವ ಕುರಿತು ಸಂಶಯ ವ್ಯಕ್ತವಾಗಿದೆ. ಆರೋಪಿಗಳು ತಲೆ ಮರೆಸಿಕೊಂಡಿದ್ದು, ಪಾವಗಡ ಪೊಲೀಸರು ತನಿಖೆ ಕೈಗೊಂಡಿದ್ದಾರೆ. ಮೃತರು ಪತ್ನಿ, ಓರ್ವ ಪುತ್ರ ಹಾಗೂ ತಂದೆ, ತಾಯಿಯನ್ನು ಅಗಲಿದ್ದಾರೆ.

Read More

ಮಡಿಕೇರಿ ಮೇ 22 NEWS DESK : ನೈರುತ್ಯ ಪದವೀಧರ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಡಾ.ಧನಂಜಯ ಸರ್ಜಿ ಹಾಗೂ ಶಿಕ್ಷಕರ ಕ್ಷೇತ್ರದ ಅಭ್ಯರ್ಥಿ ಎಸ್. ಎಲ್. ಭೋಜೇಗೌಡ ಅವರು ಚನ್ನಗಿರಿ ತಾಲೂಕಿನ ಪಾಂಡೋಮಟ್ಟಿಯ ವಿರಕ್ತಮಠಕ್ಕೆ ಭೇಟಿ ನೀಡಿ ಶ್ರೀ ಗುರುಬಸವ ಮಹಾಸ್ವಾಮೀಜಿಗಳಿಂದ ಆಶೀರ್ವಾದ ಪಡೆದರು. ಈ ವೇಳೆ ವಿಧಾನ ಪರಿಷತ್ ಸದಸ್ಯ ಡಿ.ಎಸ್.ಅರುಣ್, ಯುವ ನಾಯಕ ಮಾಡಾಳ್ ಮಲ್ಲಿಕಾರ್ಜುನ, ತುಮ್ಕೋಸ್ ಅಧ್ಯಕ್ಷ ರವಿಕುಮಾರ್, ಶಿವಮೊಗ್ಗ ಜಿಲ್ಲಾ ಬಿಜೆಪಿ ಖಜಾಂಚಿ ಎನ್.ಡಿ.ಸತೀಶ್, ಪ್ರಧಾನ ಕಾರ್ಯದರ್ಶಿ ಮಾಲತೇಶ್, ದಾವಣಗೆರೆ ಜಿಲ್ಲಾ ರೈತ ಮೋರ್ಚಾ ಅಧ್ಯಕ್ಷ ಹರ್ಷ ಪಟೇಲ್, ತುಮ್ಕೋಸ್ ಮಾಜಿ ಅಧ್ಯಕ್ಷ ಎಚ್.ಎಸ್.ಶಿವಕುಮಾರ್, ಚನ್ನಗಿರಿ ಬಿಜೆಪಿ ಮುಖಂಡರಾದ ನಾಗರಾಜ್ ನಾಡಿಗ್, ಸಂಗಮ್ ಹಾಜರಿದ್ದರು.  

Read More

ಮಡಿಕೇರಿ ಮೇ 22 NEWS DESK : ನೈರುತ್ಯ ಪದವಿಧರ ಕ್ಷೇತ್ರದ ಚುನಾವಣೆ ಹಿನ್ನೆಲೆ ನಗರದ ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ಸಭೆ ನಡೆಯಿತು. ನಗರ ಮಂಡಲ ಅಧ್ಯಕ್ಷ  ಉಮೇಶ್ ಸುಬ್ರಮಣಿ ಅವರ ಉಪಸ್ಥಿತಿಯಲ್ಲಿ ನಡೆದ ಸಭೆಯಲ್ಲಿ ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ಮಹೇಶ್ ಜೈನಿ,ಹಾಗೂ ಚುನಾವಣಾ ಸಂಚಾಲಕರುಗಳಾಗಿ ಬಿ.ಕೆ.ಅರುಣ್ ಕುಮಾರ್ ಹಾಗೂ ಪ್ರಶಾಂತ್ ಭೀಮಯ್ಯ, ಚುನಾವಣಾ ಉಸ್ತುವಾರಿ ರವಿಶಂಕರ್ ಹಾಗೂ ಪಕ್ಷದ ಪ್ರಮುಖರು ಹಾಜರಿದ್ದರು.  

Read More

ಮಡಿಕೇರಿ ಮೇ 22 NEWS DESK : ಕೆಸರಿನೋಕುಳಿಯ ಹಬ್ಬವೆಂದು ಪ್ರಸಿದ್ಧಿ ಪಡೆದಿರುವ ಪೊನ್ನಂಪೇಟೆ ತಾಲ್ಲೂಕಿನ ಹಳ್ಳಿಗಟ್ಟು  ಶ್ರೀ ಭದ್ರಕಾಳಿ ಹಾಗೂ ಶ್ರೀ ಗುಂಡಿಯತ್ ಅಯ್ಯಪ್ಪ ದೇವರ ವಾರ್ಷಿಕ ಬೋಡ್ ನಮ್ಮೆ ಎರಡು ದಿನಗಳ ಕಾಲ ಸಂಭ್ರಮದಿಂದ ನಡೆಯಿತು. ಬೋಡ್ ನಮ್ಮೆಗೆ ಚಮ್ಮಟೀರ ಬಲ್ಯಮನೆಯಿಂದ ಪೊಲವಂದೆರೆ ಹೊರಡುವ ಮೂಲಕ ಚಾಲನೆ ದೊರೆಯಿತು. ಸಂಜೆ ಗುಂಡಿಯತ್ ಅಯ್ಯಪ್ಪ ದೇವರಿಗೆ ವಿಶೇಷ ಅವುಲ್ ಹಾಕಿ, ರಾತ್ರಿ ಚಮ್ಮಟೀರ ಮಚ್ಚಿಯಂಡ ಹಾಗೂ ಮೂಕಳೇರ ಬಲ್ಯಮನೆಗಳಿಗೆ ಮನೆಕಳಿ ಹೊರಡುವ ಮೂಲಕ ಹಬ್ಬವನ್ನು ಆಚರಿಸಲಾಯಿತು. ಎರಡನೇ ದಿನ ಅಪರಾಹ್ನ ಚಮ್ಮಟೀರ ಬಲ್ಯ ಮನೆಯಿಂದ ಕುದುರೆ ಹಾಗೂ ಮೊಗ ಹೊರಡುತ್ತದೆ ಈ ಎರಡೆರಡು ಕುದುರೆ ಹಾಗೂ ಮೊಗಗಳು ಹಾಗೂ ವಿವಿಧ ವೇಷಧಾರಿಗಳು ಹಳ್ಳಿಗಟ್ಟು ಶ್ರೀ ಭದ್ರಕಾಳಿ ದೇವಸ್ಥಾನದ ಸಮೀಪದ ಕೆರೆಯ ಮೇಲ್ಬಾಗದ ಅಂಬಲದಲ್ಲಿ ಸೇರಿ ಪರಸ್ಪರ ಅಲಂಗಿಸಿಕೊಳ್ಳುತ್ತಾರೆ. ನಂತರ ಊರಿನ ಮಂದಿ ಹತ್ತಿರದ ಕೆರೆಯಲ್ಲಿ ಕೆಸರನ್ನು ತಂದು ಪರಸ್ಪರ ಕೆಸರು ಎರಚಾಡಿಕೊಂಡು ಹಬ್ಬವನ್ನು ಸಂಭ್ರಮಿಸಿದರು. ಇಲ್ಲಿ ಬೇರೆ ಊರು, ನೆಂಟರು…

Read More

ಮಡಿಕೇರಿ ಮೇ 22 NEWS DESK : ಕಳೆದ ಎರಡು ವಾರಗಳಿಂದ ಕೊಡಗು ಜಿಲ್ಲೆಯಾದ್ಯಂತ ಮಳೆಯಾಗುತ್ತಿದ್ದು, ಬರದ ಛಾಯೆ ಮರೆಯಾಗಿದೆ. ಅತಿಯಾದ ಉಷ್ಣಾಂಶದಿಂದ ಬತ್ತಿ ಹೋಗಿದ್ದ ನದಿತೊರೆಗಳು ಜೀವಕಳೆ ಪಡೆದುಕೊಂಡಿವೆ. ಹನಿ ನೀರಿಲ್ಲದೆ ಮರಳು, ಬಂಡೆಗಳು ಕಾಣುತ್ತಿದ್ದ ನದಿಗಳಲ್ಲಿ ಮಳೆ ನೀರು ಹರಿಯತೊಡಗಿದೆ. ಕೊಡಗು ಜಿಲ್ಲೆಯಾದ್ಯಂತ ಪೂರ್ವ ಮುಂಗಾರು ಕಳೆದ ಕೆಲವು ದಿನಗಳಿಂದ ಚುರುಕಾಗುವ ಮೂಲಕ ಕುಡಿಯುವ ನೀರಿನ ಸಮಸ್ಯೆ ಕೊಂಚ ಬಗೆ ಹರಿಯುವ ಲಕ್ಷಣ ಕಂಡು ಬಂದಿದೆ. ಭಾಗಮಂಡಲ, ಕಕ್ಕಬ್ಬೆ, ನಾಪೋಕ್ಲು, ಮೂರ್ನಾಡು, ವಿರಾಜಪೇಟೆ, ಕದನೂರು, ನಂಜರಾಯಪಟ್ಟಣ, ಗುಡ್ಡೆಹೊಸೂರು, ಕುಶಾಲನಗರ, ಕಣಿವೆ, ಕೂಡಿಗೆ ಸೇರಿದಂತೆ ಕಾವೇರಿ ನದಿ ಹರಿಯುವ ಪ್ರದೇಶಗಳಲ್ಲೂ ಉತ್ತಮ ಮಳೆಯಾಗಿದೆ. ಇದರಿಂದ ನದಿಯಲ್ಲಿ ನೀರಿನ ಪ್ರಮಾಣ ಏರಿಕೆಯಾಗಿದೆ. ಕುಶಾಲನಗರ ತಾಲೂಕಿನ ಗುಡ್ಡೆಹೊಸೂರು ಬಳಿಯ ತೂಗು ಸೇತುವೆಯ ಬಳಿ ಕಾವೇರಿ ನದಿ ನೀರಿನಲ್ಲಿ 5 ಅಡಿಗಳಷ್ಟು ಏರಿಕೆ ಕಂಡು ಬಂದಿದೆ. ಸಂಪೂರ್ಣವಾಗಿ ಬತ್ತಿ ಹೋಗಿ ಆತಂಕ ಮೂಡಿಸಿದ್ದ ಕಾವೇರಿ ನದಿಯಲ್ಲಿ ಈಗ ಮಳೆನೀರು ಜೀವಕಳೆಯೊಂದಿಗೆ ಹರಿಯುತ್ತಿದ್ದು, ಕೃಷಿಕ ವರ್ಗದಲ್ಲಿ…

Read More

ಮಡಿಕೇರಿ ಮೇ 22 NEWS DESK : ಪ್ರತಿ ವರ್ಷ ಮೇ 22 ರಂದು ವಿಶ್ವ ಜೀವ – ವೈವಿಧ್ಯ ದಿನ. (ವರ್ಲ್ಡ್ ಬಯೋ ಡೈವರ್ಸಿಟಿ ಡೇ) ವನ್ನು ವಿಶ್ವದಾದ್ಯಂತ ಆಚರಿಸಲಾಗುತ್ತದೆ. ಈ ದಿನವು ವಿಶ್ವ ಜೀವ-ವೈವಿಧ್ಯ ಸಂರಕ್ಷಣೆಯ ಜಾಗತಿಕ ಜಾಗೃತಿ ದಿನವಾಗಿದೆ. ರಾಷ್ಟ್ರೀಯ ಮತ್ತು ಜಾಗತಿಕ ಮಟ್ಟದಲ್ಲಿ ವಿವಿಧ ಕಾರ್ಯಕ್ರಮಗಳನ್ನು ಆಯೋಜಿಸಿ, ಜೀವ ವೈವಿಧ್ಯ ಸಂರಕ್ಷಣೆಯ ಕುರಿತು ಜಾಗೃತಿ ಮೂಡಿಸಲು ಈ ದಿನ ಸಂಕಲ್ಪ ಮಾಡಲಾಗುತ್ತದೆ. 2024 ರ ಶೀರ್ಷಿಕೆ: ಯೋಜನೆಯ ಭಾಗವಾಗಿರಿ: ವಿಶ್ವ ಜೀವ – ವೈವಿಧ್ಯ ದಿನದ ಈ ವರ್ಷದ ಶೀರ್ಷಿಕೆ: ‘ಯೋಜನೆಯ ಭಾಗವಾಗಿರಿ’ (ಬಿ ಪಾರ್ಟ್ ಆಫ್ ದಿ ಪ್ಲಾನ್) ಎಂಬ ಶೀರ್ಷಿಕೆಯಡಿ 2024 ರ ಸಾಲಿನ ವಿಶ್ವ ಜೀವ – ವೈವಿಧ್ಯ ದಿನ ವನ್ನು ಆಚರಿಸಲಾಗುತ್ತಿದೆ. ನಾವು ನಮ್ಮಲ್ಲಿ ಪ್ರತಿಯೊಬ್ಬರೂ ಪರಿಸರ ವ್ಯವಸ್ಥೆಯ ಪರಿಹಾರದ ಒಂದು ಭಾಗವಾಗಿ ಪರಿಸರವನ್ನು ಸಂರಕ್ಷಿಸುವಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕಿದೆ ಎಂಬುದು ಈ ಶೀರ್ಷಿಕೆಯ ಮಹತ್ವವಾಗಿದೆ. 1993 ರಿಂದ ಪ್ರತಿ…

Read More

ಹುಣಸೂರು ಮೇ 21 NEWS DESK : ಮಂಗಳವಾರ ಸಂಜೆ ಸುರಿದ ಧಾರಾಕಾರ ಮಳೆಗೆ ಹುಣುಸೂರು ತಾಲ್ಲೂಕಿನ ಹನಗೋಡಿನಲ್ಲಿ ಕೃಷಿಭೂಮಿ, ಅಂಗಡಿ, ಬೇಕರಿ ಹಾಗೂ ಮನೆಗಳಿಗೆ ನೀರು ನುಗ್ಗಿ ಸಾಕಷ್ಟು ಹಾನಿಯಾಗಿದೆ. ಮನೆಯೊಂದರ ಗೋಡೆ ಕುಸಿದು ಬಿದ್ದಿದೆ, ಅಲ್ಲದೆ ಕೃಷಿ ಫಸಲು ನಾಶವಾಗಿದೆ. ಮಳಿಗೆಗಳಿಗೆ ನುಗ್ಗಿದ ನೀರನ್ನು ಹರಸಾಹಸಪಟ್ಟು ಹೊರ ಹಾಕಲಾಯಿತು. ಹರೀಶ್‌ ಎಂಬುವವರಿಗೆ ಸೇರಿದ ಮನೆ ಗೋಡೆ ಕುಸಿದು ಬಿದ್ದು, ಮನೆಯೊಳಗಿದ್ದ ದವಸ, ಧಾನ್ಯ, ಬಟ್ಟೆ ಸೇರಿದಂತೆ ಪದಾರ್ಥಗಳು ನೀರಿನಲ್ಲಿ ಹಾಳಾಗಿದೆ. ಅಲ್ಲದೆ ಹನಗೋಡು, ಬಿ.ಆರ್.ಕಾವಲ್ ಗ್ರಾಮದ ಜಮೀನುಗಳಲ್ಲಿದ್ದ  ಶುಂಠಿ ಹಾಗೂ ತಂಬಾಕು ನೀರಿನಲ್ಲಿ ಮುಳುಗಿವೆ. ಹರೀನಹಳ್ಳಿ, ಮುತ್ತುರಾಯನಹೊಸಹಳ್ಳಿ, ಕಣಗಾಲು, ಕಲ್ಲಹಳ್ಳಿ, ಅತ್ತಿಕುಪ್ಪೆ ಸೇರಿದಂತೆ ಬಹುತೇಕ ಗ್ರಾಮಗಳಲ್ಲಿ ಭಾರೀ ಮಳೆಯಾಗಿದೆ. ಕೆಲ ಹೊತ್ತು ವಿರಾಜಪೇಟೆ-ಹುಣಸೂರು ರಸ್ತೆ ಸಂಚಾರವೇ ಬಂದ್ ಆಗಿತ್ತು.

Read More

ಸುಂಟಿಕೊಪ್ಪ ಮೇ 21 NEWS DESK : ಸೋಮವಾರಪೇಟೆ ತಾಲ್ಲೂಕಿನ ಮಾದಾಪುರ ವ್ಯಾಪ್ತಿಯ ಕುಂಬೂರಿನಲ್ಲಿ ನಿರ್ಮಿಸಲಾಗಿರುವ ಪವಿತ್ರ ಕುಟುಂಬ ದೇವಾಲಯವನ್ನು ಮಂಗಳವಾರದಂದು ಮೈಸೂರು ಧರ್ಮಕ್ಷೇತ್ರದ ಆಡಳಿತಾಧಿಕಾರಿ ಪರಮಪೂಜ್ಯ ಡಾ. ಬರ್ನಾಡ್ ಮೊರಾಸ್ ಲೋಕಾರ್ಪಣೆಗೊಳಿಸಿ ಆಶೀರ್ವಚನ ನೀಡಿದರು. ನೂತನ ಬಲಿಪೀಠದಲ್ಲಿ ಪರಮಪೂಜ್ಯ ಡಾ.ಬರ್ನಾಡ್ ಮೊರಾಸ್ ಹಾಗೂ ಸಹಗುರುಗಳು ಬಲಿಆರ್ಪಣೆಯನ್ನು ಸಲ್ಲಿಸಿದರು. ಕುಂಬೂರುವಿನ ಪವಿತ್ರ ಕುಟುಂಬ ದೇವಾಲಯಕ್ಕೆ ನೂರಾರು ವರ್ಷಗಳ ಇತಿಹಾಸವಿದ್ದು, ಇಂದು ಕಾಣುತ್ತಿರುವ ಭವ್ಯ ದಿವ್ಯ ನವೀನ ದೇವಾಲಯಕ್ಕೆ 10 ಹಲವು ಧರ್ಮಗುರುಗಳು ಮತ್ತು ಭಕ್ತರ ತ್ಯಾಗ ಪರಿಶ್ರಮ, ಭಕ್ತಿಯ ಸಮರ್ಪಣೆಯಾಗಿದೆ ಎಂದು ಶ್ಲಾಘಿಸಿದರು. ಮಾಜಿ ಸಚಿವ ಎಂ.ಪಿ.ಅಪ್ಪಚ್ಚು ರಂಜನ್ ಮಾತನಾಡಿ ವಿವಿಧತೆಯಲ್ಲಿ ಏಕತೆಯನ್ನು ಹೊಂದಿರುವ ದೇಶ ನಮ್ಮದಾಗಿದ್ದು, ವಿವಿಧ ಧಾರ್ಮಿಕ ನಂಬಿಕೆಗಳು ಆಚಾರ ವಿಚಾರಗಳು ವೇಷಭೂಷಣಗಳು ಬೇರೆ ಬೇರೆಯಾಗಿದ್ದರೂ ಕೂಡ ಎಲ್ಲಾ ಧರ್ಮಗಳ ಸಾರ ಒಂದೇ ಎಂದು ಹೇಳಿದರು. ಧರ್ಮಕೇಂದ್ರದ ಧರ್ಮಗುರುಗಳಾದ ರೇ.ಫಾ.ರಾಜೇಶ್ ಮಾತನಾಡಿ ಹುಲ್ಲುಹಾಸಿನ ಕಟ್ಟಡದಿಂದ ಪವಿತ್ರ ಕುಟುಂಬ ದೇವಾಲಯದ ಪರಿಶ್ರಮವನ್ನು ವಿವರಿಸಿದರು. ಜೀರ್ಣೋದ್ಧಾರಕ್ಕೆ ವಂ. ಫಾ. ಸಂತೋಷ್ ಅವರು…

Read More